ಭಾನುವಾರ, ನವೆಂಬರ್ 15, 2015

lesson

ನೀವು ಒಂದು ಕಪ್ಪೆಯನ್ನು ಪಾತ್ರೆಯ ಒಳಗೆ ಹಾಕಿ ಪಾತ್ರೆಯನ್ನು ಬಿಸಿಯಾಗಲು ಇಡಿ..

ಪಾತ್ರೆಯಲ್ಲಿರುವ ನೀರು ಬಿಸಿಯಾಗುತ್ತಾಹೋದಂತೆ ಕಪ್ಪೆ ಆ ಬಿಸಿಗೆ ತಕ್ಕಂತೆ ತನ್ನ ದೇಹವನ್ನು ಶಕ್ತಿ ಮೀರಿ ಹೊಂದಿಸಿ ಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ...
ಇನ್ನೇನು ಕುದಿಯುವ ಬಿಂದು ಅತಿ ಹೆಚ್ಚಾದಾಗ ಕಪ್ಪೆ ಇನ್ನೇನು ಆ ಪಾತ್ರೆಯಲ್ಲಿ ಇರುವುದು ಕಷ್ಟ ಸಾಧ್ಯ ಎಂದಾಗ,ಅಲ್ಲಿಂದ ಅದು ನೆಗೆದು ಹೊರ ಹಾರಲು ತೀರ್ಮಾನಿಸುತ್ತದೆ..
ಹಾಗೆ ಹೊರ ಹಾರಲು ಪ್ರಯತ್ನಿಸುತ್ತದೆ ಆದರೆ ಅದರಿಂದ ಅದು ಕಷ್ಟ ಸಾಧ್ಯವಾಗುತ್ತದೆ,ಏಕೆಂದರೆ ಅದು ತನ್ನ ದೇಹವನ್ನು ಬಿಸಿ ಏರುತ್ತಿರುವ ನೀರಿನಲ್ಲಿ ಹೊಂದಿಸಿ ಕೊಂಡು ಇರಲು ಪ್ರಯತ್ನಿಸುವ ಸಮಯದಲ್ಲಿ ತನ್ನ ಎಲ್ಲಾ ಶಕ್ತಿಯನ್ನು ಕಳೆದು ಕೊಂಡು ಆಶಕ್ತವಾಗಿರುತ್ತದೆ..
ಕೊನೆಗೆ ಹೊರಬರಲಾಗದೆ ಮರಣ ಹೊಂದುತ್ತದೆ.😢😢😢😢

ಕಪ್ಪೆ ಸಾಯಲು ಕಾರಣವೇನು??😨😨😨

ಬಹಳ ಜನ ಹೇಳುವ ಉತ್ತರ..
ಕುದಿಯುತ್ತಿರುವ ನೀರಿಂದ ಕಪ್ಪೆ ಸತ್ತಿತು ಎಂದು..😷

ಆದರೆ ಉತ್ತರ ಅದಲ್ಲ..
ಸರಿಯಾದ ಸಮಯದಲ್ಲಿ ಕಪ್ಪೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ತೀರ್ಮಾನ ತೆಗೆದು ಕೊಳ್ಳುವಲ್ಲಿ ವಿಪಲ ವಾಗಿದ್ದೇ ಕಾರಣ.😜

ನಾವು ಜನರು ಹಾಗೂ ಸಂಧರ್ಭಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗುವುದು ಅಗತ್ಯ..😃

ಆದರೆ

ನಮಗೆ ಯಾವಾಗ ಹೊಂದಿಕೊಳ್ಳಬೇಕು,ಯಾರಿಗೆ ಹೊಂದಿ ಕೊಳ್ಳಬೇಕು,ಯಾವಾಗ ಅವರಿಗೆ ಪ್ರತ್ಯುತ್ತರ ನೀಡ ಬೇಕು ಅಥವಾ ಅವರನ್ನು ಎದುರಿಸ ಬೇಕು,ಅನ್ನುವುದು ಚೆನ್ನಾಗಿ ತಿಳಿದಿರ ಬೇಕು..👍

ಕೆಲವು ಸಂಧರ್ಭಗಳು ಕೆಲವರನ್ನು ಎದುರಿಸಲು ಹಾಗೂ ನಮ್ಮನ್ನ ನಾವು ರಕ್ಷಿಸಿ ಕೊಳ್ಳಲು ಪ್ರತಿಕ್ರಿಯಿಸ ಬೇಕಾಗುತ್ತದೆ, ಅದಕ್ಕೆ ತಯಾರಿರಬೇಕು..👍

ನಾವು ಕೆಲವು ಜನರನ್ನು ನಮ್ಮ,ಒಳ್ಳೆಯತನ,ಹಣ,ಮಾನಸಿಕವಾಗಿ,ದೈಹಿಕವಾಗಿ ದುರ್ಭಳಕೆ ಮಾಡಲು ಬಿಟ್ಟೆವೆಂದರೆ..
ಅವರು ಅದನ್ನೇ ಮುಂದುವರೆಸಲು ಪ್ರಯತ್ನಿಸುತ್ತಾರೆ..😈

ನಾವು ಯಾವಾಗ ಹಾರಬೇಕೆಂದು..ನಮ್ಮ ಶಕ್ತಿ ಕುಂದುವುದಕ್ಕಿಂತ ಮೊದಲು,
ನಾವೇ ತೀರ್ಮಾನಿಸ ಬೇಕು. 😎
.!!!
ಇದರ ಬಗ್ಗೆ ಒಮ್ಮೆ ಯೋಚಿಸಿ..😂☺

ಕೃಪೆ:ಪೇಸುಬುಕ್ನಲ್ಲಿ ಸಿಕ್ಕಿದ್ದು
ಇಂಗ್ಲೀಶ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು..

Smart phone

ಮಂಜಪ್ಪ ಗೌಡ್ರು:-ಇತ್ತೀಚಿಗೆ ಎಂತ್ ಆಗ್ಯದೆ ಗೊತ್ತನಾ
ಕೆಲವು ಹುಡ್ಗುರು ಅಪ್ಪ ಅಮ್ಮನ ಮತ್ತೆ ಅವರ್ನೇ ನಂಬ್ಕಿಂಡು ಇರ್ತಾರಲ್ಲ ಎಂತಾರು ಮಾಡ್ತನೆ/ಳೆ ನಮ್ಮನ್ ಸಾಕ್ತಾನೆ/ಳೆ,ಮರ್ಯಾದಿ ಕಳಿಯಲ ಅನ್ಕುಂಡು,ಅಂತವರನ್ನು ಎಷ್ಟು ಘನಾಗಿ ಬಕ್ರ ಮಾಡ್ತವೆ ಕೆಲ್ವು ಹುಡ್ಗ್ರು ಗೊತ್ತನು..ಅಯ್ಯಯ್ಯಬ್ಬಾ..
ನಾವೆಲ್ಲಾ ಅವ್ರುನ್ ನೋಡ್ಕಿಂಡ್ ಕಲಿಯದು ತುಂಬಾ ಅದೆ ಗೊತ್ತದ್ಯಾ..!!!
ಅವರು ಹಣಿ ಬರ ಯಾವಾಗ ಗೊತ್ತಾದೆ ಹೇಳ್ ಪಾಸ್,ಪೈಲ್ ಅಂತ ಬತ್ತದಲಾ ಆಗ್ಲೇ ಗೊತ್ತಾಗದ್ ಅಲ್ಲನಾ
"ಅಯ್ಯಯ್ಯೋ ನಮ್ಮ ಕಿಮಿ ಮೇಲೆ ಇಷ್ಟು ದಿನ ಹ್ಯಾಂಗಿಂಗ್ ಗಾರ್ಡನ್ ಇಡ್ತಾ ಇದ್ದ/ಇದ್ಲು ನನ್ನ ಮಗ/ಮಗಳು ಅಂತ..."
ಅವರ ಅಪ್ಪಯ,ಅಮ್ಮ ಗೊಳೋ ಅನ್ತಾವೆ ಕಡಿಗೆ..
ಅಲ್ಲಾ ಮರೆನೆ ಇವು ಎಲ್ಲೋ ಇದ್ಕಿಂಡ್ ,ಪೋನ್ ಮಾಡ್ಕಿಂಡ್,ಏನು ಹೇಳ್ರು ನಂಬ್ಕಿ ಕುತ್ಕುತರಲ್ಲ ಅವರ ಅಪ್ಪಯ,ಅಮ್ಮ ಅಂತವ್ರನ್ನ ನೋಡ್ರೆ ಬೇಜಾರಾತದೆ ಕಣ,ಎಂತ ಅಮಾಯಕರು ಅಲನಾ..
ಪಾಪ..

ಯಂಕ:- ಹೌದು ಗೌಡ್ರೆ..

ಮಂಜಪ್ಪ ಗೌಡ್ರು:-ಏನಾರು ಸುಳ್ಳು ಹೇಳಿ ನಂಬಸ್ತವಲ ಅವು ಇನ್ನು ಎಂತ ಬುದ್ದಿ ಇಟ್ಕುಂಡು ಇರ್ಬಕು ತಲೆಲಿ ಅಲಾ..
ಇದೇ ಬುದ್ದಿ ಒಳ್ಳೆದ್ ಉಪ್ಯೋಗ್ಸಲ ನೋಡು ಹಂಗ್ಯಾರೆ ಇವು ಹಪ್ಪು ಗೆಟ್ಟವು,ಅಲಾ..
೨೪ ಘಂಟೆ ಎಂತದೋ ಮೊಬೈಲ್ ಹಿಡ್ಕುಣದು
ವಾಟೆ ಸೊಪ್ಪಂತೆ,
ಸ್ಪೈಕ್ ಅಂತೆ,
ಟಿಲ್ಲರ್ ಅಂತೆ,
ವೀಕ್ ಕಾಟ್ ಅಂತೆ,
ಕೇಸ್ಬುಕ್ ಅಂತೆ,
ಇಷ್ಟೆ ಗ್ರಾಂ,
ಎಂತೆಂತದೋ ಬಂದದೆ ಅದ್ನ ಉಪಯೊಗ್ಸಿ ಕುಂಡು ಏನೇನೋ ಮಾಡ್ತರೋ,ಯಾರಿಗೆ ಗೊತ್ತಾದೆ ಹೇಳು,ಅದೂ ಅಲ್ದೆ ಮೊಬೈಲಿಗೆ ಎಂತದೋ ನಂಬರ್ ಹಾಕಿಂಡಿರ್ತವಪ್ಪಾ,ಅದೆಂತದೋ ಎಟಿಎಮ್ ಅಲ್ಲಿ ದುಡ್ಡು ತೆಗಿಯಕೆ ಹೊಡಿತಿವಲಾ ಅದು,
ಇದೆಲ್ಲಾ ಎಂತದಾ..??

ಯಂಕ;-ಗೌಡ್ರೆ,ಥೋ
ಅದು ವಾಟೆ ಸೊಪ್ಪಲ್ಲ,ವಾಟ್ಸ್ ಅಪ್
ಸ್ಪೈಕ್ ಅಲ್ಲ,ಸ್ಕೈಪ್
ಟಿಲ್ಲರ್ ಅಲ್ಲ ಟ್ವಿಟರ್
ವೀಕ್ ಕಾಟ್,ವಿ ಚಾಟ್
ಕೇಸ್ಬುಕ್ ಅಲ್ಲ,ಪೇಸ್ಬುಕ್
ಇಷ್ಟೆ ಗ್ರಾ ಅಲ್ಲಾ,ಇನ್ಷ್ಟಾಗ್ರಾಂ
ಅದಕ್ಕೆ ಆತರ ನಂಬರ್ ಹಾಕೊಳ್ಳೋದಕ್ಕೆ ಪಾಸ್ವರ್ಡ್ ಅಂತಾರೆ
ಮರ್ರೆ.
ಮಂಜಪ್ಪ ಗೌಡ್ರು:-ಎಂತದೋ ಮರಾಯ,ಸುಡುಗಾಡು ಈ ಟೆಕ್ನಾಲಜಿ ಎಲ್ಲಾ ಬಂದ್ಕುಂಡು ,ಎತ್ಲಗೆ ಹೋತಾ ಅದ್ಯೋ ಮರೆನೆ ಈ ಪ್ರಪಂಚ ಅಲಾ..
ಅಲಾ ಅವರು ಬಾರಿ ಒಳ್ಳೆಯವರಾದ್ರೆ ಅದೇ ನೀ ಹೇಳಿದ್ಯಲ್ಲ ಆ ಪಾಸ್ವರ್ಡ ಎಂತ ಸುಡುಗಾಡು,
ಅದು ಎಂತಕೆ ಹಾಕುಬಕು ಹೇಳು ನೋಡನ..
ಥೋ..
ಎಂತದೋ..
ಊರು ಪಾರ್ ಪತ್ಗಿ ಕಟ್ಕುಂಡು,ಮಂಜಪ್ಪ್ ಗೌಡ ಬಡವಾದ್ನಂತೆ ಊರು ಮನೆಯವರು ಮಾತಾಡ್ಕಿಣದು ಬ್ಯಾಡ ಮರೆನೆ,ಅಲಾ ..
ನಮ್ಗ್ಯಾಗೆ ಯಾರು ಏನಾರು ಸತ್ಗಿಲಿ ಅಲಾ,..
ಅದೆಂತದೋ ಹೇಳ್ತಾರಲ್ಲ
ಕಾಲಾಯ ತಸ್ಮೈ ನಮಹಾ..
ಕೊನೆ ತೆಗಿಯಕೆ ಬತ್ತಿನಿ ಅಂದನೆ ಶಂಕ್ರ,ಬೇಗ ತ್ವಾಟಕ್ಕೆ ಹೋಬಕ್ ಅತಾ...ಸಾಯಂಕಾಲ ಡೈರಿ ಹತ್ರ ಸಿಕ್ತಿನಾ ಅತಾ,ಬರ್ಲಾ..