ಶನಿವಾರ, ಆಗಸ್ಟ್ 19, 2017

ಅನುಭವ

ಹೆಚ್ಚು ಕಡಿಮೆ ಈ ತರದ ಅನುಭವ ನನಗೂ ಆಗಿದೆ..
ನನ್ನ ಬಹಳ ಹತ್ತಿರದ ಸಂಬಂಧಿಕರ ಮಗ ನನ್ನ ಜೊತೆ ಸ್ವಲ್ಪ ಆತ್ಮಿಯ ವಾಗಿದ್ದಾನೆ ಆತ ಇನ್ನೂ ಹೈಸ್ಕೂಲ್ ಹೋಗುವ ಹುಡುಗ..
ಅವನು ನನ್ನಲ್ಲಿ ಮಾತಿಗಿಳಿದ ಎಂದರೆ ನೀವು ಆಪಲ್ ಐ ಪೋನ್ ತಗೊಳ್ಳಿ,ವೋಕ್ಸ್ವಾಗನ್ ಜಿಟಿ ತಗೊಳ್ಳಿ ಬೇರೆ ಪ್ರೊಡಕ್ಟ್ ಬೇಡ,ಜಿ ಶಾಕ್ ವಾಚ್ ಯಾಕೆ ನೀವು ಕಟ್ಟದೇ ಸುಮ್ಮನೆ ಇಟ್ಟಿದ್ದೀರಿ...??
ಅದಕ್ಕೆ ನಾನು ಹಲವು ಬಾರಿ ಹೇಳಿದ್ದೇನೆ,ನನಗೆ ಐ ಪೋನ್ ಅವಶ್ಯಕತೆ ಇಲ್ಲ ಬೇಡ,ವೋಕ್ಸ್ವ್ಯಾಗನ್ ಜಿ ಟಿ ಈ ಬೆಂಗಳೂರು ಟ್ರಾಪಿಕ್ನಲ್ಲಿ ಅವಶ್ಯವಿಲ್ಲ,ಹಾಗೂ ನನ್ನ ಕಾರಿಂದ  ಸಂಚಾರ ದಟ್ಟಣೆ ಇನ್ನೊಂದು ವಾಹನ ಸೇರ್ಪಡೆ ಆಗೋದು ಬೇಡ ಅಷ್ಟಕ್ಕೂ ನನಗೆ ಈಗ ಕಾರಿನ ಅವಶ್ಯಕತೆ ಇಲ್ಲ,ಜಿ ಶಾಕ್ ಕಟ್ಟ್ಕೊಂಡೇ ಇರಬೇಕು ಅಂತ ರೂಲ್ ಇಲ್ಲ ಕಣೋ ಅಂದಿದ್ದೆ..
ಹೀಗೆ ಅವನದ್ದು ಎಕ್ಪೆನ್ಸೀವ್ ಮಾತುಗಳೇ ಬಿಟ್ಟರೆ ಯಾವುದೂ ಬಿಲೋ ಪಾವರ್ಟಿ ಲೈನ್ ಮಾತುಗಳೇ ಇಲ್ಲ..
ಇಲ್ಲಿ ತಪ್ಪು ಅವನದಲ್ಲ,ತಂದೆ ತಾಯಿ ಅವರ ಹತ್ತಿರದ ಸಂಬಂದಿಗಳದ್ದು,ಬರ್ತ್ ಡೇ,ಆ ಡೇ,ಈ ಡೇ ಅಂತ ಸಣ್ಣವನು ಸಣ್ಣವನು ಅಂತ,ಆತ ಕೇಳಿದ್ದೆಲ್ಲಾ ತಂದು ಕೊಡೋದು,ಮತ್ತೆ ಗೂಗಲ್ಲಲ್ಲಿ ಏನೋ 24/7 ನೋಡ್ತಾ ಅದರಲ್ಲಿ ಹಾಕಿದ್ದೆಲ್ಲಾ ನಿಜ ಅಂದು ಕೊಂಡು ಅದನ್ನೇ ಮಾತಾಡೋ ಹುಡುಗರನ್ನ..
ಪೋಷಕರು ಹುಡುಗರ ಎದುರಿಗೆ ನನ್ನ ಮಗನಿಗೆ ಎಲ್ಲಾ ಗೊತ್ತು,ಕಾರ್ ಬಗ್ಗೆ ಕೇಳಿ,ಬೈಕ್,ಪಿ ಸಿ,ಲ್ಯಾಪ್ಟಾಪ್ ಬಗ್ಗೆ ಹಾಗೂ ಸ್ಮಾರ್ಟ್ ಪೋನ್ ಅರೆದು ಕುಡಿದು ಬಿಟ್ಟಿದ್ದಾನೆ,ಎಲ್ಲಾ ವಿಷಯದ ಬಗ್ಗೆ ನಾಲೆಡ್ಜ್ ಇದೆ ಅಂತ ಬುಲ್ಡ್ ಅಪ್ ಕೊಡೋದು..
ಇದರಿಂದ ಅವರು ನಾನೇನೋ ಬಹಳ ಬುದ್ದಿವಂತ ಸ್ಪೆಶಲ್ ಮನುಷ್ಯ ಅಂತ ಮೇಲೆ ಹತ್ತಿ ಕೂರುತ್ತಾರೆ..

ಇದೇ ಹಲವು ಪೋಷಕರು ಮಾಡ್ತಾ ದೊಡ್ಡ ತಪ್ಪು..

ಹಣದ ಬೆಲೆಯೇ ಗೊತ್ತಿಲ್ಲದೇ ಬೆಳೆಸಿರ್ತಾರೆ ಕೆಲವರು,ಇಂತಹಾ ಮಕ್ಕಳಿಗೆ ತೃಪ್ತಿಯೂ ಇರಲ್ಲ..
ಒಂದು ಕೊಡಿಸಿದ ಮೇಲೆ ಇನ್ನೊಂದು ಬೇಡಿಕೆ ಶುರು..

ನನ್ನ ಪ್ರಾಥಮಿಕ ಶಾಲಾ ಸಹಪಾಠಿ ಗೋಪಾಲ ಅಂತ ಇದ್ದ ನಾನು ಅವನು ಚಡ್ಡಿ ದೋಸ್ತ್,ಅವರ ಅಪ್ಪ ಕೂಲಿ ಕೆಲಸ ಮಾಡ್ತಾ ಇದ್ರು,ಆತನಿಗೆ ಬಟ್ಟೆಗೇ ಕಷ್ಟ ಇತ್ತು ಎರಡು ಹೊತ್ತು ಊಟಕ್ಕೆ ಕೂಡ,ನನ್ನ ಅಮ್ಮ ನನ್ನ ಹಾಗೂ ನನ್ನ ತಮ್ಮನ ಬಟ್ಟೆಗಳನ್ನು ಅವರಿಗೇ ಕೊಡುತ್ತಿದ್ದಳು,ತೀರ್ಥಹಳ್ಲಿ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಗೋಪಾಲ ಒಂದು ಸಣ್ಣ ಆಟಿಕೆ ತಗೊಂಡ್ರೂ,

"ಭಟ್ಟ ,ಗೌಡ್ರು ಮನೆ ಅಡಿಕೆ ಸುಲ್ತದಲ್ಲಿ ಸುಮಾರು ಕೊಳಗ ಅಡಿಕೆ ಸುಲ್ದಿದೆ ಕಣ, ಅದ್ರಲ್ಲಿ ತಗುಂಡಿದು ಇದು ಗೊತ್ತಾ"

ಅಂತ ಹೆಮ್ಮೆಯಿಂದ ನನ್ನ ಹತ್ತಿರ ಹೇಳಿಕೊಳ್ಳುತ್ತಾ ಇದ್ದ..

ಆದರೆ
ನಾನು,ಅಪ್ಪ ಕೊಡಿಸಿದ ಆಟದ ಸಾಮಾನು ತಗೊಂಡಿದ್ರೂ,
ಅವನಷ್ಟು ಹೆಮ್ಮೆ ಹಾಗೂ ಸಂಭ್ರಮ ಪಡೋಕೆ ಆಗ್ತಾ ಇರಲಿಲ್ಲ,ಯಾಕೆ ಅಂದ್ರೆ ನಮಗೆ ತ್ರುಪ್ತಿ ಅಷ್ಟು ಇರಲಿಲ್ಲ,ಆದರೆ ಹಣದ ಬೆಲೆ ಸ್ವಲ್ಪವಾದರೂ ಗೊತ್ತಿತ್ತು,ಆದರೆ ಅಪ್ಪ ಅಮ್ಮನ ಮಾತು ಮೀರುತ್ತಿರಲಿಲ್ಲ..ಅವರಿಗೆ ಕಷ್ಟ ಕೊಡಬಾರದು ಅನ್ನೋ ಮನೋಭಾವನೆಯಾದರೂ ಇತ್ತು..

ಈಗಲೂ ಊರಿಗೆ ಹೋದಾಗ ಸಿಕ್ಕಿದ್ರೆ,ಖುಷಿ ಖುಷಿ ಯಿಂದ ಯಾವುದೇ ಅಹಂ ಇಲ್ಲದೇ ಮಾತಾಡಿಸೋದು,ಗೋಪಾಲ ಹಾಗೂ ಇನ್ನಿತರೆ ನನ್ನ ಹಳೆಯ ಸ್ನೇಹಿತರು..
ಅವರು ಅತಿ ಹೆಚ್ಚು ಹಣ ಮಾಡಿಲ್ಲದೇ ಇರಬಹುದು
ಆದರೆ
ಗುಣ ಒಬ್ಬ ಪರಿಶುದ್ದ ಆತ್ಮ ವಿರುವ ಮನುಷ್ಯನದ್ದೇ ಇದೆ..

ಬುಧವಾರ, ಜೂನ್ 21, 2017

Hash tag ಜಮಾನ

ಕ್ವಾಸನ ಸ್ನೇಹಿತ ಡಿಂಗ್ರಿ ದು ಏನೋ ಗಲಾಟೆ ಆಗಿ ದೂರು ದಾಖಲಾಯ್ತು..
ಕ್ವಾಸ ಅವನಿಗೆ ಬೇಲ್ ಕೊಡಿಸಲು ಪ್ಯಾಟೆಯಲ್ಲಿರುವ ಕೋರ್ಟ್ಗೆ ಹೋಗಿ ರಾತ್ರಿ ಲೇಟ್ ಆಗಿ ಹೋಟೆಲ್ ನಲ್ಲಿ ಉಳಿದ..

ರಾತ್ರಿ ಫೇಸ್ಬುಕ್ ನೋಡುತ್ತಾ..
Iam_with_ಡಿಂಗ್ರಿ
ಅಂತ ಫೇಸ್ಬುಕ್ಕಲ್ಲಿ ಹ್ಯಾಶ್ ಟ್ಯಾಗ್ ಹಾಕಿ ಹೋಟೆಲ್ ಲೋಕೇಶನ್ ಶೇರ್ ಮಾಡಿದ ತನ್ನ ವಾಲ್ನಲ್ಲಿ...

ಮಂಜಪ್ಪ ಗೌಡರಿಗೆ ಫೇಸ್ಬುಕ್ಕಲ್ಲಿ ಹಾಕಿದ ವಿಷಯ ಹೇಗೋ ಗೊತ್ತಾಯ್ತು...
ಮರು ದಿನ ಕ್ವಾಸ ಊರಲ್ಲಿ ಸಿಕ್ಕಿದ..

ಗೌಡ್ರು:- ನೀನು ಇಷ್ಟು ಬಿಲಾಸ್ ಬಿಟ್ ಹೋಗಿಯಾ ಅಂತ ಅಂದ್ಕುಂಡಿರ್ಲ ಮರೇನೇ..ಥೋ...

ಕ್ವಾಸ;-ನಾನೆಂತ ಮಾಡಿನಿ ಗೌಡ್ರೆ..!!??

ಗೌಡ್ರು:-ಅಲ್ಲ ಅದು ಎಂತುದೋ ಬುಕ್ಕಲ್ಲಿ ರಾತ್ರೆ ಇಂಗ್ಲೀಷಲ್ಲಿ ನಾನು ಡಿಂಗ್ರಿ ಜೊತೇಲಿ ಅದೀನಿ ಅಂತ ಹಾಕಿಂಡಿಯಂತೆ,
ನಿಂಗ್ ಮಾನ ಮರ್ಯಾದೆ ಇಲ್ಲನ ಹಂಗ್ಯಾರೇ,ಅದೂ ಒಬ್ಬ ಹುಡಗುನ್ ಜೊತೆ ಅಲಂಕಾರ ಹೋಟಲಲ್ಲಿ ರೂಮ್ ಮಾಡ್ಕಿಂಡ್ ಅದಿನಿ ಅಂತ ಹಾಕಿಂಡ್ರೆ,ನಿಂಗ್ ಯಾರ್ ಹೆಣ್ ಕೊಡ್ತಾರಾ...!!
ನೀನು ಇಷ್ಟು ಬರ್ ಗೆಟ್ಟಿಯಾ ಅಂತ ಅಂದ್ಕುಂಡಿರ್ಲ ಮರೇನೇ..ಥೋ...

ಕ್ವಾಸ:-ಅಯ್ಯೋ ಗೌಡ್ರೆ ಹಂಗ್ ಎಂತಾ ಇಲ್ಲ ಹ್ವಾಯ್..
ನನ್ ಫ್ರೆಂಡ್ ಡಿಂಗ್ರಿ ದು ಎಂತುದೋ ಕೇಸ್ ಆಗಿ ಸ್ಟೇಶನ್ ನಲ್ಲಿ ಅದನೆ ಅವನಿಗೆ ಬೇಲ್ ತಗುಣಕೆ ಪ್ಯಾಟಿಗೆ ಹೋಗಿದ್ದೆ..

ಲೇಟ್ ಆಗಿ ಬಸ್ಸ್ ಸಿಗ್ಲ ಕಡಿಗೆ ಒಬ್ಬನೇ ಹೋಟಲ್ ನಲ್ಲಿ ರೂಮ್ ಮಾಡಿ,ರಾತ್ರಿ ಫೇಸ್ಬುಕಲ್ಲಿ ash tag ಹಾಕಿದ್ ಮಾರಾಯ್ರೆ,

iam with dingri ಅಂತ...
ಹಂಗಂದ್ರೆ ನಾನು ಅವನನ್ನ ಸಪೋರ್ಟ್ ಮಾಡ್ತಾ ಇದ್ದೇನೆ ಅಂತ ಇದು ಸಾಮಾಜಿಕ ಜಾಲ ತಾಣದ ಒಂದು trend ಗೌಡ್ರೆ...

ಗೌಡ್ರೆ:-ಎಂತಾ ಸುಡುಗಾಡು ಮರೇನೇ..
ಈ ವಾಟೆ ಸೊಪ್ಪು,ಎಂತದೋ ಹೇಸಿಗೆ ಬುಕ್,ಹಿಕ್ಕೂ,ಟಿಲ್ಲರ್,ಇಷ್ಟೇ ಗ್ರಾಮ್,ಅಂಡು ಐದು,ಸ್ಟಾರ್ಟ್ ಫೋನ್,ತತ್ ಕೀನು ಮೊಬೈಲ್ ಎಲ್ಲಾ ಬಂದ್ಕಿಂಡು,ಜನ ಎಲ್ಲಾ ಹುಚ್ಚುರಾಗ್ಯರೆ ಮರೇನೇ...

ನಮ್ಮನೆ ಅದು ಒಂದು ತತ್ ಕೀನು,ಸ್ಟಾರ್ಟ್ ಫೋನ್ ಅಂಡು ಐದೇ ಬೇಕು ಅಂತ ಸಿಟ್ ಮಾಡ್ಕಿ ಕೂತದೇ...
ಅಡಿಕೆ ಬೇರೆ ರೇಟ್ ಇಲ್ಲ..ಎಂತಾ ಸಾಯದೇನಾ ಮರೇನೇ...
ಥೋ..
ಎಲ್ಲಾ ಬಿಲಾಸ್ ಬಿಟ್ ಹೊಗ್ಯವೇ..
ಹಿಂಗೆ ಆದ್ರೆ ಮೊಬೈಲ್ ತಿನಕು0ಡು ಜೀವನ ಮಾಡ್ತಾರಾ ಎಂತದೋ ನೋಡಬಕು....

ಕ್ವಾಸ:-ಅಯ್ಯೋ ಗೌಡ್ರೆ ಅದು ವಾಟ್ಸಾಪ್,ಫೇಸ್ಬುಕ್,ಹೈಕ್,ಇನ್ಸ್ಟಾಗ್ರಾಮ್,ಟ್ವಿಟ್ಟರ್ ಅಂತ ಸಾಮಾಜಿಕ ಜಾಲ ತಾಣ ಹಾಗೂ ಚಾಟಿಂಗ್ ಆಪ್,
ಆಂಡ್ರಾಯ್ಡ್ ಅಂದ್ರೆ ಆಪರೇಟಿಂಗ್ ಸಿಸ್ಟಮ್,ಸ್ಮಾರ್ಟ್ ಫೋನ್,ಟಚ್ ಸ್ಕ್ರೀನ್ ಅಂತಾರೆ ಅದಕ್ಕೆ..
ನೀವೂ ಅದನ್ನ ಬಳಸಿ,advanced technolgy ಅದು..

ಗೌಡ್ರು:- ಸುಮ್ನೆ ಇರ ಮರೇನೇ,ಅದೆಲ್ಲಾ ನಿಂಗ್ ಊಟ ಹಾಕ್ತದನಾ..!!??.
ನಂಗೆ ಹೇಳಕ್ ಬಂದ ಇವ,ಎಲ್ಲಾ ಗೊತದೆ ನಂಗೆ..
ಇದರಲ್ಲಿ 1ಕೆಜಿ ಭತ್ತಬೆಳಿ ನೋಡನಾ,ಆತದಾ??
ಸುಮ್ನೆ ನಿಮನೆಲ್ಲಾ ಮಂಗನ್ ಮಾಡಿ ಅವರ್ಯಾರೋ ದುಡ್ಡು ಮಾಡಕಿತಾ ಆದರೆ ಅಷ್ಟೇ..
ನಿಮ್ ಸೊಡ್ಡಿಗೆ ವರ್ಲ್ ಹಿಡಿಯಾ...

ಕ್ವಾಸ:-ಬರ್ಲಾ ಗೌಡ್ರೆ,ನಿಮ್ಮತ್ರ ಬೈಸ್ಕುನಕಿಂತ ಇಲ್ಲಿಂದ ಹೋಗದೆ ಒಳ್ಳೇದು..
ಬತ್ತಿನಿ ಕೆಲ್ಸ ಅದೇ ನಂಗೆ..

ಗೌಡ್ರು:-ಒಳ್ಳೇದು ಹೇಳಿದ್ರೆ ಹಿಂಗೆ ಇವಕ್ಕೆ,ನಾನು ಆಗೇಡಿಗೆ ಬೀಜ ಹಾಕಿನಿ,ನೀರು ನೋಡಬಕ್ ಬತ್ತಿನಿ...ಅತಾ..

ಮಂಗಳವಾರ, ಏಪ್ರಿಲ್ 11, 2017

ChIkrana alalu

ಚೀಂಕ್ರನ ಅಳಲು:-
ಥೋ..ಮೋದಿ ರಾಜೀನಾಮೆ ಕೊಡ್ಕೇ..
ಎಂತಾ ಎಣ್ಣಿ ರೇಟ್ ಕಡ್ಮಿ ಮಾಡ್ಲೆ ಎಂತ ಇಲ್ಲೆ..
ಹಿಂಗೇ ಆರೆ ಎಣ್ಣಿ ಕುಡುಕಾತ್ತ..🍻🍺🍻🍺
ಬೀಡಿ ಸೇಂದ್ತಾ ಕೂಕಣುಕ್ ಆತಾ ಏಗಳೂ..
ವಾಲಿ ಕಳ್ದು ಹ್ವಾಯ್ಲಿ..
ಅಪ್ರೂಪಕ್ ಒಂದು ಸಿಗರೇಟ್ ಸೇಂದಿ ಜಾಪ್ ತೋರ್ಸ್ವ ಅಂದೇಳ್ರೆ ಅದ್ಕೂ ಕಿಚ್ಚು ಹಚ್ಚಿದ ಅವ ಜೇಟ್ಲಿ..😠
ಎಣ್ಣಿ ಕುಡುವಾ ಅಂದ್ರೆ ಸ್ಪ್ರೈಟ್,ಪೆಪ್ಸಿ ಬೆಂಕಿ ಹೆಟ್ಟದ್ ಎಲ್ಲಾ ಜಾಸ್ತಿ ಆಯಿ ಹೋಯ್ತು ಅಲ್ದ್ದಾ..🍻🍺🍺
ಇನ್ ಎಂತಾ ಸಾವುದು..
ಮರ್ಕ್ತಾ ಕೂಕಂಡಿರು ಗೊತ್ತಿತಾ ನಮ್ ಹುಡುಗ್ರು ಮಕ್ಕಳೆಲ್ಲಾ..
ಇಮಲ್ ತಿಂಬಂಗಿಲ್ಲ,ಸಿಗರೇಟ್ ಸೇಂದಿ ಹೊಗಿ ಬಿಡು ಯಾಪಾರ ಇಲ್ಲ ಆಯಿತು..ಅಂದೇಳಿ..ಗೊತಿತಾ..
ಇದೆಲ್ಲಾ ಮೋದಿಗೆ ಹೇಳ್ರೆ ಗೊತಾತ್ತ.

ಬುಧವಾರ, ಮಾರ್ಚ್ 29, 2017

ಮಾನವೀಯತೆಗೆ ದೇಶದ ಅಂಕೆ ಇಲ್ಲ

ಮೊನ್ನೆ ಚಾಮರಾಜ ಪೇಟೆಯ ಈದ್ಗಾ ಮೈದಾನದ ಹತ್ತಿರ ರಸ್ತೆ ದಾಟಲು ನಾನು ಕಾಯುತ್ತಾ ನಿಂತಿದ್ದೆ,

ಆಚೆಯಿಂದ ಒಬ್ಬ ವಿದೇಶಿ ವ್ಯಕ್ತಿಯೂ,ಬಟ್ಟೆಯ ಕೈ ಚೀಲ ಹೆಗಲಿಗೆ ಹಾಕಿಕೊಂಡು,ರಸ್ತೆ ದಾಟಲು ಪ್ರಯತ್ನಿಸುತ್ತಾ ಇರೋದು ಗಮನಿಸಿದ್ದೆ,

ಅವರ ಪಕ್ಕ,ಒಂದು ಬೀದಿ ನಾಯಿಯೂ ರಸ್ತೆ ದಾಟಲು ಹವಣಿಸುತ್ತಾ ಇತ್ತು,ಇನ್ನೇನು ವಾಹನ ಕಡಿಮೆ ಆಗಿ ರಸ್ತೆ ದಾಟಬೇಕು ನಾನು,
ಆಗ
ನನಗೊಂದು ಆಶ್ಚರ್ಯ ಕಾದಿತ್ತು!!!
ಆ ವಿದೇಶಿ ಪ್ರಜೆ,ಅದೇ ನಾಯಿಯನ್ನು ಎತ್ತಿಕೊಂಡು ರಸ್ತೆ ದಾಟಿ,
ರಸ್ತೆಯ ಈ ಕಡೆ ಪುಟ್ ಪಾತಿನಲ್ಲಿ ಅದನ್ನ ಬಿಟ್ಟು,
ಅದು ನನ್ನ ಜವಾಬ್ದಾರಿ ಅನ್ನುವಂತೆ,ಏನೂ ಅರಿಯದವರಂತೆ,ಪುಟ್ ಪಾತ್ ನಲ್ಲಿ ನಡೆಯುತ್ತಾ ಹೊರಟೆ ಹೋದರು,
ನಾಯಿಯೂ ಅವರಿಗೆ ಧನ್ಯವಾದ ಹೇಳಿದಂತೆ,ಅವರ ಹಿಂದೆ ಬಾಲ ಗುಂಡಾಡಿಸುತ್ತಾ ಸ್ವಲ್ಪ ದೂರ ಖುಷಿ ಇಂದ ಹೋಗಿ ಬಂತು..😍

ನಾವು ಮಾನವರು,ಮಾನವೀಯತೆಯ ಪರ,ಆ ಪರ ಈ ಪರ ನಮ್ಮದು ಅಹಿಂಸಾ ದೇಶ,ಸಂಸ್ಕೃತಿ,ಸಂಪ್ರದಾಯ,ಅತಿಥಿ ಸತ್ಕಾರ,ಭಾವನೆ,ನೋವು,ಸ್ಪಂಧನೆ ಇನ್ನು ಏನೇನೋ ಬರೀ ಬಾಯಿ ಮಾತಲ್ಲೇ ಅನ್ನುವ ಹಲವು ಜನರು,!!

ಬೀದಿ ನಾಯಿಗಳು ಹಾಗೂ ಇನ್ನಿತರ ಪ್ರಾಣಿಗಳನ್ನ ಅತ್ಯಂತ ನಿಕೃಷ್ಟವಾಗಿ ಕಾಣುತ್ತಾ,ಅವು ಇರುವುದೇ ಹಿಂಸಿಸೋಕೆ,ಸಾಯಿಸೋಕೆ ಅನ್ನುವ ಹಾಗೆ ಮಾತನಾಡುವ ಕೆಲವು ಜನರು..!!

ಯಾವುದೋ ದೇಶದ ಪ್ರಜೆಯಿಂದ ಮಾನವೀಯತೆಯ ಪಾಠ ಕಲಿಯುವಂತಾ ಪರಿಸ್ಥಿತಿ ಇದೆ ಅನ್ನಿಸುತ್ತೆ ಅಲ್ವಾ..!!??😢

ದಯೆ ಬೇಕು ಸಕಲ ಪ್ರಾಣಿಗಳ ಮೇಲೆ ಅಲ್ವಾ!!??