ಮೊನ್ನೆ ನಾಯಂಡಳ್ಳಿಯಿಂದ ಬನಶಂಕರಿ ರಿಂಗ್ ರಸ್ಥೆಯಲ್ಲಿ ಜನತಾಬಜಾರ್ ಸಿಗ್ನಲ್ಲಿನಲ್ಲಿ,ಒಂದು ಕಾಂಕ್ರೀಟ್ ಕಂಟೈನರ್ಗೆ ಒಬ್ಬ ಬೈಕ್ ಸವಾರ ರಾಂಗ್ ಸೈಡಲ್ಲಿ ಬಂದು ಹಿಂದಿನ ಚಕ್ರಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಇದ್ದಾಗಲೂ,ಇದೇ ತರಹ ಜನರು ತಮ್ಮ ಮೊಬೈಲ್ನಿಂದ ಪೋಟೋ ತೆಗೆಯಲು ಪ್ರಯತ್ನಿಸುತ್ತಿದ್ದರು,ಟ್ರಾಪಿಕ್ ಸಂಪೂರ್ಣ ಜಾಮ್ ಆಗಿ ಪೋಲೀಸರು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ,ಪೋಟೋ ತೆಗೆಯುತ್ತಿದ್ದವರು ಯಾವುದರ ಪರಿವೇ ಇಲ್ಲದೆ,(ಕೆಲವು ಸಾರ್ವಜನಿಕರ ಸಹಕರಿಸುತ್ತಿದ್ದದ್ದು ಬಿಟ್ಟರೆ)ಅವರ ಕೆಲಸ ಮುಂದುವರೆಸುತ್ತಿದ್ದರು,ಎಂತಹಾ ದುರಂತ ಅನ್ನಿಸಿ ಅಸಾಹಯಕನಾಗಿ,ನಾನು ಬಾರವಾದ ಹೆಜ್ಜೆ ಹಾಕುತ್ತಾ ಮನೆಗೆ ಬಂದೆ..
ನಿಜಕ್ಕೂ ಇದು ಸಮಾಜದ ಒಂದು ದುರಂತ..
ಈ ಸೆಲ್ಪಿ ಹಾಗೂ ಯಾವ ಸನ್ನಿವೇಶವನ್ನೂ ನೋಡದೆ ಪೋಟೋ ತೆಗೆಯುವ ಸಾಂಕ್ರಾಮಿಕ ಕಾಯಿಲೆಯಿಂದ ನಮ್ಮ ಕೆಲವು ಜನರು ಯಾವಾಗ ಹೊರಗೆ ಬರುತ್ತಾರೋ ದೇವರೇ ಬಲ್ಲ
ಬುಧವಾರ, ಸೆಪ್ಟೆಂಬರ್ 2, 2015
Camara zamana
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ