ಬುಧವಾರ, ಫೆಬ್ರವರಿ 27, 2019

ಓಲಾ

ಮೊನ್ನೆ ಓಲಾ ಕ್ಯಾಬ್ ಬುಕ್ ಮಾಡಿ ಹೊರಟಿದ್ದೆ, ಚಾಲಕ ಇಂದಿರಾ ಕ್ಯಾ0ಟೀನ್ ಮುಂದೆ ಪಾಸ್ ಆಗುವಾಗ

"ನೋಡಿ ಸಾರ್ ಇಂದಿರಾ canteen ನಲ್ಲಿ ಎಷ್ಟು ಜನ ಇದ್ದಾರೆ ಅಂತ..ಇಬ್ಬರು ಮೂರು ಜನ ಇದ್ದಾರೆ ಅಂದರು..

"ನಾನು ಅಲ್ಲಾ ಮತ್ತೆ ಬಾರೀ ಸಹಾಯವಾಗಿದೆ ಬಡವರಿಗೆ ಬೆಂಗಳೂರಿನಲ್ಲಿ ಅಂತಾರಲ್ಲ ಕಾಂಗ್ರೆಸ್ ನವರು" ಅಂದೆ..

ಅದಕ್ಕೆ ಅವರು

"ಸಾರ್..
ಇಂದಿರಾ canteen ನಾನು ಒಂದು ದಿನ ಕೂಡ ಹೋಗಿಲ್ಲ ಯಾಕೆ ಗೊತ್ತಾ,
ನಾಳೆ ಇವರು ಇನ್ಯಾವುದೋ ಭಾಷಣದಲ್ಲಿ ,ಇವರನ್ನೆಲ್ಲ ಅನ್ನ ಹಾಕಿ ಸಾಕಿದ್ದೇ ನಾನು,ನಮಗೆ ವೋಟ್ ಹಾಕಿ ಅಂತ ಹೇಳೋದು,ಇವರ ಮನೆಯಿಂದಲೇ ಹಣ ತಂದು ಹಾಕಿದ್ದು ಅನ್ನುವ ಹಾಗೆ ಮಾತಾಡೋದು,
ಆಮೇಲೆ ನಮಗೆ ಆ ಪಾಪ ಪ್ರಜ್ಞೆ ಕಾಡೋದು ಇದೆಲ್ಲಾ ಬೇಕಾ ಸಾರ್..!?

ನಾನು ಕಷ್ಟಪಟ್ಟು ದುಡಿಯುತ್ತೇನೆ,ಗಾಡಿ ಅಂಗಡಿಯಲ್ಲಿ 25 ಅಥವಾ 30 ಕೊಟ್ಟು ಚಿತ್ರನ್ನಾ ಅಥವಾ ಅನ್ನ ಸಾಂಬಾರ್ ತಿಂತೀನಿ, ನನ್ನ ಹಾಗೆ ಅವನೂ ದುಡಿಮೆ ಮಾಡೋನು ಅಲ್ವಾ ಸಾರ್..ಅವನಿಗೇ ಹೋಗಲಿ ನನ್ನ ಹಣ...

ನಾನು ಈ ಹಿಂದೆ ಕಟ್ಟಾ ಕಾಂಗ್ರೆಸ್ ಆಗಿದ್ದೆ,ಸಿದ್ದರಾಮಯ್ಯ ಒಳ್ಳೆ ವ್ಯಕ್ತಿ ಅಂದು ಕೊಂಡು ಹಿಂದಿನ ಚುನಾವಣೆಯಲ್ಲಿ ಫುಲ್ ಸಪೋರ್ಟ್ ಮಾಡಿದ್ದೆ..

ಆದರೆ ಇವರು ಜಾತಿ,ಹಿಂದೂಗಳನ್ನ ಕೇವಲವಾಗಿ ನೋಡಿದ್ದು,ಚುನಾವಣೆ ಸಮಯದಲ್ಲಿ ಇಂದಿರಾ canteen,ಇವರು ಮಾಡಿದ ಕೆಲಸ ಹೇಳಿಕೊಳ್ಳೋದು ಬಿಟ್ಟು,ಮೋದಿ ಬೈಯೋದು, ಇನ್ಯಾರನ್ನೋ ಸಣ್ಣ ವಿಷಯಕ್ಕೆ ತೆಗಳೋದು,ರೌಡಿ ಗಳನ್ನ ಸಪೋರ್ಟ್ ಮಾಡೋದು,ಅಧಿಕಾರಗಳನ್ನ ಕೇವಲವಾಗಿ ನೋಡೋದು,ಅಹಿಂದಾ ಅಂತ ಅವರನ್ನ ಎಲ್ಲದಕ್ಕೂ ಎಳೆದು ತರೋದು,ಈ ತರ ಎಲ್ಲಾ ಅನ್ಯಾಯ,ಗಿಮಿಕ್ ಇದೆಲ್ಲಾ ಬೇಕಾ ಸಾರ್..!?

ನಾನು ಈ ಸರಿ ಇವರಿಗೆ ವೋಟ್ ಹಾಕಲ್ಲ ಸಾರ್..
ಇವರೇ ಮುಂದೆ ಮತ್ತೆ ಬಂದರೆ ನಮ್ಮನ್ನ ಬದುಕೋಕೆ ಬಿಡ್ತಾರಾ ಸಾರ್..

Tax ಕಟ್ಟೋರು ಯಾರೋ..ಸ್ಕೋಪ್ ತಗಳ್ಳೋದು ಮಾತ್ರ ಇವರು..

ಅದೇನೋ cab ತಗೊಳ್ಳೋಕೆ subsidy ಅಂತ ಬೇರೆ ಕೊಡ್ತಾರಂತೆ ಅಂತ ಸುದ್ದಿ ಇದೆಯಂತೆ,ಹಾಗಾದ್ರೆ ನಮ್ಮಂತ cab ನವರು ಹೇಗೆ ಬದುಕೋದು ಹೇಳಿ ಸಾರ್..!?

ಇವೆಲ್ಲಾ ತಿಳಿಯದಷ್ಟು ನಾವ್ಯಾರೂ ದಡ್ಡರಿಲ್ಲ,ಮುಂದೆ ನನ್ನ ಧರ್ಮದವರು ಚೆನ್ನಾಗಿರಬೇಕು,ಇವರ ಓಲೈಕೆ ರಾಜಕಾರಣಕ್ಕೆ ಇಷ್ಟು ದಿನ ನಮ್ಮವರು ಅನುಭವಿಸ್ತಾ ಇರೋದೇ ಸಾಕು...
ಸ್ವಲ್ಪ ಜಾಸ್ತಿ ಮಾತಾಡಿದೆ ಅನಿಸುತ್ತೆ ಸಾರ್,ಬೇಜಾರಾಗಬೇಡಿ,ಹೇಳಬೇಕು ಅನಿಸ್ತು ಹೇಳಿದೆ",
ಅಂತ ಒಂದೇ ಉಸಿರಲ್ಲಿ ಎಲ್ಲಾ ಹೇಳಿಬಿಟ್ಟರು.."

"ಪರವಾಗಿಲ್ಲ ಬಿಡಿ,
ಏನು ಓದಿದಿರಾ ನೀವು"ಅಂದೆ..

"PUC complete ಮಾಡಿಲ್ಲ ಸಾರ್"ಅಂದರು..

ಇನ್ನು traffic,ಬೆಂಗಳೂರಿನ ಜನಸಂಖ್ಯೆ ಹೀಗೆ ಹಲವು ವಿಷ್ಯದ ಬಗ್ಗೆ ಮಾತಾಡಿದರು..
ನನಗೆ ಅವರ ಹಲವು ವಿಚಾರಗಳ ಬಗ್ಗೆ ಇರುವ knowledge ಹಾಗೂ ಕಾಳಜಿಯ ಬಗ್ಗೆ ಸಂತೋಷ ಅನ್ನಿಸ್ತು..

ಹೆಚ್ಚಿನವರಿಗೆ ಎಲ್ಲಾ ಮಾಹಿತಿ ಇರುತ್ತೆ..
ಜನರನ್ನ ಯಾವ ಪಕ್ಷವೇ ಆಗಲಿ ಅಷ್ಟು ಸುಲಭಕ್ಕೆ ಮರಳು ಮಾಡೋಕಾಗಲ್ಲ ಅನಿಸ್ತು..☺️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ