ಗುರುವಾರ, ಮಾರ್ಚ್ 15, 2018

ದುರಹಂಕಾರ ಶಾಶ್ವತವಲ್ಲ

ಹೋದ ಶನಿವಾರ ರಾಜರಾಜೇಶ್ವರಿ ನಗರದಿಂದ ಬರುತ್ತಾ ಇದ್ದೆ..

ನನ್ನ ಹಿಂದೆಯೇ ಒಬ್ಬಳು ಯುವತಿ access(ಹೊಸಾ ಮಾಡೆಲ್)ನಲ್ಲಿ ಕಿವಿಗೆ head phone ಸಿಕ್ಕಿಸಿಕೊಂಡು ಹೆಲ್ಮೆಟ್ ಹಾಕದೇ,ಎಡ,ಬಲ ಹೇಗೆಗೋ ಇಷ್ಟ ಬಂದ ಹಾಗೆ ಸ್ಪಿಡಾಗಿ ಓಡಿಸುತ್ತಾ ಇದ್ದಳು,ಪೂರ್ಣಪ್ರಜ್ಞಾ ಲೇ ಔಟ್ ಹತ್ತಿರ ವಿಷ್ಣುವರ್ಧನ್ ರಸ್ತೆಗೆ ಹೋಗುವ ದಾರಿಯ ಬಳಿ ದೊಡ್ಡ ಹೊಂಡಾ ಬಿದ್ದಿತ್ತು..
ಆ ಹುಡುಗಿ ನನ್ನ ಪಕ್ಕ chase ಮಾಡಿ ಎಡಕ್ಕೆ ಹೋದವಳು ಕೂಡಲೇ ಸಂಪೂರ್ಣ ಬಲಕ್ಕೆ ಬಂದು ಬ್ರೇಕ್ ಹಾಕಿಬಿಟ್ಟಳು..

ಹಿಂದೆಯಿಂದ ಸುಮಾರು 60,65 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರು jupiter ದ್ವಿಚಕ್ರವಾಹನದಲ್ಲಿ normal speed ನಲ್ಲಿ ಬರುತ್ತಾ ಇದ್ದರು,
ಈ ಹುಡುಗಿ ಹೀಗೆ ಸಡನ್ ಬ್ರೇಕ್ ಹೊಡೆದು ಮದ್ಯ ರಸ್ತೆಯಲ್ಲಿ ನಿಲ್ಲಿಸಿದ್ದನ್ನ ನೋಡಿ ಅವಳ ಗಾಡಿಗೆ ಹಿಂದಿನಿಂದ ಹೊಡೆಯೋದು ತಪ್ಪಿಸಲು ಹೋಗಿ ಬ್ರೇಕ್ ಹೊಡೆದಿದ್ದಾರೆ ಗಾಡಿ ಸ್ಕಿಡ್ ಆಗಿದೆ,balance ಮಾಡೋಕೆ ಆಗದೆ ಕೆಳಗೆ ಬಿದ್ದರು.

ಹೆಲ್ಮೆಟ್ ಇದ್ದಿದ್ದರಿಂದ ತಲೆಗೆ ರಸ್ತೆಯ edge ಹೊಡೆದರು ಏನೂ ಆಗಿಲ್ಲ ಅವರಿಗೆ..
ನಾನು ಕೂಡಲೇ ಅಲ್ಲೇ ನನ್ನ ವಾಹನ ಸೈಡಿಗೆ ಹಾಕಿ,ಓಡಿ ಹೋಗಿ..ಅವರನ್ನ ಎಬ್ಬಿಸಿ ಅಲ್ಲೇ ಪಕ್ಕಕ್ಕೆ ಕೂರಿಸಿ ಅವರ ಮಧ್ಯ ರಸ್ತೆಯಲ್ಲಿ ಬಿದ್ದಿದ್ದ jupiter ದ್ವಿಚಕ್ರವಾಹನವನ್ನ ಎತ್ತಿ,ಬದಿಯಲ್ಲಿ ನಿಲ್ಲಿಸಿ ತಿರುಗಿ ನೋಡುತ್ತೇನೆ..
ಆ ಹುಡುಗಿ ಒಂದು ನಿಮಿಷ ನಿಲ್ಲಿಸದೇ ಅಲ್ಲಿಂದ ಮಂಗ ಮಾಯ,
ಏನಾಯ್ತು ಅಂತ ಕೇಳುವ ಸಂಯಮ ಹಾಗೂ ಮಾನವೀಯತೆಯೂ ತೋರಲಿಲ್ಲ ಆ ಯುವತಿ,ದುರಹಂಕಾರದಿಂದ ಹೋಗೆ ಬಿಟ್ಟಳು,

ನಾನು ಆ ಗಡಿಬಿಡಿಯಲ್ಲಿ ಅವಳ ವಾಹನದ ನಂಬರ್ ನೋಡಲೂ ಇಲ್ಲ..

ಸಾರ್..ಹೇಗಿದ್ದೀರಾ,ಸರಿ ಪೆಟ್ಟಾಯ್ತಾ? ನೀರು ಬೇಕಾ ಅಂತ ಕೇಳ್ತಾ ಇದ್ದೆ..
ಆಗ ಅಲ್ಲೇ ಪಕ್ಕದಲ್ಲಿ construction ಕೆಲ್ಸ ಮಾಡುತ್ತಾ ಇದ್ದವರು ಸಹಾಯಕ್ಕೆ ಓಡಿ ಬಂದರು..

ಪರ್ವಾಗಿಲ್ಲ ಬಿಡಿ..ಏನೂ ಆಗಿಲ್ಲ,
ಅಂದರು ಮೊಣಕೈ ಮತ್ತೆ,ಹಸ್ತದಿಂದ ರಕ್ತ ಸುರಿಯುತ್ತಾ ಇತ್ತು..
ನಾನೇ ಮನೆಗೆ ಬಿಡ್ತಿನಿ ಬನ್ನಿ ಅಂದೆ..

ಇಲ್ಲ ಇಲ್ಲೇ ಹತ್ತಿರ ಮನೆ,ಮಗನ್ನ ಕರಿತೇನೆ ಸಾರ್..It's OK..No problem I'm all right ಅಂತ ನಡುಗುತ್ತಾ ಹೇಳಿದರು..

ಪದೇ ಪದೇ,ಏನಾದ್ರು ಜಾಸ್ತಿ ನೋವು ಆಗಿದ್ರೆ ಹೇಳಿ ಸಾರ್ ಆಸ್ಪತ್ರೆಗೆ ಹೋಗೋಣ,ಅಂತ ಕೇಳಿದರೂ,
ಅವರು ನಿಮಗ್ಯಾಕೆ ತೊಂದರೆ,ಅಂತದ್ದು ಏನೂ ಆಗಿಲ್ಲ ಅಂದರು..
Thank you very much ನಿಮ್ಮ ಸಹಾಯಕ್ಕೆ ಅಂದರು..

ಕೊನೆಗೆ ನಿಮ್ಮ0ತವರೂ ಬೆಂಗಳೂರಲ್ಲಿ ಇದೀರಲ್ಲಾ ಖುಷಿ ಆಯ್ತು ಅಂದರು..😣
ನಾನೇನೂ ದೊಡ್ಡ ಕೆಲಸ ಮಾಡಿರಲೂ ಇಲ್ಲ..
ಬಿಡಿ.

ನನಗೆ ಒಮ್ಮೆ,ಆ ಮಾತು ಮನಸ್ಸಿಗೆ ಸಕತ್ ಬೇಸರ ತಂದಿತು..😓

ಹಾಗಾದ್ರೆ
ಮನುಷ್ಯತ್ವ ಇಲ್ಲವೇ ಇಲ್ವಾ ಇಲ್ಲಿ..
ನನ್ನಿಂದ ಒಬ್ಬರಿಗೆ ಏನೋ ಆಯ್ತಲ್ಲ ಅಂತ ಪಾಪ ಪ್ರಜ್ಞೆ ಆ ಯುವತಿಗೆ ಕಾಡಲ್ವಾ ಮನೆಗೆ ಹೋದ ಮೇಲೆ?
ಅವಳಿಗೆ ಇನ್ನೊಂದು ದಿನ ಈ ರೀತಿ ಆದರೆ ಏನಾಗುತ್ತೆ?
ಇದೆಲ್ಲಾ ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮಾಡೋದು,ಆಶ್ಚರ್ಯಪಡುವ ಅಥವಾ ಹೊಗಳುವ ವಿಷಯವಾ?
ಇದು ಮಾನವೀಯತೆ ಅಥವಾ ಒಂದು ನಾಗರೀಕ ಸಮಾಜದ ವ್ಯಕ್ತಿ ಯಾರೇ ಆದರೂ ಅವರ ಕರ್ತವ್ಯ ಅಲ್ವಾ..?

ಸೆಲ್ಫಿ ವಿಡಿಯೋ ತೆಗೆದು ವಾಟ್ಸ್ ಅಪ್,ಫೇಸ್ಬುಕ್ ನಲ್ಲಿ ಹಾಕೋದೆ ಮಾನವೀಯತೆ ಹಾಗೂ ಸಾಧನೆಯಾ?

ಇವತ್ತಿನ ನಾಯಂಡಲ್ಲಿಯ ವಿಷಯ ಕೇಳಿ ಇದೆಂತಾ ಪ್ರಪಂಚ ಅನಿಸಿತು ಮತ್ತೊಮ್ಮೆ..
ಒಂದು ಜೀವಕ್ಕೆ ಬೆಲೆಯೇ ಇಲ್ಲವಾ?
ಹಣಕ್ಕೆ ಮಾತ್ರ ಬೆಲೆಯಾ?

ಮೊದಲು ಮಾನವರಾಗಬೇಕು ಅಲ್ವಾ..😓

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ