ಮೊನ್ನೆ ಮಂಜಪ್ಪ ಗೌಡ್ರ ಮನಿಗೆ ಒಂದು ಲೆಟರ್ ಬಂತಂತೆ..
ನೋಡಿರೆ
ಮುಖ್ಯಮಂತ್ರಿಗಳು ಕಳ್ಸ್ಯರೆ..!😍
ಗೌಡ್ರು:-
"ಅಗ್ಗೇ ಹೋತಾ...
ನಮ್ಮ ಕುಮಾರಣ್ಣ,ನಂಗೆ ಕಾಗಜ ಬರದರೆ,
ನಾನೇನು ಕಮ್ಮಿನಾ ಹಂಗ್ಯಾರೇ" ಅಂತ ಕುಂಚಟ್ ಹೊಡೀತಾ..
"ಈ ಕ್ವಾಸ ಎಲ್ ಪ್ಯಾಟೆ ಬದಿ ಸತ್ಗು ಹೊಗ್ಯನೋ ಏನೋ,ಎಂತಾ ಬರೆದರೆ ಅಂತ ನೋಡಬಕಲ್ಲ,
ನಂಗೇನು ಕಣ್ ಹೊಟ್ ಹಾರ್ ಹೊಗ್ಯದೆ ಅಂದ್ ಕುಂಡ್ರಾ,ಇಲ್ಲಪ್ಪ
ಓದಕ್ಕೆ ಬರಲ್ಲ ಅಷ್ಟೆಯಾ..
ಹೆಬ್ಬೆಟ್ಟು ಮರ್ರೆ ನಾನು..
ಓದಕ್ಕೆ ಬರದೇ ಇದ್ರೂ,ಸರ್ಕಾರದ್ದು ಕಾಗಜ ಅಂತ
ಮು.ಮ ಬರೆದಿದ್ದು ಅಂತ ಹೆಂಗ್ ಗೊತಾತು ಅಂತೀರಾ..!?😉
ಕಾಗದದ ಮೇಲೆ ಗಂಡ ಬೇರು0ಡ ಇತ್ತಲ್ಲ ಅದುನ್ ನೋಡಿ,
ನಾನೇನು ಅಷ್ಟು ಹಮಾ ದಡ್ಡ ಅಲ್ಲ ಅತಾ,
ನೀವು ನಗ್ಯಾಡುದು ಬ್ಯಾಡ..!😊
ಕ್ವಾಸ:-ಗೌಡ್ರೆ ಯಾವ ಕಡೆ..!?
ಗೌಡ್ರು:-"ಅಗ್ಗೇ ಹೋತಾ..ನೀನು ಸತ್ಗು ಇಲ್ಲೇ ಅದಿಯಾ ಮರಾಯಾ,ನಿನ್ನ ಹುಲಿ ಹಿಡಿಯಾ..
ಅಲ್ಲೋ ಇದೆಂತದೋ ಉಂದು ಕಾಗದ ಬಂದದೇ, ನಮ್ಮ ಕುಮಾರಣ್ಣ ಬರದರೆ ಅಂತ ಕಾಂತದೇ ನೋಡು..
ಒಂಚೂರು ಓದು ಹೇಳ ಕಳ್ಳ ಮುಂಡೇಗಂಡ.."
😁
ಕ್ವಾಸ:-ಗೌಡ್ರೆ ಇದು,ನೀವು ಸಾಲ ಮನ್ನಾಕೆ ಅರ್ಹರು ಅಂತ ಸರ್ಕಾರದ ಕಡೆಯಿಂದ ಪತ್ರ ಬಂದಿದೆ ಮರ್ರೆ..ಅಷ್ಟೇ..!
ಗೌಡ್ರು:-ಥೋ..ಮರೆನೆ,ಅಲಾ ಹಂಗ್ಯಾರೇ,ಎಲ್ಲಾ ಸಾಲ ಕಟ್ಟಿ ಮುಗ್ಸ್ಯಾಗದೆ,ಈಗ ಇದುನ್ ಕಳ್ಸ್ಯಾರಲ್ಲ..ಎಂತಾ ಹಕಾಪತಿಗಳು ನೋಡ...
ಅಲ್ಲೋ..ಈಗ ಮೆನೇಜರ್ ಹತ್ರ ಹೋಗಿ..ಉಪೀಟ್..ಸಾಲ ಕಟ್ಟಿದ್ದು ವಾಪಾಸ್ ಕೊಡಿ,ಕುಮಾರಣ್ಣ ಕಾಗಜ ಕಳ್ಸ್ಯರೆ ನೋಡಿ, ಅಂತ ತೋರಿಸ್ಗಿ ಬತ್ತಿನಿ ಇವತ್ತೇ ಪ್ಯಾಟಿಗೆ ಹೋಗಿ,ಕೊಡು ಅದನ್ನ..
ಕ್ವಾಸ:-ಗೌಡ್ರೆ..ಮ್ಯಾನೇಜರ್ ಏನು ಮಾಡ್ತಾರೆ,ಇದಕ್ಕೂ ಅವರಿಗೂ ಸಂಬಂಧ ಇಲ್ಲ..ಹಾಗೆಲ್ಲಾ ಕಟ್ಟಿದ ಸಾಲ,ವಾಪಾಸ್ ಕೊಡಲ್ಲ ಮಾರಾಯ್ರೆ..
ಅದರ ಕತೆ ಅಷ್ಟೇ..ಬಿಡಿ..
ಗೌಡ್ರು:-ಅಲ್ಲ ಮರೆನೆ,ಇದೆಂತಾ ಹಪ್ ಗೆಟ್ಟಿದ್ ಸಾಲ ಮನ್ನಾ ಯೋಜನೇನಾ..ಕಟ್ಟೋರು ಕಟ್ ಬಕು,ಸುಮ್ನೆ ಇರೋರಿಗೆ ಸಾಲ ಮನ್ನಾ..
ಎಲ್ಲಾ ಮಕ್ಕರ್ ಮಾಡಿ,ನಮ್ಮನ್ನ ಲಗಾಡಿ ತೆಗೆಯೋರೆ ಅದರೆ ನೋಡ..
ಈ ಸರಿ ವೋಟ್ ಹಾಕಿ ಅಂತ ಬರ್ಲಿ,
ಕಣ್ಣೀರು ಸುರ್ಸ್ಕಿತ ಆಮೇಲೆ ಅದೇ ಅವರಿಗೆ..
ಬಿಲಾಸ್ ಬಿಟ್ಟವು..
ಅವು ಸೊಡ್ಡಿಗೆ ವರ್ಲ್ ಹಿಡಿಯ.
😢😠
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ