ಸುಮಾರು 1939 ರಿಂದ 1945 ರವರೆಗೆ
ಎರಡನೇ ವಿಶ್ವ ಯುದ್ಧ ನಡೆಯಿತು..
ಅಮೇರಿಕಾ,ಬ್ರಿಟನ್,ರಷ್ಯಾ,ಚೀನಾ ಹಾಗೂ ಜರ್ಮನಿ,ಜಪಾನ್,ಇಟಾಲಿ ಇತರ ಯುರೋಪ್ ದೇಶಗಳ ನಡುವೆ.....
ಈ ಸಮಯದಲ್ಲಿ ಬ್ರಿಟನ್ ಪ್ರಮುಖ ನಗರಗಳ ಮೇಲೆ ಜರ್ಮನಿ,ರಾತ್ರಿ ವೇಳೆಯಲ್ಲಿ ವಿಮಾನದ ಮೂಲಕ ಬಾಂಬ್ ದಾಳಿ ಮಾಡುತ್ತಾ ಇದ್ದಿದ್ದು ಸಾಮಾನ್ಯವಾಗಿತ್ತು..
ಈ ಕಾರಣದಿಂದ ಲಂಡನ್ ಸೇರಿದಂತೆ ಬ್ರಿಟನ್ ಹಲವು ನಗರ ಗಳಲ್ಲಿ ಬ್ಲಾಕ್ ಔಟ್ ಕಡ್ಡಾಯವಿತ್ತು,ಎಂದರೆ ಸಂಜೆಯ ವೇಳೆ,ಕತ್ತಲಾದ ಮೇಲೆ ಬೀದಿ ದೀಪ ಹಾಗೂ ರೈಲು,ಬಸ್ ಹಾಗೂ ಇನ್ನಿತರೆ ಮುಖ್ಯ ಪ್ರದೇಶಗಳಲ್ಲಿ ವಿದ್ಯುತ್ ದೀಪಗಳನ್ನ ಬಳಸುತ್ತಾ ಇರಲಿಲ್ಲ...
ಉದ್ದೇಶ ಬೆಳಕು ಜಾಸ್ತಿ ಇರುವ ಪ್ರದೇಶ ಪ್ರಮುಖ ನಗರ ಎಂದು ಕೊಂಡು ವಿಮಾನದ ಮೂಲಕ ಬಾಂಬ್ ದಾಳಿ ಮಾಡುತ್ತಾರೆ ಎಂದು ಹೀಗೆ ಮಾಡಲಾಗುತ್ತಾ ಇತ್ತು..ಅದೇ ಕಾರಣ...!
ಇಂತಹಾ ಸಮಯದಲ್ಲಿ ಒಬ್ಬ ವ್ಯಾಪಾರಿ ತನ್ನ ಕೆಲಸದ ನಿಮಿತ್ತ ಯಾವುದೋ ಪರ ಊರಿಗೆ ರೈಲಿನ ಮೂಲಕ ಹೋಗಿ,ರಾತ್ರಿ ವೇಳೆ ರೈಲಿನಲ್ಲಿ ತನ್ನ ಊರಿಗೆ ವಾಪಾಸ್ ಪ್ರಯಾಣ ಬೆಳೆಸಿದ್ದರು...
ಆ ಸಮಯದಲ್ಲಿ ನಿಲ್ದಾಣ ಬಂದ ಕೂಡಲೇ ಹೆಸರು ತೋರಿಸುವ ಈಗ ಇರುವಂತೆ ಡಿಜಿಟಲ್ ಡಿಸ್ಪ್ಲೇ,ಆಟೊಮ್ಯಾಟಿಕ್ ಬಾಗಿಲು ಇರಲಿಲ್ಲ...
ಕಗ್ಗತ್ತಲು, ಯಾವುದೇ ಬೀದಿ ದೀಪಗಳಿಲ್ಲ,ಇನ್ನೇನು ರೈಲು ವೇಗ ಕಡಿಮೆ ಆಗುತ್ತಾ ಬಂತು,ತನ್ನ ಊರನ್ನು ತಲುಪಿತು ಎಂದು ಕೊಳ್ಳುತ್ತಾ ಬಾಗಿಲ ಹತ್ತಿರ ಬಂದರು ವ್ಯಾಪಾರಿ...!
ವೇಗ ಸಂಪೂರ್ಣ ಕಡಿಮೆ ಆಗಿ
ರೈಲು ನಿಧಾನವಾಗುತ್ತಾ ನಿಂತು ಬಿಡುತ್ತೆ..
ಓಹ್...ತನ್ನ ಊರಲ್ಲಿ ನಿಂತಿತು ರೈಲು ಅಂತ ಕೂಡಲೇ ಬಾಗಿಲು ತೆಗೆದು ಕೆಳಗೆ ಇಳಿದು ಬಿಡ್ತಾರೆ..
ಆದರೆ ದುರಂತ ಎಂದರೆ ರೈಲು ನಿಲ್ದಾಣ ತಲುಪಿರಲೇ ಇಲ್ಲ..ರೈಲ್ ಚಾಲಕ(ಲೋಕೋಮೋಟಿವ್ ಪೈಲಟ್)ಸ್ಟೇಶನ್ ನ ಸಿಗ್ನಲ್ ಗಾಗಿ ಕಾಯುವ ಸಲುವಾಗಿ,ರೈಲ್ವೆ ಸೇತುವೆಯ ಮೇಲೆ ರೈಲು ನಿಲುಗಡೆ ಮಾಡಿರುತ್ತಾರೆ....!
ಕತ್ತಲೆಯಲ್ಲಿ ಏನನ್ನೂ ಗಮನಿಸಲಾಗದೇ,ಕಾಣದೇ, ವ್ಯಾಪಾರಿ ಗಡಿಬಿಡಿ ಯಲ್ಲಿ ಬಾಗಿಲು ತೆಗೆದು ಇಳಿದಿದ್ದಾರೆ..
ನೇರವಾಗಿ,ರೈಲು ಸೇತುವೆಯಿಂದ ಕೆಳಗೆ ಬಿದ್ದು ಮರಣ ಹೊಂದುತ್ತಾರೆ..
ಟೂವೆ ಟಿಕೆಟ್ ತಗಂಡವರು..
ಒನ್ ವೇ ಟಿಕೆಟ್ ನಲ್ಲೇ ಹೋಗಿ ನೇರವಾಗಿ ಮೇಲೆ ಬಿಡ್ತಾರೆ..
#ಅವಿವೇಕದ_ಸಾವು
ಕಥೆ_13
#stupid_death
(ಮೂಲ:-Horrible histories)
ಮಂಗಳವಾರ, ಫೆಬ್ರವರಿ 9, 2021
ಎಡ್ಮಂಡ್-2
ಎಡ್ಮಾಂಡ್-||
ಸುಮಾರು 1016 ರಲ್ಲಿ 23 ಎಪ್ರಿಲ್ನಿಂದ 30 ನವೆಂಬರ್ 1016 ವರೆಗೆ ಕೆಲವೇ ತಿಂಗಳು ಇಂಗ್ಲೆಂಡ್ ನ ರಾಜನಾಗಿದ್ದ ಎಡ್ಮಾಂಡ್ ಐರನ್ ಸೈಡ್(ಎಡ್ಮಾಂಡ್-||)
ಸಾವನ್ನಪ್ಪಿದ್ದು ಬಹಳ ವಿಚಿತ್ರವಾಗಿ..
ಎಂದಿನಂತೆ ತನ್ನ ನಿತ್ಯ ಕರ್ಮ ಮುಗಿಸಲು ಶೌಚಾಲಯಕ್ಕೆ ಹೋಗಿ ಕೂತಿದ್ದರಂತೆ
ಶೌಚಾಲಯದ ಗುಂಡಿಯಲ್ಲಿ ಅವಿತು ಕುಳಿತಿದ್ದ ವೈಕಿಂಗ್ ವೈರಿ ಒಬ್ಬ ಎಡ್ಮಾಂಡ್ ¡¡ ನ ಹಿಂಬದಿಗೆ ಎರಡು ಬಾರಿ ಈಟಿಯಿಂದ ಚುಚ್ಚಿದ್ದಾನೆ ಇದರಿಂದ
ಎಡ್ಮಾಂಡ್-¡¡ ಮರಣ ಹೊಂದಿದರಂತೆ..
ಎಂತಾ ಸಾವು ಮಾರಾಯ್ರೆ..
ಹೇಗೆ ಸತ್ತರು ರಾಜ ಅಂತ ಅವರ ಕೊನೆಯ ದರ್ಶನ ಮಾಡೋಕೆ ಕೇಳಿದರೆ,ಬಂದವರಿಗೆ ಹೇಗೇ ವಿವರಣೆ ನೀಡಬೇಕು ಅರಮನೆ ಕಡೆಯವರು ಅಲ್ವಾ!?
#ಸ್ಟುಪಿಡ್_ಡೆತ್
#ಕಥೆ_02
(ಮೂಲ:-Horrible history series)
ಸುಮಾರು 1016 ರಲ್ಲಿ 23 ಎಪ್ರಿಲ್ನಿಂದ 30 ನವೆಂಬರ್ 1016 ವರೆಗೆ ಕೆಲವೇ ತಿಂಗಳು ಇಂಗ್ಲೆಂಡ್ ನ ರಾಜನಾಗಿದ್ದ ಎಡ್ಮಾಂಡ್ ಐರನ್ ಸೈಡ್(ಎಡ್ಮಾಂಡ್-||)
ಸಾವನ್ನಪ್ಪಿದ್ದು ಬಹಳ ವಿಚಿತ್ರವಾಗಿ..
ಎಂದಿನಂತೆ ತನ್ನ ನಿತ್ಯ ಕರ್ಮ ಮುಗಿಸಲು ಶೌಚಾಲಯಕ್ಕೆ ಹೋಗಿ ಕೂತಿದ್ದರಂತೆ
ಶೌಚಾಲಯದ ಗುಂಡಿಯಲ್ಲಿ ಅವಿತು ಕುಳಿತಿದ್ದ ವೈಕಿಂಗ್ ವೈರಿ ಒಬ್ಬ ಎಡ್ಮಾಂಡ್ ¡¡ ನ ಹಿಂಬದಿಗೆ ಎರಡು ಬಾರಿ ಈಟಿಯಿಂದ ಚುಚ್ಚಿದ್ದಾನೆ ಇದರಿಂದ
ಎಡ್ಮಾಂಡ್-¡¡ ಮರಣ ಹೊಂದಿದರಂತೆ..
ಎಂತಾ ಸಾವು ಮಾರಾಯ್ರೆ..
ಹೇಗೆ ಸತ್ತರು ರಾಜ ಅಂತ ಅವರ ಕೊನೆಯ ದರ್ಶನ ಮಾಡೋಕೆ ಕೇಳಿದರೆ,ಬಂದವರಿಗೆ ಹೇಗೇ ವಿವರಣೆ ನೀಡಬೇಕು ಅರಮನೆ ಕಡೆಯವರು ಅಲ್ವಾ!?
#ಸ್ಟುಪಿಡ್_ಡೆತ್
#ಕಥೆ_02
(ಮೂಲ:-Horrible history series)
ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಸಾವು
ಬಾಬಿ ಲೀಚ್ ಎಂಬ ವ್ಯಕ್ತಿ 1858ರಲ್ಲಿ ಇಂಗ್ಲೆಂಡ್ ನಲ್ಲಿ ಜನಿಸಿದರು,
ಜುಲೈ 1911ರಲ್ಲಿ,ಅಮೆರಿಕಾದ ಜೋಗ ಜಲಪಾತವಾದ,
ನಯಾಗರ ಜಲಪಾತದಲ್ಲಿ ಬ್ಯಾರೆಲ್ ಮೂಲಕ ಹೋದ ಎರಡನೇ ವ್ಯಕ್ತಿಯಂತೆ,
ಆತ ಇದರಿಂದ ಬಹಳ ಜನಪ್ರಿಯತೆಗಳಿಸಿದ್ದರಂತೆ,
ಹೀಗೆ ನಯಾಗರದಲ್ಲಿ ಬ್ಯಾರೆಲ್ ಮೂಲಕ ಹೋಗುವಾಗ ಬಿದ್ದು ಎರಡು ಮೊಣಕಾಲು ಹಾಗೂ ದವಡೆ ಮುರಿದು,ತೀವ್ರ ಪೆಟ್ಟಾಗಿತ್ತಂತೆ,ನಿಧಾನಕ್ಕೆ ಗುಣ ಮುಖರಾಗಿ ಮತ್ತೆ ಈ ರೀತಿಯ ಅನೇಕ ಸಾಹಸ ಮಾಡಿದ್ದರಂತೆ ಲೀಚ್..
ಹೀಗೆ ತಮ್ಮ 60ನೇ ವಯಸ್ಸಿನಲ್ಲಿ ಲೀಚ್ ಮತ್ತೊಮ್ಮೆ ನಯಾಗರಕ್ಕೆ ಬ್ಯಾರೇಲ್ನಲ್ಲಿ ನೀರಿನ ಸುಳಿಯಲ್ಲಿ ಈಜಲು ಹೋಗಿ,ಹಲವು ಭಾರಿ ವಿಫಲರಾಗಿದ್ದರಂತೆ..
ಒಮ್ಮೆ ಹೀಗೆ ನೀರಿನ ಸುಳಿಯಲ್ಲಿ ಬ್ಯಾರೆಲ್ ಮೂಲಕ ದಾಟಲು ಹೋಗಿ,ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ,ಅವರನ್ನ ವಿಲಿಯಂ ರೆಡ್ ಹಿಲ್ ಅನ್ನುವವರು ರಕ್ಷಣೆ ಮಾಡಿದ್ದರಂತೆ..!
ಪದೇ ಪದೇ ಸಾವಿಗೆ ಸಾವಾಲೊಡ್ಡಿ ಜಯಿಸಿದ್ದ ಈ ವ್ಯಕ್ತಿ,ಸತ್ತಿದ್ದು ಎಷ್ಟು "ಸಿಂಪಲ್"ಗೊತ್ತಾ..!
😢
ಹೇಳ್ತೀನಿ ಕೇಳಿ..
ಬಾಬಿ ಲೀಚ್ ತನ್ನ ಬಗ್ಗೆ ಬುಲ್ಡ್ ಅಪ್ ಕೊಟ್ಟು ಕೊಳ್ಳುತ್ತಾ ಇಂಗ್ಲೆಂಡಿನಿಂದ ನ್ಯೂಜಿಲೆಂಡ್ ದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರಂತೆ..
ಅಲ್ಲಿ ಒಂದು ದಿನ ರಸ್ತೆಯಲ್ಲಿ ನಡೆದು ಹೋಗುತ್ತಾ ಇರುವಾಗ ಗಮನಿಸದೇ ಯಾರೋ ಕಿತ್ತಳೆ ಹಣ್ಣು ತಿಂದು,ಎಸೆದು ಹೋಗಿದ್ದ ಸಿಪ್ಪೆಯ ಮೇಲೆ ಕಾಲು ಇಟ್ಟು ಜಾರಿ ಬಿದ್ದಿದ್ದಾರೆ..!
ಕಾಲಿಗೆ ಸಣ್ಣ ಪೆಟ್ಟಾಗಿದೆ..
ಆ ಪೆಟ್ಟು ನಿಧಾನವಾಗಿ ಗ್ಯಾ0ಗ್ರೀನ್ ಆಗಿ ರೂಪುಗೊಂಡು,ಲೀಚ್ ಅದರಿಂದಲೇ ಮರಣ ಹೊಂದಿ ಬಿಡ್ತಾರೆ..
ಅಂತಹಾ ದೊಡ್ಡ ಜಲಪಾತದಲ್ಲೇ ಹಲವು ಸರಿ ಸಾಯುವ ಸ್ಥಿತಿಯಿಂದ ಬದುಕಿ ಬಂದ ಇವರು..
ಯಕಶ್ಚಿತ್ ಕಿತ್ತಳೆ ಸಿಪ್ಪೆಯಿಂದ ಸಾಯುವ ಹಾಗೆ ಆಯ್ತು ನೋಡಿ..
ಕಿತ್ತಳೆ ಸಿಪ್ಪೆನ ಯಕಶ್ಚಿತ್ ಅಂದ,ಅಂತ ಕಿತ್ತಳೆ ಸಿಪ್ಪೆಲಿ ಚಟ್ನಿ ಮಾಡೋರು ಬಡಿಗೆ ಹಿಡಕಂಡು ಬರಬೇಡಿ ಮಾರಾಯ್ರೆ...
ಲಿಂಬೆ ಹಣ್ಣಿಗೆ ಮಾತ್ರ ಶಕ್ತಿ ಇರಲ್ಲ...
ಕಿತ್ತಳೆ ಸಿಪ್ಪೆಗೂ,ಬಣ್ಣ,ರುಚಿ,(ಸಾಯಿಸುವ)ಶಕ್ತಿ ಇದೆ ನೋಡಿ..
ಅಲ್ವಾ
😂
#ಅವಿವೇಕದ_ಸಾವು
ಕಥೆ_04
#stupid_death
(Source:-Horrible histories Series)
ಜುಲೈ 1911ರಲ್ಲಿ,ಅಮೆರಿಕಾದ ಜೋಗ ಜಲಪಾತವಾದ,
ನಯಾಗರ ಜಲಪಾತದಲ್ಲಿ ಬ್ಯಾರೆಲ್ ಮೂಲಕ ಹೋದ ಎರಡನೇ ವ್ಯಕ್ತಿಯಂತೆ,
ಆತ ಇದರಿಂದ ಬಹಳ ಜನಪ್ರಿಯತೆಗಳಿಸಿದ್ದರಂತೆ,
ಹೀಗೆ ನಯಾಗರದಲ್ಲಿ ಬ್ಯಾರೆಲ್ ಮೂಲಕ ಹೋಗುವಾಗ ಬಿದ್ದು ಎರಡು ಮೊಣಕಾಲು ಹಾಗೂ ದವಡೆ ಮುರಿದು,ತೀವ್ರ ಪೆಟ್ಟಾಗಿತ್ತಂತೆ,ನಿಧಾನಕ್ಕೆ ಗುಣ ಮುಖರಾಗಿ ಮತ್ತೆ ಈ ರೀತಿಯ ಅನೇಕ ಸಾಹಸ ಮಾಡಿದ್ದರಂತೆ ಲೀಚ್..
ಹೀಗೆ ತಮ್ಮ 60ನೇ ವಯಸ್ಸಿನಲ್ಲಿ ಲೀಚ್ ಮತ್ತೊಮ್ಮೆ ನಯಾಗರಕ್ಕೆ ಬ್ಯಾರೇಲ್ನಲ್ಲಿ ನೀರಿನ ಸುಳಿಯಲ್ಲಿ ಈಜಲು ಹೋಗಿ,ಹಲವು ಭಾರಿ ವಿಫಲರಾಗಿದ್ದರಂತೆ..
ಒಮ್ಮೆ ಹೀಗೆ ನೀರಿನ ಸುಳಿಯಲ್ಲಿ ಬ್ಯಾರೆಲ್ ಮೂಲಕ ದಾಟಲು ಹೋಗಿ,ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ,ಅವರನ್ನ ವಿಲಿಯಂ ರೆಡ್ ಹಿಲ್ ಅನ್ನುವವರು ರಕ್ಷಣೆ ಮಾಡಿದ್ದರಂತೆ..!
ಪದೇ ಪದೇ ಸಾವಿಗೆ ಸಾವಾಲೊಡ್ಡಿ ಜಯಿಸಿದ್ದ ಈ ವ್ಯಕ್ತಿ,ಸತ್ತಿದ್ದು ಎಷ್ಟು "ಸಿಂಪಲ್"ಗೊತ್ತಾ..!
😢
ಹೇಳ್ತೀನಿ ಕೇಳಿ..
ಬಾಬಿ ಲೀಚ್ ತನ್ನ ಬಗ್ಗೆ ಬುಲ್ಡ್ ಅಪ್ ಕೊಟ್ಟು ಕೊಳ್ಳುತ್ತಾ ಇಂಗ್ಲೆಂಡಿನಿಂದ ನ್ಯೂಜಿಲೆಂಡ್ ದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರಂತೆ..
ಅಲ್ಲಿ ಒಂದು ದಿನ ರಸ್ತೆಯಲ್ಲಿ ನಡೆದು ಹೋಗುತ್ತಾ ಇರುವಾಗ ಗಮನಿಸದೇ ಯಾರೋ ಕಿತ್ತಳೆ ಹಣ್ಣು ತಿಂದು,ಎಸೆದು ಹೋಗಿದ್ದ ಸಿಪ್ಪೆಯ ಮೇಲೆ ಕಾಲು ಇಟ್ಟು ಜಾರಿ ಬಿದ್ದಿದ್ದಾರೆ..!
ಕಾಲಿಗೆ ಸಣ್ಣ ಪೆಟ್ಟಾಗಿದೆ..
ಆ ಪೆಟ್ಟು ನಿಧಾನವಾಗಿ ಗ್ಯಾ0ಗ್ರೀನ್ ಆಗಿ ರೂಪುಗೊಂಡು,ಲೀಚ್ ಅದರಿಂದಲೇ ಮರಣ ಹೊಂದಿ ಬಿಡ್ತಾರೆ..
ಅಂತಹಾ ದೊಡ್ಡ ಜಲಪಾತದಲ್ಲೇ ಹಲವು ಸರಿ ಸಾಯುವ ಸ್ಥಿತಿಯಿಂದ ಬದುಕಿ ಬಂದ ಇವರು..
ಯಕಶ್ಚಿತ್ ಕಿತ್ತಳೆ ಸಿಪ್ಪೆಯಿಂದ ಸಾಯುವ ಹಾಗೆ ಆಯ್ತು ನೋಡಿ..
ಕಿತ್ತಳೆ ಸಿಪ್ಪೆನ ಯಕಶ್ಚಿತ್ ಅಂದ,ಅಂತ ಕಿತ್ತಳೆ ಸಿಪ್ಪೆಲಿ ಚಟ್ನಿ ಮಾಡೋರು ಬಡಿಗೆ ಹಿಡಕಂಡು ಬರಬೇಡಿ ಮಾರಾಯ್ರೆ...
ಲಿಂಬೆ ಹಣ್ಣಿಗೆ ಮಾತ್ರ ಶಕ್ತಿ ಇರಲ್ಲ...
ಕಿತ್ತಳೆ ಸಿಪ್ಪೆಗೂ,ಬಣ್ಣ,ರುಚಿ,(ಸಾಯಿಸುವ)ಶಕ್ತಿ ಇದೆ ನೋಡಿ..
ಅಲ್ವಾ
😂
#ಅವಿವೇಕದ_ಸಾವು
ಕಥೆ_04
#stupid_death
(Source:-Horrible histories Series)
ಮೊಲಿಯರ್ ಸಾವು
ಮೊಲಿಯರ್ ಎಂಬ ನಟ ಹಾಗೂ ನಾಟಕ ರಚನೆಕಾರರು 1622 ರಲ್ಲಿ ಪ್ರಾನ್ಸ್ ನ ಪ್ಯಾರೀಸ್ ನಗರದಲ್ಲಿ ಹುಟ್ಟಿ,ಅಲ್ಲಿ ಬೆಳೆದವರು..
ಇವರ ಸಂಪೂರ್ಣ ಹೆಸರು ಜೀನ್ ಬ್ಯಾಪ್ಟಿಸ್ಟ್ ಪೊಕ್ವಿಲಿನ್...
ಮೊಲಿಯರ್ ಎನ್ನೋದು ಅವರ ಸ್ಟೇಜ್ ನೇಮ್..
ಇವರು ಬಹಳ ಜನಪ್ರಿಯ ನಾಟಕ ರಚನೆಕಾರ ಹಾಗೂ ನಾಟಕ ಪಾತ್ರಧಾರಿ ಎಂದು ಹೆಸರುವಾಸಿ..
ಇಂತಹಾ ವ್ಯಕ್ತಿ ಸತ್ತದ್ದು,ಹಾಗೇ ಅವರ ಅಂತಿಮ ವಿಧಿ ವಿಧಾನಕ್ಕೆ ಆದ ಸಮಸ್ಯೆ ಮಾತ್ರ ವಿಚಿತ್ರವಾಗಿದೇ..
ಬೇಸರ ತರಿಸುವಂತೆ ಇದೆ..
ಪ್ಯಾರಿಸ್ ನ ಒಂದು ಥಿಯೇಟರ್ ನಲ್ಲಿ,ಅವರೇ ಬರೆದ "le malade imaginaire"(the imaginary invalid)ಎಂಬ ನಾಟಕದ ದೃಶ್ಯದಲ್ಲಿ ಮೊಲಿಯರ್ ಮಾಡುತ್ತಾ ಇದ್ದ ಪಾತ್ರ ಒಬ್ಬ ರೋಗಿಯದ್ದು,
ಆ ಪಾತ್ರದಲ್ಲಿ ಕೆಮ್ಮುತ್ತಾ ರೋಗಿಯಂತೆ ನಟಿಸುವ ಪಾತ್ರ,
ಕೆಮ್ಮುತ್ತಾ ನಟಿಸುತ್ತಾ ಇದ್ದ ಇವರು,
ವಿಪರೀತ ಕೆಮ್ಮುತ್ತಾ,ಕೆಮ್ಮುತ್ತಾ,ಕೆಮ್ಮು ಒಮ್ಮೆಲೇ ಜಾಸ್ತಿಯಾಗಿ,ತಡೆಯಲಾಗದೆ
ಸ್ಟೇಜ್ ನಲ್ಲಿ ಕುಸಿದು ಬಿದ್ದು ಬಿಡ್ತಾರೆ ಮೊಲಿಯರ್..!
ಮೊಲಿಯರ್ ಗೆ "haemorrhaging"ಇತ್ತು ಅಂತಲೂ ಹೇಳಲಾಗಿದೆ..(ತಲೆಯಲ್ಲಿ ರಕ್ತ ಸ್ರಾವ!)
ಅವರು ಮಧ್ಯ ವಯಸ್ಸಿನಲ್ಲಿ ಇರುವಾಗ ಯಾವುದೋ ಸಾಲದ ಸಮಸ್ಯೆಗೆ ಒಳಗಾಗಿ,ಕಾನೂನು ಪ್ರಕಾರ ಬಂಧನಕ್ಕೆ ಒಳಗಾಗಿ ಸೆರೆವಾಸದಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದಾಗ ಅವರಿಗೆ Pulmonary tuberculosis(ಕ್ಷಯ ರೋಗ) ಖಾಯಿಲೆ ಅಂಟಿಕೊಂಡು ಬಿಟ್ಟಿತ್ತು.....
ಅದು ಮುಖ್ಯ ಕಾರಣವಾಗಿತ್ತು ಅವರ ಕೆಮ್ಮಿಗೆ ಎನ್ನಲಾಗಿದೆ..!
ಇನ್ನೊಂದು ವಿಷಯ ಏನೆಂದರೆ
ಮೊಲಿಯರ್ ಸ್ಟೇಜ್ ನಲ್ಲಿ ಕುಸಿದು ಬೀಳುವ ಸಂಧರ್ಭದಲ್ಲಿ,ಆ ಪಾತ್ರಕ್ಕೆ ಬೇಕಾಗಿದ್ದ ಹಾಗೂ ಒಪ್ಪುವ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರಂತೆ,
ಪ್ರಾನ್ಸ್ ನಲ್ಲಿ ಆಗ ನಟನೆ ಮಾಡೋರು ಹಸಿರು ಬಟ್ಟೆ ತೊಟ್ಟರೆ ಕೆಟ್ಟದಾಗುತ್ತೆ ಅಂತ ಮೂಢನಂಬಿಕೆ ಬಲವಾಗಿ ಇತ್ತಂತೆ..!
ಅದರಂತಯೇ ಮೊಲಿಯರ್ ಕೂಡ ಅದನ್ನ ಧರಿಸಿದ್ದಾಗಲೇ ಹೀಗಾಯ್ತು..!
ಎನ್ನೋದು ಈ(ಮೂಢ)ನಂಬಿಕೆಗೆ ಮತ್ತಷ್ಟು ಇಂಬು ಕೊಡ್ತು...!
ಕೊನೆಗೆ ಕೆಲವು ಗಂಟೆಗಳ ನಂತರ ಮೊಲಿಯರ್ ಸಾವನ್ನಪ್ಪಿ ಬಿಡ್ತಾರೆ...
ಸಾವಿನ ಸುದ್ದಿ ಖಚಿತವಾಗಿ ಘೋಷಣೆ ಮಾಡಿ ಬಿಡುತ್ತಾರೆ...
ದುರಂತ ಎಂದರೆ..
ಪ್ರಾನ್ಸ್ ನ ಆಗಿನ ಕಾನೂನು ಪ್ರಕಾರ,
ನಟನೆ ಮಾಡುವವರಿಗೆ (sacred ground)ಗೌರವಯುತವಾಗಿ,ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ, ಹೂಳಲು ಅವಕಾಶ ಕಡ್ಡಾಯವಾಗಿ ನಿಷೇಧ ಮಾಡಲಾಗಿತ್ತಂತೆ..!
ಇದಕ್ಕಾಗಿ
ಮೊಲಿಯರ್ ಹೆಂಡತಿ "ಅರ್ಮಾ0ಡೇ"..
ರಾಜರ ಬಳಿ ಹೋಗಿ,ದಯಮಾಡಿ ರಾತ್ರಿಯಾದರೂ ಪತಿಯ ಅಂತಿಮ ವಿಧಿ ವಿಧಾನ ಮಾಡಿ ಅಲ್ಲೇ ಹೂಳಲು ಅವಕಾಶ ಮಾಡಿ ಕೊಡಿ ಎಂದು ಕೇಳಿ ಕೊಂಡ ಮೇಲೆ..
ರಾಜ ಅನುಮತಿ ನೀಡುತ್ತಾರೆ.
ಕೊನೆಗೆ
ಅಂತಿಮ ವಿಧಿ ವಿಧಾನಕ್ಕೆ,ಕುಟುಂಬದವರು ಪ್ರೀಸ್ಟ್ ಗಳನ್ನ ಬರಲು ಹೇಳುತ್ತಾರೆ,ಆದರೆ ಕರೆದ ಇಬ್ಬರು ಪ್ರೀಸ್ಟ್ ಗಳು ಬರಲೇ ಇಲ್ಲ.. ಕೊನೆಯ ಕ್ಷಣದಲ್ಲಿ ಕೈ ಕೊಟ್ಟು ಬಿಡ್ತಾರೆ..!
ಮೂರನೆಯವರಿಗೆ ಹೇಳಿ ಕಳುಹಿಸಿದರೆ,ಅವರು ಹೊರಟು ಬರೋದು ಬಹಳ ತಡವಾಗಿ,ಮೊಲಿಯರ್ ಗೆ ಅಂತಿಮ ವಿಧಿ ವಿಧಾನದ ಗೌರವ ಕೂಡ ಸರಿಯಾಗಿ ಸಿಗದೇ ಹೂಳಲಾಯಿತು ಎನ್ನಲಾಗಿದೆ..!
ನಂತರ ದಿನಗಳಲ್ಲಿ ಮೊಲಿಯರ್ ಸಮಾಧಿಯನ್ನ ಪ್ರಾನ್ಸ್ ಮ್ಯೂಸಿಯಂ ಗೆ ಸ್ಥಲಾಂತರ ಮಾಡಿ,
ಕೊನೆಯದಾಗಿ ಪೆರ್ರಿ ಲ್ಯಾ0ಚೆಸ್ಟರ್ ಸಿಮಿಟ್ರಿ ಎಂಬಲ್ಲಿ ಸ್ಥಳಾ0ತರ ಮಾಡಿ ಸ್ಮಾರಕ ಮಾಡಿದ್ದಾರೆ...
#ಅವಿವೇಕದ_ಸಾವು
ಕಥೆ_07.
#stupid_death
(Source:-Horrible histories Series)
ಇವರ ಸಂಪೂರ್ಣ ಹೆಸರು ಜೀನ್ ಬ್ಯಾಪ್ಟಿಸ್ಟ್ ಪೊಕ್ವಿಲಿನ್...
ಮೊಲಿಯರ್ ಎನ್ನೋದು ಅವರ ಸ್ಟೇಜ್ ನೇಮ್..
ಇವರು ಬಹಳ ಜನಪ್ರಿಯ ನಾಟಕ ರಚನೆಕಾರ ಹಾಗೂ ನಾಟಕ ಪಾತ್ರಧಾರಿ ಎಂದು ಹೆಸರುವಾಸಿ..
ಇಂತಹಾ ವ್ಯಕ್ತಿ ಸತ್ತದ್ದು,ಹಾಗೇ ಅವರ ಅಂತಿಮ ವಿಧಿ ವಿಧಾನಕ್ಕೆ ಆದ ಸಮಸ್ಯೆ ಮಾತ್ರ ವಿಚಿತ್ರವಾಗಿದೇ..
ಬೇಸರ ತರಿಸುವಂತೆ ಇದೆ..
ಪ್ಯಾರಿಸ್ ನ ಒಂದು ಥಿಯೇಟರ್ ನಲ್ಲಿ,ಅವರೇ ಬರೆದ "le malade imaginaire"(the imaginary invalid)ಎಂಬ ನಾಟಕದ ದೃಶ್ಯದಲ್ಲಿ ಮೊಲಿಯರ್ ಮಾಡುತ್ತಾ ಇದ್ದ ಪಾತ್ರ ಒಬ್ಬ ರೋಗಿಯದ್ದು,
ಆ ಪಾತ್ರದಲ್ಲಿ ಕೆಮ್ಮುತ್ತಾ ರೋಗಿಯಂತೆ ನಟಿಸುವ ಪಾತ್ರ,
ಕೆಮ್ಮುತ್ತಾ ನಟಿಸುತ್ತಾ ಇದ್ದ ಇವರು,
ವಿಪರೀತ ಕೆಮ್ಮುತ್ತಾ,ಕೆಮ್ಮುತ್ತಾ,ಕೆಮ್ಮು ಒಮ್ಮೆಲೇ ಜಾಸ್ತಿಯಾಗಿ,ತಡೆಯಲಾಗದೆ
ಸ್ಟೇಜ್ ನಲ್ಲಿ ಕುಸಿದು ಬಿದ್ದು ಬಿಡ್ತಾರೆ ಮೊಲಿಯರ್..!
ಮೊಲಿಯರ್ ಗೆ "haemorrhaging"ಇತ್ತು ಅಂತಲೂ ಹೇಳಲಾಗಿದೆ..(ತಲೆಯಲ್ಲಿ ರಕ್ತ ಸ್ರಾವ!)
ಅವರು ಮಧ್ಯ ವಯಸ್ಸಿನಲ್ಲಿ ಇರುವಾಗ ಯಾವುದೋ ಸಾಲದ ಸಮಸ್ಯೆಗೆ ಒಳಗಾಗಿ,ಕಾನೂನು ಪ್ರಕಾರ ಬಂಧನಕ್ಕೆ ಒಳಗಾಗಿ ಸೆರೆವಾಸದಲ್ಲಿ ಶಿಕ್ಷೆ ಅನುಭವಿಸುತ್ತಾ ಇದ್ದಾಗ ಅವರಿಗೆ Pulmonary tuberculosis(ಕ್ಷಯ ರೋಗ) ಖಾಯಿಲೆ ಅಂಟಿಕೊಂಡು ಬಿಟ್ಟಿತ್ತು.....
ಅದು ಮುಖ್ಯ ಕಾರಣವಾಗಿತ್ತು ಅವರ ಕೆಮ್ಮಿಗೆ ಎನ್ನಲಾಗಿದೆ..!
ಇನ್ನೊಂದು ವಿಷಯ ಏನೆಂದರೆ
ಮೊಲಿಯರ್ ಸ್ಟೇಜ್ ನಲ್ಲಿ ಕುಸಿದು ಬೀಳುವ ಸಂಧರ್ಭದಲ್ಲಿ,ಆ ಪಾತ್ರಕ್ಕೆ ಬೇಕಾಗಿದ್ದ ಹಾಗೂ ಒಪ್ಪುವ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರಂತೆ,
ಪ್ರಾನ್ಸ್ ನಲ್ಲಿ ಆಗ ನಟನೆ ಮಾಡೋರು ಹಸಿರು ಬಟ್ಟೆ ತೊಟ್ಟರೆ ಕೆಟ್ಟದಾಗುತ್ತೆ ಅಂತ ಮೂಢನಂಬಿಕೆ ಬಲವಾಗಿ ಇತ್ತಂತೆ..!
ಅದರಂತಯೇ ಮೊಲಿಯರ್ ಕೂಡ ಅದನ್ನ ಧರಿಸಿದ್ದಾಗಲೇ ಹೀಗಾಯ್ತು..!
ಎನ್ನೋದು ಈ(ಮೂಢ)ನಂಬಿಕೆಗೆ ಮತ್ತಷ್ಟು ಇಂಬು ಕೊಡ್ತು...!
ಕೊನೆಗೆ ಕೆಲವು ಗಂಟೆಗಳ ನಂತರ ಮೊಲಿಯರ್ ಸಾವನ್ನಪ್ಪಿ ಬಿಡ್ತಾರೆ...
ಸಾವಿನ ಸುದ್ದಿ ಖಚಿತವಾಗಿ ಘೋಷಣೆ ಮಾಡಿ ಬಿಡುತ್ತಾರೆ...
ದುರಂತ ಎಂದರೆ..
ಪ್ರಾನ್ಸ್ ನ ಆಗಿನ ಕಾನೂನು ಪ್ರಕಾರ,
ನಟನೆ ಮಾಡುವವರಿಗೆ (sacred ground)ಗೌರವಯುತವಾಗಿ,ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ, ಹೂಳಲು ಅವಕಾಶ ಕಡ್ಡಾಯವಾಗಿ ನಿಷೇಧ ಮಾಡಲಾಗಿತ್ತಂತೆ..!
ಇದಕ್ಕಾಗಿ
ಮೊಲಿಯರ್ ಹೆಂಡತಿ "ಅರ್ಮಾ0ಡೇ"..
ರಾಜರ ಬಳಿ ಹೋಗಿ,ದಯಮಾಡಿ ರಾತ್ರಿಯಾದರೂ ಪತಿಯ ಅಂತಿಮ ವಿಧಿ ವಿಧಾನ ಮಾಡಿ ಅಲ್ಲೇ ಹೂಳಲು ಅವಕಾಶ ಮಾಡಿ ಕೊಡಿ ಎಂದು ಕೇಳಿ ಕೊಂಡ ಮೇಲೆ..
ರಾಜ ಅನುಮತಿ ನೀಡುತ್ತಾರೆ.
ಕೊನೆಗೆ
ಅಂತಿಮ ವಿಧಿ ವಿಧಾನಕ್ಕೆ,ಕುಟುಂಬದವರು ಪ್ರೀಸ್ಟ್ ಗಳನ್ನ ಬರಲು ಹೇಳುತ್ತಾರೆ,ಆದರೆ ಕರೆದ ಇಬ್ಬರು ಪ್ರೀಸ್ಟ್ ಗಳು ಬರಲೇ ಇಲ್ಲ.. ಕೊನೆಯ ಕ್ಷಣದಲ್ಲಿ ಕೈ ಕೊಟ್ಟು ಬಿಡ್ತಾರೆ..!
ಮೂರನೆಯವರಿಗೆ ಹೇಳಿ ಕಳುಹಿಸಿದರೆ,ಅವರು ಹೊರಟು ಬರೋದು ಬಹಳ ತಡವಾಗಿ,ಮೊಲಿಯರ್ ಗೆ ಅಂತಿಮ ವಿಧಿ ವಿಧಾನದ ಗೌರವ ಕೂಡ ಸರಿಯಾಗಿ ಸಿಗದೇ ಹೂಳಲಾಯಿತು ಎನ್ನಲಾಗಿದೆ..!
ನಂತರ ದಿನಗಳಲ್ಲಿ ಮೊಲಿಯರ್ ಸಮಾಧಿಯನ್ನ ಪ್ರಾನ್ಸ್ ಮ್ಯೂಸಿಯಂ ಗೆ ಸ್ಥಲಾಂತರ ಮಾಡಿ,
ಕೊನೆಯದಾಗಿ ಪೆರ್ರಿ ಲ್ಯಾ0ಚೆಸ್ಟರ್ ಸಿಮಿಟ್ರಿ ಎಂಬಲ್ಲಿ ಸ್ಥಳಾ0ತರ ಮಾಡಿ ಸ್ಮಾರಕ ಮಾಡಿದ್ದಾರೆ...
#ಅವಿವೇಕದ_ಸಾವು
ಕಥೆ_07.
#stupid_death
(Source:-Horrible histories Series)
ಟ್ಯೂ ಡರ್ ಸಾವು
ಸುಮಾರು ವರ್ಷಗಳ ಹಿಂದೆ...
ಸ್ಟೇಜ್ ನಲ್ಲಿ ಚಿತ್ರ ವಿಚಿತ್ರ ಸಾಹಸ ಮಾಡಿ,ಮನರಂಜನೆ ಮಾಡುವುದಕ್ಕೆ ಒಬ್ಬ ವ್ಯಕ್ತಿ ಬಹಳ ಜನಪ್ರಿಯರಾಗಿದ್ದರಂತೆ..
(Tudor Entertainer and performer)
ಸ್ಟೇಜ್ ಕಾರ್ಯಕ್ರಮದಲ್ಲಿ,ಚಾಕುವಿನಿಂದ ಎದೆಗೆ ಚುಚ್ಚಿಕೊಂಡು ರಕ್ತ ಬರಿಸಿಕೊಳ್ಳುವಂತ ಸಾಹಸ ಮಾಡಿ,ಜನರನ್ನ ಗಾಬರಿ ಪಡಿಸುತ್ತಾ ಇದ್ದರಂತೆ..
ಅದು ಹೇಗೆ ಸಾಧ್ಯ ಅಂದ್ರಾ?
ಅದರಲ್ಲಿ ಒಂದು ಒಳಮರ್ಮ ಇತ್ತು..
ಅವರು ಬಟ್ಟೆಯ ಒಳಗೆ,ಚಾಕು ಹೋಗದಂತ ಸುರಕ್ಷಾ ಕವಚ (stab protection Jacket)ಹಾಕಿಕೊಂಡು,ಚಾಕು ಹಾಕಿಕೊಳ್ಳುವ ಜಾಗದಲ್ಲಿ ಪ್ರಾಣಿಯ ರಕ್ತದ ಚೀಲವನ್ನ ಕಟ್ಟಿ ಇಟ್ಟಿರುತ್ತಾ ಇದ್ದರಂತೆ,ನಟನೆಯ ಸಂಧರ್ಭದಲ್ಲಿ,ಪ್ರಾಣಿ ರಕ್ತ ಚೀಲ ಕಟ್ಟಿದ ಜಾಗಕ್ಕೆ ಜೋರಾಗಿ ಚಾಕು ಚುಚ್ಚಿದ ಹಾಗೆ ಮಾಡಿದ ಕೂಡಲೇ ರಕ್ತ ಸ್ರಾವ ಪ್ರಾರಂಭವಾಗುತ್ತಾ ಇತ್ತಂತೆ,ಕುಸಿದು ಬೀಳುವಂತೆ ನಟಿಸುತ್ತಾ ಇದ್ದರಂತೆ ಜನ ಗಾಬರಿಯಾಗುತ್ತಾ ಇದ್ದರಂತೆ.ಇದು ನಿಜವೇನೋ ಅನ್ನುವ ಹಾಗೆ..!
ಹೀಗೆ ಜನಪ್ರಿಯರಾಗಿದ್ದ ಈ ವ್ಯಕ್ತಿ..
ಒಮ್ಮೆ ಇದೇ ರೀತಿಯ ನಟನೆ ಯಾವುದೋ ಸ್ಟೇಜ್ ನಲ್ಲಿ ಮಾಡಲು ಹೋಗಿ ರಕ್ತ ಸ್ರಾವ ಆಗಿ,ಸತ್ತೇ ಹೋಗಿ ಬಿಟ್ಟರಂತೆ...
ಕಾರಣ ಕೇಳಿದ್ರ..
ಕಾರ್ಯ ಕ್ರಮ ನಡೆಸಿ ಕೊಡುವ ಗಡಿಬಿಡಿಯಲ್ಲಿ ಈ ಸಾಹಸ ಪ್ರದರ್ಶನ ಮಾಡುವ ಸಮಯದಲ್ಲಿ, ಒಳಗಡೆಯ ಸುರಕ್ಷಾ ಅಂಗಿ(ಸ್ಟಾಬ್ ಪ್ರೊಟೆಕ್ಷನ್ ಜಾಕೆಟ್)ಹಾಕೋದನ್ನೇ ಮರೆತು,ಸಾಹಸ ಮಾಡಲು ಹೋಗಿ,ನೇರವಾಗಿ ತನ್ನ ಹೃದಯಕ್ಕೆ ಚಾಕು ಚುಚ್ಚಿ ಕೊಂಡು ಅಲ್ಲೇ ರಕ್ತ ಸ್ರಾವವಾಗಿ ಕುಸಿದು ಬಿದ್ದು ಸಾವನ್ನಪ್ಪುತ್ತಾರಂತೆ..
ಅದೇ..
ನಾವು ಚಿಕ್ಕವರಿದ್ದಾಗ ಕೇಳಿಸಿ ಕೊಳ್ತಾ ಇದ್ವಲ್ಲ..
ತೋಳ ಬಂತು ತೋಳ ಕತೆ ಹಾಗೇ ಆಯ್ತು,
ಜನ ಸಾಹಸ ಮಾಡಿದ್ದು ಅಂತ ಅಂದು ಕೊಂಡು ಚಪ್ಪಾಳೆ ತಟ್ಟಿರ್ತಾರೋ ಏನೋ...
ಅಲ್ವಾ..
#ಅವಿವೇಕದ_ಸಾವು
ಕಥೆ_09
#stupid_death
(ಮೂಲ:-Horrible histories)
ಸ್ಟೇಜ್ ನಲ್ಲಿ ಚಿತ್ರ ವಿಚಿತ್ರ ಸಾಹಸ ಮಾಡಿ,ಮನರಂಜನೆ ಮಾಡುವುದಕ್ಕೆ ಒಬ್ಬ ವ್ಯಕ್ತಿ ಬಹಳ ಜನಪ್ರಿಯರಾಗಿದ್ದರಂತೆ..
(Tudor Entertainer and performer)
ಸ್ಟೇಜ್ ಕಾರ್ಯಕ್ರಮದಲ್ಲಿ,ಚಾಕುವಿನಿಂದ ಎದೆಗೆ ಚುಚ್ಚಿಕೊಂಡು ರಕ್ತ ಬರಿಸಿಕೊಳ್ಳುವಂತ ಸಾಹಸ ಮಾಡಿ,ಜನರನ್ನ ಗಾಬರಿ ಪಡಿಸುತ್ತಾ ಇದ್ದರಂತೆ..
ಅದು ಹೇಗೆ ಸಾಧ್ಯ ಅಂದ್ರಾ?
ಅದರಲ್ಲಿ ಒಂದು ಒಳಮರ್ಮ ಇತ್ತು..
ಅವರು ಬಟ್ಟೆಯ ಒಳಗೆ,ಚಾಕು ಹೋಗದಂತ ಸುರಕ್ಷಾ ಕವಚ (stab protection Jacket)ಹಾಕಿಕೊಂಡು,ಚಾಕು ಹಾಕಿಕೊಳ್ಳುವ ಜಾಗದಲ್ಲಿ ಪ್ರಾಣಿಯ ರಕ್ತದ ಚೀಲವನ್ನ ಕಟ್ಟಿ ಇಟ್ಟಿರುತ್ತಾ ಇದ್ದರಂತೆ,ನಟನೆಯ ಸಂಧರ್ಭದಲ್ಲಿ,ಪ್ರಾಣಿ ರಕ್ತ ಚೀಲ ಕಟ್ಟಿದ ಜಾಗಕ್ಕೆ ಜೋರಾಗಿ ಚಾಕು ಚುಚ್ಚಿದ ಹಾಗೆ ಮಾಡಿದ ಕೂಡಲೇ ರಕ್ತ ಸ್ರಾವ ಪ್ರಾರಂಭವಾಗುತ್ತಾ ಇತ್ತಂತೆ,ಕುಸಿದು ಬೀಳುವಂತೆ ನಟಿಸುತ್ತಾ ಇದ್ದರಂತೆ ಜನ ಗಾಬರಿಯಾಗುತ್ತಾ ಇದ್ದರಂತೆ.ಇದು ನಿಜವೇನೋ ಅನ್ನುವ ಹಾಗೆ..!
ಹೀಗೆ ಜನಪ್ರಿಯರಾಗಿದ್ದ ಈ ವ್ಯಕ್ತಿ..
ಒಮ್ಮೆ ಇದೇ ರೀತಿಯ ನಟನೆ ಯಾವುದೋ ಸ್ಟೇಜ್ ನಲ್ಲಿ ಮಾಡಲು ಹೋಗಿ ರಕ್ತ ಸ್ರಾವ ಆಗಿ,ಸತ್ತೇ ಹೋಗಿ ಬಿಟ್ಟರಂತೆ...
ಕಾರಣ ಕೇಳಿದ್ರ..
ಕಾರ್ಯ ಕ್ರಮ ನಡೆಸಿ ಕೊಡುವ ಗಡಿಬಿಡಿಯಲ್ಲಿ ಈ ಸಾಹಸ ಪ್ರದರ್ಶನ ಮಾಡುವ ಸಮಯದಲ್ಲಿ, ಒಳಗಡೆಯ ಸುರಕ್ಷಾ ಅಂಗಿ(ಸ್ಟಾಬ್ ಪ್ರೊಟೆಕ್ಷನ್ ಜಾಕೆಟ್)ಹಾಕೋದನ್ನೇ ಮರೆತು,ಸಾಹಸ ಮಾಡಲು ಹೋಗಿ,ನೇರವಾಗಿ ತನ್ನ ಹೃದಯಕ್ಕೆ ಚಾಕು ಚುಚ್ಚಿ ಕೊಂಡು ಅಲ್ಲೇ ರಕ್ತ ಸ್ರಾವವಾಗಿ ಕುಸಿದು ಬಿದ್ದು ಸಾವನ್ನಪ್ಪುತ್ತಾರಂತೆ..
ಅದೇ..
ನಾವು ಚಿಕ್ಕವರಿದ್ದಾಗ ಕೇಳಿಸಿ ಕೊಳ್ತಾ ಇದ್ವಲ್ಲ..
ತೋಳ ಬಂತು ತೋಳ ಕತೆ ಹಾಗೇ ಆಯ್ತು,
ಜನ ಸಾಹಸ ಮಾಡಿದ್ದು ಅಂತ ಅಂದು ಕೊಂಡು ಚಪ್ಪಾಳೆ ತಟ್ಟಿರ್ತಾರೋ ಏನೋ...
ಅಲ್ವಾ..
#ಅವಿವೇಕದ_ಸಾವು
ಕಥೆ_09
#stupid_death
(ಮೂಲ:-Horrible histories)
ಡ್ರಾ ಕೋ
ಸುಮಾರು 650 BC ಅಂದರೆ 7ನೇ ಶತಮಾನದಲ್ಲಿ,ಗ್ರೀಕ್ ನಲ್ಲಿ ಹುಟ್ಟಿದ ಡ್ರಾಕೋ ಎಂಬ ವ್ಯಕ್ತಿ..
ಪುರಾತನ ಗ್ರೀಸ್ನ,ಅಥೆನ್ಸ್ ನ ಮೊಟ್ಟ ಮೊದಲ ಶಾಸಕ ಎಂಬ ಖ್ಯಾತಿಗೆ ಒಳಗಾದವರು..
ಡ್ರಾಕೋ..ಮಾತಿನಲ್ಲೇ ನಡೆಯುತ್ತಾ ಇದ್ದ,ನ್ಯಾಯ ತೀರ್ಮಾನ,ಹಾಗೂ ಘೋರ ಶಿಕ್ಷೆಗಳನ್ನ,
ಕಡತಗಳಲ್ಲಿ ದಾಖಲೆ ಮಾಡಿದ ಮೊದಲ ವ್ಯಕ್ತಿ ಕೂಡ..
ಇವರು ಪ್ರಜಾಪ್ರಭುತ್ವದಲ್ಲಿ ಆಥೆನಿಯನ್ ನಾಗರೀಕ ರಿಂದ ಶಾಸಕರಾಗಿ ಆಯ್ಕೆ ಆದ ಮೊದಲ ಜನ ಪ್ರತಿನಿಧಿ ಹಾಗೂ ಕಾನೂನು ರಚನೆ ಮಾಡಲು ನಿಯೋಜನೆಯಾದ ಮೊದಲ ವ್ಯಕ್ತಿಯಂತೆ..!!
ಆದರೆ ಡ್ರಾಕೋ..
ಜನರ ನಿರೀಕ್ಷೆಯಂತೆ ನಡೆದು ಕೊಳ್ಳದೇ..
ಸಣ್ಣ ಅಪರಾಧಕ್ಕೂ ಕಠಿಣ ಶಿಕ್ಷೆ,ರಕ್ತಪಾತದಂತ ಕಾನೂನು ಜಾರಿಗೆ ತರುತ್ತಾರೆ..
ಇಷ್ಟು ಕ್ರೂರ ಹಾಗೂ ಅಮಾನವೀಯ ಶಿಕ್ಷೆ ತರುತ್ತಾರೆ ಎಂದು ಸ್ವತಃ ಡ್ರಾಕೋನನ್ನ ಚುನಾಯಿಸಿದ ಜನರಿಗೆ ಅರಿವಿರಲಿಲ್ಲವಂತೆ..
ಉದಾಹರಣೆಗೆ
ಕೋಸು,ಸೇಬು ಹಣ್ಣು,ಕದ್ದರೂ,ಇನ್ನಿತರೆ ಸಣ್ಣ ಅಪರಾಧಕ್ಕೂ ಮರಣ ದಂಡನೆಗೆ ಗುರಿ ಪಡಿಸುವಂತ ಕಾನೂನು ಬಹಳ ಕಠಿಣವಾಗಿ ಜಾರಿಗೆ ತರಲಾಗಿತ್ತು..
ಡ್ರಾಕೋ ನಿಂದ..
ಕಾರಣ ಕೇಳಿದರೆ..
ಇಂತಹಾ ಸಣ್ಣ ಅಪರಾಧ ಮುಂದೆ ದೊಡ್ಡದಕ್ಕೆ ಪ್ರೇರಣೆ,ಹಾಗಾಗಿ ಈ ಶಿಕ್ಷೆ ಎಂಬಂತೆ ಕೆಲವು ಬೇರೆಬೇರೆ ಸಮಜಾಯಿಷಿ ಬರುತ್ತಾ ಇತ್ತಂತೆ..!!
ಹೀಗೆ ಈಗಿನ ದಿನಮಾನದಲ್ಲಿ ಡ್ರಾಕೋ ಕಾನೂನು ಪ್ರಕಾರ ಶಿಕ್ಷೆ ಕೊಟ್ಟರೆ,ಪರಿಸ್ಥಿತಿ ಏನಾಗುತ್ತಾ ಇತ್ತು ಅಂತ ಊಹಿಸಿ ಕೊಳ್ತಾ ಇದೀರಾ...!
😂😛
ಸುಮಾರು 19ನೇ ಶತಮಾನದ ವರೆಗೆ,
ಕ್ಷಮೆ ಇಲ್ಲದ,ಅಮಾನವೀಯ,ಕ್ರೌರ್ಯದಿಂದ ಕೂಡಿದ ಕಾನೂನು ಗಳ ಬಗ್ಗೆ,
ಡ್ರಾಕೋನಿಯನ್ ಎಂಬ ವಿಶೇಷಣ,ಗ್ರೀಕ್,ಇಂಗ್ಲೀಷ್, ಯುರೋಪಿಯನ್ ಭಾಷೆಗಳಲ್ಲಿ ಬಳಸುತ್ತಾ ಇದ್ದರಂತೆ..!!
ಇದೆಲ್ಲಾ ಕಠಿಣ ಕಾನೂನು ಗಳನ್ನ ನಂತರ ತೆಗೆದು ಹಾಕಲಾಯಿತಂತೆ..!
ಇಂತಹಾ ಡ್ರಾಕೋ ಸತ್ತಿದ್ದು ಹೇಗೆ ಗೊತ್ತಾ..
ಒಮ್ಮೆ ಡ್ರಾಕೋಗೆ,ಗ್ರೀಸ್ ನ ಎಜಿನೇಟನ್ ಥಿಯೇಟರ್ ನಲ್ಲಿ,ಅಲ್ಲಿನ ಸ್ಥಳೀಯ ನಾಗರೀಕರು ಎಲ್ಲಾ ಸೇರಿ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದರಂತೆ..
ಡ್ರಾಕೋ ಸಮಾರಂಭಕ್ಕೆ ಆಗಮಿಸಿ ಸ್ಟೇಜ್ ಹತ್ತಿದ ಕೂಡಲೇ,
ಅಲ್ಲಿದ್ದ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು,
ಘೋಷಣೆ ಕೂಗುತ್ತಾ,
ತಮ್ಮ ತಮ್ಮ,ಟೊಪ್ಪಿ,ಬಟ್ಟೆಗಳು,ಕ್ಲೋಕ್ ಗಳನ್ನ ಖುಷಿಯಿಂದ ಎಸೆಯಲು ಪ್ರಾರಂಭಿಸಿದರಂತೆ..
ಸಾವಿರಾರು ಜನ,ಈ ರೀತಿ ಬಟ್ಟೆಗಳನ್ನ,ಟೊಪ್ಪಿಗಳನ್ನ ಒಮ್ಮೆಲೇ ಎಸೆದರ ಪರಿಣಾಮ,
ಡ್ರಾಕೋ ಉಸಿರಾಡೋಕೆ ಆಗದೇ..ಉಸಿರು ಕಟ್ಟಿ ಅದೇ ಎಜಿನೇಟನ್ ಥಿಯೇಟರ್ ಸ್ಟೇಜ್ ನಲ್ಲಿ ಮರಣ ಹೊಂದಿ ಬಿಡುತ್ತಾರಂತೆ ಡ್ರಾಕೋ..
ಅಲ್ಲೇ ಅವರ ಅಂತ್ಯಕ್ರಿಯೆ ಮಾಡಿ ಸಮಾಧಿಯನ್ನ ಮಾಡಲಾಯಿತಂತೆ..
ಜನ ಹೇಗೆ ಪರೋಕ್ಷವಾಗಿ ಡ್ರಾಕೋ ಮೇಲೆ ಸೇಡು ತೀರಿಸಿ ಕೊಂಡ್ರು ನೋಡಿ ಅಲ್ವಾ..!
😂
#ಅವಿವೇಕದ_ಸಾವು
ಕಥೆ_06
(ಮೂಲ:-Horrible histories)
#stupid_death
ಪುರಾತನ ಗ್ರೀಸ್ನ,ಅಥೆನ್ಸ್ ನ ಮೊಟ್ಟ ಮೊದಲ ಶಾಸಕ ಎಂಬ ಖ್ಯಾತಿಗೆ ಒಳಗಾದವರು..
ಡ್ರಾಕೋ..ಮಾತಿನಲ್ಲೇ ನಡೆಯುತ್ತಾ ಇದ್ದ,ನ್ಯಾಯ ತೀರ್ಮಾನ,ಹಾಗೂ ಘೋರ ಶಿಕ್ಷೆಗಳನ್ನ,
ಕಡತಗಳಲ್ಲಿ ದಾಖಲೆ ಮಾಡಿದ ಮೊದಲ ವ್ಯಕ್ತಿ ಕೂಡ..
ಇವರು ಪ್ರಜಾಪ್ರಭುತ್ವದಲ್ಲಿ ಆಥೆನಿಯನ್ ನಾಗರೀಕ ರಿಂದ ಶಾಸಕರಾಗಿ ಆಯ್ಕೆ ಆದ ಮೊದಲ ಜನ ಪ್ರತಿನಿಧಿ ಹಾಗೂ ಕಾನೂನು ರಚನೆ ಮಾಡಲು ನಿಯೋಜನೆಯಾದ ಮೊದಲ ವ್ಯಕ್ತಿಯಂತೆ..!!
ಆದರೆ ಡ್ರಾಕೋ..
ಜನರ ನಿರೀಕ್ಷೆಯಂತೆ ನಡೆದು ಕೊಳ್ಳದೇ..
ಸಣ್ಣ ಅಪರಾಧಕ್ಕೂ ಕಠಿಣ ಶಿಕ್ಷೆ,ರಕ್ತಪಾತದಂತ ಕಾನೂನು ಜಾರಿಗೆ ತರುತ್ತಾರೆ..
ಇಷ್ಟು ಕ್ರೂರ ಹಾಗೂ ಅಮಾನವೀಯ ಶಿಕ್ಷೆ ತರುತ್ತಾರೆ ಎಂದು ಸ್ವತಃ ಡ್ರಾಕೋನನ್ನ ಚುನಾಯಿಸಿದ ಜನರಿಗೆ ಅರಿವಿರಲಿಲ್ಲವಂತೆ..
ಉದಾಹರಣೆಗೆ
ಕೋಸು,ಸೇಬು ಹಣ್ಣು,ಕದ್ದರೂ,ಇನ್ನಿತರೆ ಸಣ್ಣ ಅಪರಾಧಕ್ಕೂ ಮರಣ ದಂಡನೆಗೆ ಗುರಿ ಪಡಿಸುವಂತ ಕಾನೂನು ಬಹಳ ಕಠಿಣವಾಗಿ ಜಾರಿಗೆ ತರಲಾಗಿತ್ತು..
ಡ್ರಾಕೋ ನಿಂದ..
ಕಾರಣ ಕೇಳಿದರೆ..
ಇಂತಹಾ ಸಣ್ಣ ಅಪರಾಧ ಮುಂದೆ ದೊಡ್ಡದಕ್ಕೆ ಪ್ರೇರಣೆ,ಹಾಗಾಗಿ ಈ ಶಿಕ್ಷೆ ಎಂಬಂತೆ ಕೆಲವು ಬೇರೆಬೇರೆ ಸಮಜಾಯಿಷಿ ಬರುತ್ತಾ ಇತ್ತಂತೆ..!!
ಹೀಗೆ ಈಗಿನ ದಿನಮಾನದಲ್ಲಿ ಡ್ರಾಕೋ ಕಾನೂನು ಪ್ರಕಾರ ಶಿಕ್ಷೆ ಕೊಟ್ಟರೆ,ಪರಿಸ್ಥಿತಿ ಏನಾಗುತ್ತಾ ಇತ್ತು ಅಂತ ಊಹಿಸಿ ಕೊಳ್ತಾ ಇದೀರಾ...!
😂😛
ಸುಮಾರು 19ನೇ ಶತಮಾನದ ವರೆಗೆ,
ಕ್ಷಮೆ ಇಲ್ಲದ,ಅಮಾನವೀಯ,ಕ್ರೌರ್ಯದಿಂದ ಕೂಡಿದ ಕಾನೂನು ಗಳ ಬಗ್ಗೆ,
ಡ್ರಾಕೋನಿಯನ್ ಎಂಬ ವಿಶೇಷಣ,ಗ್ರೀಕ್,ಇಂಗ್ಲೀಷ್, ಯುರೋಪಿಯನ್ ಭಾಷೆಗಳಲ್ಲಿ ಬಳಸುತ್ತಾ ಇದ್ದರಂತೆ..!!
ಇದೆಲ್ಲಾ ಕಠಿಣ ಕಾನೂನು ಗಳನ್ನ ನಂತರ ತೆಗೆದು ಹಾಕಲಾಯಿತಂತೆ..!
ಇಂತಹಾ ಡ್ರಾಕೋ ಸತ್ತಿದ್ದು ಹೇಗೆ ಗೊತ್ತಾ..
ಒಮ್ಮೆ ಡ್ರಾಕೋಗೆ,ಗ್ರೀಸ್ ನ ಎಜಿನೇಟನ್ ಥಿಯೇಟರ್ ನಲ್ಲಿ,ಅಲ್ಲಿನ ಸ್ಥಳೀಯ ನಾಗರೀಕರು ಎಲ್ಲಾ ಸೇರಿ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದರಂತೆ..
ಡ್ರಾಕೋ ಸಮಾರಂಭಕ್ಕೆ ಆಗಮಿಸಿ ಸ್ಟೇಜ್ ಹತ್ತಿದ ಕೂಡಲೇ,
ಅಲ್ಲಿದ್ದ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು,
ಘೋಷಣೆ ಕೂಗುತ್ತಾ,
ತಮ್ಮ ತಮ್ಮ,ಟೊಪ್ಪಿ,ಬಟ್ಟೆಗಳು,ಕ್ಲೋಕ್ ಗಳನ್ನ ಖುಷಿಯಿಂದ ಎಸೆಯಲು ಪ್ರಾರಂಭಿಸಿದರಂತೆ..
ಸಾವಿರಾರು ಜನ,ಈ ರೀತಿ ಬಟ್ಟೆಗಳನ್ನ,ಟೊಪ್ಪಿಗಳನ್ನ ಒಮ್ಮೆಲೇ ಎಸೆದರ ಪರಿಣಾಮ,
ಡ್ರಾಕೋ ಉಸಿರಾಡೋಕೆ ಆಗದೇ..ಉಸಿರು ಕಟ್ಟಿ ಅದೇ ಎಜಿನೇಟನ್ ಥಿಯೇಟರ್ ಸ್ಟೇಜ್ ನಲ್ಲಿ ಮರಣ ಹೊಂದಿ ಬಿಡುತ್ತಾರಂತೆ ಡ್ರಾಕೋ..
ಅಲ್ಲೇ ಅವರ ಅಂತ್ಯಕ್ರಿಯೆ ಮಾಡಿ ಸಮಾಧಿಯನ್ನ ಮಾಡಲಾಯಿತಂತೆ..
ಜನ ಹೇಗೆ ಪರೋಕ್ಷವಾಗಿ ಡ್ರಾಕೋ ಮೇಲೆ ಸೇಡು ತೀರಿಸಿ ಕೊಂಡ್ರು ನೋಡಿ ಅಲ್ವಾ..!
😂
#ಅವಿವೇಕದ_ಸಾವು
ಕಥೆ_06
(ಮೂಲ:-Horrible histories)
#stupid_death
ತಲೆನೋವು ಚಿಕಿತ್ಸೆ
ಶಿಲಾಯುಗದಲ್ಲಿ(Stone age)
ತಲೆ ನೋವು ಬಂದರೆ ಏನು ಮಾಡ್ತಾ ಇದ್ರಂತೆ ಗೊತ್ತಾ?
ಒಂದು ಚೂಪಾದ(ಉಳಿಯ ತರದ) ಕಲ್ಲು ಹಾಗೂ ಒಂದು ದೊಡ್ಡ ಉಂಡನೆಯ ಕಲ್ಲು ತೆಗೆದು ಕೊಂಡು,
ಚೂಪನೆ ಕಲ್ಲು ತಲೆ ಬುರುಡೆಗೆ ಇಟ್ಟು,
ದೊಡ್ಡ ಕಲ್ಲಿಂದ ಹೊಡೆದು ರಂದ್ರ ಮಾಡುತ್ತಾ ಇದ್ದರಂತೆ..
ಬುರುಡೆಯಲ್ಲಿ ಆದ ರಂಧ್ರದಿಂದ ತಲೆಯಲ್ಲಿ ಇರುವ ಭೂತ,ಪಿಶಾಚಿ,ಚೇಷ್ಟೆ ಎಲ್ಲಾ,ಹೊರ ಹೋಗಿ..(empty mind devils work shop ಅನ್ನೋದನ್ನ ಗಂಭೀರವಾಗಿ ತಗೊಂಡಿದ್ರಾ ಕೇಳಬೇಡಿ)ತಲೆ ನೋವು ಮಾಯವಾಗುತ್ತಾ ಇತ್ತು ಅಂತ ನಂಬಿಕೆ ಅಂತೆ..
ಈ ಚಿಕಿತ್ಸೆಗೆ ತ್ರಿಪೆಂಡಲ್ ಎನ್ನುತ್ತಾ ಇದ್ದರಂತೆ...
ಅಕ್ಯುಪಂಚರ್ ಚಿಕಿತ್ಸೆ ತರ ಇರಬಹುದು..!!
ತಲೆ ನೋವು ಹೋಗಿತ್ತಾ ಇದರಿಂದ ಅಂತ ಕೇಳಬೇಡಿ, ಹೊಡೆದಿದ್ದು ಹೆಚ್ಚು ಕಮ್ಮಿಯಾಗಿ ತಲೆಯೇ ಹೋಗಿರುವ ಸಾಧ್ಯತೆ ಹೆಚ್ಚು ಅನಿಸುತ್ತೇ ಅಲ್ವಾ..!
😂
ಹೆಂಗೆ ಪ್ರಕೃತಿ ಕಲ್ಲು ಚಿಕಿತ್ಸೆ...
ಈಗ ಆ ಚಿಕಿತ್ಸೆ ನೆನಸಿ ಕೊಂಡು ತಲೆ ನೋವು ಅಂತ ಯಾರಾದ್ರೂ ಹೇಳಿ ನೋಡೋಣ..
ಸಣ್ಣ ಪುಟ್ಟ ವಿಷಯಕ್ಕೆ ಡಾಕ್ಟ್ರೆ..
ಅಂತ ಓಡಿ ಹೋಗ್ತಾ ಇದ್ದೋರು ಹಲವರು
ಕರೋನಾ ಬಂದ ಮೇಲೆ ಏನಾಗಿಲ್ಲಪ್ಪ ಅಂತ ಮನೇಲಿ ಇಲ್ವಾ..
ಹಾಗೆ ಈ ರೀತಿ ಚಿಕಿತ್ಸೆ ಎಲ್ಲಾದ್ರೂ ಈಗಲೂ ಮಾಡ್ತಾ ಇದ್ದಿದ್ರೆ..
ತಲೆನೋವ,
ಹಾಗಂದ್ರೆ ಎಂತಾ ಅಂತ,ಹೃದಯ ಕಲ್ಲು ಮಾಡಿಕೊಂಡು,ತಲೆಗೆ ಕಲ್ಲಿನಲ್ಲಿ ಹೊಡೆಸಿಕೊಳ್ಳೋ ಸಹವಾಸ ಬೇಡಪ್ಪ ಅಂತಿದ್ರಾ ಅಂತ ಹಲವು ಜನ..
ಅಲ್ವಾ😂
ತಲೆ ನೋವು ಬಂದರೆ ಏನು ಮಾಡ್ತಾ ಇದ್ರಂತೆ ಗೊತ್ತಾ?
ಒಂದು ಚೂಪಾದ(ಉಳಿಯ ತರದ) ಕಲ್ಲು ಹಾಗೂ ಒಂದು ದೊಡ್ಡ ಉಂಡನೆಯ ಕಲ್ಲು ತೆಗೆದು ಕೊಂಡು,
ಚೂಪನೆ ಕಲ್ಲು ತಲೆ ಬುರುಡೆಗೆ ಇಟ್ಟು,
ದೊಡ್ಡ ಕಲ್ಲಿಂದ ಹೊಡೆದು ರಂದ್ರ ಮಾಡುತ್ತಾ ಇದ್ದರಂತೆ..
ಬುರುಡೆಯಲ್ಲಿ ಆದ ರಂಧ್ರದಿಂದ ತಲೆಯಲ್ಲಿ ಇರುವ ಭೂತ,ಪಿಶಾಚಿ,ಚೇಷ್ಟೆ ಎಲ್ಲಾ,ಹೊರ ಹೋಗಿ..(empty mind devils work shop ಅನ್ನೋದನ್ನ ಗಂಭೀರವಾಗಿ ತಗೊಂಡಿದ್ರಾ ಕೇಳಬೇಡಿ)ತಲೆ ನೋವು ಮಾಯವಾಗುತ್ತಾ ಇತ್ತು ಅಂತ ನಂಬಿಕೆ ಅಂತೆ..
ಈ ಚಿಕಿತ್ಸೆಗೆ ತ್ರಿಪೆಂಡಲ್ ಎನ್ನುತ್ತಾ ಇದ್ದರಂತೆ...
ಅಕ್ಯುಪಂಚರ್ ಚಿಕಿತ್ಸೆ ತರ ಇರಬಹುದು..!!
ತಲೆ ನೋವು ಹೋಗಿತ್ತಾ ಇದರಿಂದ ಅಂತ ಕೇಳಬೇಡಿ, ಹೊಡೆದಿದ್ದು ಹೆಚ್ಚು ಕಮ್ಮಿಯಾಗಿ ತಲೆಯೇ ಹೋಗಿರುವ ಸಾಧ್ಯತೆ ಹೆಚ್ಚು ಅನಿಸುತ್ತೇ ಅಲ್ವಾ..!
😂
ಹೆಂಗೆ ಪ್ರಕೃತಿ ಕಲ್ಲು ಚಿಕಿತ್ಸೆ...
ಈಗ ಆ ಚಿಕಿತ್ಸೆ ನೆನಸಿ ಕೊಂಡು ತಲೆ ನೋವು ಅಂತ ಯಾರಾದ್ರೂ ಹೇಳಿ ನೋಡೋಣ..
ಸಣ್ಣ ಪುಟ್ಟ ವಿಷಯಕ್ಕೆ ಡಾಕ್ಟ್ರೆ..
ಅಂತ ಓಡಿ ಹೋಗ್ತಾ ಇದ್ದೋರು ಹಲವರು
ಕರೋನಾ ಬಂದ ಮೇಲೆ ಏನಾಗಿಲ್ಲಪ್ಪ ಅಂತ ಮನೇಲಿ ಇಲ್ವಾ..
ಹಾಗೆ ಈ ರೀತಿ ಚಿಕಿತ್ಸೆ ಎಲ್ಲಾದ್ರೂ ಈಗಲೂ ಮಾಡ್ತಾ ಇದ್ದಿದ್ರೆ..
ತಲೆನೋವ,
ಹಾಗಂದ್ರೆ ಎಂತಾ ಅಂತ,ಹೃದಯ ಕಲ್ಲು ಮಾಡಿಕೊಂಡು,ತಲೆಗೆ ಕಲ್ಲಿನಲ್ಲಿ ಹೊಡೆಸಿಕೊಳ್ಳೋ ಸಹವಾಸ ಬೇಡಪ್ಪ ಅಂತಿದ್ರಾ ಅಂತ ಹಲವು ಜನ..
ಅಲ್ವಾ😂
ಪ್ರಾನ್ಸಿಸ್ ಬೇಕಾನ್
ಪ್ರಾನ್ಸಿಸ್ ಬೇಕಾನ್
ಎಂಬ ಇಂಗ್ಲೆಂಡ್ನ ತತ್ವ ಜ್ಞಾನಿ ಸುಮಾರು
1626 ನೇ ಇಸವಿಯಲ್ಲಿ ಮರಣ ಹೊಂದುತ್ತಾರೆ..
ಅವರು ಸತ್ತದ್ದು ಹೇಗೆ ಗೊತ್ತಾ..
ಕೋಳಿ ಮಾಂಸ ಸುಮಾರು ದಿನ ಕಾಪಾಡೋಕೆ ಹೋಗಿ..!!
ಒಂದು ದಿನ ಸ್ನೋ ನಲ್ಲಿ ಹೋಗುತ್ತಾ ಇರುವಾಗ ಒಂದು ಆಲೋಚನೆ ಬಂತಂತೆ,ಸಾಯಿಸಿದ ಕೋಳಿಯನ್ನ ಶೀತಲ ಪ್ರದೇಶದಲ್ಲಿ ಇಟ್ಟರೆ ಹಲವು ದಿನ ಕೆಡದಂತೆ ಇಡಬಹುದು ಅಂತ....!
ಸತ್ತ ಕೋಳಿಯನ್ನ ಶೀತ ಪ್ರದೇಶದಲ್ಲಿ ಇಟ್ಟು ಸಂರಕ್ಷಣೆ ಮಾಡಲು ಸಾಧ್ಯ ಎನ್ನುವ ಬಗ್ಗೆ ಪ್ರಯೋಗವನ್ನ ಪ್ರಾರಂಭ ಮಾಡಿ ದೀರ್ಘಕಾಲ ಮಾಡಲು ಮುಂದುವರೆಸಿದರಂತೆ...
ದುರಂತ ಅಂದರೆ
ದಿನ ನಿತ್ಯವೂ ಮಂಜು ಗಡ್ಡೆಯ ಶೀತ ವಾತಾವರಣದಲ್ಲಿ ಕೆಲಸ ಮಾಡಿದ ಪ್ರಾನ್ಸಿಸ್ಗೆ ನ್ಯುಮೋನಿಯಾ ಬಂದು ಖಾಯಿಲೆ ಉಲ್ಬಣವಾಗಿ ಬಿಡುತ್ತೆ....!
ಅವರು ಮಾಡಿದ ಪ್ರಯೋಗ ಸಂಪೂರ್ಣ ಫಲಪ್ರದ ವಾಗುತ್ತದೆ..
ಆದರೆ ಪ್ರಾನ್ಸಿಸ್ ನ್ಯುಮೋನಿಯಾದಿಂದ ಮರಣ ಹೊಂದಿ ಪ್ರೀಜ್ ಆಗುತ್ತಾರೆ..!
ಪಾಪ..
ನಿಗತ್ ಕೊಂಡಿದ್ದ ಕೋಳಿನ ಹಾಳಾಗದ ಹಾಗೆ ಸುಮಾರು ದಿನ ಕಾಪಾಡೋಕೆ ಹೋಗಿ ಇವರೇ ಕೋಲ್ಡ್ ಜಾಸ್ತಿಯಾಗಿ ಸೆಟ್ ಗೊಂಡು,
ನಿಗತ್ ಕಂಡು ಬಿಟ್ರು ನೋಡಿ...😣
(Source:-Horrible histories Series)
#ಅವಿವೇಕದ_ಸಾವು
#ಕಥೆ_03
#stupid_death
ಎಂಬ ಇಂಗ್ಲೆಂಡ್ನ ತತ್ವ ಜ್ಞಾನಿ ಸುಮಾರು
1626 ನೇ ಇಸವಿಯಲ್ಲಿ ಮರಣ ಹೊಂದುತ್ತಾರೆ..
ಅವರು ಸತ್ತದ್ದು ಹೇಗೆ ಗೊತ್ತಾ..
ಕೋಳಿ ಮಾಂಸ ಸುಮಾರು ದಿನ ಕಾಪಾಡೋಕೆ ಹೋಗಿ..!!
ಒಂದು ದಿನ ಸ್ನೋ ನಲ್ಲಿ ಹೋಗುತ್ತಾ ಇರುವಾಗ ಒಂದು ಆಲೋಚನೆ ಬಂತಂತೆ,ಸಾಯಿಸಿದ ಕೋಳಿಯನ್ನ ಶೀತಲ ಪ್ರದೇಶದಲ್ಲಿ ಇಟ್ಟರೆ ಹಲವು ದಿನ ಕೆಡದಂತೆ ಇಡಬಹುದು ಅಂತ....!
ಸತ್ತ ಕೋಳಿಯನ್ನ ಶೀತ ಪ್ರದೇಶದಲ್ಲಿ ಇಟ್ಟು ಸಂರಕ್ಷಣೆ ಮಾಡಲು ಸಾಧ್ಯ ಎನ್ನುವ ಬಗ್ಗೆ ಪ್ರಯೋಗವನ್ನ ಪ್ರಾರಂಭ ಮಾಡಿ ದೀರ್ಘಕಾಲ ಮಾಡಲು ಮುಂದುವರೆಸಿದರಂತೆ...
ದುರಂತ ಅಂದರೆ
ದಿನ ನಿತ್ಯವೂ ಮಂಜು ಗಡ್ಡೆಯ ಶೀತ ವಾತಾವರಣದಲ್ಲಿ ಕೆಲಸ ಮಾಡಿದ ಪ್ರಾನ್ಸಿಸ್ಗೆ ನ್ಯುಮೋನಿಯಾ ಬಂದು ಖಾಯಿಲೆ ಉಲ್ಬಣವಾಗಿ ಬಿಡುತ್ತೆ....!
ಅವರು ಮಾಡಿದ ಪ್ರಯೋಗ ಸಂಪೂರ್ಣ ಫಲಪ್ರದ ವಾಗುತ್ತದೆ..
ಆದರೆ ಪ್ರಾನ್ಸಿಸ್ ನ್ಯುಮೋನಿಯಾದಿಂದ ಮರಣ ಹೊಂದಿ ಪ್ರೀಜ್ ಆಗುತ್ತಾರೆ..!
ಪಾಪ..
ನಿಗತ್ ಕೊಂಡಿದ್ದ ಕೋಳಿನ ಹಾಳಾಗದ ಹಾಗೆ ಸುಮಾರು ದಿನ ಕಾಪಾಡೋಕೆ ಹೋಗಿ ಇವರೇ ಕೋಲ್ಡ್ ಜಾಸ್ತಿಯಾಗಿ ಸೆಟ್ ಗೊಂಡು,
ನಿಗತ್ ಕಂಡು ಬಿಟ್ರು ನೋಡಿ...😣
(Source:-Horrible histories Series)
#ಅವಿವೇಕದ_ಸಾವು
#ಕಥೆ_03
#stupid_death
ಬೋಳು ತಲೆಯಿಂದ ಸಾವು
ಸುಮಾರು 523 BC ಯಲ್ಲಿ Aeschylus(ಐಸೂಲಾಸ್)
ಎಂಬ ವ್ಯಕ್ತಿ ಗ್ರೀಕ್ ನ ಅಥೆನ್ಸ್ ನಲ್ಲಿ ಜನಿಸಿ
ಪುರಾತನ ಗ್ರೀಕ್ ಟ್ರಾಜಿಡಿಯನ್(ಪಾದರ್ ಅಪ್ ಟ್ರಾಜೆಡಿ) ಎಂದೇ ಜನಪ್ರಿಯರಾಗಿದ್ದರಂತೆ..
ಕಾರಣ
ಪುರಾತನ ಕಾಲದಲ್ಲಿ ನಡೆದ ದುರಂತ ಕತೆಗಳ ಬಗ್ಗೆ ಸಣ್ಣ ನಾಟಕಗಳ ಮೂಲಕ ಬಹಳ ಸುಂದರವಾಗಿ ಚಿತ್ರಿಸುವುದರ ಮೂಲಕ ಜನಪ್ರಿಯರಾಗಿ,ಈ ಹೆಸರಿಗೆ ಪಾತ್ರರಾಗಿದ್ದರಂತೆ..!
ಈ ವ್ಯಕ್ತಿ ಸುಮಾರು 67 ವರ್ಷ ಬದುಕಿದ್ದರಂತೆ..
ಅವರ ಸಾವು ಹೇಗಾಯ್ತು ಅಂತೀರಾ..!
ಅದೊಂದು ಬ್ಯಾಡ್ ಲಕ್ ಬಿಡಿ..
ಒಂದು ದಿನ,ಐಸೂಲಸ್
ಏನೋ ಯೋಚಿಸುತ್ತಾ ಅವರ ಪಾಡಿಗೆ ಅವರು ನಡೆದು ಹೋಗುತ್ತಾ ಇದ್ದರಂತೆ,
ತಲೆಯ ಮೇಲೆ ಏನೋ ವಸ್ತು ಬಿದ್ದಿದೆ,ಆ ವಸ್ತು ಏನೆಂದರೆ ಆಮೆ!
ಒಂದು ಹದ್ದು ಆಮೆಯನ್ನ ಹಿಡಿದು ಬಹಳ ಎತ್ತರದಲ್ಲಿ ಹಾರುತ್ತಾ ಇರುವಾಗ,ಆಮೆ ಇವರ ತಲೆಯ ಮೇಲೆ ಬಿದ್ದಿದ್ದರೆ ಪರಿಣಾಮ ತಲೆಗೆ ಪೆಟ್ಟು ಬಿದ್ದು ತೀರಿ ಹೋದರಂತೆ..
ಹದ್ದು ಆಮೆಯನ್ನ ಮೇಲಿಂದ ಬಂಡೆಗಳ ಮೇಲೆ ಹಾಕಿ ಅದು ಒಡೆದಾಗ ತಿನ್ನುವುದುಅನುಕೂಲ ಅಂತಲೇ ಬಂಡೆಯ ಮೇಲೆ ಹಾಕುವುದಂತೆ....!
ಅದಕ್ಕೂ ಇದಕ್ಕೂ ಏನು ಸಂಬಂದ ಎಂದು ಯೋಚಿಸ್ತಾ ಇದೀರಾ..!!!!
ಅದೇ ನೋಡಿ ಕತೆಯ ರೋಚಕತೆ..
ಐಸೂಲಾಸ್ ತಲೆ ಬೋಳು ಇದ್ದ ಕಾರಣ ಹದ್ದಿನ ಕಣ್ಣು ಗೊತ್ತಲ್ಲ,ಮೇಲಿನಿಂದ ಪಳ ಪಳ ಹೊಳೆಯುತ್ತಾ ಇದ್ದ ಇವರ ಬೋಳು ತಲೆಯನ್ನೇ ಬಂಡೇ ಎಂದು ತಿಳಿದು,ಸರಿಯಾಗಿ ಗುರಿ ಇಟ್ಟು ಅಮೆಯನ್ನ ಇವರ ತಲೆಯ ಮೇಲೆ ಹಾಕಿದ್ದರ ಪರಿಣಾಮವೇ,ಅವರು ದುರಂತ ಸಾವನ್ನಪ್ಪ ಬೇಕಾಯ್ತು ಅನ್ನೋದು ಬೇಸರದ ಸಂಗತಿ..
ಪಾದರ್ ಅಪ್ ಟ್ರಾಜಿಡಿಯ ಜೀವನ ಈ ರೀತಿ ಟ್ರಾಜಿಡಿ ಆಗಿ ಅಂತ್ಯ ಆಯ್ತು..
#ಸ್ಟುಪಿಡ್_ಡೆತ್
ಕಥೆ_01
(ಮೂಲ:-Horrible history Series)
ಎಂಬ ವ್ಯಕ್ತಿ ಗ್ರೀಕ್ ನ ಅಥೆನ್ಸ್ ನಲ್ಲಿ ಜನಿಸಿ
ಪುರಾತನ ಗ್ರೀಕ್ ಟ್ರಾಜಿಡಿಯನ್(ಪಾದರ್ ಅಪ್ ಟ್ರಾಜೆಡಿ) ಎಂದೇ ಜನಪ್ರಿಯರಾಗಿದ್ದರಂತೆ..
ಕಾರಣ
ಪುರಾತನ ಕಾಲದಲ್ಲಿ ನಡೆದ ದುರಂತ ಕತೆಗಳ ಬಗ್ಗೆ ಸಣ್ಣ ನಾಟಕಗಳ ಮೂಲಕ ಬಹಳ ಸುಂದರವಾಗಿ ಚಿತ್ರಿಸುವುದರ ಮೂಲಕ ಜನಪ್ರಿಯರಾಗಿ,ಈ ಹೆಸರಿಗೆ ಪಾತ್ರರಾಗಿದ್ದರಂತೆ..!
ಈ ವ್ಯಕ್ತಿ ಸುಮಾರು 67 ವರ್ಷ ಬದುಕಿದ್ದರಂತೆ..
ಅವರ ಸಾವು ಹೇಗಾಯ್ತು ಅಂತೀರಾ..!
ಅದೊಂದು ಬ್ಯಾಡ್ ಲಕ್ ಬಿಡಿ..
ಒಂದು ದಿನ,ಐಸೂಲಸ್
ಏನೋ ಯೋಚಿಸುತ್ತಾ ಅವರ ಪಾಡಿಗೆ ಅವರು ನಡೆದು ಹೋಗುತ್ತಾ ಇದ್ದರಂತೆ,
ತಲೆಯ ಮೇಲೆ ಏನೋ ವಸ್ತು ಬಿದ್ದಿದೆ,ಆ ವಸ್ತು ಏನೆಂದರೆ ಆಮೆ!
ಒಂದು ಹದ್ದು ಆಮೆಯನ್ನ ಹಿಡಿದು ಬಹಳ ಎತ್ತರದಲ್ಲಿ ಹಾರುತ್ತಾ ಇರುವಾಗ,ಆಮೆ ಇವರ ತಲೆಯ ಮೇಲೆ ಬಿದ್ದಿದ್ದರೆ ಪರಿಣಾಮ ತಲೆಗೆ ಪೆಟ್ಟು ಬಿದ್ದು ತೀರಿ ಹೋದರಂತೆ..
ಹದ್ದು ಆಮೆಯನ್ನ ಮೇಲಿಂದ ಬಂಡೆಗಳ ಮೇಲೆ ಹಾಕಿ ಅದು ಒಡೆದಾಗ ತಿನ್ನುವುದುಅನುಕೂಲ ಅಂತಲೇ ಬಂಡೆಯ ಮೇಲೆ ಹಾಕುವುದಂತೆ....!
ಅದಕ್ಕೂ ಇದಕ್ಕೂ ಏನು ಸಂಬಂದ ಎಂದು ಯೋಚಿಸ್ತಾ ಇದೀರಾ..!!!!
ಅದೇ ನೋಡಿ ಕತೆಯ ರೋಚಕತೆ..
ಐಸೂಲಾಸ್ ತಲೆ ಬೋಳು ಇದ್ದ ಕಾರಣ ಹದ್ದಿನ ಕಣ್ಣು ಗೊತ್ತಲ್ಲ,ಮೇಲಿನಿಂದ ಪಳ ಪಳ ಹೊಳೆಯುತ್ತಾ ಇದ್ದ ಇವರ ಬೋಳು ತಲೆಯನ್ನೇ ಬಂಡೇ ಎಂದು ತಿಳಿದು,ಸರಿಯಾಗಿ ಗುರಿ ಇಟ್ಟು ಅಮೆಯನ್ನ ಇವರ ತಲೆಯ ಮೇಲೆ ಹಾಕಿದ್ದರ ಪರಿಣಾಮವೇ,ಅವರು ದುರಂತ ಸಾವನ್ನಪ್ಪ ಬೇಕಾಯ್ತು ಅನ್ನೋದು ಬೇಸರದ ಸಂಗತಿ..
ಪಾದರ್ ಅಪ್ ಟ್ರಾಜಿಡಿಯ ಜೀವನ ಈ ರೀತಿ ಟ್ರಾಜಿಡಿ ಆಗಿ ಅಂತ್ಯ ಆಯ್ತು..
#ಸ್ಟುಪಿಡ್_ಡೆತ್
ಕಥೆ_01
(ಮೂಲ:-Horrible history Series)
ಮಿಲೋ ರಸ್ಲರ್
ಮಿಲೋ ಅಪ್ ಕ್ರೋಟಾನ್ 6ನೇ ಶತಮಾನದ ಜನಪ್ರಿಯ ರೆಸ್ಲರ್,ಕ್ರೋಟಾನ್ ನ ಮ್ಯಾಗ್ನ ಗ್ರೇಸಿಯಾ ಎಂಬಲ್ಲಿನವ್ರು..
ಇವರು ರಸ್ಲಿಂಗ್ ನಲ್ಲಿ ಆಗಿನ ಕಾಲದಲ್ಲಿ ಹಲವು ಪ್ರಶಸ್ತಿ ಗಳಿಸಿ,ಬಹಳ ಯಶಸ್ವಿ ರಸ್ಲರ್ ಎಂದು ಹೆಸರುವಾಸಿಯಾದವರು..
ಬಹಳ ಶಕ್ತಿವಂತ ಹಾಗೂ ಧೈರ್ಯ ವಂತ ಅಂತಲೂ ಹೆಸರಿತ್ತು..
ಇವರು 510 BC ಯಲ್ಲಿ ಸೈಬೀರಿಯಾ ವಿರುದ್ಧ ಕಾರ್ಯಾಚರಣೆಯಲ್ಲಿ ನಾಗರೀಕರನ್ನ ಒಂದು ಮಾಡಿ ಸಹಾಯ ಮಾಡಿದ್ದರೂ ಎನ್ನಲಾಗಿದೆ..!
ಮಿಲೋ...
ಒಂದು ಗೂಳಿಯನ್ನ ಅನಾಮತ್ತಾಗಿ ಎತ್ತಿ ತನ್ನ ಹೆಗಲ ಮೇಲೆ ಇಟ್ಟುಕೊಳ್ಳುತ್ತಾ ಇದ್ದರಂತೆ..
ಇದು ಒಂದು ಇವರ ಶಕ್ತಿಗೆ ದೊಡ್ಡ ಉದಾಹರಣೆ..
ಇಂತಿಪ್ಪ ಮಿಲೋ ಗೆ ನಾನು ಎಂಬ ಕೊಲೆಸ್ಟ್ರಾಲ್ ಸ್ವಲ್ಪ ಜಾಸ್ತಿಯೇ ಇತ್ತು ಅನಿಸುತ್ತೆ.
ಒಮ್ಮೆ ಮಿಲೋ..
ಕಾಡಿನಲ್ಲಿ ನಡೆದು ಹೋಗುತ್ತಾ ಇರುವಾಗ ಒಂದು ಮರದ ದಿಮ್ಮಿ ಸ್ವಲ್ಪ ಸೀಳಿರೋದು ಬಿದ್ದಿದ್ದು ಕಾಣಿಸಿತಂತೆ,
ಈ ಮರದ ದಿಮ್ಮಿಯನ್ನ ಬರಿ ಗೈಯಿಂದ ಸೀಳಿದ್ರೆ ನನ್ನ ಪರಾಕ್ರಮ ಬಲ ಮತ್ತಷ್ಟು ಒರೆಗೆ ಹಚ್ಚಿದ ಹಾಗೆ ಆಗುತ್ತೆ,ಎದುರಾಳಿಗಳಿಗೆ ಸವಾಲು ಹಾಕಲು ಅನುಕೂಲವಾಗುತ್ತೆ ಎಂದು ಯೋಚಿಸಿ,
ಆ ಮರದ ದಿಮ್ಮಿಯನ್ನ,ಬರಿಗೈಯಿಂದ ಸೀಳಲು ನಿರ್ಧರಿಸಿದರಂತೆ,ಹಾಗೆ ಮರದ ಸೀಳಿನ ಮಧ್ಯೆ ಕೈ ಹಾಕಿದ ಮಿಲೋಗೆ,ಕೈ ಆ ಮರದ ದಿಮ್ಮಿಯ ಸೀಳಿನ ಮಧ್ಯ ಸಿಕ್ಕಿಕೊಂಡು ವಾಪಾಸ್ ತೆಗೆದು ಕೊಳ್ಳದಂತಾಗಿ ಲಾಕ್ ಆಗಿ ಬಿಡುತ್ತೆ,
ಸಹಾಯಕ್ಕೆ ಸುತ್ತ ಮುತ್ತ ಜನರೂ ಇರಲಿಲ್ಲ..
ಸ್ವಲ್ಪ ಸಮಯ ತಮ್ಮೆಲ್ಲಾ ಶಕ್ತಿ ಬಳಸಿ ಬಿಡಿಸಿ ಕೊಳ್ಳಲು ಕಷ್ಟಪಟ್ಟು ಬಳಲಿ ಬೆಂಡಾಗಿದ್ದ ಮಿಲೋಗೆ ಒಂದು ಗಂಡಾಂತರ ಕಾದಿತ್ತು..
ಕಾಡಿನ ಮಧ್ಯ ಸಿಕ್ಕಿ ಹಾಕಿಕೊಂಡಿದ್ದ ಮಿಲೋನ ಕೊಸರಾಟ ಸದ್ದು ಕೇಳಿ,
ಆಹಾರ ಹುಡುಕುತ್ತಾ ಬಂದ ತೋಳದ ಗುಂಪು
ಮಿಲೋನ ಮೇಲೆ ದಾಳಿ ಮಾಡುತ್ತವೆ..
ತಪ್ಪಿಸಿ ಕೊಳ್ಳಲಾಗದೆ ಅಸಹಾಯಕನಾಗಿ
ಈ ದಾಳಿಯಿಂದಾಗಿ ರಕ್ತ ಸ್ರಾವವಾಗಿ ಮಿಲೋ ಸಾವನ್ನಪ್ಪಿದರು ಎನ್ನಲಾಗಿದೆ..
ಎಷ್ಟೇ ಶಕ್ತಿ ಇದ್ದರೂ,ಎಷ್ಟೇ ಜನರನ್ನ ತನ್ನ ಪರಾಕ್ರಮದಿಂದ ರಸ್ಲಿಂಗ್ ನಲ್ಲಿ ಮಣ್ಣು ಮುಕ್ಕಿಸಿದ್ದರೂ,ಎಷ್ಟೇ ಪ್ರಶಸ್ತಿ,ಬಿರುದುಬಾವಳಿಗಳನ್ನ ಪಡೆದಿದ್ದರೂ..
ತನ್ನ ಮೂರ್ಖತನ ಹಾಗೂ ಅಹಂಕಾರದಿಂದ ತನ್ನ ಸಾವನ್ನ ತೋಳಗಳಿಂದ ತಾನಾಗೇ ಆಹ್ವಾನಿಸಿ ಕೊಂಡು ಬಿಟ್ಟರು ಮಿಲೋ...
ಇವರು ರಸ್ಲಿಂಗ್ ನಲ್ಲಿ ಆಗಿನ ಕಾಲದಲ್ಲಿ ಹಲವು ಪ್ರಶಸ್ತಿ ಗಳಿಸಿ,ಬಹಳ ಯಶಸ್ವಿ ರಸ್ಲರ್ ಎಂದು ಹೆಸರುವಾಸಿಯಾದವರು..
ಬಹಳ ಶಕ್ತಿವಂತ ಹಾಗೂ ಧೈರ್ಯ ವಂತ ಅಂತಲೂ ಹೆಸರಿತ್ತು..
ಇವರು 510 BC ಯಲ್ಲಿ ಸೈಬೀರಿಯಾ ವಿರುದ್ಧ ಕಾರ್ಯಾಚರಣೆಯಲ್ಲಿ ನಾಗರೀಕರನ್ನ ಒಂದು ಮಾಡಿ ಸಹಾಯ ಮಾಡಿದ್ದರೂ ಎನ್ನಲಾಗಿದೆ..!
ಮಿಲೋ...
ಒಂದು ಗೂಳಿಯನ್ನ ಅನಾಮತ್ತಾಗಿ ಎತ್ತಿ ತನ್ನ ಹೆಗಲ ಮೇಲೆ ಇಟ್ಟುಕೊಳ್ಳುತ್ತಾ ಇದ್ದರಂತೆ..
ಇದು ಒಂದು ಇವರ ಶಕ್ತಿಗೆ ದೊಡ್ಡ ಉದಾಹರಣೆ..
ಇಂತಿಪ್ಪ ಮಿಲೋ ಗೆ ನಾನು ಎಂಬ ಕೊಲೆಸ್ಟ್ರಾಲ್ ಸ್ವಲ್ಪ ಜಾಸ್ತಿಯೇ ಇತ್ತು ಅನಿಸುತ್ತೆ.
ಒಮ್ಮೆ ಮಿಲೋ..
ಕಾಡಿನಲ್ಲಿ ನಡೆದು ಹೋಗುತ್ತಾ ಇರುವಾಗ ಒಂದು ಮರದ ದಿಮ್ಮಿ ಸ್ವಲ್ಪ ಸೀಳಿರೋದು ಬಿದ್ದಿದ್ದು ಕಾಣಿಸಿತಂತೆ,
ಈ ಮರದ ದಿಮ್ಮಿಯನ್ನ ಬರಿ ಗೈಯಿಂದ ಸೀಳಿದ್ರೆ ನನ್ನ ಪರಾಕ್ರಮ ಬಲ ಮತ್ತಷ್ಟು ಒರೆಗೆ ಹಚ್ಚಿದ ಹಾಗೆ ಆಗುತ್ತೆ,ಎದುರಾಳಿಗಳಿಗೆ ಸವಾಲು ಹಾಕಲು ಅನುಕೂಲವಾಗುತ್ತೆ ಎಂದು ಯೋಚಿಸಿ,
ಆ ಮರದ ದಿಮ್ಮಿಯನ್ನ,ಬರಿಗೈಯಿಂದ ಸೀಳಲು ನಿರ್ಧರಿಸಿದರಂತೆ,ಹಾಗೆ ಮರದ ಸೀಳಿನ ಮಧ್ಯೆ ಕೈ ಹಾಕಿದ ಮಿಲೋಗೆ,ಕೈ ಆ ಮರದ ದಿಮ್ಮಿಯ ಸೀಳಿನ ಮಧ್ಯ ಸಿಕ್ಕಿಕೊಂಡು ವಾಪಾಸ್ ತೆಗೆದು ಕೊಳ್ಳದಂತಾಗಿ ಲಾಕ್ ಆಗಿ ಬಿಡುತ್ತೆ,
ಸಹಾಯಕ್ಕೆ ಸುತ್ತ ಮುತ್ತ ಜನರೂ ಇರಲಿಲ್ಲ..
ಸ್ವಲ್ಪ ಸಮಯ ತಮ್ಮೆಲ್ಲಾ ಶಕ್ತಿ ಬಳಸಿ ಬಿಡಿಸಿ ಕೊಳ್ಳಲು ಕಷ್ಟಪಟ್ಟು ಬಳಲಿ ಬೆಂಡಾಗಿದ್ದ ಮಿಲೋಗೆ ಒಂದು ಗಂಡಾಂತರ ಕಾದಿತ್ತು..
ಕಾಡಿನ ಮಧ್ಯ ಸಿಕ್ಕಿ ಹಾಕಿಕೊಂಡಿದ್ದ ಮಿಲೋನ ಕೊಸರಾಟ ಸದ್ದು ಕೇಳಿ,
ಆಹಾರ ಹುಡುಕುತ್ತಾ ಬಂದ ತೋಳದ ಗುಂಪು
ಮಿಲೋನ ಮೇಲೆ ದಾಳಿ ಮಾಡುತ್ತವೆ..
ತಪ್ಪಿಸಿ ಕೊಳ್ಳಲಾಗದೆ ಅಸಹಾಯಕನಾಗಿ
ಈ ದಾಳಿಯಿಂದಾಗಿ ರಕ್ತ ಸ್ರಾವವಾಗಿ ಮಿಲೋ ಸಾವನ್ನಪ್ಪಿದರು ಎನ್ನಲಾಗಿದೆ..
ಎಷ್ಟೇ ಶಕ್ತಿ ಇದ್ದರೂ,ಎಷ್ಟೇ ಜನರನ್ನ ತನ್ನ ಪರಾಕ್ರಮದಿಂದ ರಸ್ಲಿಂಗ್ ನಲ್ಲಿ ಮಣ್ಣು ಮುಕ್ಕಿಸಿದ್ದರೂ,ಎಷ್ಟೇ ಪ್ರಶಸ್ತಿ,ಬಿರುದುಬಾವಳಿಗಳನ್ನ ಪಡೆದಿದ್ದರೂ..
ತನ್ನ ಮೂರ್ಖತನ ಹಾಗೂ ಅಹಂಕಾರದಿಂದ ತನ್ನ ಸಾವನ್ನ ತೋಳಗಳಿಂದ ತಾನಾಗೇ ಆಹ್ವಾನಿಸಿ ಕೊಂಡು ಬಿಟ್ಟರು ಮಿಲೋ...
ಸಗಣಿ ಸಾವು
ಹೆರಾಕ್ಲಿಟಸ್ ಎಂಬ ತತ್ವ ಜ್ಞಾನಿ ಪರ್ಷಿಯನ್ ಎಂಪರರ್ ಎಂಪಿಸಿಸ್ ಎಂಬ ಊರಿನವರು..
ಇಂತಹಾ ತತ್ವಜ್ಞಾನಿ
ಹೆರಾಕ್ಲಿಟಸ್ ಸತ್ತಿದ್ದು ಹೇಗೆ ಗೊತ್ತಾ..
ಇವರಿಗೆ "Dropsy" ಎಂಬ ಮೈಯೆಲ್ಲಾ ಊದಿ ನೀರು ತುಂಬಿದ ರೀತಿ ಆಗುವ ಖಾಯಿಲೆಗೆ ತುತ್ತಾಗಿ ಬಿಡ್ತಾರೆ...
ಇದನ್ನ ಗುಣ ಪಡಿಸಿ ಕೊಳ್ಳಲು ಹಲವು ಚಿಕಿತ್ಸೆ ಪಡೆದು ಕೊಂಡರೂ ಗುಣವಾಗಲೇ ಇಲ್ಲವಂತೆ..
ಖಾಯಿಲೆ ದಿನೇ ದಿನೇ ಉಲ್ಬಣ ವಾಗೋದು ನೋಡಿ..
ಕೊನೆಗೆ ತತ್ವ ಜ್ಞಾನಿ ಹೆರಾಕ್ಲಿಟಸ್,ಒಂದು ಯೋಜನೆ ರೂಪಿಸಿದರು,ಮೈ ಎಲ್ಲಾ ಊದಿಕೊಂಡು ನೀರು ತುಂಬಿದಂತೆ ಆಗಿರುವ ಈ ಖಾಯಿಲೆಯನ್ನ ಶಾಖದಲ್ಲಿ ಇದ್ದರೆ ಮೈಯಲ್ಲಿ ಇರುವ ನೀರು ಆವಿಯಾಗಿ,ಬತ್ತಿ ಹೋಗಿ,ಖಾಯಿಲೆ ಕಡಿಮೆ ಯಾಗಬಹುದು ಎಂದು ತಾವೇ ಊಹಿಸಿ..
ಒಂದು ನಿರ್ದಾರಕ್ಕೆ ಬಂದರಂತೆ..!
ಒಂದಷ್ಟು ಸಗಣಿಯನ್ನ ಒಟ್ಟು ಮಾಡಿ,
ದೊಡ್ಡ ಸಗಣಿಯ ರಾಶಿ ಮಾಡಿ ಅದರ ಮಧ್ಯ ಕಣ್ಣು,ಬಾಯಿ,ಮೂಗು ಬಿಟ್ಟು ಅವರು ಕುಳಿತು ಬಿಟ್ಟರಂತೆ ಹೆರಾಕ್ಲಿಟಸ್..
ಒಂತರಾ ತಪಸ್ಸಿಗೆ ಕುಳಿತ ಹಾಗೆ ಅಂತಿಟ್ಟು ಕೊಳ್ಳಿ..
ಆದರೆ ಜೊತೆಗೆ ನೀರನ್ನು ಇಟ್ಟುಕೊಳ್ಳೋದನ್ನ ಮರೆತು ಬಿಟ್ಟರಂತೆ...!
ಹಾಗೆ ಕುಳಿತವರಿಗೆ,ಒಳಗೆ ಸಗಣಿ ರಾಶಿಯಲ್ಲಿನ ಶಾಖ ಕ್ರಮೇಣ ಹೆಚ್ಚಾಗಿ,
ದೇಹದಲ್ಲಿನ ನೀರು ಹೋಗುವ ಬದಲು..
ನಿರ್ಜಲೀಕರಣ ಹಾಗೂ ನಿಶಕ್ತಿ ಆಗಿ,ಅಂಗಾಂಗ ವೈಫಲ್ಯವಾಗಿ,
ಅವರ ಪ್ರಾಣವೇ ಹೋಗಿ ಬಿಟ್ಟಿಟಂತೆ....!
ಸ್ವಯಂ ವೈದ್ಯರು ಆಗಲು ಹೋದ
ತತ್ವ ಜ್ಞಾನಿ ಕೊನೆಗೆ ತಾವು ವೈದ್ಯರ ಬಳಿ ಹೋಗಲು ಸಮಯವೇ ಸಿಗದೇ ಸತ್ತು ಹೋಗಿ ಬಿಟ್ಟರಂತೆ..!
ಅತಿ ಬುದ್ಧಿವಂತಿಕೆ,ಅಂ* ಚಪ್ಪಟೆ ಅಂತಾರೆ ಹಳ್ಳಿಯ ಕಡೆ..
ಅದೇ ಆಯ್ತು ಅನಿಸುತ್ತೆ ಇವರ ವಿಷಯದಲ್ಲಿ..
ಅಲ್ವಾ..
#ಅವಿವೇಕದ_ಸಾವು
ಕಥೆ_08.
#stupid_death
(Source:-Horrible histories Series)
ಮರಿಯಾ ಕೋವೆಂಟ್ರಿ
ಮರಿಯಾ ಕೋವೆಂಟ್ರಿ ಎಂಬುವವರು ಐರಿಷ್ ನ ಯುವತಿ,ಕಿಂಗ್ ಜಾರ್ಜ್-2 ಆಡಳಿತ ಕಾಲದಲ್ಲಿ,ಇವರು ಬಹಳ ಸೌಂದರ್ಯ ವತಿ ಎಂದು ಗುರುತಿಸಲ್ಪಟ್ಟವರಂತೆ..!
ಇವರು ಹುಟ್ಟಿದ್ದು 1733 ರಲ್ಲಿ ಮರಣ ಹೊಂದಿದ್ದು 1760 ರಲ್ಲಿ..
ಅಯ್ಯೋ..ಚೇ...
ಅಷ್ಟು ಚಿಕ್ಕ ವಯಸ್ಸಿಗೆ ಅವರು ಮರಣ ಹೊಂದಲು ಕಾರಣ ಏನು ಅಂದ್ರಾ...!?
ಅವರ ಸಾವಿಗೆ ಕಾರಣ ಸೌಂದರ್ಯ ವರ್ಧಕ ಅದೇ ಮೇಕ್ ಅಪ್ ಅಂದರೆ ನಂಬಲೇ ಬೇಕು...!
17,18 ನೇ ಶತಮಾನದಲ್ಲಿ ಮಹಿಳೆಯರು ಸೌಂದರ್ಯ ವರ್ಧಕ ಬಳಸೋದು,ಮೇಕ್ ಅಪ್ ಕೆನ್ನೆಗೆ ಹಾಗೂ ಹಣೆಗೆ ಬೇರೆ ಬೇರೆ ಬಣ್ಣ ಬಳಿದು,ಚಂದ ಕಾಣಿಸಿಕೊಳ್ಳೋದು ಒಂದು ಹೆಗ್ಗಳಿಕೆಯಾಗಿತ್ತಂತೆ..
ತಮ್ಮ ಚರ್ಮದ ಬಣ್ಣ ಹಾಗೂ ಚರ್ಮದ ಕಲೆಗಳು ಕಾಣದಂತೆ ಮಾಡಲು ಬೇರೆ ಬೇರೆ ಸೌಂದರ್ಯ ವರ್ಧಕಗಳನ್ನ ಬಳಸುತ್ತಾ ಇದ್ದರಂತೆ..
ಅದರಲ್ಲಿ ವೆನಿಟಿಯನ್ ಸೈರಸ್ ಎಂಬ ಪದಾರ್ಥ ಚರ್ಮದ ಬಣ್ಣ ಬಿಳಿಯಾಗಲು ಸಹಾಯಕವಂತೆ,ಅದನ್ನ ಮರಿಯಾ ಯಥೇಚ್ಛವಾಗಿ ಬಳಸುತ್ತಾ ಇದ್ದರಂತೆ..
ವೆನಿಟಿಯನ್ ಸೈರಸ್ ವಿಷ ಪೂರಿತ ಸೌಂದರ್ಯ ವರ್ಧಕ,ದೀರ್ಘ ಕಾಲ,ಹೆಚ್ಚಾಗಿ ಬಳಸುವುದರಿಂದ,ನಾನಾ ತರದ ಆರೋಗ್ಯ ಸಮಸ್ಯೆಯಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತಂತೆ..!
ಅದೇ ಸೌಂದರ್ಯವರ್ಧಕ ಪದಾರ್ಥವನ್ನು ಹೆಚ್ಚು ಬಳಸಿ ಲೆಡ್ ಪಾಯ್ಸನಿಂಗ್ ಆಗಿ..
ಮರಿಯಾ ಕೋವೆಂಟ್ರಿ ಕೇವಲ 27 ವರ್ಷ ವಯಸ್ಸಿಗೆ ಮರಣ ಹೊಂದಿದರಂತೆ..
ತಾವು ಚನ್ನಾಗಿ ಕಾಣುತ್ತೇನೆ ಅಂತ ಬಹಳ ಅರ್ಜೆಂಟ್ ಮಾಡಿ..
ತಾವೇ ಕಾಣದೇ ಇರೋ ಜಾಗಕ್ಕೆ ಅರ್ಜೆಂಟ್ ಆಗಿ ಸಣ್ಣ ವಯಸ್ಸಲ್ಲೇ ಹೋಗಿ ಬಿಟ್ಟರು..
ಮರಿಯಾ ಕೋವೆಂಟ್ರಿ..
ಈಗ ಬಿಡಿ,
ಸೌಂದರ್ಯ ವರ್ಧಕ ಬಹಳ ಸುರಕ್ಷಿತವಾಗಿ ಇರುತ್ತೆ..
ಹಾಗೆ ಹಣವೂ ಕೂಡ ಕಡಿಮೆ ಅಂದ್ರಾ..😛
ಏನೋಪಾ..
ನಾನು ಸೌಂದರ್ಯ ವರ್ಧಕ ಬಳಸಲ್ಲಪ್ಪ..
ನೀವು ಅಷ್ಟೇ ಅಲ್ವಾ..
ನಾಚ್ಯುರಲ್..
#ಅವಿವೇಕದ_ಸಾವು
ಕಥೆ_06
(ಮೂಲ:-Horrible histories)
ಇವರು ಹುಟ್ಟಿದ್ದು 1733 ರಲ್ಲಿ ಮರಣ ಹೊಂದಿದ್ದು 1760 ರಲ್ಲಿ..
ಅಯ್ಯೋ..ಚೇ...
ಅಷ್ಟು ಚಿಕ್ಕ ವಯಸ್ಸಿಗೆ ಅವರು ಮರಣ ಹೊಂದಲು ಕಾರಣ ಏನು ಅಂದ್ರಾ...!?
ಅವರ ಸಾವಿಗೆ ಕಾರಣ ಸೌಂದರ್ಯ ವರ್ಧಕ ಅದೇ ಮೇಕ್ ಅಪ್ ಅಂದರೆ ನಂಬಲೇ ಬೇಕು...!
17,18 ನೇ ಶತಮಾನದಲ್ಲಿ ಮಹಿಳೆಯರು ಸೌಂದರ್ಯ ವರ್ಧಕ ಬಳಸೋದು,ಮೇಕ್ ಅಪ್ ಕೆನ್ನೆಗೆ ಹಾಗೂ ಹಣೆಗೆ ಬೇರೆ ಬೇರೆ ಬಣ್ಣ ಬಳಿದು,ಚಂದ ಕಾಣಿಸಿಕೊಳ್ಳೋದು ಒಂದು ಹೆಗ್ಗಳಿಕೆಯಾಗಿತ್ತಂತೆ..
ತಮ್ಮ ಚರ್ಮದ ಬಣ್ಣ ಹಾಗೂ ಚರ್ಮದ ಕಲೆಗಳು ಕಾಣದಂತೆ ಮಾಡಲು ಬೇರೆ ಬೇರೆ ಸೌಂದರ್ಯ ವರ್ಧಕಗಳನ್ನ ಬಳಸುತ್ತಾ ಇದ್ದರಂತೆ..
ಅದರಲ್ಲಿ ವೆನಿಟಿಯನ್ ಸೈರಸ್ ಎಂಬ ಪದಾರ್ಥ ಚರ್ಮದ ಬಣ್ಣ ಬಿಳಿಯಾಗಲು ಸಹಾಯಕವಂತೆ,ಅದನ್ನ ಮರಿಯಾ ಯಥೇಚ್ಛವಾಗಿ ಬಳಸುತ್ತಾ ಇದ್ದರಂತೆ..
ವೆನಿಟಿಯನ್ ಸೈರಸ್ ವಿಷ ಪೂರಿತ ಸೌಂದರ್ಯ ವರ್ಧಕ,ದೀರ್ಘ ಕಾಲ,ಹೆಚ್ಚಾಗಿ ಬಳಸುವುದರಿಂದ,ನಾನಾ ತರದ ಆರೋಗ್ಯ ಸಮಸ್ಯೆಯಾಗಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತಂತೆ..!
ಅದೇ ಸೌಂದರ್ಯವರ್ಧಕ ಪದಾರ್ಥವನ್ನು ಹೆಚ್ಚು ಬಳಸಿ ಲೆಡ್ ಪಾಯ್ಸನಿಂಗ್ ಆಗಿ..
ಮರಿಯಾ ಕೋವೆಂಟ್ರಿ ಕೇವಲ 27 ವರ್ಷ ವಯಸ್ಸಿಗೆ ಮರಣ ಹೊಂದಿದರಂತೆ..
ತಾವು ಚನ್ನಾಗಿ ಕಾಣುತ್ತೇನೆ ಅಂತ ಬಹಳ ಅರ್ಜೆಂಟ್ ಮಾಡಿ..
ತಾವೇ ಕಾಣದೇ ಇರೋ ಜಾಗಕ್ಕೆ ಅರ್ಜೆಂಟ್ ಆಗಿ ಸಣ್ಣ ವಯಸ್ಸಲ್ಲೇ ಹೋಗಿ ಬಿಟ್ಟರು..
ಮರಿಯಾ ಕೋವೆಂಟ್ರಿ..
ಈಗ ಬಿಡಿ,
ಸೌಂದರ್ಯ ವರ್ಧಕ ಬಹಳ ಸುರಕ್ಷಿತವಾಗಿ ಇರುತ್ತೆ..
ಹಾಗೆ ಹಣವೂ ಕೂಡ ಕಡಿಮೆ ಅಂದ್ರಾ..😛
ಏನೋಪಾ..
ನಾನು ಸೌಂದರ್ಯ ವರ್ಧಕ ಬಳಸಲ್ಲಪ್ಪ..
ನೀವು ಅಷ್ಟೇ ಅಲ್ವಾ..
ನಾಚ್ಯುರಲ್..
#ಅವಿವೇಕದ_ಸಾವು
ಕಥೆ_06
(ಮೂಲ:-Horrible histories)
ಸ್ಪಾರ್ಟಾ
ಪೊಸಾನಿಯಸ್ ಎಂಬ ಸ್ಪಾರ್ಟಾನ್ ಜನರಲ್ ಹಾಗೂ ಯುದ್ಧ ಮುಖ್ಯಸ್ಥರು..470 bc ಯಲ್ಲಿ ಸತ್ತು ಹೋಗ್ತಾರೆ..
ಇವರ ಮೇಲೆ,ಪರ್ಷಿಯನ್ ಕಿಂಗ್ ಕ್ಸೆರಕಿ ವಿರುದ್ಧ ಜೊತೆಗೆ ಇದ್ದು ಕೊಂಡೆ,
ಗ್ರಿಕೋ-ಪರ್ಶಿಯನ್ ಯುದ್ಧದಲ್ಲಿ ಪಿತೂರಿ ಮಾಡಿದ್ದರು ಎಂಬ ರಾಜ ದ್ರೋಹದ ಆರೋಪ ಕೇಳಿ ಬರುತ್ತೆ....
ಅವರು ಸತ್ತದ್ದು ಹೇಗೆ ಗೊತ್ತಾ..
ಕೂಡಲೇ ಅವರನ್ನ ರಾಜದ್ರೋಹದ ಆಧಾರದ ಮೇಲೆ ಬಂಧಿಸಲು ರಾಜಾಜ್ಞೆ ಬರುತ್ತೆ..
ಸಂಬಂಧ ಪಟ್ಟ ಮುಖ್ಯಸ್ಥರು ಅವರನ್ನ ಹಿಡಿಯಲು ಯೋಜನೆ ಮಾಡಿ,
ಅವರನ್ನ ಬೀದಿಯಲ್ಲಿ ಹಿಡಿಯಬೇಕು ಅಂತ ತಯಾರು ಆಗಿ,ಸೈನಿಕರು ಕಾಯುತ್ತಾ ಇರುತ್ತಾರೆ..
ಈ ವಿಷಯ ಪೊಸಾನಿಯಸ್ ಗೆ ಹೇಗೋ ತಿಳಿದು,
ಕೂಡಲೇ ತಪ್ಪಿಸಿ ಕೊಂಡು ಓಡಲು ಪ್ರಯತ್ನ ಮಾಡುತ್ತಾನೆ..
ಹಾಗೆ ಓಡುತ್ತಾ ಓಡುತ್ತಾ...
ಟೆಂಪಲ್ ಆಪ್ ಅಥೆನಾದ ಹತ್ತಿರ ಹೋಗಿ ಬಿಡುತ್ತಾನೆ,ಹಿಂದೆ ಸೈನಿಕರು ಅಟ್ಟಿಸಿಕೊಂಡು ಬರುತ್ತಾ ಇರೋದು ನೋಡಿ,ಮುಖ್ಯ ದ್ವಾರದಿಂದ,ಆಥೆನಾ ಎಂಬ ಅವರ ಪವಿತ್ರ ದೇವಸ್ಥಾನದ ಒಳಗೆ ನುಗ್ಗಿ...
ಒಳಗೆ ಕದ್ದು ಕುಳಿತು ಬಿಡುತ್ತಾರೆ..ಜೀವ ಉಳಿಸಿಕೊಳ್ಳೋಕೆ..
ಸೈನಿಕರು ತಮ್ಮ ಆಯುಧಗಳ ಸಮೇತ, ಅಥೆನಾ ಟೆಂಪಲ್ ಒಳಗಡೆ ನುಗ್ಗುವುದಿಲ್ಲ,ಅದು ಪವಿತ್ರ ಸ್ಥಳ,ರಾಜನೂ ಅದಕ್ಕೆ ಅನುಮತಿ ಕೊಡುವುದಿಲ್ಲ ಎಂಬ ಗ್ಯಾರಂಟಿ ಅವನಿಗೆ ಇತ್ತು..!
ಅವನ ಯೋಜನೆ,ಯೋಚನೆ ಸರಿ ಇತ್ತು..
ರಾಜ ಅಥೆನಾ ಒಳಗೆ ಯಾರೂ ಹೋಗಬಾರದು,ಅಲ್ಲೇ ಹೊರಗೆ ಪೊಸಾನಿಸ್ ಗೆ ಕಾಯಬೇಕು ಎಂದು ಆಜ್ಞೆ ಹೊರಡಿಸಿ ಬಿಡ್ತಾರೆ..
ಸೈನಿಕರು,ರಾಜನ ಅಣತಿಯಂತೆ ಅಥೆನಾ ದೇವಸ್ಥಾನದ ಸುತ್ತ 24/7 ಕಾವಲು ಕಾಯುತ್ತಾ ನಿಂತು ಬಿಡ್ತಾರೆ...
ಒಳಗೆ ಇರುವ ಪೊಸಾನಿಯಸ್ ಹೊರಗೆ ಯಾವುದೇ ರೀತಿಯಲ್ಲೂ ತಪ್ಪಿಸಿ ಕೊಳ್ಳದಂತೆ ನಾಖಾಬಂದಿ ಮಾಡಿರುತ್ತಾರೆ..
ಹಾಗೆ ಬಾಗಿಲಿಗೆ ಸಂಪೂರ್ಣ ಗೋಡೆ ಕಟ್ಟಿ ಮುಚ್ಚಿ ಬಿಡುತ್ತಾರೆ..
ಆದರೆ ಪೊಸಾನಿಯಸ್ಗೆ ಆದ ದೊಡ್ಡ ಸಮಸ್ಯೆ ಎಂದರೆ
ಒಳಗೆ ಆಹಾರ,ನೀರು ಇಲ್ಲ..!
ಎಷ್ಟು ದಿನ ಅಂತ ಒಳಗೆ ಉಪವಾಸ ಇರಲು ಸಾಧ್ಯ??!
ಆದರೂ
ಹೀಗೆ ಕೆಲವು ದಿನ ಉಪವಾಸವಿದ್ದು,ನಂತರ ದಿನೇದಿನೇ ನಿಶಕ್ತನಾಗಿ,ಕೃಶನಾಗಿ ಬಿಡುತ್ತಾನೆ..
ಇನ್ನೇನು ಕೊನೆ ಉಸಿರು ಇದೆ,ಯಾರ ಮೇಲೂ ದಾಳಿ ಮಾಡಲು ಶಕ್ತನಲ್ಲ ಎಂದು ದೂರದಿಂದ ಖಚಿತವಾದ ಮೇಲೆ,ನಿರಾಯುಧರಾದ ಕೆಲವರು ಅಥೆನಾ ದೇವಳದ ಒಳಗೆ ಹೋಗಿ..
ಅವನನ್ನ ಹೊರಗೆ ಎತ್ತಿ ಕೊಂಡು ತಂದು ಮಲಗಿಸುತ್ತಾರೆ..
ಅಥೆನಾ ದೇವಸ್ಥಾನದ ಒಳಗೆ ಮರಣ ಹೊಂದಿದರೆ,ದೇವಸ್ಥಾನ ಅಪವಿತ್ರವಾಗುತ್ತೆ ಎನ್ನುವ ಕಾರಣಕ್ಕೆ...!
ಜೀವ ಒಳಗೆ ಹೋಗಬಾರದು ಎನ್ನುವುದೇ ಉದ್ದೇಶ..
ಆಗಿನ್ನೂ ಕೊನೆಯ ಕ್ಷಣ ಎಣಿಸುತ್ತಾ ಇದ್ದ ಪೊಸಾನಿಸ್
ಹೊರಗೆ ತಂದು ಸ್ವಲ್ಪ ಸಮಯಕ್ಕೆ ಕೊನೆ ಉಸಿರು ಎಳೆದು ಬಿಡ್ತಾರೆ..!
ಉಪವಾಸದಿಂದ ಹಸಿವು ತಡೆಯಲೂ ಆಗದೆ..ಹೊರಗೆ ಬರಲೂ ಆಗದೆ
ಸ್ಪಾರ್ಟಾನ್ ಜನರಲ್ ಪೊಸಾನಿಯಸ್ ತಮ್ಮ ಜೀವನ ಹೀಗೆ ಅಂತ್ಯ ಮಾಡಿಕೊಂಡರು..
ಎಷ್ಟೇ ದೊಡ್ಡ ವೀರ,ಶೂರ,ದೈರ್ಯವಂತ,ಶಕ್ತಿವಂತ,ವಾರಿಯರ್ ಆದರೂ..
ಹೊಟ್ಟೆ ಯಾರಪ್ಪನ ಮನೆದು..
ಊಟ,ನೀರು ಇಲ್ಲದೇ ಬದುಕಲು ಸಾಧ್ಯವೇ..
#ಅವಿವೇಕದ_ಸಾವು
ಕಥೆ_11
#stupid_death
(ಮೂಲ:-Horrible histories)
ಇವರ ಮೇಲೆ,ಪರ್ಷಿಯನ್ ಕಿಂಗ್ ಕ್ಸೆರಕಿ ವಿರುದ್ಧ ಜೊತೆಗೆ ಇದ್ದು ಕೊಂಡೆ,
ಗ್ರಿಕೋ-ಪರ್ಶಿಯನ್ ಯುದ್ಧದಲ್ಲಿ ಪಿತೂರಿ ಮಾಡಿದ್ದರು ಎಂಬ ರಾಜ ದ್ರೋಹದ ಆರೋಪ ಕೇಳಿ ಬರುತ್ತೆ....
ಅವರು ಸತ್ತದ್ದು ಹೇಗೆ ಗೊತ್ತಾ..
ಕೂಡಲೇ ಅವರನ್ನ ರಾಜದ್ರೋಹದ ಆಧಾರದ ಮೇಲೆ ಬಂಧಿಸಲು ರಾಜಾಜ್ಞೆ ಬರುತ್ತೆ..
ಸಂಬಂಧ ಪಟ್ಟ ಮುಖ್ಯಸ್ಥರು ಅವರನ್ನ ಹಿಡಿಯಲು ಯೋಜನೆ ಮಾಡಿ,
ಅವರನ್ನ ಬೀದಿಯಲ್ಲಿ ಹಿಡಿಯಬೇಕು ಅಂತ ತಯಾರು ಆಗಿ,ಸೈನಿಕರು ಕಾಯುತ್ತಾ ಇರುತ್ತಾರೆ..
ಈ ವಿಷಯ ಪೊಸಾನಿಯಸ್ ಗೆ ಹೇಗೋ ತಿಳಿದು,
ಕೂಡಲೇ ತಪ್ಪಿಸಿ ಕೊಂಡು ಓಡಲು ಪ್ರಯತ್ನ ಮಾಡುತ್ತಾನೆ..
ಹಾಗೆ ಓಡುತ್ತಾ ಓಡುತ್ತಾ...
ಟೆಂಪಲ್ ಆಪ್ ಅಥೆನಾದ ಹತ್ತಿರ ಹೋಗಿ ಬಿಡುತ್ತಾನೆ,ಹಿಂದೆ ಸೈನಿಕರು ಅಟ್ಟಿಸಿಕೊಂಡು ಬರುತ್ತಾ ಇರೋದು ನೋಡಿ,ಮುಖ್ಯ ದ್ವಾರದಿಂದ,ಆಥೆನಾ ಎಂಬ ಅವರ ಪವಿತ್ರ ದೇವಸ್ಥಾನದ ಒಳಗೆ ನುಗ್ಗಿ...
ಒಳಗೆ ಕದ್ದು ಕುಳಿತು ಬಿಡುತ್ತಾರೆ..ಜೀವ ಉಳಿಸಿಕೊಳ್ಳೋಕೆ..
ಸೈನಿಕರು ತಮ್ಮ ಆಯುಧಗಳ ಸಮೇತ, ಅಥೆನಾ ಟೆಂಪಲ್ ಒಳಗಡೆ ನುಗ್ಗುವುದಿಲ್ಲ,ಅದು ಪವಿತ್ರ ಸ್ಥಳ,ರಾಜನೂ ಅದಕ್ಕೆ ಅನುಮತಿ ಕೊಡುವುದಿಲ್ಲ ಎಂಬ ಗ್ಯಾರಂಟಿ ಅವನಿಗೆ ಇತ್ತು..!
ಅವನ ಯೋಜನೆ,ಯೋಚನೆ ಸರಿ ಇತ್ತು..
ರಾಜ ಅಥೆನಾ ಒಳಗೆ ಯಾರೂ ಹೋಗಬಾರದು,ಅಲ್ಲೇ ಹೊರಗೆ ಪೊಸಾನಿಸ್ ಗೆ ಕಾಯಬೇಕು ಎಂದು ಆಜ್ಞೆ ಹೊರಡಿಸಿ ಬಿಡ್ತಾರೆ..
ಸೈನಿಕರು,ರಾಜನ ಅಣತಿಯಂತೆ ಅಥೆನಾ ದೇವಸ್ಥಾನದ ಸುತ್ತ 24/7 ಕಾವಲು ಕಾಯುತ್ತಾ ನಿಂತು ಬಿಡ್ತಾರೆ...
ಒಳಗೆ ಇರುವ ಪೊಸಾನಿಯಸ್ ಹೊರಗೆ ಯಾವುದೇ ರೀತಿಯಲ್ಲೂ ತಪ್ಪಿಸಿ ಕೊಳ್ಳದಂತೆ ನಾಖಾಬಂದಿ ಮಾಡಿರುತ್ತಾರೆ..
ಹಾಗೆ ಬಾಗಿಲಿಗೆ ಸಂಪೂರ್ಣ ಗೋಡೆ ಕಟ್ಟಿ ಮುಚ್ಚಿ ಬಿಡುತ್ತಾರೆ..
ಆದರೆ ಪೊಸಾನಿಯಸ್ಗೆ ಆದ ದೊಡ್ಡ ಸಮಸ್ಯೆ ಎಂದರೆ
ಒಳಗೆ ಆಹಾರ,ನೀರು ಇಲ್ಲ..!
ಎಷ್ಟು ದಿನ ಅಂತ ಒಳಗೆ ಉಪವಾಸ ಇರಲು ಸಾಧ್ಯ??!
ಆದರೂ
ಹೀಗೆ ಕೆಲವು ದಿನ ಉಪವಾಸವಿದ್ದು,ನಂತರ ದಿನೇದಿನೇ ನಿಶಕ್ತನಾಗಿ,ಕೃಶನಾಗಿ ಬಿಡುತ್ತಾನೆ..
ಇನ್ನೇನು ಕೊನೆ ಉಸಿರು ಇದೆ,ಯಾರ ಮೇಲೂ ದಾಳಿ ಮಾಡಲು ಶಕ್ತನಲ್ಲ ಎಂದು ದೂರದಿಂದ ಖಚಿತವಾದ ಮೇಲೆ,ನಿರಾಯುಧರಾದ ಕೆಲವರು ಅಥೆನಾ ದೇವಳದ ಒಳಗೆ ಹೋಗಿ..
ಅವನನ್ನ ಹೊರಗೆ ಎತ್ತಿ ಕೊಂಡು ತಂದು ಮಲಗಿಸುತ್ತಾರೆ..
ಅಥೆನಾ ದೇವಸ್ಥಾನದ ಒಳಗೆ ಮರಣ ಹೊಂದಿದರೆ,ದೇವಸ್ಥಾನ ಅಪವಿತ್ರವಾಗುತ್ತೆ ಎನ್ನುವ ಕಾರಣಕ್ಕೆ...!
ಜೀವ ಒಳಗೆ ಹೋಗಬಾರದು ಎನ್ನುವುದೇ ಉದ್ದೇಶ..
ಆಗಿನ್ನೂ ಕೊನೆಯ ಕ್ಷಣ ಎಣಿಸುತ್ತಾ ಇದ್ದ ಪೊಸಾನಿಸ್
ಹೊರಗೆ ತಂದು ಸ್ವಲ್ಪ ಸಮಯಕ್ಕೆ ಕೊನೆ ಉಸಿರು ಎಳೆದು ಬಿಡ್ತಾರೆ..!
ಉಪವಾಸದಿಂದ ಹಸಿವು ತಡೆಯಲೂ ಆಗದೆ..ಹೊರಗೆ ಬರಲೂ ಆಗದೆ
ಸ್ಪಾರ್ಟಾನ್ ಜನರಲ್ ಪೊಸಾನಿಯಸ್ ತಮ್ಮ ಜೀವನ ಹೀಗೆ ಅಂತ್ಯ ಮಾಡಿಕೊಂಡರು..
ಎಷ್ಟೇ ದೊಡ್ಡ ವೀರ,ಶೂರ,ದೈರ್ಯವಂತ,ಶಕ್ತಿವಂತ,ವಾರಿಯರ್ ಆದರೂ..
ಹೊಟ್ಟೆ ಯಾರಪ್ಪನ ಮನೆದು..
ಊಟ,ನೀರು ಇಲ್ಲದೇ ಬದುಕಲು ಸಾಧ್ಯವೇ..
#ಅವಿವೇಕದ_ಸಾವು
ಕಥೆ_11
#stupid_death
(ಮೂಲ:-Horrible histories)
Hampri
ಹಂಪ್ರಿ ದ ಬಹೋನ್
ಎಂಬುವವರು 1341ನೇ ಇಸವಿಯಲ್ಲಿ ನಾರ್ತ್ ಆ0ಪ್ಟನ್ ನ,ಹೇರ್ ಫೋರ್ಡ್ ನಲ್ಲಿ ಹುಟ್ಟಿ ಬೆಳೆದವರು..
ಇವರು ಪ್ರಭಲ ಆಂಗ್ಲೋ ನಾರ್ಮನ್ ಕುಟುಂಬಕ್ಕೆ ಸೇರಿದವರು ಹಾಗೂ ಇಂಗ್ಲೆಂಡ್ ನ ರಾಜ ಎಡ್ವರ್ಡ್-2 ಎದುರು ಭಂಡಾಯ ಪಡೇ ಕಟ್ಟಿ ಅವರ ವಿರುದ್ಧ ಸಮರ ಸಾರಿದವರು...
ಹಂಪ್ರಿ ತನ್ನ ಸಣ್ಣ ಸೈನ್ಯವನ್ನ ಒಗ್ಗೂಡಿಸಿ ಕೊಂಡು ಎಡ್ವರ್ಡ್ ಮೇಲೆ ಧಾಳಿ ಮಾಡಲು ಸಜ್ಜಾಗಿ ಒಮ್ಮೆ ಹೊರಟು ಬಿಡುತ್ತಾರೆ..
ಎಡ್ವರ್ಡ್-2 ಬಲಿಷ್ಠ ಸೇನೆಯನ್ನೇ ಹೊಂದಿರುತ್ತಾನೆ..
ಎಷ್ಟು ಅಂದರೂ ರಾಜನಲ್ಲವೇ?!
ಭಂಡಾಯ ಪಡೆ ಇನ್ನೆಷ್ಟು ಬಲಿಷ್ಟವಿರಲು ಸಾಧ್ಯ..!? ಎಷ್ಟು ರೀತಿ ಯುದ್ಧ ಪಟ್ಟುಗಳನ್ನ,ಹಾಕಲು ಸಾಧ್ಯ...
ಆದರೂ ಹಂಪ್ರಿ ತನ್ನ ಸೈನ್ಯದೊಂದಿಗೆ ವೀರಾವೇಶದಿಂದ ಬಹಳ ಉಮೇದಿನಿಂದ ಬಂದು ಯಾರ್ಕ್ ಶೈರ್ ಬಳಿಯ,ಬರೋ ಬ್ರಿಡ್ಜ್ ಎಂಬ ಮರದ ಸೇತುವೆ ಬಳಿ ಎಡ್ವರ್ಡ್ ಸೇನೆಯ ಮೇಲೆ ಮುಗಿಬಿದ್ದು ಸೇತುವೆಯ ಮೇಲೆ ನಿಂತು ಎದುರಾಳಿಗಳ ಜೊತೆ ಸೆಣಸುತ್ತಾ ಇರುತ್ತಾನೆ,
ಆದರೆ
ಎಡ್ವರ್ಡ್ ಸೈನ್ಯದ ಒಬ್ಬ ಸೈನಿಕ ಒಬ್ಬ ಮರದ ಸೇತುವೆ ಕೆಳಗೆ ಹೊಂಚು ಹಾಕಿ ಮೊದಲೇ ಕುಳಿತು..
ಹಂಪ್ರಿ ಅವನಿದ್ದ ಸ್ಥಳಕ್ಕೆ ಬಂದ ಕೂಡಲೇ ಸರಿಯಾದ ಜಾಗ ನೋಡಿ ಗುರಿ ಇಟ್ಟು ಕೆಳಗಿನಿಂದ ಈಟಿ ಚುಚ್ಚಿ ಬಿಡುತ್ತಾನೆ..
ಹಂಪ್ರಿ ಹಠಾತ್ ಅಗಬಾರದ ಜಾಗಕ್ಕೆ ಆದ ಧಾಳಿ ಕುಸಿದು ಬಿದ್ದು ಅಲ್ಲೇ ಮರಣ ಹೊಂದುತ್ತಾನೆ..!
ಹಂಪ್ರಿ ಎದುರು,ಅಕ್ಕ,ಪಕ್ಕ,ಹಿಂದೆ ಇದ್ದವರ ಜೊತೆ ವೀರಾವೇಶದಲ್ಲಿ ಹೋರಾಡುತ್ತಾ ಇರುವ ಭರದಲ್ಲಿ, ಕೆಳಗೆ ಈಟಿ ಹಿಡಿದು ಕಾಯುತ್ತಾ ಕೂತಿದ್ದ ಸೈನಿಕ ರೂಪದ ಜವರಾಯನನ್ನ ಗಮನಿಸದೇ..
ತಾನು ನಿರೀಕ್ಷಿಸದ ಜಾಗದಲ್ಲಿ ಚುಚ್ಚಿಸಿ ಕೊಂಡು ಬಹಳ ಸರಳವಾಗಿ ಸತ್ತರು
ಹಂಪ್ರಿ ...
ಸಾವು ಎಲ್ಲಿಲ್ಲಿ...
ಯಾವ ಯಾವ ರೂಪದಲ್ಲಿ..
ಯಾವ ಯಾವ ಜಾಗದಲ್ಲಿ..
ಹೇಗೇಗೆ ಬರುತ್ತೋ...
ತಲೆಯಿಂದ ಬುಡದವರೆಗೂ ಜಾಗ್ರತೆಯಿಂದ ನೋಡುತ್ತಾ ಇರಬೇಕು ಅಲ್ವಾ..
😂
#ಅವಿವೇಕದ_ಸಾವು
ಕಥೆ_12
#stupid_death
(ಮೂಲ:-Horrible histories)
ಎಂಬುವವರು 1341ನೇ ಇಸವಿಯಲ್ಲಿ ನಾರ್ತ್ ಆ0ಪ್ಟನ್ ನ,ಹೇರ್ ಫೋರ್ಡ್ ನಲ್ಲಿ ಹುಟ್ಟಿ ಬೆಳೆದವರು..
ಇವರು ಪ್ರಭಲ ಆಂಗ್ಲೋ ನಾರ್ಮನ್ ಕುಟುಂಬಕ್ಕೆ ಸೇರಿದವರು ಹಾಗೂ ಇಂಗ್ಲೆಂಡ್ ನ ರಾಜ ಎಡ್ವರ್ಡ್-2 ಎದುರು ಭಂಡಾಯ ಪಡೇ ಕಟ್ಟಿ ಅವರ ವಿರುದ್ಧ ಸಮರ ಸಾರಿದವರು...
ಹಂಪ್ರಿ ತನ್ನ ಸಣ್ಣ ಸೈನ್ಯವನ್ನ ಒಗ್ಗೂಡಿಸಿ ಕೊಂಡು ಎಡ್ವರ್ಡ್ ಮೇಲೆ ಧಾಳಿ ಮಾಡಲು ಸಜ್ಜಾಗಿ ಒಮ್ಮೆ ಹೊರಟು ಬಿಡುತ್ತಾರೆ..
ಎಡ್ವರ್ಡ್-2 ಬಲಿಷ್ಠ ಸೇನೆಯನ್ನೇ ಹೊಂದಿರುತ್ತಾನೆ..
ಎಷ್ಟು ಅಂದರೂ ರಾಜನಲ್ಲವೇ?!
ಭಂಡಾಯ ಪಡೆ ಇನ್ನೆಷ್ಟು ಬಲಿಷ್ಟವಿರಲು ಸಾಧ್ಯ..!? ಎಷ್ಟು ರೀತಿ ಯುದ್ಧ ಪಟ್ಟುಗಳನ್ನ,ಹಾಕಲು ಸಾಧ್ಯ...
ಆದರೂ ಹಂಪ್ರಿ ತನ್ನ ಸೈನ್ಯದೊಂದಿಗೆ ವೀರಾವೇಶದಿಂದ ಬಹಳ ಉಮೇದಿನಿಂದ ಬಂದು ಯಾರ್ಕ್ ಶೈರ್ ಬಳಿಯ,ಬರೋ ಬ್ರಿಡ್ಜ್ ಎಂಬ ಮರದ ಸೇತುವೆ ಬಳಿ ಎಡ್ವರ್ಡ್ ಸೇನೆಯ ಮೇಲೆ ಮುಗಿಬಿದ್ದು ಸೇತುವೆಯ ಮೇಲೆ ನಿಂತು ಎದುರಾಳಿಗಳ ಜೊತೆ ಸೆಣಸುತ್ತಾ ಇರುತ್ತಾನೆ,
ಆದರೆ
ಎಡ್ವರ್ಡ್ ಸೈನ್ಯದ ಒಬ್ಬ ಸೈನಿಕ ಒಬ್ಬ ಮರದ ಸೇತುವೆ ಕೆಳಗೆ ಹೊಂಚು ಹಾಕಿ ಮೊದಲೇ ಕುಳಿತು..
ಹಂಪ್ರಿ ಅವನಿದ್ದ ಸ್ಥಳಕ್ಕೆ ಬಂದ ಕೂಡಲೇ ಸರಿಯಾದ ಜಾಗ ನೋಡಿ ಗುರಿ ಇಟ್ಟು ಕೆಳಗಿನಿಂದ ಈಟಿ ಚುಚ್ಚಿ ಬಿಡುತ್ತಾನೆ..
ಹಂಪ್ರಿ ಹಠಾತ್ ಅಗಬಾರದ ಜಾಗಕ್ಕೆ ಆದ ಧಾಳಿ ಕುಸಿದು ಬಿದ್ದು ಅಲ್ಲೇ ಮರಣ ಹೊಂದುತ್ತಾನೆ..!
ಹಂಪ್ರಿ ಎದುರು,ಅಕ್ಕ,ಪಕ್ಕ,ಹಿಂದೆ ಇದ್ದವರ ಜೊತೆ ವೀರಾವೇಶದಲ್ಲಿ ಹೋರಾಡುತ್ತಾ ಇರುವ ಭರದಲ್ಲಿ, ಕೆಳಗೆ ಈಟಿ ಹಿಡಿದು ಕಾಯುತ್ತಾ ಕೂತಿದ್ದ ಸೈನಿಕ ರೂಪದ ಜವರಾಯನನ್ನ ಗಮನಿಸದೇ..
ತಾನು ನಿರೀಕ್ಷಿಸದ ಜಾಗದಲ್ಲಿ ಚುಚ್ಚಿಸಿ ಕೊಂಡು ಬಹಳ ಸರಳವಾಗಿ ಸತ್ತರು
ಹಂಪ್ರಿ ...
ಸಾವು ಎಲ್ಲಿಲ್ಲಿ...
ಯಾವ ಯಾವ ರೂಪದಲ್ಲಿ..
ಯಾವ ಯಾವ ಜಾಗದಲ್ಲಿ..
ಹೇಗೇಗೆ ಬರುತ್ತೋ...
ತಲೆಯಿಂದ ಬುಡದವರೆಗೂ ಜಾಗ್ರತೆಯಿಂದ ನೋಡುತ್ತಾ ಇರಬೇಕು ಅಲ್ವಾ..
😂
#ಅವಿವೇಕದ_ಸಾವು
ಕಥೆ_12
#stupid_death
(ಮೂಲ:-Horrible histories)
ಹಲ್ಲಿನಿಂದ ಸಾವು
875-892 ರಲ್ಲಿ ಸಿಗರ್ಡ್ ಐನ್ಸ್ಟಿನ್ಸನ್ ಎಂಬ ಅರ್ಲೆಂಡ್ ಅಪ್ ಆರ್ಕಿ (ಈಗಿನ ಉತ್ತರ ಸ್ಕಾಟ್ಲೆಂಡ್ ನ)ಸಣ್ಣ ಪ್ರದೇಶದ ನಾಯಕರಾಗಿದ್ದರು,
ಅದೇ ಉತ್ತರ ಸ್ಕಾಟ್ಲೆಂಡ್ ನಲ್ಲಿ ಮುರ್ರೆ ಎಂಬ ಒಂದು ಜಾಗದಲ್ಲಿನ,ಪಿಕ್ಟ್ಸ್ ಜನಾಂಗದ ವರಿಷ್ಠ ನಾಯಕ ಮಯಲ್ ಬ್ರೈಟ್ ಎಂಬುವವರು ತಮ್ಮ ಜನಾ0ಗದ ಜೀವನ ಸಾಗಿಸುತ್ತಾ ಇದ್ದರು,
ಒಮ್ಮೆ ಸಿಗರ್ಡ್,ಈ ಮೂರೇ ಎಂಬ ಜನಾ0ಗದ ಜಾಗವನ್ನ ವಶ ಮಾಡಿಸಿ ಕೊಳ್ಳಲು ನಿರ್ಧರಿಸಿ,ಆ ಪ್ರದೇಶಕ್ಕೆ ತನ್ನ ಸೈನ್ಯದೊಂದಿಗೆ ದಂಡೆತ್ತಿ ಹೋಗಲು ನಿರ್ದಾರ ಮಾಡಿದರು,
ನಿರ್ಧರಿಸಿದಂತೆ ದಂಡೆತ್ತಿ ಹೋಗಿ,ವೀರಾವೇಶದಿಂದ ಹೋರಾಟ ಮಾಡಿದ ಸಿಗರ್ಡ್,ಸಂಪೂರ್ಣ ಮುರ್ರೆ ಜಾಗ ಹಾಗೂ ಪಿಕ್ಟ್ಸ್ ಜನಾಂಗದ ಮೇಲೆ ಹಿಡಿತ ಸಾಧಿಸಿ..
ಕೊನೆಗೆ
ಅವರ ನಾಯಕ,ಮಯಿಲ್ ಬ್ರೈಟ್ ನ ತಲೆಯನ್ನ ಕಡಿದು,
ವಿಜಯದ ಸಂಕೇತವಾಗಿ ಪ್ರಶಸ್ತಿಗಳಿಸಿ,ಟ್ರೋಫಿ ಯನ್ನ ಎತ್ತಿ ತರುವಂತೆ,
ತನ್ನ ಪ್ರದೇಶದ ಜನಕ್ಕೆ ತೋರಿಸಲು
ಆ ಕಡಿದ ಮುಂಡವನ್ನ ಹಿಡಿದು ಕೊಂಡು ಕುದುರೆ ಹತ್ತಿ ತನ್ನ ಊರಿನ ಕಡೆಗೆ ಹೊರಟನಂತೆ..!?
ಅದ್ರಲ್ಲೇನು ವಿಶೇಷ ಅಂತೀರಾ?
ಇದರಲ್ಲಿ ಒಂದು ಟ್ವಿಸ್ಟ್ ನೋಡಿ..
ಯುದ್ಧ ಗೆದ್ದು,ಕುದುರೆ ಹತ್ತಿದ ಸಿಗರ್ಡ್,ತಾನು ಕಡಿದ ವೈರಿಯ ತಲೆಯನ್ನ,ತನ್ನ ಹಿಂದೆ ಕಾಲು ಬುಡದಲ್ಲಿ ಕಟ್ಟಿ ನೇತು ಹಾಕಿಕೊಂಡು ವೇಗವಾಗಿ ಖುಷಿಯಿಂದ ತನ್ನ ಪ್ರದೇಶಕ್ಕೆ ಬಂದು ಇಳಿದಿದ್ದಾರೆ..
ತಾನು ಧಾಳಿ ಮಾಡಿ,ಗೆದ್ದ ಸಂಭ್ರಮ ಆಚರಣೆ ಎಲ್ಲಾ ಮುಗಿದು ತನ್ನ ಆಡಳಿತದ ಬಗ್ಗೆ ಗಮನ ಹರಿಸುತ್ತಾ ಇದ್ದ ಈತನಿಗೆ,ಒಂದು ಆಘಾತ ಕಾದಿತ್ತು,!
ಯುದ್ಧ ಗೆದ್ದು,ಕುದುರೆ ಓಡಿಸಿಕೊಂಡು ಬರುತ್ತಾ ಇರುವಾಗ,ಹಿಂದೆ ಕಟ್ಟಿದ್ದ ಮಯಲ್ ಬ್ರೈಟ್ ನ ಹಲ್ಲು ಕಾಲಿಗೆ ತಾಗಿ ಗಾಯವಾಗಿತ್ತು,ಅದು ಸ್ವಲ್ಪ ದಿನಕ್ಕೆ ಸೆಪ್ಟಿಕ್ ಆಗಿ ಬಿಟ್ಟಿತ್ತು,
ಅದೇ ಉಲ್ಬಣವಾಗಿ ಗ್ಯಾಂಗ್ರೀನ್ ಜಾಸ್ತಿಯಾಗಿ ಮರಣ ಹೊಂದಿದರು ಈ ಸಿಗರ್ಡ್..!
ವೈರಿಯನ್ನ ಸಾಯಿಸಿ ತಲೆ ಕಡಿದರೂ,ವೈರಿಯ ಹಲ್ಲು ಛಲ ಬಿಡದೇ ತನ್ನ ಹೋರಾಟ ಮುಂದುವರೆಸಿ ಸೇಡು ತೀರಿಸಿ ಕೊಂಡೇ ಬಿಡ್ತು ನೋಡಿ..
ಕಡಿದ ತಲೆಯಲ್ಲಿ ಇದ್ದ ಅವನ ತುರೆ ಮಣೆ ಹಲ್ಲಿನಿಂದ,ಅಂತಹಾ ದೊಡ್ಡ ಶೂರ,ಗೆಲವಿನ ಸರದಾರನ,ಸಾವು ಆಯ್ತು ಅಂದ್ರೆ ಮರ್ಯಾದೆ ಪ್ರಶ್ನೆ ಅಲ್ವಾ ಮರ್ರೆ..
ಥೋ...
#ಅವಿವೇಕದ_ಸಾವು
ಕಥೆ_05
#stupid_death
(ಮೂಲ:-Horrible histories)
ಅದೇ ಉತ್ತರ ಸ್ಕಾಟ್ಲೆಂಡ್ ನಲ್ಲಿ ಮುರ್ರೆ ಎಂಬ ಒಂದು ಜಾಗದಲ್ಲಿನ,ಪಿಕ್ಟ್ಸ್ ಜನಾಂಗದ ವರಿಷ್ಠ ನಾಯಕ ಮಯಲ್ ಬ್ರೈಟ್ ಎಂಬುವವರು ತಮ್ಮ ಜನಾ0ಗದ ಜೀವನ ಸಾಗಿಸುತ್ತಾ ಇದ್ದರು,
ಒಮ್ಮೆ ಸಿಗರ್ಡ್,ಈ ಮೂರೇ ಎಂಬ ಜನಾ0ಗದ ಜಾಗವನ್ನ ವಶ ಮಾಡಿಸಿ ಕೊಳ್ಳಲು ನಿರ್ಧರಿಸಿ,ಆ ಪ್ರದೇಶಕ್ಕೆ ತನ್ನ ಸೈನ್ಯದೊಂದಿಗೆ ದಂಡೆತ್ತಿ ಹೋಗಲು ನಿರ್ದಾರ ಮಾಡಿದರು,
ನಿರ್ಧರಿಸಿದಂತೆ ದಂಡೆತ್ತಿ ಹೋಗಿ,ವೀರಾವೇಶದಿಂದ ಹೋರಾಟ ಮಾಡಿದ ಸಿಗರ್ಡ್,ಸಂಪೂರ್ಣ ಮುರ್ರೆ ಜಾಗ ಹಾಗೂ ಪಿಕ್ಟ್ಸ್ ಜನಾಂಗದ ಮೇಲೆ ಹಿಡಿತ ಸಾಧಿಸಿ..
ಕೊನೆಗೆ
ಅವರ ನಾಯಕ,ಮಯಿಲ್ ಬ್ರೈಟ್ ನ ತಲೆಯನ್ನ ಕಡಿದು,
ವಿಜಯದ ಸಂಕೇತವಾಗಿ ಪ್ರಶಸ್ತಿಗಳಿಸಿ,ಟ್ರೋಫಿ ಯನ್ನ ಎತ್ತಿ ತರುವಂತೆ,
ತನ್ನ ಪ್ರದೇಶದ ಜನಕ್ಕೆ ತೋರಿಸಲು
ಆ ಕಡಿದ ಮುಂಡವನ್ನ ಹಿಡಿದು ಕೊಂಡು ಕುದುರೆ ಹತ್ತಿ ತನ್ನ ಊರಿನ ಕಡೆಗೆ ಹೊರಟನಂತೆ..!?
ಅದ್ರಲ್ಲೇನು ವಿಶೇಷ ಅಂತೀರಾ?
ಇದರಲ್ಲಿ ಒಂದು ಟ್ವಿಸ್ಟ್ ನೋಡಿ..
ಯುದ್ಧ ಗೆದ್ದು,ಕುದುರೆ ಹತ್ತಿದ ಸಿಗರ್ಡ್,ತಾನು ಕಡಿದ ವೈರಿಯ ತಲೆಯನ್ನ,ತನ್ನ ಹಿಂದೆ ಕಾಲು ಬುಡದಲ್ಲಿ ಕಟ್ಟಿ ನೇತು ಹಾಕಿಕೊಂಡು ವೇಗವಾಗಿ ಖುಷಿಯಿಂದ ತನ್ನ ಪ್ರದೇಶಕ್ಕೆ ಬಂದು ಇಳಿದಿದ್ದಾರೆ..
ತಾನು ಧಾಳಿ ಮಾಡಿ,ಗೆದ್ದ ಸಂಭ್ರಮ ಆಚರಣೆ ಎಲ್ಲಾ ಮುಗಿದು ತನ್ನ ಆಡಳಿತದ ಬಗ್ಗೆ ಗಮನ ಹರಿಸುತ್ತಾ ಇದ್ದ ಈತನಿಗೆ,ಒಂದು ಆಘಾತ ಕಾದಿತ್ತು,!
ಯುದ್ಧ ಗೆದ್ದು,ಕುದುರೆ ಓಡಿಸಿಕೊಂಡು ಬರುತ್ತಾ ಇರುವಾಗ,ಹಿಂದೆ ಕಟ್ಟಿದ್ದ ಮಯಲ್ ಬ್ರೈಟ್ ನ ಹಲ್ಲು ಕಾಲಿಗೆ ತಾಗಿ ಗಾಯವಾಗಿತ್ತು,ಅದು ಸ್ವಲ್ಪ ದಿನಕ್ಕೆ ಸೆಪ್ಟಿಕ್ ಆಗಿ ಬಿಟ್ಟಿತ್ತು,
ಅದೇ ಉಲ್ಬಣವಾಗಿ ಗ್ಯಾಂಗ್ರೀನ್ ಜಾಸ್ತಿಯಾಗಿ ಮರಣ ಹೊಂದಿದರು ಈ ಸಿಗರ್ಡ್..!
ವೈರಿಯನ್ನ ಸಾಯಿಸಿ ತಲೆ ಕಡಿದರೂ,ವೈರಿಯ ಹಲ್ಲು ಛಲ ಬಿಡದೇ ತನ್ನ ಹೋರಾಟ ಮುಂದುವರೆಸಿ ಸೇಡು ತೀರಿಸಿ ಕೊಂಡೇ ಬಿಡ್ತು ನೋಡಿ..
ಕಡಿದ ತಲೆಯಲ್ಲಿ ಇದ್ದ ಅವನ ತುರೆ ಮಣೆ ಹಲ್ಲಿನಿಂದ,ಅಂತಹಾ ದೊಡ್ಡ ಶೂರ,ಗೆಲವಿನ ಸರದಾರನ,ಸಾವು ಆಯ್ತು ಅಂದ್ರೆ ಮರ್ಯಾದೆ ಪ್ರಶ್ನೆ ಅಲ್ವಾ ಮರ್ರೆ..
ಥೋ...
#ಅವಿವೇಕದ_ಸಾವು
ಕಥೆ_05
#stupid_death
(ಮೂಲ:-Horrible histories)
ಅಲ್ಡಬ್ರಾ ದೈತ್ಯ ಆಮೆ
ಆಮೆ..
ಆಮೆ ಎಂದ ತಕ್ಷಣ ನಮಗೆ ನೆನಪಾಗೋದು..
ಆಮೆ ಮೊಲದ ಓಟದ ಸ್ಪರ್ಧೆ..
Slow and study wins race ಅನ್ನೋ ಮಾತು ಅಲ್ವಾ..
ಅಲ್ಡಬ್ರಾ ದೈತ್ಯ ಆಮೆ (Aldabra Giant Tortoise)ಜಗತ್ತಿನ ಅತಿ ದೊಡ್ಡ ಆಮೆಗಳು ಎಂದು ಖ್ಯಾತಿ ಪಡೆದಿವೆ..
ಇವು ಅಲ್ಡಬ್ರಾ ದ್ವೀಪ ಗಳಲ್ಲಿ(Aldabra Island) ಸಿಕ್ಕಿದ್ದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ..
ಇವುಗಳು ಹಿಂದೂ ಮಹಾಸಾಗರದ(Indian Ocean) ಕೆಲವು ದ್ವೀಪಗಳಲ್ಲಿ ಹಾಗೂ ಮಡಗಾಸ್ಕರ್ ನಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ..
ಪಳೆಯುಳಿಕೆ ಮಾಹಿತಿಯ ಹಾಗೂ ದಾಖಲೆಯ ಪ್ರಕಾರ,ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕ ಕೆಲವು ಪ್ರದೇಶ,ಬಿಟ್ಟು ಹೆಚ್ಚಿನ ಖಂಡ ಹಾಗೂ ದ್ವೀಪಗಳಲ್ಲಿ ಇವುಗಳ ವಾಸದ ಕುರುಹು ಸಿಕ್ಕಿದೆಯಂತೆ..!
ಹಿಂದೂ ಮಹಾಸಾಗರದಲ್ಲಿನ ಹಲವು ವಿಶೇಷ ಜೀವಿಗಳು ಯುರೋಪಿನ ನಾವಿಕರ ನಿರಂತರ ಶೋಷಣೆಯಿಂದ ಹಾಗೂ ಸೆರೆ ಹಿಡಿಯೋದು,ಭೇಟೆ ಯಾಡೋದು ಮಾಡಿದ್ದರಿಂದ ಅಲ್ಡಬ್ರಾ ಆಮೆ ಯೊಂದನ್ನ,ಬಿಟ್ಟು ಹಲವು ಅಪರೂಪದ ಇನ್ನಿತರ ಕೆಲವು ಸಾಗರ ಜೀವಿಗಳು ಅಳಿವಿನಂಚಿಗೆ ಬಂದು ನಿಂತಿದ್ದವು ಎನ್ನಲಾಗಿದೆ..!
ಉದ್ದನೆಯ ಕತ್ತನ್ನ ಹೊಂದಿರುವ ಇವು,ಆಹಾರವನ್ನ ತಿನ್ನಲು ಸಹಾಯ ಮಾಡುತ್ತವಂತೆ,ದಪ್ಪನೆಯ ಕಾಲು ಹಾಗೂ ಉಗುರು,
ಸುಮಾರು 48 ಇಂಚು ಉದ್ದನೆಯ ಚಿಪ್ಪು ಹೊಂದಿರುವ ಇವು 250 ಕೆ.ಜಿಗೂ ಹೆಚ್ಚು ತೂಕ ವಿರುತ್ತವೆ..
ಹೆಣ್ಣು ಗಂಡಿಗಿಂತ ಗಾತ್ರದಲ್ಲಿ ಚಿಕ್ಕದಿರುತ್ತದೆ,
ಸುಮಾರು 36 ಇಂಚು ಉದ್ದನೆಯ ಚಿಪ್ಪು ಹೊಂದಿರುತ್ತದೇ,ತೂಕ 159 ಕೆ.ಜಿ ವರೆಗೆ ಇರುತ್ತದೆ,
ಸಾಮಾನ್ಯ ಗಾತ್ರದವು 70 ರಿಂದ 110 ಕೆ.ಜಿ ತೂಕ ವಿರುತ್ತವೆ..
ಫೆಬ್ರವರಿ ಮತ್ತೆ ಮೇ ತಿಂಗಳಲ್ಲಿ ಹೆಣ್ಣಾಮೆ 9 ರಿಂದ 25 ಮೊಟ್ಟೆಗಳನ್ನ ಇಡುತ್ತವೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮೊಟ್ಟೆ ಮರಿಯಾಗುತ್ತವೆ, 8 ತಿಂಗಳವರೆಗೆ ಕಾವು ಕೊಟ್ಟ ನಂತರ ಆಕ್ಟೊಬರ್ ನಿಂದ ಡಿಸೆಂಬರ್ ವರೆಗೆ ಮರಿಗಳು ಮೊಟ್ಟೆಒಡೆದು ಹೊರಬರುತ್ತವೆ..
ಈ ದೈತ್ಯ ಆಮೆಗಳು ಸಸ್ಯಾಹಾರಿಗಳು...
ಹುಲ್ಲು,ಎಲೆ,ಹಾಗೂ ಮರದ ತೊಗಟೆಯನ್ನ ತಿಂದು ಜೀವಿಸುತ್ತವಂತೆ..
ಆದರೆ
ಅಪರೂಪಕ್ಕೆ ಹುಳ ಹಾಗೂ ಪ್ರಾಣಿ ತಿನ್ನುವುದೂ ಇದೆಯಂತೆ!..
ಒಮ್ಮೊಮ್ಮೆ ಸತ್ತ ಬೇರೆಯ ಆಮೆಗಳ ದೇಹವನ್ನೂ ತಿನ್ನುವುದು ಇದೆ ಎನ್ನಲಾಗಿದೆ..!
ಬಹಳ ಸೋಮಾರಿಗಳಾದ ಇವುಗಳು ದಿನದಲ್ಲಿ ನಾಲ್ಕು ಗಂಟೆ ಮಾತ್ರ ಆಕ್ಟೀವ್ ಇರುತ್ತವೆ ಎನ್ನಲಾಗಿದೆ..
ಅಲ್ಡ್ರಬ್ರಾ ದೈತ್ಯ ಆಮೆ ಗಳು(Aldabra Giant Tortoise) ಹೆಚ್ಚಾಗಿ ಸಂಘಜೀವಿಗಳು ಗುಂಪಿನಲ್ಲಿ ಜೀವಿಸುತ್ತವೆ,ಹಗಲಿನಲ್ಲಿ ಆಹಾರ ಹುಡುಕುತ್ತಾ ಇರುತ್ತವೆ,ರಾತ್ರಿ ನಿದ್ರೆಗೆ ಜಾರುತ್ತವೆ..
ಹಗಲಿನಲ್ಲಿ ಶೆಖೆ ಹೆಚ್ಚಾದಾಗ ಕೆಸರು ಅಥವಾ ಕಂಪದಲ್ಲಿ ಹೊಂಡ ಮಾಡಿ ಕೂತು ದೇಹವನ್ನ ತಣ್ಣಗೆ ಮಾಡಿಕೊಳ್ಳುತ್ತವೆ..
ಹೆಚ್ಚಿನ ಅಲ್ಡ್ರಬ್ರಾ ಆಮೆ ಸಂಖ್ಯೆ ಹಿಂದೂ ಮಹಾಸಾಗರದ ಅಟೋಲ್ ಎಂಬ ದ್ವೀಪದಲ್ಲಿ ಇದೆಯಂತೆ ಅಲ್ಲಿಗೆ ಮನುಷ್ಯರ ಪ್ರವೇಶ ಇಲ್ಲದೆ ಇರೋದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ..!
1ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಈ ಪ್ರಭೇಧದ ಆಮೆ ಗಳು ಜೀವಿಸುತ್ತಾ ಇವೆಯಂತೆ..
ಇದು ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಒಂದೇ ಪ್ರಭೇಧದ ಪ್ರಾಣಿಗಳು ಒಂದೇ ಕಡೆ ವಾಸಿಸುವ ಪ್ರದೇಶ ಎನ್ನಲಾಗಿದೆ..!
ಒಂದು ಮೂಲದ ಪ್ರಕಾರ 200 ವರ್ಷ ಇವುಗಳ ಜೀವಿತಾವಧಿ ಎನ್ನಲಾಗಿದೆ..ಆದ್ರೆ ಅದನ್ನ ಇಂತಿಷ್ಟೇ ಅಂತ ಸರಿಯಾಗಿ ಎಲ್ಲೂ ದಾಖಲೆ ಇಟ್ಟಿಲ್ಲ..ಕಾರಣ ಮನುಷ್ಯ ಅಷ್ಟು ವರ್ಷ ಬದುಕಲ್ಲ ಅಲ್ವಾ...😁😂
ಅದರ ವಯಸ್ಸು ಲೆಕ್ಕ ಇಡೋಕೆ ಅವಕ್ಕೆ ಲೆಕ್ಕ ಬರಲ್ಲ..😂
ಮರಗಳ ರಿಂಗ್ ನೋಡಿ ವಯಸ್ಸು ಅವುಗಳ ನಿರ್ಧರಿಸಿದ ಹಾಗೆ ಇವುಗಳ ಚಿಪ್ಪಿನ ಮೇಲೆ ಇರುವ ರಿಂಗ್ ನೋಡಿ ಕೆಲವೊಮ್ಮೆ ನಿರ್ಧರಿಸುತ್ತಾರೆ ಎನ್ನಲಾಗಿದೆ..!
ಅದ್ವೈತ ಎಂಬ(Aldabra Giant Tortoise) ಆಮೆಯನ್ನ 18 ನೇ ಶತಮಾನದಲ್ಲಿ ಹಿಂದೂ ಮಹಾಸಾಗರದಲ್ಲಿನ ಸಿಚೆಲ್ ದ್ವೀಪದಲ್ಲಿ ಬ್ರಿಟಿಷ್ ನೌಕಾಪಡೆ ಹಿಡಿದು ತಂದು,ಈಸ್ಟ್ ಇಂಡಿಯಾ ಕಂಪನಿಯ ರಾಬರ್ಟ್ ಕ್ಲೈವ್ ಎಂಬುವ ಅಧಿಕಾರಿಗೆ ಕೊಡುಗೆ ನೀಡಿದ್ದರಂತೆ,ಆ ದೈತ್ಯ ಆಮೆಯನ್ನ ಅಂದಿನ ಕಲ್ಕತ್ತಾ (ಈಗಿನ ಕೋಲ್ಕೊತ್ತಾ)ಮೃಘಾಲಯದಲ್ಲಿ 1875ರಲ್ಲಿ ಇಡಲಾಗಿತ್ತಂತೆ..
ಅದ್ವೈತ 2006 ಮಾರ್ಚ್ ನಲ್ಲಿ ಮರಣ ಹೊಂದಿತ್ತು ಎನ್ನಲಾಗಿದೆ..
ಈ ಆಮೆ ಸುಮಾರು 255 ವರ್ಷ ಜೀವಿಸಿ
ಅತ್ಯಂತ ಹೆಚ್ಚು ವರ್ಷ ಜೀವಿಸಿದ ಆಮೆ ಎಂಬ ಹೆಗ್ಗಳಿಕೆ ಹೊಂದಿದೆ..(1755 ಹುಟ್ಟಿದ್ದು ಎನ್ನಲಾಗಿದೆ)
2016ರ ವರದಿಯ ಪ್ರಕಾರ ಸಿಚೆಲ್ ದೈತ್ಯ ಆಮೆ(Seychelles Giant Tortoise) 188 ವರ್ಷ ಬದುಕಿರುವ ಅತ್ಯಂತ ಹಿರಿಯ ಆಮೆ..ಜೋನಾಥನ್ ಅದರ ಹೆಸರು..
ಅಲ್ಡ್ರಬ್ರಾ ದೈತ್ಯ ಆಮೆ(Aldabra Giant Tortoise) ಅದ್ವೈತನ ನಂತರ 176 ವರ್ಷ ಬದುಕಿದ್ದದ್ದು ಹರಿಯತ್ ಎಂಬ ಆಮೆ ಎನ್ನಲಾಗಿದೆ..!
ಈ ಫೋಟೋ ಮತ್ತು ವೀಡಿಯೊ ತೆಗೆದದ್ದು ಬ್ಲಾಕ್ ಪೂಲ್ ಮೃಘಾಲಯದಲ್ಲಿ
ಇವನ ಹೆಸರು ಡಾರ್ವಿನ್ ವಯಸ್ಸು ಸುಮಾರು 100 ದಾಟಿದೆ ಎನ್ನಲಾಗಿದೆ..
ಇವನಿಗೆ ಮೆಲನ್ ಹಾಗೂ ತರಕಾರಿ ಬಹಳ ಇಷ್ಟವಂತೆ..
ಅವನ ಗಾತ್ರ ಹಾಗೂ ನಡಿಗೆಯ ವೇಗ ನೀವೇ ನೋಡಿ..
ಆಮೆ ಎಂದ ತಕ್ಷಣ ನಮಗೆ ನೆನಪಾಗೋದು..
ಆಮೆ ಮೊಲದ ಓಟದ ಸ್ಪರ್ಧೆ..
Slow and study wins race ಅನ್ನೋ ಮಾತು ಅಲ್ವಾ..
ಅಲ್ಡಬ್ರಾ ದೈತ್ಯ ಆಮೆ (Aldabra Giant Tortoise)ಜಗತ್ತಿನ ಅತಿ ದೊಡ್ಡ ಆಮೆಗಳು ಎಂದು ಖ್ಯಾತಿ ಪಡೆದಿವೆ..
ಇವು ಅಲ್ಡಬ್ರಾ ದ್ವೀಪ ಗಳಲ್ಲಿ(Aldabra Island) ಸಿಕ್ಕಿದ್ದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ..
ಇವುಗಳು ಹಿಂದೂ ಮಹಾಸಾಗರದ(Indian Ocean) ಕೆಲವು ದ್ವೀಪಗಳಲ್ಲಿ ಹಾಗೂ ಮಡಗಾಸ್ಕರ್ ನಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ..
ಪಳೆಯುಳಿಕೆ ಮಾಹಿತಿಯ ಹಾಗೂ ದಾಖಲೆಯ ಪ್ರಕಾರ,ಆಸ್ಟ್ರೇಲಿಯಾ ಹಾಗೂ ಅಂಟಾರ್ಟಿಕ ಕೆಲವು ಪ್ರದೇಶ,ಬಿಟ್ಟು ಹೆಚ್ಚಿನ ಖಂಡ ಹಾಗೂ ದ್ವೀಪಗಳಲ್ಲಿ ಇವುಗಳ ವಾಸದ ಕುರುಹು ಸಿಕ್ಕಿದೆಯಂತೆ..!
ಹಿಂದೂ ಮಹಾಸಾಗರದಲ್ಲಿನ ಹಲವು ವಿಶೇಷ ಜೀವಿಗಳು ಯುರೋಪಿನ ನಾವಿಕರ ನಿರಂತರ ಶೋಷಣೆಯಿಂದ ಹಾಗೂ ಸೆರೆ ಹಿಡಿಯೋದು,ಭೇಟೆ ಯಾಡೋದು ಮಾಡಿದ್ದರಿಂದ ಅಲ್ಡಬ್ರಾ ಆಮೆ ಯೊಂದನ್ನ,ಬಿಟ್ಟು ಹಲವು ಅಪರೂಪದ ಇನ್ನಿತರ ಕೆಲವು ಸಾಗರ ಜೀವಿಗಳು ಅಳಿವಿನಂಚಿಗೆ ಬಂದು ನಿಂತಿದ್ದವು ಎನ್ನಲಾಗಿದೆ..!
ಉದ್ದನೆಯ ಕತ್ತನ್ನ ಹೊಂದಿರುವ ಇವು,ಆಹಾರವನ್ನ ತಿನ್ನಲು ಸಹಾಯ ಮಾಡುತ್ತವಂತೆ,ದಪ್ಪನೆಯ ಕಾಲು ಹಾಗೂ ಉಗುರು,
ಸುಮಾರು 48 ಇಂಚು ಉದ್ದನೆಯ ಚಿಪ್ಪು ಹೊಂದಿರುವ ಇವು 250 ಕೆ.ಜಿಗೂ ಹೆಚ್ಚು ತೂಕ ವಿರುತ್ತವೆ..
ಹೆಣ್ಣು ಗಂಡಿಗಿಂತ ಗಾತ್ರದಲ್ಲಿ ಚಿಕ್ಕದಿರುತ್ತದೆ,
ಸುಮಾರು 36 ಇಂಚು ಉದ್ದನೆಯ ಚಿಪ್ಪು ಹೊಂದಿರುತ್ತದೇ,ತೂಕ 159 ಕೆ.ಜಿ ವರೆಗೆ ಇರುತ್ತದೆ,
ಸಾಮಾನ್ಯ ಗಾತ್ರದವು 70 ರಿಂದ 110 ಕೆ.ಜಿ ತೂಕ ವಿರುತ್ತವೆ..
ಫೆಬ್ರವರಿ ಮತ್ತೆ ಮೇ ತಿಂಗಳಲ್ಲಿ ಹೆಣ್ಣಾಮೆ 9 ರಿಂದ 25 ಮೊಟ್ಟೆಗಳನ್ನ ಇಡುತ್ತವೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮೊಟ್ಟೆ ಮರಿಯಾಗುತ್ತವೆ, 8 ತಿಂಗಳವರೆಗೆ ಕಾವು ಕೊಟ್ಟ ನಂತರ ಆಕ್ಟೊಬರ್ ನಿಂದ ಡಿಸೆಂಬರ್ ವರೆಗೆ ಮರಿಗಳು ಮೊಟ್ಟೆಒಡೆದು ಹೊರಬರುತ್ತವೆ..
ಈ ದೈತ್ಯ ಆಮೆಗಳು ಸಸ್ಯಾಹಾರಿಗಳು...
ಹುಲ್ಲು,ಎಲೆ,ಹಾಗೂ ಮರದ ತೊಗಟೆಯನ್ನ ತಿಂದು ಜೀವಿಸುತ್ತವಂತೆ..
ಆದರೆ
ಅಪರೂಪಕ್ಕೆ ಹುಳ ಹಾಗೂ ಪ್ರಾಣಿ ತಿನ್ನುವುದೂ ಇದೆಯಂತೆ!..
ಒಮ್ಮೊಮ್ಮೆ ಸತ್ತ ಬೇರೆಯ ಆಮೆಗಳ ದೇಹವನ್ನೂ ತಿನ್ನುವುದು ಇದೆ ಎನ್ನಲಾಗಿದೆ..!
ಬಹಳ ಸೋಮಾರಿಗಳಾದ ಇವುಗಳು ದಿನದಲ್ಲಿ ನಾಲ್ಕು ಗಂಟೆ ಮಾತ್ರ ಆಕ್ಟೀವ್ ಇರುತ್ತವೆ ಎನ್ನಲಾಗಿದೆ..
ಅಲ್ಡ್ರಬ್ರಾ ದೈತ್ಯ ಆಮೆ ಗಳು(Aldabra Giant Tortoise) ಹೆಚ್ಚಾಗಿ ಸಂಘಜೀವಿಗಳು ಗುಂಪಿನಲ್ಲಿ ಜೀವಿಸುತ್ತವೆ,ಹಗಲಿನಲ್ಲಿ ಆಹಾರ ಹುಡುಕುತ್ತಾ ಇರುತ್ತವೆ,ರಾತ್ರಿ ನಿದ್ರೆಗೆ ಜಾರುತ್ತವೆ..
ಹಗಲಿನಲ್ಲಿ ಶೆಖೆ ಹೆಚ್ಚಾದಾಗ ಕೆಸರು ಅಥವಾ ಕಂಪದಲ್ಲಿ ಹೊಂಡ ಮಾಡಿ ಕೂತು ದೇಹವನ್ನ ತಣ್ಣಗೆ ಮಾಡಿಕೊಳ್ಳುತ್ತವೆ..
ಹೆಚ್ಚಿನ ಅಲ್ಡ್ರಬ್ರಾ ಆಮೆ ಸಂಖ್ಯೆ ಹಿಂದೂ ಮಹಾಸಾಗರದ ಅಟೋಲ್ ಎಂಬ ದ್ವೀಪದಲ್ಲಿ ಇದೆಯಂತೆ ಅಲ್ಲಿಗೆ ಮನುಷ್ಯರ ಪ್ರವೇಶ ಇಲ್ಲದೆ ಇರೋದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ..!
1ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಈ ಪ್ರಭೇಧದ ಆಮೆ ಗಳು ಜೀವಿಸುತ್ತಾ ಇವೆಯಂತೆ..
ಇದು ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಒಂದೇ ಪ್ರಭೇಧದ ಪ್ರಾಣಿಗಳು ಒಂದೇ ಕಡೆ ವಾಸಿಸುವ ಪ್ರದೇಶ ಎನ್ನಲಾಗಿದೆ..!
ಒಂದು ಮೂಲದ ಪ್ರಕಾರ 200 ವರ್ಷ ಇವುಗಳ ಜೀವಿತಾವಧಿ ಎನ್ನಲಾಗಿದೆ..ಆದ್ರೆ ಅದನ್ನ ಇಂತಿಷ್ಟೇ ಅಂತ ಸರಿಯಾಗಿ ಎಲ್ಲೂ ದಾಖಲೆ ಇಟ್ಟಿಲ್ಲ..ಕಾರಣ ಮನುಷ್ಯ ಅಷ್ಟು ವರ್ಷ ಬದುಕಲ್ಲ ಅಲ್ವಾ...😁😂
ಅದರ ವಯಸ್ಸು ಲೆಕ್ಕ ಇಡೋಕೆ ಅವಕ್ಕೆ ಲೆಕ್ಕ ಬರಲ್ಲ..😂
ಮರಗಳ ರಿಂಗ್ ನೋಡಿ ವಯಸ್ಸು ಅವುಗಳ ನಿರ್ಧರಿಸಿದ ಹಾಗೆ ಇವುಗಳ ಚಿಪ್ಪಿನ ಮೇಲೆ ಇರುವ ರಿಂಗ್ ನೋಡಿ ಕೆಲವೊಮ್ಮೆ ನಿರ್ಧರಿಸುತ್ತಾರೆ ಎನ್ನಲಾಗಿದೆ..!
ಅದ್ವೈತ ಎಂಬ(Aldabra Giant Tortoise) ಆಮೆಯನ್ನ 18 ನೇ ಶತಮಾನದಲ್ಲಿ ಹಿಂದೂ ಮಹಾಸಾಗರದಲ್ಲಿನ ಸಿಚೆಲ್ ದ್ವೀಪದಲ್ಲಿ ಬ್ರಿಟಿಷ್ ನೌಕಾಪಡೆ ಹಿಡಿದು ತಂದು,ಈಸ್ಟ್ ಇಂಡಿಯಾ ಕಂಪನಿಯ ರಾಬರ್ಟ್ ಕ್ಲೈವ್ ಎಂಬುವ ಅಧಿಕಾರಿಗೆ ಕೊಡುಗೆ ನೀಡಿದ್ದರಂತೆ,ಆ ದೈತ್ಯ ಆಮೆಯನ್ನ ಅಂದಿನ ಕಲ್ಕತ್ತಾ (ಈಗಿನ ಕೋಲ್ಕೊತ್ತಾ)ಮೃಘಾಲಯದಲ್ಲಿ 1875ರಲ್ಲಿ ಇಡಲಾಗಿತ್ತಂತೆ..
ಅದ್ವೈತ 2006 ಮಾರ್ಚ್ ನಲ್ಲಿ ಮರಣ ಹೊಂದಿತ್ತು ಎನ್ನಲಾಗಿದೆ..
ಈ ಆಮೆ ಸುಮಾರು 255 ವರ್ಷ ಜೀವಿಸಿ
ಅತ್ಯಂತ ಹೆಚ್ಚು ವರ್ಷ ಜೀವಿಸಿದ ಆಮೆ ಎಂಬ ಹೆಗ್ಗಳಿಕೆ ಹೊಂದಿದೆ..(1755 ಹುಟ್ಟಿದ್ದು ಎನ್ನಲಾಗಿದೆ)
2016ರ ವರದಿಯ ಪ್ರಕಾರ ಸಿಚೆಲ್ ದೈತ್ಯ ಆಮೆ(Seychelles Giant Tortoise) 188 ವರ್ಷ ಬದುಕಿರುವ ಅತ್ಯಂತ ಹಿರಿಯ ಆಮೆ..ಜೋನಾಥನ್ ಅದರ ಹೆಸರು..
ಅಲ್ಡ್ರಬ್ರಾ ದೈತ್ಯ ಆಮೆ(Aldabra Giant Tortoise) ಅದ್ವೈತನ ನಂತರ 176 ವರ್ಷ ಬದುಕಿದ್ದದ್ದು ಹರಿಯತ್ ಎಂಬ ಆಮೆ ಎನ್ನಲಾಗಿದೆ..!
ಈ ಫೋಟೋ ಮತ್ತು ವೀಡಿಯೊ ತೆಗೆದದ್ದು ಬ್ಲಾಕ್ ಪೂಲ್ ಮೃಘಾಲಯದಲ್ಲಿ
ಇವನ ಹೆಸರು ಡಾರ್ವಿನ್ ವಯಸ್ಸು ಸುಮಾರು 100 ದಾಟಿದೆ ಎನ್ನಲಾಗಿದೆ..
ಇವನಿಗೆ ಮೆಲನ್ ಹಾಗೂ ತರಕಾರಿ ಬಹಳ ಇಷ್ಟವಂತೆ..
ಅವನ ಗಾತ್ರ ಹಾಗೂ ನಡಿಗೆಯ ವೇಗ ನೀವೇ ನೋಡಿ..
ರೆಡ್ ಪಾ0ಡಾ
ನೋಡಿ..
ಇವನಿಗೆ ಪುಲ್ ಗಾಂಚಲಿ,ಎಷ್ಟು ಹೊತ್ತು,ಈ ಕಡೆ ಈಗ ತಿರುಗ್ತಾನೆ ಈಗ ತಿರುಗ್ತಾನೆ ಅಂತ ಕ್ಯಾಮೆರಾ ಹಿಡಿದು ನಿಂತರೂ ಅವನ ಪಾಡಿಗೆ ಅವನು ಮಜಾ ತಗೊಳ್ತಾ ಬಿದಿರು ತಿನ್ನೋದ್ರಲ್ಲಿ ಬ್ಯುಜಿ..
ಏಯ್..ಹೊಗ್ರೋ ಅತ್ಲಾಗೆ ದಿನ ಬೆಳಗಾದ್ರೆ ನಿಮ್ಮದು ಇದ್ದಿದ್ದೇ..ನಿಮ್ಮನ್ನ ಹುಲಿ ಹಿಡಿಯಾ,ನನ್ನ ಹೊಟ್ಟೆ ಪಾಡು ನಾನು ನೋಡ್ತೇನೆ ಅನ್ನೋ ಹಾಗಿತ್ತು ಅವನ ವರ್ತನೆ...
ಮತ್ತೆ ಇನ್ನೊಂದು "ವಿಶೇಷ" ಏನು ಗೊತ್ತಾ,
ಅಲ್ಲಿ ಬರುವ ಪ್ರವಾಸಿಗರು,
ಚುಪ್..ಚುಪ್..
ಕೂ.. ಕೂ..
ಶು..ಶ್..
ಹೈ..ಹೈ..
ಟಕ್..ಟಕ್..
ಅಂತೆಲ್ಲಾ ಶಬ್ದಮಾಡುತ್ತಾ,ಕೈ ಗೆ ಸಿಕ್ಕಿದ್ದನ್ನ ಗುರಿ ಇಟ್ಟು ಅವುಗಳ ಕಡೆ ಎಸೆಯುತ್ತಾ,
ಯಾವುದೇ ಪ್ರಾಣಿಗಳಿಗೆ ತೊಂದರೆ ಮಾಡುವ ಅಭ್ಯಾಸವೂ ಇರಲ್ಲ..
ಎಷ್ಟೆ ಚಿಕ್ಕ ಮಕ್ಕಳಾದ್ರೂ ಅಷ್ಟೇ..
ಪ್ರಾಣಿಗಳು ಹೇಳಿದ ಹಾಗೇ ನಾವು ಕೇಳಬೇಕು..
ಅಷ್ಟೇ..
ಜನ ಸರಿ ಇಲ್ಲ ಬಿಡಿ ಅಲ್ವಾ..!!!😂
ಈ ಸುಂದರ ಪ್ರಾಣಿಯ ಹೆಸರು ರೆಡ್ ಪಾಂಡಾ,(Red Panda)
ಲೆಸರ್ಪಾಂಡಾ/ರೇಡಿಬಿಯರ್ ಕ್ಯಾಟ್/ರೆಡ್ ಕ್ಯಾಟ್ ಬಿಯರ್,ತ್ರು ಪಾಂಡಾ,ಕಾಮನ್ ಪಾಂಡ ಅಂತಲೂ ಹಲವು ನಾಮಧ್ಯೇಯದಿಂದ ಕರೆಸಿಕೊಳ್ಳುತ್ತವೆ ಇವು..
ನೇಪಾಲಿಯಲ್ಲಿ ಪೋನ್ಯಾ ಅಂತಾರಂತೆ ಅಂದರೆ ಬಿದಿರು ತಿನ್ನುವವನು ಅಂತ..😛
ನೋಡೋಕೆ ಹೆಚ್ಚು ಕಡಿಮೆ ಬೆಕ್ಕಿನಕ್ಕಿಂತ ಸ್ವಲ್ಪ ದೊಡ್ಡದಾಗಿ ಕಾಣುವ ಇವುಗಳು ಕೆಂಪು,ಕಂದು ಕೂದಲು ಬಣ್ಣ ಬೆನ್ನಮೇಲೆ ಹಾಗೂ ಬಾಲದಲ್ಲಿ ಹೊಂದಿರುತ್ತವೆ,ಹೊಟ್ಟೆಯಬಾಗದಲ್ಲಿ ಕಪ್ಪು ಬಣ್ಣದ ಕೂದಲು ಹಾಗೂ ಮುಖದಲ್ಲಿ,ಕಿವಿಯ ಕೆಲವು ಭಾಗ ಬಿಳಿಯ ಬಣ್ಣದ ಕೂದಲು ಇದೆ,ದೇಹದ ಹೆಚ್ಚಿನ ಭಾಗ ಕೆಂಪು ಕೂದಲು ಇರುವುದಕ್ಕೆ ರೆಡ್ ಪಾಂಡಾ ಎಂದು ಕರೆಯುತ್ತಾರೆ..!!!
ಇವುಗಳು ನಿದ್ರೆಯಿಂದ,ಎದ್ದ ನಂತರ ಬೆಕ್ಕುಗಳಂತೆ ಮೈಯನ್ನ,ಮುಖವನ್ನ ತಮ್ಮ ಕಾಲಿನ ಮೂಲಕ ಸ್ವಚ್ಛ ಮಾಡಿಕೊಳ್ಳೋದು ಸಾಮಾನ್ಯವಂತೆ,ಹಳ್ಳಿಯ ಕಡೆ ಬೆಕ್ಕು ಮುಖ ತೊಳಿತಾ ಇದೆ ಅಂತಾರಲ್ಲ ಹಾಗೆ ಇದೂ ಮಾಡುತ್ತೆ,ಹಾಗೆ ತಮ್ಮ ಜಾಗವನ್ನ ಗುರುತಿಸಲು ತಮ್ಮ ಮೂತ್ರ ವಿಸರ್ಜನೆ ಮಾಡಿ ಮಾರ್ಕ್ ಮಾಡುತ್ತವಂತೆ...
ಅದನ್ನ ಅಧರಿಸಿಯೇ ಅವುಗಳು ತಮ್ಮ ಜಾಗ ಹಾಗೂ ದಾರಿಯನ್ನ ಗುರುತು ಹಿಡಿಯುತ್ತವೆಯಂತೆ,ನಾಯಿ ಹಾಗೂ ಕೆಲವು ಪ್ರಾಣಿಗಳು ಈ ರೀತಿಯೇ ಮಾಡೋದು ಸಾಮಾನ್ಯವಾಗಿ ಗಮನಿಸಿರುತ್ತೇವೆ..
ಎತ್ತರದ ಮರಗಳನ್ನ,ಬಂಡೆಗಳನ್ನ ಬಹಳ ಸುಲಭವಾಗಿ ಹತ್ತಲು ಅವುಗಳ ಕೈಗಳ ವಿನ್ಯಾಸ,ಪಂಜಗಳು ಬಹಳ ಸಹಾಯಕವಂತೆ..
ಸುಮಾರು 20 ರಿಂದ 25 ಇಂಚು ಉದ್ಧವಿರುತ್ತವೆ, ಬಾಲ 11 ರಿಂದ 23 ಇಂಚು ಉದ್ಧವಿರುತ್ತವೆ,
ಗಂಡು 3.7 ರಿಂದ 6.2 ಕೆ.ಜಿ,ಹೆಣ್ಣು 3 ರಿಂದ 6 ಕೆ.ಜಿ ತೂಕವಿರುತ್ತವೆ..
ಇವುಗಳು ಸಂತಾನೋತ್ಪತ್ತಿ,112 ರಿಂದ 158 ದಿನ ಗರ್ಭದರಿಸಿ..ಸುಮಾರು 1 ರಿಂದ ನಾಲ್ಕು ಮರಿಯವರೆಗೆ ಒಮ್ಮೆಗೆ ಜನ್ಮ ಕೊಡಲು ಸಾಮರ್ಥ್ಯ ಹೊಂದಿವೆ..
ಮರಿಗಳ ಜನ್ಮ ಕೊಡುವ ಸ್ವಲ್ಪ ದಿನದ ಮೊದಲು ತಾಯಿ,ಎಲೆ,ಕಡ್ಡಿ,ಹುಲ್ಲು ಬಳಸಿ,ಮರದ ಪೊಟರೆ ಅಥವಾ ಕಲ್ಲಿನ ಬಿರುಕು ಅಥವಾ ರಂಧ್ರದಲ್ಲಿ ಗೂಡನ್ನು ಮಾಡಿ ನಂತರ ಅಲ್ಲಿಯೇ ಮರಿಗಳನ್ನ ಹಾಕುತ್ತದೆಯಂತೆ,
ಹುಟ್ಟಿದಾಗ ಮರಿಗಳು 110 ರಿಂದ 130 ಗ್ರಾಮ್ ತೂಕವಿರುತ್ತವೆ ಹಾಗೂ
ಕುರುಡು ಹಾಗೂ ಕಿವಿ ಕೇಳಿಸುವುದಿಲ್ಲ,16 ರಿಂದ 18 ದಿನಕ್ಕೆ ನಿಧಾನವಾಗಿ ಕಣ್ಣು ತೆರೆಯುತ್ತದೆ ಹಾಗೂ ಕಿವಿಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ,90 ದಿನಕ್ಕೆ ಸಂಪೂರ್ಣ ಮೈ ಮೇಲೆ ಕೂದಲು ಬರಲು ಪ್ರಾರಂಭವಾಗುತ್ತದೆ..6 ರಿಂದ 8 ತಿಂಗಳಿಗೆ ಇವುಗಳು ತಮ್ಮ ಆಹಾರ ತಾವೇ ಹುಡುಕಿ ಸೇವಿಸಲು ಪ್ರಾರಂಭಿಸುತ್ತವೆ,ಇನ್ನೊಂದು ಮರಿ ಹಾಕುವವರೆಗೆ ತಾಯಿ ತನ್ನ ಮರಿಗಳ ಜೊತೆಯೇ ಇರೋದು ಸಾಮಾನ್ಯವಂತೆ. !
ರೆಡ್ ಪಾಂಡಾ ಗಳು
10°ರಿಂದ 25° ತಾಪಮಾನದ ಪ್ರದೇಶದಲ್ಲಿ ಇವುಗಳ ಹೆಚ್ಚಾಗಿ ಜೀವಿಸುತ್ತವೆ..
ಇವಕ್ಕೆ ಬಿದಿರು ಹಾಗೂ ಕಳಲೇ ಬಹಳ ಅಚ್ಚು ಮೆಚ್ಚಿನ ಆಹಾರ,ಹಾಗೆ ಹಣ್ಣು,ಹುಲ್ಲು,ಮೊಟ್ಟೆ,ಮೀನು ಕೆಲವು ಪಕ್ಷಿಗಳನ್ನು,ಕೀಟಗಳನ್ನು ಕೂಡ ಭೇಟೆಯಾಡಿ ಭಕ್ಷಿಸುತ್ತವೆ..
ಭಾರತದ,ಸಿಕ್ಕಿಂ,ಹಿಮಾಚಲ ಪ್ರದೇಶ,ಹಿಮಾಲಯ,ಚೀನಾ,ಭೂತಾನ್,ಬರ್ಮಾ ಹಾಗೂ ಇನ್ನಿತರೆ ಪ್ರದೇಶದಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತವೆ..
ಇತ್ತೀಚಿನ ದಿನದಲ್ಲಿ ಅರಣ್ಯ ನಾಶ, ಮನುಷ್ಯರು ಬೇಟೆಯಾಡೋದು,ಕಳ್ಳ ಸಂತೆಯಲ್ಲಿ ಮಾರಾಟ,ಮನೆಗಳಲ್ಲಿ ಸಾಕಿಕೊಳ್ಳೋದು,ಸಾಕಿದ ಇವುಗಳಲ್ಲಿ ಸಂತಾನೋತ್ಪತ್ತಿ ಬಹಳ ಕಡಿಮೆಯಾಗುತ್ತಾ ಇರುವುದು ಹಾಗೂ ಕೆಲವು ಪ್ರಾಣಿಗಳ ದಾಳಿಯಿಂದ ಇವುಗಳ ಸಂತತಿ ವಿನಾಶದ ಅಂಚಿನಲ್ಲಿ ಬಂದು ನಿಂತಿದೆಯಂತೆ...
ಬ್ಲಾಕ್ ಪೂಲ್ ಮೃಘಾಲಯದಲ್ಲಿ ಕಂಡ ಇವನು..
ಪೋಸ್ ಮಾತ್ರ ಕೊಡಲಿಲ್ಲ..
ಇವನ ಸೊಡ್ಡಿಗೆ ವರ್ಲೆ ಹಿಡಿಯಾ..
❤️
ಇವನಿಗೆ ಪುಲ್ ಗಾಂಚಲಿ,ಎಷ್ಟು ಹೊತ್ತು,ಈ ಕಡೆ ಈಗ ತಿರುಗ್ತಾನೆ ಈಗ ತಿರುಗ್ತಾನೆ ಅಂತ ಕ್ಯಾಮೆರಾ ಹಿಡಿದು ನಿಂತರೂ ಅವನ ಪಾಡಿಗೆ ಅವನು ಮಜಾ ತಗೊಳ್ತಾ ಬಿದಿರು ತಿನ್ನೋದ್ರಲ್ಲಿ ಬ್ಯುಜಿ..
ಏಯ್..ಹೊಗ್ರೋ ಅತ್ಲಾಗೆ ದಿನ ಬೆಳಗಾದ್ರೆ ನಿಮ್ಮದು ಇದ್ದಿದ್ದೇ..ನಿಮ್ಮನ್ನ ಹುಲಿ ಹಿಡಿಯಾ,ನನ್ನ ಹೊಟ್ಟೆ ಪಾಡು ನಾನು ನೋಡ್ತೇನೆ ಅನ್ನೋ ಹಾಗಿತ್ತು ಅವನ ವರ್ತನೆ...
ಮತ್ತೆ ಇನ್ನೊಂದು "ವಿಶೇಷ" ಏನು ಗೊತ್ತಾ,
ಅಲ್ಲಿ ಬರುವ ಪ್ರವಾಸಿಗರು,
ಚುಪ್..ಚುಪ್..
ಕೂ.. ಕೂ..
ಶು..ಶ್..
ಹೈ..ಹೈ..
ಟಕ್..ಟಕ್..
ಅಂತೆಲ್ಲಾ ಶಬ್ದಮಾಡುತ್ತಾ,ಕೈ ಗೆ ಸಿಕ್ಕಿದ್ದನ್ನ ಗುರಿ ಇಟ್ಟು ಅವುಗಳ ಕಡೆ ಎಸೆಯುತ್ತಾ,
ಯಾವುದೇ ಪ್ರಾಣಿಗಳಿಗೆ ತೊಂದರೆ ಮಾಡುವ ಅಭ್ಯಾಸವೂ ಇರಲ್ಲ..
ಎಷ್ಟೆ ಚಿಕ್ಕ ಮಕ್ಕಳಾದ್ರೂ ಅಷ್ಟೇ..
ಪ್ರಾಣಿಗಳು ಹೇಳಿದ ಹಾಗೇ ನಾವು ಕೇಳಬೇಕು..
ಅಷ್ಟೇ..
ಜನ ಸರಿ ಇಲ್ಲ ಬಿಡಿ ಅಲ್ವಾ..!!!😂
ಈ ಸುಂದರ ಪ್ರಾಣಿಯ ಹೆಸರು ರೆಡ್ ಪಾಂಡಾ,(Red Panda)
ಲೆಸರ್ಪಾಂಡಾ/ರೇಡಿಬಿಯರ್ ಕ್ಯಾಟ್/ರೆಡ್ ಕ್ಯಾಟ್ ಬಿಯರ್,ತ್ರು ಪಾಂಡಾ,ಕಾಮನ್ ಪಾಂಡ ಅಂತಲೂ ಹಲವು ನಾಮಧ್ಯೇಯದಿಂದ ಕರೆಸಿಕೊಳ್ಳುತ್ತವೆ ಇವು..
ನೇಪಾಲಿಯಲ್ಲಿ ಪೋನ್ಯಾ ಅಂತಾರಂತೆ ಅಂದರೆ ಬಿದಿರು ತಿನ್ನುವವನು ಅಂತ..😛
ನೋಡೋಕೆ ಹೆಚ್ಚು ಕಡಿಮೆ ಬೆಕ್ಕಿನಕ್ಕಿಂತ ಸ್ವಲ್ಪ ದೊಡ್ಡದಾಗಿ ಕಾಣುವ ಇವುಗಳು ಕೆಂಪು,ಕಂದು ಕೂದಲು ಬಣ್ಣ ಬೆನ್ನಮೇಲೆ ಹಾಗೂ ಬಾಲದಲ್ಲಿ ಹೊಂದಿರುತ್ತವೆ,ಹೊಟ್ಟೆಯಬಾಗದಲ್ಲಿ ಕಪ್ಪು ಬಣ್ಣದ ಕೂದಲು ಹಾಗೂ ಮುಖದಲ್ಲಿ,ಕಿವಿಯ ಕೆಲವು ಭಾಗ ಬಿಳಿಯ ಬಣ್ಣದ ಕೂದಲು ಇದೆ,ದೇಹದ ಹೆಚ್ಚಿನ ಭಾಗ ಕೆಂಪು ಕೂದಲು ಇರುವುದಕ್ಕೆ ರೆಡ್ ಪಾಂಡಾ ಎಂದು ಕರೆಯುತ್ತಾರೆ..!!!
ಇವುಗಳು ನಿದ್ರೆಯಿಂದ,ಎದ್ದ ನಂತರ ಬೆಕ್ಕುಗಳಂತೆ ಮೈಯನ್ನ,ಮುಖವನ್ನ ತಮ್ಮ ಕಾಲಿನ ಮೂಲಕ ಸ್ವಚ್ಛ ಮಾಡಿಕೊಳ್ಳೋದು ಸಾಮಾನ್ಯವಂತೆ,ಹಳ್ಳಿಯ ಕಡೆ ಬೆಕ್ಕು ಮುಖ ತೊಳಿತಾ ಇದೆ ಅಂತಾರಲ್ಲ ಹಾಗೆ ಇದೂ ಮಾಡುತ್ತೆ,ಹಾಗೆ ತಮ್ಮ ಜಾಗವನ್ನ ಗುರುತಿಸಲು ತಮ್ಮ ಮೂತ್ರ ವಿಸರ್ಜನೆ ಮಾಡಿ ಮಾರ್ಕ್ ಮಾಡುತ್ತವಂತೆ...
ಅದನ್ನ ಅಧರಿಸಿಯೇ ಅವುಗಳು ತಮ್ಮ ಜಾಗ ಹಾಗೂ ದಾರಿಯನ್ನ ಗುರುತು ಹಿಡಿಯುತ್ತವೆಯಂತೆ,ನಾಯಿ ಹಾಗೂ ಕೆಲವು ಪ್ರಾಣಿಗಳು ಈ ರೀತಿಯೇ ಮಾಡೋದು ಸಾಮಾನ್ಯವಾಗಿ ಗಮನಿಸಿರುತ್ತೇವೆ..
ಎತ್ತರದ ಮರಗಳನ್ನ,ಬಂಡೆಗಳನ್ನ ಬಹಳ ಸುಲಭವಾಗಿ ಹತ್ತಲು ಅವುಗಳ ಕೈಗಳ ವಿನ್ಯಾಸ,ಪಂಜಗಳು ಬಹಳ ಸಹಾಯಕವಂತೆ..
ಸುಮಾರು 20 ರಿಂದ 25 ಇಂಚು ಉದ್ಧವಿರುತ್ತವೆ, ಬಾಲ 11 ರಿಂದ 23 ಇಂಚು ಉದ್ಧವಿರುತ್ತವೆ,
ಗಂಡು 3.7 ರಿಂದ 6.2 ಕೆ.ಜಿ,ಹೆಣ್ಣು 3 ರಿಂದ 6 ಕೆ.ಜಿ ತೂಕವಿರುತ್ತವೆ..
ಇವುಗಳು ಸಂತಾನೋತ್ಪತ್ತಿ,112 ರಿಂದ 158 ದಿನ ಗರ್ಭದರಿಸಿ..ಸುಮಾರು 1 ರಿಂದ ನಾಲ್ಕು ಮರಿಯವರೆಗೆ ಒಮ್ಮೆಗೆ ಜನ್ಮ ಕೊಡಲು ಸಾಮರ್ಥ್ಯ ಹೊಂದಿವೆ..
ಮರಿಗಳ ಜನ್ಮ ಕೊಡುವ ಸ್ವಲ್ಪ ದಿನದ ಮೊದಲು ತಾಯಿ,ಎಲೆ,ಕಡ್ಡಿ,ಹುಲ್ಲು ಬಳಸಿ,ಮರದ ಪೊಟರೆ ಅಥವಾ ಕಲ್ಲಿನ ಬಿರುಕು ಅಥವಾ ರಂಧ್ರದಲ್ಲಿ ಗೂಡನ್ನು ಮಾಡಿ ನಂತರ ಅಲ್ಲಿಯೇ ಮರಿಗಳನ್ನ ಹಾಕುತ್ತದೆಯಂತೆ,
ಹುಟ್ಟಿದಾಗ ಮರಿಗಳು 110 ರಿಂದ 130 ಗ್ರಾಮ್ ತೂಕವಿರುತ್ತವೆ ಹಾಗೂ
ಕುರುಡು ಹಾಗೂ ಕಿವಿ ಕೇಳಿಸುವುದಿಲ್ಲ,16 ರಿಂದ 18 ದಿನಕ್ಕೆ ನಿಧಾನವಾಗಿ ಕಣ್ಣು ತೆರೆಯುತ್ತದೆ ಹಾಗೂ ಕಿವಿಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ,90 ದಿನಕ್ಕೆ ಸಂಪೂರ್ಣ ಮೈ ಮೇಲೆ ಕೂದಲು ಬರಲು ಪ್ರಾರಂಭವಾಗುತ್ತದೆ..6 ರಿಂದ 8 ತಿಂಗಳಿಗೆ ಇವುಗಳು ತಮ್ಮ ಆಹಾರ ತಾವೇ ಹುಡುಕಿ ಸೇವಿಸಲು ಪ್ರಾರಂಭಿಸುತ್ತವೆ,ಇನ್ನೊಂದು ಮರಿ ಹಾಕುವವರೆಗೆ ತಾಯಿ ತನ್ನ ಮರಿಗಳ ಜೊತೆಯೇ ಇರೋದು ಸಾಮಾನ್ಯವಂತೆ. !
ರೆಡ್ ಪಾಂಡಾ ಗಳು
10°ರಿಂದ 25° ತಾಪಮಾನದ ಪ್ರದೇಶದಲ್ಲಿ ಇವುಗಳ ಹೆಚ್ಚಾಗಿ ಜೀವಿಸುತ್ತವೆ..
ಇವಕ್ಕೆ ಬಿದಿರು ಹಾಗೂ ಕಳಲೇ ಬಹಳ ಅಚ್ಚು ಮೆಚ್ಚಿನ ಆಹಾರ,ಹಾಗೆ ಹಣ್ಣು,ಹುಲ್ಲು,ಮೊಟ್ಟೆ,ಮೀನು ಕೆಲವು ಪಕ್ಷಿಗಳನ್ನು,ಕೀಟಗಳನ್ನು ಕೂಡ ಭೇಟೆಯಾಡಿ ಭಕ್ಷಿಸುತ್ತವೆ..
ಭಾರತದ,ಸಿಕ್ಕಿಂ,ಹಿಮಾಚಲ ಪ್ರದೇಶ,ಹಿಮಾಲಯ,ಚೀನಾ,ಭೂತಾನ್,ಬರ್ಮಾ ಹಾಗೂ ಇನ್ನಿತರೆ ಪ್ರದೇಶದಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತವೆ..
ಇತ್ತೀಚಿನ ದಿನದಲ್ಲಿ ಅರಣ್ಯ ನಾಶ, ಮನುಷ್ಯರು ಬೇಟೆಯಾಡೋದು,ಕಳ್ಳ ಸಂತೆಯಲ್ಲಿ ಮಾರಾಟ,ಮನೆಗಳಲ್ಲಿ ಸಾಕಿಕೊಳ್ಳೋದು,ಸಾಕಿದ ಇವುಗಳಲ್ಲಿ ಸಂತಾನೋತ್ಪತ್ತಿ ಬಹಳ ಕಡಿಮೆಯಾಗುತ್ತಾ ಇರುವುದು ಹಾಗೂ ಕೆಲವು ಪ್ರಾಣಿಗಳ ದಾಳಿಯಿಂದ ಇವುಗಳ ಸಂತತಿ ವಿನಾಶದ ಅಂಚಿನಲ್ಲಿ ಬಂದು ನಿಂತಿದೆಯಂತೆ...
ಬ್ಲಾಕ್ ಪೂಲ್ ಮೃಘಾಲಯದಲ್ಲಿ ಕಂಡ ಇವನು..
ಪೋಸ್ ಮಾತ್ರ ಕೊಡಲಿಲ್ಲ..
ಇವನ ಸೊಡ್ಡಿಗೆ ವರ್ಲೆ ಹಿಡಿಯಾ..
❤️
ಆಡ್ವರ್ಕ್
ಆಡ್ವರ್ಕ್ ಎನ್ನುವ(Aardvark) ಸಸ್ತನಿ ಕಂಡು ಬರೋದು ಆಫ್ರಿಕಾ ಖಂಡದಲ್ಲಿ.
ಈ ಜೀವಿಗಳು ನೋಡಲು ಹಂದಿಯ
ರೀತಿ ಕಾಣುವ ಚೂಪಾಗಿರುವ ಮೂತಿಯನ್ನ ಹೊಂದಿರುತ್ತವೆ,ಇದು ವಾಸನೆ ಗ್ರಹಿಸಲು ಹಾಗೂ ಆಹಾರ ತೆಗೆದು ತಿನ್ನಲು ಸಹಾಯಕ,
ನೋಡಲು ಧಡೂತಿ ದೇಹಿಯಾಗಿರುವ ಇವುಗಳು, ತಿನ್ನೋದು ಇರುವೆ ಹಾಗೂ ವರಲೇ(ಗೆದ್ದಲು)....
ಇವು ನಿಷಾಚರಿಗಳಾಗಿವೆ,ರಾತ್ರಿ ವೇಳೆ ಆಹಾರ ಅಂದರೆ,ಇರುವೆ ಹಾಗೂ ಗೆದ್ದಲು ಗೂಡನ್ನು ಹುಡುಕಿ,ತನ್ನ ಶಕ್ತಿಯುತ ಪಂಜ ಹಾಗೂ ಉಗುರುಗಳಿಂದ ಮಣ್ಣನ್ನ ಹೊರ ತೆಗೆದು ತಿಂದು ಬಿಡುತ್ತವೆ..
ಇವುಗಳು ವಾಸ ಮಾಡಲು ಹಾಗೂ ಸಂತಾನ ಅಭಿವೃದ್ಧಿಯ ಸಮಯಕ್ಕೆ ಸಹಾಯವಾಗಲು ಬಿಲವನ್ನ ತೋಡುವುದು ಸಾಮಾನ್ಯ..
ಇವಗಳನ್ನ African Ant eater ಎಂದು ಕರೆಯುವುದು ಇದೆಯಂತೆ ಆದರೆ ಅಮೆರಿಕನ್ ಆಂಟ್ ಈಟರ್ ಗಳು ಬೇರೆ...
ಎರಡರ ನಡುವೆ ಬಹಳ ವ್ಯತ್ಯಾಸ ಇದೆ..!
ಆರ್ಡ್ವಕ್ ಎಂದರೆ ಅರ್ಥ್ ಪಿಗ್/ಗ್ರೌಂಡ್ ಪಿಗ್ ಅಂತ ಅರ್ಥ ಬರುತ್ತಂತೆ...
ಆರ್ಡ್ವಕ್ ಗೆ ಹಾಗೂ ಹಂದಿ ಅಥವಾ ಅಂಟ್ ಈಟರ್ ಗೆ ಯಾವುದೇ ಸಂಬಂಧ ಅಥವಾ ಅವುಗಳ ಸಂತತಿ ಅಲ್ಲ..!
ಆರ್ಡ್ವಕ್ ಗಳ ದೇಹ ರಚನೆ,ಮೇಲೆ ಹೇಳಿದಂತೆ ಹಂದಿಯ ರೀತಿಯ ಮುಖ ಹಾಗೂ ಹಿಂದಿನ ಕಾಲು ಉದ್ದ,ಮುಂದಿನ ಕಾಲು ಗಿಡ್ಡದಾಗಿರುತ್ತೆ..
ಮುಂದಿನಕಾಲಿನಲ್ಲಿ 4 ಬೆರಳು,5ಬೆರಳು ಹಿಂದಿನ ಕಾಲಲ್ಲಿ ಇರುತ್ತೆ ಹಾಗೂ ಚೂಪಾದ ಉಗುರುಗಳು ಇರುತ್ತವೆ..ಇದೆ ಇವಕ್ಕೆ ಗೂಡು ಮಾಡಿ ಕೊಳ್ಳಲು ಹಾಗೂ ಇರುವೆ,
ಗೆದ್ದಲಿನ ಗೂಡು ತೆಗೆಯಲು ಆಯುಧವಾಗಿವೆ..
ಆರ್ಡ್ವಕ್ ಸುಮಾರು 60 ರಿಂದ 80 ಕೆ.ಜಿ ತೂಕ
ಹಾಗೂ 3.44 ರಿಂದ 4.27 ಅಡಿ ವರೆಗೆ ಉದ್ಧವಿರುತ್ತವೆ..
ಬಾಲವೂ ಸೇರಿದರೆ 7 ಅಡಿ 3 ಇಂಚು ವರೆಗೆ ಉದ್ಧವಿರುತ್ತವೆ,(ಬಾಲ 28 ಇಂಚುವರೆಗೂ ಉದ್ಧವಿರುತ್ತವೆ)..
ಎತ್ತರ ಸುಮಾರು 24 ಇಂಚು ಎನ್ನಲಾಗಿದೆ..
ಬಣ್ಣ ಅರಿಶಿನ ಕಂದು,
ತಲೇ,ಬಾಲದಲ್ಲಿ ಸ್ವಲ್ಪ ಕೂದಲು ಹಾಗೂ ಕಾಲಿನ ಭಾಗದಲ್ಲಿ ಉದ್ಧನಾದ ಕೂದಲು ಹೊಂದಿದ್ದು, ಇವುಗಳ ಚರ್ಮ ತುಂಬಾ ಒರಟಾಗಿರುತ್ತದೆ,ಮೂಗಿನ ಭಾಗದಲ್ಲಿ ಕೂದಲು ಇರುವುದು ಮಣ್ಣನ್ನ ತೆಗೆಯುವಾಗ ಮಣ್ಣು,ದೂಳು ಒಳ ಹೋಗದಂತೆ ಪ್ರೊಟೆಕ್ಟ್ ಮಾಡಿ ಸಹಾಯ ಮಾಡುತ್ತದೆ..
ಆರ್ಡ್ವಕ್ ಗಳಿಗೆ ಮೇಲೆ14,ಕೆಳಗೆ12,
ಹಲ್ಲಿನ ಪಂಕ್ತಿ ಗಳು ಇರುತ್ತವೆ,
ಇವು ಸವೆದು ಹೋದ ಹಾಗೆ ಮತ್ತೆ ಮತ್ತೆ ಬೆಳೆಯುತ್ತದೇ....!
12 ಇಂಚು ಉದ್ದದ ನಾಲಿಗೆ ಹಾಗೂ 7.9 ರಿಂದ 8 ಇಂಚು ಉದ್ದದ ಚುರುಕಾದ ಕಿವಿ ಹೊಂದಿವೆ,ರಾತ್ರಿ ವೇಳೆ ಸಹಾಯವಾಗುವಂತೆ ಕಣ್ಣಿನ ವಿನ್ಯಾಸ ಹೊಂದಿವೆ..
ಇವುಗಳ ಸಂತಾನೋತ್ಪತ್ತಿ 7 ತಿಂಗಳು ಗರ್ಭ ಧರಿಸಿ,ಒಂದು ಮರಿಗೆ ಜನ್ಮ ನೀಡುತ್ತದೆ,ಮರಿ ಹುಟ್ಟಿ 9 ವಾರಕ್ಕೆ ಆಹಾರ ತಿನ್ನಲು ಪ್ರಾರಂಭಿಸಿ,
16 ವಾರಕ್ಕೆ ಬಿಲ ತೋಡುವ ಸಾಮರ್ಥ್ಯ ಹೊಂದುತ್ತವೆ..
ತಾಯಿ ಇನ್ನೊಂದು ಗರ್ಭ ಧರಿಸುವವರೆಗೆ ತಾಯಿಯ ಜೊತೆಯೇ ಜೀವನ ಸಾಗಿಸುತ್ತವೆ ಇವು..
ಇವುಗಳು ಕೆಸರು,ಜೌಗು ಹಾಗೂ ಕಲ್ಲಿನ ಪ್ರದೇಶದಲ್ಲಿ ವಾಸ ಮಾಡೋದು ಬಹಳ ಕಡಿಮೆ..
ಕಾರಣ ಬಿಲವನ್ನ ತೋಡಲು ಅನುಕೂಲವಿಲ್ಲದೆ ಇರುವುದು..!
ಇವುಗಳು ಸುಮಾರು 10,500 ಅಡಿ ಬಿಲವನ್ನ ತೋಡಿರುವ ದಾಖಲೆ ಇಥಿಯೋಪಿಯಾದಲ್ಲಿ ಸಿಕ್ಕಿತ್ತು ಎನ್ನಲಾಗಿದೆ..
ದಿನದ ಸಮಯದಲ್ಲಿ ಬಿಲದಲ್ಲಿ ವಾಸ ಮಾಡಿ ಉಷ್ಣತೆಯಿಂದ ತಮ್ಮನ್ನ ತಾವು ಸಂರಕ್ಷಣೆ ಮಾಡಿ ಕೊಳ್ಳುತ್ತವೆ..
ಇವುಗಳು 23 ವರ್ಷಗಳವರೆಗೆ ಬದುಕಬಲ್ಲವು..
ಚಿರತೆ,ಸಿಂಹ,ಆಫ್ರಿಕಾ ಕಾಡು ನಾಯಿ,ಹೈನಾ,ಪೈತಾನ್ ಗಳು ಇವುಗಳ ವೈರಿಗಳು..
ವೈರಿಗಳ ಚಲನ ವಲನ ಬಹು ಬೇಗ ಸೆನ್ಸ್ ಮಾಡೋದು,ಆಕ್ರಮಣದ ಸಮಯದಲ್ಲಿ ವೇಗವಾಗಿ ಜಿಗ್ ಜಾಗ್ ಆಗಿ ಓಡೋದು,ಬಹುಬೇಗ ಬಿಲ ತೋಡಿ ತಪ್ಪಿಸಿ ಕೊಳ್ಳೋದು,ಹಾಗೂ ತನ್ನ ಚೂಪಾದ ಉಗುರಿನಿಂದ ವೈರಿಯನ್ನ ಆಕ್ರಮಣ ಮಾಡೋದು ಇದೆ ಎನ್ನಲಾಗಿದೆ..
ಮನುಷ್ಯರು ಮಾಂಸಕ್ಕಾಗಿ ಇವಗಳನ್ನ ಭೇಟೆಯಾಡೋದು ಇದೆಯಂತೆ..
ಇವುಗಳು ವಿನಾಶದ ಸಂತತಿಯಲ್ಲಿ ಇವೆ ಎನ್ನಲಾಗಿದೆ..
ಈ ಜೀವಿಗಳು ನೋಡಲು ಹಂದಿಯ
ರೀತಿ ಕಾಣುವ ಚೂಪಾಗಿರುವ ಮೂತಿಯನ್ನ ಹೊಂದಿರುತ್ತವೆ,ಇದು ವಾಸನೆ ಗ್ರಹಿಸಲು ಹಾಗೂ ಆಹಾರ ತೆಗೆದು ತಿನ್ನಲು ಸಹಾಯಕ,
ನೋಡಲು ಧಡೂತಿ ದೇಹಿಯಾಗಿರುವ ಇವುಗಳು, ತಿನ್ನೋದು ಇರುವೆ ಹಾಗೂ ವರಲೇ(ಗೆದ್ದಲು)....
ಇವು ನಿಷಾಚರಿಗಳಾಗಿವೆ,ರಾತ್ರಿ ವೇಳೆ ಆಹಾರ ಅಂದರೆ,ಇರುವೆ ಹಾಗೂ ಗೆದ್ದಲು ಗೂಡನ್ನು ಹುಡುಕಿ,ತನ್ನ ಶಕ್ತಿಯುತ ಪಂಜ ಹಾಗೂ ಉಗುರುಗಳಿಂದ ಮಣ್ಣನ್ನ ಹೊರ ತೆಗೆದು ತಿಂದು ಬಿಡುತ್ತವೆ..
ಇವುಗಳು ವಾಸ ಮಾಡಲು ಹಾಗೂ ಸಂತಾನ ಅಭಿವೃದ್ಧಿಯ ಸಮಯಕ್ಕೆ ಸಹಾಯವಾಗಲು ಬಿಲವನ್ನ ತೋಡುವುದು ಸಾಮಾನ್ಯ..
ಇವಗಳನ್ನ African Ant eater ಎಂದು ಕರೆಯುವುದು ಇದೆಯಂತೆ ಆದರೆ ಅಮೆರಿಕನ್ ಆಂಟ್ ಈಟರ್ ಗಳು ಬೇರೆ...
ಎರಡರ ನಡುವೆ ಬಹಳ ವ್ಯತ್ಯಾಸ ಇದೆ..!
ಆರ್ಡ್ವಕ್ ಎಂದರೆ ಅರ್ಥ್ ಪಿಗ್/ಗ್ರೌಂಡ್ ಪಿಗ್ ಅಂತ ಅರ್ಥ ಬರುತ್ತಂತೆ...
ಆರ್ಡ್ವಕ್ ಗೆ ಹಾಗೂ ಹಂದಿ ಅಥವಾ ಅಂಟ್ ಈಟರ್ ಗೆ ಯಾವುದೇ ಸಂಬಂಧ ಅಥವಾ ಅವುಗಳ ಸಂತತಿ ಅಲ್ಲ..!
ಆರ್ಡ್ವಕ್ ಗಳ ದೇಹ ರಚನೆ,ಮೇಲೆ ಹೇಳಿದಂತೆ ಹಂದಿಯ ರೀತಿಯ ಮುಖ ಹಾಗೂ ಹಿಂದಿನ ಕಾಲು ಉದ್ದ,ಮುಂದಿನ ಕಾಲು ಗಿಡ್ಡದಾಗಿರುತ್ತೆ..
ಮುಂದಿನಕಾಲಿನಲ್ಲಿ 4 ಬೆರಳು,5ಬೆರಳು ಹಿಂದಿನ ಕಾಲಲ್ಲಿ ಇರುತ್ತೆ ಹಾಗೂ ಚೂಪಾದ ಉಗುರುಗಳು ಇರುತ್ತವೆ..ಇದೆ ಇವಕ್ಕೆ ಗೂಡು ಮಾಡಿ ಕೊಳ್ಳಲು ಹಾಗೂ ಇರುವೆ,
ಗೆದ್ದಲಿನ ಗೂಡು ತೆಗೆಯಲು ಆಯುಧವಾಗಿವೆ..
ಆರ್ಡ್ವಕ್ ಸುಮಾರು 60 ರಿಂದ 80 ಕೆ.ಜಿ ತೂಕ
ಹಾಗೂ 3.44 ರಿಂದ 4.27 ಅಡಿ ವರೆಗೆ ಉದ್ಧವಿರುತ್ತವೆ..
ಬಾಲವೂ ಸೇರಿದರೆ 7 ಅಡಿ 3 ಇಂಚು ವರೆಗೆ ಉದ್ಧವಿರುತ್ತವೆ,(ಬಾಲ 28 ಇಂಚುವರೆಗೂ ಉದ್ಧವಿರುತ್ತವೆ)..
ಎತ್ತರ ಸುಮಾರು 24 ಇಂಚು ಎನ್ನಲಾಗಿದೆ..
ಬಣ್ಣ ಅರಿಶಿನ ಕಂದು,
ತಲೇ,ಬಾಲದಲ್ಲಿ ಸ್ವಲ್ಪ ಕೂದಲು ಹಾಗೂ ಕಾಲಿನ ಭಾಗದಲ್ಲಿ ಉದ್ಧನಾದ ಕೂದಲು ಹೊಂದಿದ್ದು, ಇವುಗಳ ಚರ್ಮ ತುಂಬಾ ಒರಟಾಗಿರುತ್ತದೆ,ಮೂಗಿನ ಭಾಗದಲ್ಲಿ ಕೂದಲು ಇರುವುದು ಮಣ್ಣನ್ನ ತೆಗೆಯುವಾಗ ಮಣ್ಣು,ದೂಳು ಒಳ ಹೋಗದಂತೆ ಪ್ರೊಟೆಕ್ಟ್ ಮಾಡಿ ಸಹಾಯ ಮಾಡುತ್ತದೆ..
ಆರ್ಡ್ವಕ್ ಗಳಿಗೆ ಮೇಲೆ14,ಕೆಳಗೆ12,
ಹಲ್ಲಿನ ಪಂಕ್ತಿ ಗಳು ಇರುತ್ತವೆ,
ಇವು ಸವೆದು ಹೋದ ಹಾಗೆ ಮತ್ತೆ ಮತ್ತೆ ಬೆಳೆಯುತ್ತದೇ....!
12 ಇಂಚು ಉದ್ದದ ನಾಲಿಗೆ ಹಾಗೂ 7.9 ರಿಂದ 8 ಇಂಚು ಉದ್ದದ ಚುರುಕಾದ ಕಿವಿ ಹೊಂದಿವೆ,ರಾತ್ರಿ ವೇಳೆ ಸಹಾಯವಾಗುವಂತೆ ಕಣ್ಣಿನ ವಿನ್ಯಾಸ ಹೊಂದಿವೆ..
ಇವುಗಳ ಸಂತಾನೋತ್ಪತ್ತಿ 7 ತಿಂಗಳು ಗರ್ಭ ಧರಿಸಿ,ಒಂದು ಮರಿಗೆ ಜನ್ಮ ನೀಡುತ್ತದೆ,ಮರಿ ಹುಟ್ಟಿ 9 ವಾರಕ್ಕೆ ಆಹಾರ ತಿನ್ನಲು ಪ್ರಾರಂಭಿಸಿ,
16 ವಾರಕ್ಕೆ ಬಿಲ ತೋಡುವ ಸಾಮರ್ಥ್ಯ ಹೊಂದುತ್ತವೆ..
ತಾಯಿ ಇನ್ನೊಂದು ಗರ್ಭ ಧರಿಸುವವರೆಗೆ ತಾಯಿಯ ಜೊತೆಯೇ ಜೀವನ ಸಾಗಿಸುತ್ತವೆ ಇವು..
ಇವುಗಳು ಕೆಸರು,ಜೌಗು ಹಾಗೂ ಕಲ್ಲಿನ ಪ್ರದೇಶದಲ್ಲಿ ವಾಸ ಮಾಡೋದು ಬಹಳ ಕಡಿಮೆ..
ಕಾರಣ ಬಿಲವನ್ನ ತೋಡಲು ಅನುಕೂಲವಿಲ್ಲದೆ ಇರುವುದು..!
ಇವುಗಳು ಸುಮಾರು 10,500 ಅಡಿ ಬಿಲವನ್ನ ತೋಡಿರುವ ದಾಖಲೆ ಇಥಿಯೋಪಿಯಾದಲ್ಲಿ ಸಿಕ್ಕಿತ್ತು ಎನ್ನಲಾಗಿದೆ..
ದಿನದ ಸಮಯದಲ್ಲಿ ಬಿಲದಲ್ಲಿ ವಾಸ ಮಾಡಿ ಉಷ್ಣತೆಯಿಂದ ತಮ್ಮನ್ನ ತಾವು ಸಂರಕ್ಷಣೆ ಮಾಡಿ ಕೊಳ್ಳುತ್ತವೆ..
ಇವುಗಳು 23 ವರ್ಷಗಳವರೆಗೆ ಬದುಕಬಲ್ಲವು..
ಚಿರತೆ,ಸಿಂಹ,ಆಫ್ರಿಕಾ ಕಾಡು ನಾಯಿ,ಹೈನಾ,ಪೈತಾನ್ ಗಳು ಇವುಗಳ ವೈರಿಗಳು..
ವೈರಿಗಳ ಚಲನ ವಲನ ಬಹು ಬೇಗ ಸೆನ್ಸ್ ಮಾಡೋದು,ಆಕ್ರಮಣದ ಸಮಯದಲ್ಲಿ ವೇಗವಾಗಿ ಜಿಗ್ ಜಾಗ್ ಆಗಿ ಓಡೋದು,ಬಹುಬೇಗ ಬಿಲ ತೋಡಿ ತಪ್ಪಿಸಿ ಕೊಳ್ಳೋದು,ಹಾಗೂ ತನ್ನ ಚೂಪಾದ ಉಗುರಿನಿಂದ ವೈರಿಯನ್ನ ಆಕ್ರಮಣ ಮಾಡೋದು ಇದೆ ಎನ್ನಲಾಗಿದೆ..
ಮನುಷ್ಯರು ಮಾಂಸಕ್ಕಾಗಿ ಇವಗಳನ್ನ ಭೇಟೆಯಾಡೋದು ಇದೆಯಂತೆ..
ಇವುಗಳು ವಿನಾಶದ ಸಂತತಿಯಲ್ಲಿ ಇವೆ ಎನ್ನಲಾಗಿದೆ..
ಕ್ಯಾಪಿಬರಾ
ಕ್ಯಾಪಿಬರಾ (Capybara)
ಇದರ ವೈಜ್ಞಾನಿಕ ಹೆಸರು Hydrochoerus hydrochaeris..
ಇದನ್ನ capivara ಅಂತ ಬ್ರೆಜಿಲ್ ನಲ್ಲಿ ದಲ್ಲಿ,chigüire, chigüiro,fercho ಕೊಲಂಬಿಯಾ ಮತ್ತೆ ವೆನಿಜುಲಾದಲ್ಲಿ ,carpincho ಎಂದು,ಆರ್ಜಾಂಟೈನಾ, ಪರುಗ್ವೆ,ಉರುಗ್ವೆ ಪ್ರದೇಶದಲ್ಲಿ, ronsoco ಎಂದು ಪೆರು ವಿನಲ್ಲಿ ಕರೆಯುತ್ತಾರೆ..
ಇದನ್ನ ಜಗತ್ತಿನ ಲಾರ್ಜೆಸ್ಟ್ ದಂಶಕ (Rodent)ಎನ್ನಲಾಗಿದೆ ..
ಇವು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ,
ವಯಸ್ಸಿಗೆ ಬಂದ ಕ್ಯಾಪಿಬರಾ 3.48 ರಿಂದ 4.40 ಅಡಿ ಉದ್ಧವಿರುತ್ತವೆ,20 ರಿಂದ 24 ಇಂಚು ಎತ್ತರವಿರುತ್ತವೆ..ಸುಮಾರು 35 ರಿಂದ 66 ಕೆ.ಜಿ ತೂಕವಿರುತ್ತವೆ..ಗಂಡಿಗಿಂತ ಹೆಣ್ಣು ಸ್ವಲ್ಪ ಗಾತ್ರ ಹಾಗೂ ತೂಕದಲ್ಲಿ ತುಸು ಹೆಚ್ಚು ಇರುತ್ತವೆ ಎನ್ನಲಾಗಿದೆ..
ಬ್ರೆಜಿಲ್ ನಲ್ಲಿ ಒಂದು ಹೆಣ್ಣು ಕ್ಯಾಪಿಬೇರಾ ತೂಕ 91 ಕೆ.ಜಿ ವೆರೆಗೂ ಇತ್ತು ಎಂದು ಹೇಳಲಾಗಿದೆ..
ಉರುಗ್ವೆಯಲ್ಲಿ ಒಂದು ಗಂಡು 73 ಕೆ.ಜಿ ತೂಕದ್ದು ದಾಖಲೆಗೆ ಸಿಕ್ಕಿತ್ತಂತೆ..
ಇವುಗಳ ದೇಹ ರಚನೆ..
ಕ್ಯಾಪಿಬರಾ ಗುಂಡ ಗುಂಡಗೆ ಇರುತ್ತವೆ ಉದ್ದನೆಯ ಮೂತಿ ಹಾಗೂ ಬ್ಯಾರೆಲ್ ಆಕಾರದ ದೇಹ ಹೊಂದಿರುತ್ತವೆ,ಸಣ್ಣ ರೋಮವನ್ನ ಹೊಂದಿರುವ ಇವು,ಬೆನ್ನಿನ ಮೇಲೆ ಕೆಂಪು ಹಾಗೂ ಕಂದು ಬಣ್ಣ ಹಾಗೂ ಹೊಟ್ಟೆಯ ಭಾಗದಲ್ಲಿ ಅರಿಶಿನ ಹಾಗೂ ಕಂದು ಮಿಶ್ರಿತ ಕೂದಲು ಹೊಂದಿರುತ್ತವೆ..
ಮುಂದಿನ ಕಾಲು ಸ್ವಲ್ಪ ಗಿಡ್ಡನಾಗಿ, ಹಿಂದಿನ ಕಾಲು ಸ್ವಲ್ಪ ಉದ್ಧವಿರುತ್ತವೆ,3 ಬೆರಳು ಮುಂದೆ ಹಾಗೂ 4 ಬೆರಳು ಹಿಂದಿನ ಕಾಲಿನಲ್ಲಿ ಹೊಂದಿರುತ್ತವೆ,ಬೆರಳುಗಳ ಮಧ್ಯೆ ತೆಳ್ಳನೆ ಚರ್ಮದ ಪದರವಿರುತ್ತದೆ..
1.0.1.3/1.0.1.3 ರಚನೆಯ ಹಲ್ಲನ್ನ ಹೊಂದಿರುತ್ತವೆ,
ಅಂದರೆ 1 ಬಾಚಿ ಹಲ್ಲು,0ಕೋರೆ ಹಲ್ಲು,1 ಮುಂದವಡೆ ಹಲ್ಲು ಹಾಗೂ 3 ದವಡೆ ಹಲ್ಲುಗಳನ್ನ,ಬಾಯಿಯ ಮೇಲೆ ಹಾಗೂ ಕೆಳಗಿನ ಭಾಗದಲ್ಲಿ ಹೊಂದಿರುತ್ತವೆ..
ಕ್ಯಾಪಿಬರಾ ಗಳು ದಟ್ಟ ಕಾಡಿರುವ ಹಾಗೂ ಜೊತೆಗೆ ನದಿ,ಕೆರೆ,ಹಳ್ಳ,ಜೌಗು ಪ್ರದೇಶ,ಕೆಸರು ಹೆಚ್ಚಿರುವ,ನೀರಿನ ಮೂಲ ಇರುವ ಜಾಗದಲ್ಲೇ ಹೆಚ್ಚಾಗಿ ಬದುಕುತ್ತವೆ..
ಇವುಗಳು ಉಭಯವಾಸಿಗಳು ಅಂತಲೂ ಹೇಳಬಹುದು..
ಇವುಗಳು ಅದ್ಬುತ ಈಜುಗಾರರು ನೀರಿನ ಒಳಗೆ 5 ನಿಮಿಷಕ್ಕಿಂತ ಹೆಚ್ಚು ಉಸಿರು ಹಿಡಿದು ಇರಬಲ್ಲ ಸಾಮರ್ಥ್ಯ ಕೂಡ ಹೊಂದಿವೆ..ಇವಕ್ಕೆ ಸ್ವಚ್ಛ0ದವಾಗಿ ವಿಹರಿಸಲು ಸುಮಾರು 10 ಹೆಕ್ಟೇರ್ ಗೂ ಹೆಚ್ಚು ದಟ್ಟ ಕಾಡನ್ನ ತಮ್ಮ ವ್ಯಾಪ್ತಿಯಲ್ಲಿ ಇಟ್ಟುಕೊಂಡು ಇರುತ್ತವಂತೆ.!
ಇವುಗಳು ತಮ್ಮ ವ್ಯಾಪ್ತಿಯನ್ನ ಹೆಚ್ಚಿಸಿ ಕೊಳ್ಳುತ್ತಾ ಬೇರೆ ಬೇರೆ ಜಾಗಗಳಲ್ಲಿ ತಮ್ಮ ಆಸ್ತಿತ್ವ ಸ್ಥಾಪನೆ ಮಾಡಿತ್ತಾ ವಂಶಾಭಿವೃದ್ಧಿ ಮಾಡುವುದು ಸಾಮಾನ್ಯವಂತೆ..
ಇವುಗಳ ಆಹಾರ ಕ್ರಮ ತುಂಬಾ ಕಟ್ಟು ನಿಟ್ಟು ಎನ್ನಲಾಗಿದೆ..ಸಂಪೂರ್ಣ ಸಸ್ಯಾಹಾರಿಯಾದ ಇವುಗಳು,ಜಲಸಸ್ಯ,ಹುಲ್ಲು,ಕೆಲವು ಸೊಪ್ಪು ಹಾಗೂ ಕೆಲವು ಸಣ್ಣ ಸಸ್ಯಗಳನ್ನ ಮಾತ್ರ ತಿನ್ನುತ್ತವೆ,ಮಳೆ,ಚಳಿಗಾಲದಲ್ಲಿ ಹುಲ್ಲು ಹಾಗೂ ಬೇಸಿಗೆಯಲ್ಲಿ ವಿವಿಧ ಬಗೆಯ ಸಸ್ಯ ಇವುಗಳ ಆಹಾರ...
ತಮಗೆ ಚಳಿಗಾಲದಲ್ಲಿ ಸಿಗದ ಪೌಷ್ಟಿಕಾಂಶದ ಕೊರತೆಯನ್ನ ಬೇರೆಯ ಕಾಲಗಳಲ್ಲಿ ತಿಂದು ಸಮತೋಲನ ಮಾಡಿಕೊಳ್ಳುತ್ತವೆಯಂತೆ..
ಒಮ್ಮೊಮ್ಮೆ ಪೌಷ್ಟಿಕಾಂಶದ ಕೊರತೆಯಾದಾಗ ತಮ್ಮ ಮಲವನ್ನ ತಾವೇ ತಿನ್ನುವುದೂ ಇದೆಯಂತೆ!
ದನ,ಎಮ್ಮೆ,ಕುರಿಗಳಂತೆ ಇವು ತಿಂದ ಆಹಾರವನ್ನ ಮೆಲುಕು ಹಾಕುತ್ತವೆ..
ಇವುಗಳ ಹಲ್ಲು ನಿರಂತರ ಬೆಳೆಯುತ್ತಾ ಇರುತ್ತ್ವಂತೆ, ಕಾರಣ ನಿರಂತರ ಹಲ್ಲಿನ ಬಳಕೆಯಿಂದ ಸವೆದು ಹೋದ ಹಲ್ಲು ಮತ್ತೆ ಬೆಳೆಯುತ್ತಾ ಇರೋದು ಇವಕ್ಕೆ ವರದಾನ..
ಇವು ಹೆಚ್ಚಾಗಿ ಗುಂಪಿನಲ್ಲೇ ಬದುಕುತ್ತವೆ 10 ರಿಂದ 20 ಒಟ್ಟೊಟ್ಟಿಗೆ ಬದುಕುತ್ತವೆ..
ಸುಮಾರು 3 ರಿಂದ ನಾಲ್ಕು ಗಂಡು ಹಾಗೂ 7 ರಿಂದ 8 ಹೆಣ್ಣು ಹಾಗೂ ಮರಿಗಳು ಗುಂಪಿನಲ್ಲಿ ಇರುತ್ತವೆ..
ಬೇಸಿಗೆಯಲ್ಲಿ 40 ರಿಂದ100 ಕ್ಕೂ ಹೆಚ್ಚು ಗುಂಪು ಒಟ್ಟಾಗೋದು ಇದೆ ಎನ್ನಲಾಗಿದೆ..
ಅಪಾಯ ಎದುರಾದಾಗ ಅಥವಾ ಗುಂಪಿಗೆ ಎಚ್ಚರಿಸಲು ನಾಯಿ ರೀತಿ ಬೊಗಳಿ ಶಬ್ದ ಮಾಡುತ್ತವೆ..
ಇವು..ಮೂಗು ಹಾಗೂ ಗುದದ್ವಾರದಲ್ಲಿ
ಎರಡು ಕಡೆ ವಾಸನೆ ಗ್ರಂಥಿ ಹೊಂದಿರುತ್ತವೆ,ತಮ್ಮ ಗುಂಪನ್ನು ಗುರುತಿಸಲು ಗುದದ್ವಾರದ ಭಾಗವನ್ನ ಯಾವುದಾದರೂ ಮರಕ್ಕೆ ತಾಗಿಸಿ ಆ ಭಾಗದಲ್ಲಿ ಇದ್ದ ಕೂದಲನ್ನು ಅಲ್ಲಿಗೆ ಅಂಟಿಸಿ ಹೋಗುತ್ತವೆ ಆ ವಾಸನೆ ಬಹಳ ಸಮಯದ ವರೆಗೆ ಇರುತ್ತದೆ ಅದನ್ನ ತನ್ನ ಜೊತೆಗಾರರು ಗುರುತಿಸಿ ತನ್ನ ಗುಂಪು ಅಥವಾ ಸಂಗಾತಿಯನ್ನ ಸೇರಲು ಸಹಾಯಕ ವಾಗುತ್ತದೆ ಹಾಗೂ ಮೂತ್ರ ವಿಸರ್ಜನೆಯೂ ಹೀಗೆ ತಮ್ಮವರನ್ನ ಗುರುತಿಸುತ್ತವೆ ಗಂಡು ಕ್ಯಾಪಿಬರಾ ಮಾತ್ರ..
ಕ್ಯಾಪಿಬರಾ ಗಳು ಸಂತಾನೋತ್ಪತ್ತಿ ಪ್ರಕ್ರಿಯೆ ನೀರಿನಲ್ಲಿ ಮಾಡುತ್ತವೆ..
ಸುಮಾರು 130 ರಿಂದ 150 ದಿನ ಗರ್ಭದರಿಸಿದ ನಂತರ ಹೆಣ್ಣು ಮರಿ ಹಾಕಿ ಕೆಲವೇಹೊತ್ತಿನಲ್ಲಿ ಮತ್ತೆ ತನ್ನ ಗುಂಪನ್ನು ಸೇರಿಕೊಳ್ಳುತ್ತದೆ..
ಒಮ್ಮೆಗೆ 3 ರಿಂದ ನಾಲ್ಕು ಮರಿ ಹಾಕುತ್ತವೆ..ಮರಿಗಳು ಒಂದು ವಾರಕ್ಕೆ ಹುಲ್ಲು ತಿನ್ನಲು ಪ್ರಾರಂಭ ಮಾಡುತ್ತವೆ..16 ವಾರಗಳ ಕಾಲ ತಾಯಿ ಹಾಲುಣಿಸುತ್ತದೆ..
ದೊಡ್ಡವಾದ ಕೂಡಲೇ ಅವುಗಳು ಗುಂಪಿಗೆ ಸೇರಿಕೊಂಡು ಸ್ವಂತ ಜೀವನ ಪ್ರಾರಂಭಿಸುತ್ತವೆ..
ಏಪ್ರಿಲ್ ನಿಂದ ಮೇ ಇವುಗಳು ಮರಿ ಹಾಕುವ ಕಾಲ ಎನ್ನಲಾಗಿದೆ..
ಕ್ಯಾಪಿಬರಾಗಳು ಮೂಗು ಮಾತ್ರ ನೀರಿಂದ ಮೇಲೆ ಇಟ್ಟುಕೊಂಡು ನೀರಿನಲ್ಲೇ ನಿದ್ರಿಸ ಬಲ್ಲವು..
ರಾತ್ರಿ ಹೊತ್ತು ಹೆಚ್ಚು ನಿದ್ರೆ ಮಾಡುತ್ತವೆ..ಉಳಿದ ಸಮಯ ಆಹಾರ ಹುಡುಕಾಟದಲ್ಲಿ ತೊಡಗಿಸಿ ಕೊಳ್ಳುತ್ತವೆ..
ಸುಮಾರು 8ರಿಂದ 10 ವರ್ಷ ಜೀವಿತಾವಧಿ ಹೊಂದಿರುವ ಇವು..
ಈ ಕ್ಯಾಪಿಬರಾ ಗಳು
ವೈರಿಗಳಾದ,ಚಿರತೆ,ನರಿ,ತೋಳ,ಹಸಿರು ಅನಾಕೊಂಡಾ,ಗಿಡುಗ ಗಳ ದಾಳಿಯಿಂದ ಆಯಸ್ಸು ಕಳೆಯುವ ಮೊದಲೇ ಹೆಚ್ಚಾಗಿ ಸಾವಿಗೆ ತುತ್ತಾಗೋದು ಸಾಮಾನ್ಯ ಎನ್ನಲಾಗಿದೆ..
ಒಂದು ಖುಷಿಯ ವಿಷಯ ಎಂದರೆ
ಈ ಅಪರೂಪದ ಪ್ರಾಣಿಗಳು ವಿನಾಶದ ಅಂಚಿನಲ್ಲಿ ಇಲ್ಲ..
ಈ ಫೋಟೋ ನಾರ್ತ್ ವೆಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಜೂ ನಲ್ಲಿ ತೆಗೆದದ್ದು..
ಇಲ್ಲಿ
ಕ್ಯಾಪಿಬರಾ ಮತ್ತು ಸ್ಪೈಡರ್ ಮಂಗಗಳ ನ್ನ ಒಂದೇ ಕಡೆ ಇಡಲಾಗಿದೆ..
ಈ ಪಾಪದ ಕ್ಯಾಪಿಬರಾ ಗಳನ್ನ..
ಈ ಮಂಗ ಮುಂಡೆವು,ಇನ್ನಿಲ್ಲದಂತೆ ಕೀಟಲೆ ತರಲೆ,ಜೀವ ತಿಂದು ರಗಳೆ ಮಾಡಿ,ಹಿಂಸೆ ಮಾಡುತ್ತಾ ಇದ್ದವು..
ಆದರೆ ಅವು ಸುಮ್ಮನೆ ಮಲಗಿದ್ದವು..
ಪಾಪ..
ಇದರ ವೈಜ್ಞಾನಿಕ ಹೆಸರು Hydrochoerus hydrochaeris..
ಇದನ್ನ capivara ಅಂತ ಬ್ರೆಜಿಲ್ ನಲ್ಲಿ ದಲ್ಲಿ,chigüire, chigüiro,fercho ಕೊಲಂಬಿಯಾ ಮತ್ತೆ ವೆನಿಜುಲಾದಲ್ಲಿ ,carpincho ಎಂದು,ಆರ್ಜಾಂಟೈನಾ, ಪರುಗ್ವೆ,ಉರುಗ್ವೆ ಪ್ರದೇಶದಲ್ಲಿ, ronsoco ಎಂದು ಪೆರು ವಿನಲ್ಲಿ ಕರೆಯುತ್ತಾರೆ..
ಇದನ್ನ ಜಗತ್ತಿನ ಲಾರ್ಜೆಸ್ಟ್ ದಂಶಕ (Rodent)ಎನ್ನಲಾಗಿದೆ ..
ಇವು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ,
ವಯಸ್ಸಿಗೆ ಬಂದ ಕ್ಯಾಪಿಬರಾ 3.48 ರಿಂದ 4.40 ಅಡಿ ಉದ್ಧವಿರುತ್ತವೆ,20 ರಿಂದ 24 ಇಂಚು ಎತ್ತರವಿರುತ್ತವೆ..ಸುಮಾರು 35 ರಿಂದ 66 ಕೆ.ಜಿ ತೂಕವಿರುತ್ತವೆ..ಗಂಡಿಗಿಂತ ಹೆಣ್ಣು ಸ್ವಲ್ಪ ಗಾತ್ರ ಹಾಗೂ ತೂಕದಲ್ಲಿ ತುಸು ಹೆಚ್ಚು ಇರುತ್ತವೆ ಎನ್ನಲಾಗಿದೆ..
ಬ್ರೆಜಿಲ್ ನಲ್ಲಿ ಒಂದು ಹೆಣ್ಣು ಕ್ಯಾಪಿಬೇರಾ ತೂಕ 91 ಕೆ.ಜಿ ವೆರೆಗೂ ಇತ್ತು ಎಂದು ಹೇಳಲಾಗಿದೆ..
ಉರುಗ್ವೆಯಲ್ಲಿ ಒಂದು ಗಂಡು 73 ಕೆ.ಜಿ ತೂಕದ್ದು ದಾಖಲೆಗೆ ಸಿಕ್ಕಿತ್ತಂತೆ..
ಇವುಗಳ ದೇಹ ರಚನೆ..
ಕ್ಯಾಪಿಬರಾ ಗುಂಡ ಗುಂಡಗೆ ಇರುತ್ತವೆ ಉದ್ದನೆಯ ಮೂತಿ ಹಾಗೂ ಬ್ಯಾರೆಲ್ ಆಕಾರದ ದೇಹ ಹೊಂದಿರುತ್ತವೆ,ಸಣ್ಣ ರೋಮವನ್ನ ಹೊಂದಿರುವ ಇವು,ಬೆನ್ನಿನ ಮೇಲೆ ಕೆಂಪು ಹಾಗೂ ಕಂದು ಬಣ್ಣ ಹಾಗೂ ಹೊಟ್ಟೆಯ ಭಾಗದಲ್ಲಿ ಅರಿಶಿನ ಹಾಗೂ ಕಂದು ಮಿಶ್ರಿತ ಕೂದಲು ಹೊಂದಿರುತ್ತವೆ..
ಮುಂದಿನ ಕಾಲು ಸ್ವಲ್ಪ ಗಿಡ್ಡನಾಗಿ, ಹಿಂದಿನ ಕಾಲು ಸ್ವಲ್ಪ ಉದ್ಧವಿರುತ್ತವೆ,3 ಬೆರಳು ಮುಂದೆ ಹಾಗೂ 4 ಬೆರಳು ಹಿಂದಿನ ಕಾಲಿನಲ್ಲಿ ಹೊಂದಿರುತ್ತವೆ,ಬೆರಳುಗಳ ಮಧ್ಯೆ ತೆಳ್ಳನೆ ಚರ್ಮದ ಪದರವಿರುತ್ತದೆ..
1.0.1.3/1.0.1.3 ರಚನೆಯ ಹಲ್ಲನ್ನ ಹೊಂದಿರುತ್ತವೆ,
ಅಂದರೆ 1 ಬಾಚಿ ಹಲ್ಲು,0ಕೋರೆ ಹಲ್ಲು,1 ಮುಂದವಡೆ ಹಲ್ಲು ಹಾಗೂ 3 ದವಡೆ ಹಲ್ಲುಗಳನ್ನ,ಬಾಯಿಯ ಮೇಲೆ ಹಾಗೂ ಕೆಳಗಿನ ಭಾಗದಲ್ಲಿ ಹೊಂದಿರುತ್ತವೆ..
ಕ್ಯಾಪಿಬರಾ ಗಳು ದಟ್ಟ ಕಾಡಿರುವ ಹಾಗೂ ಜೊತೆಗೆ ನದಿ,ಕೆರೆ,ಹಳ್ಳ,ಜೌಗು ಪ್ರದೇಶ,ಕೆಸರು ಹೆಚ್ಚಿರುವ,ನೀರಿನ ಮೂಲ ಇರುವ ಜಾಗದಲ್ಲೇ ಹೆಚ್ಚಾಗಿ ಬದುಕುತ್ತವೆ..
ಇವುಗಳು ಉಭಯವಾಸಿಗಳು ಅಂತಲೂ ಹೇಳಬಹುದು..
ಇವುಗಳು ಅದ್ಬುತ ಈಜುಗಾರರು ನೀರಿನ ಒಳಗೆ 5 ನಿಮಿಷಕ್ಕಿಂತ ಹೆಚ್ಚು ಉಸಿರು ಹಿಡಿದು ಇರಬಲ್ಲ ಸಾಮರ್ಥ್ಯ ಕೂಡ ಹೊಂದಿವೆ..ಇವಕ್ಕೆ ಸ್ವಚ್ಛ0ದವಾಗಿ ವಿಹರಿಸಲು ಸುಮಾರು 10 ಹೆಕ್ಟೇರ್ ಗೂ ಹೆಚ್ಚು ದಟ್ಟ ಕಾಡನ್ನ ತಮ್ಮ ವ್ಯಾಪ್ತಿಯಲ್ಲಿ ಇಟ್ಟುಕೊಂಡು ಇರುತ್ತವಂತೆ.!
ಇವುಗಳು ತಮ್ಮ ವ್ಯಾಪ್ತಿಯನ್ನ ಹೆಚ್ಚಿಸಿ ಕೊಳ್ಳುತ್ತಾ ಬೇರೆ ಬೇರೆ ಜಾಗಗಳಲ್ಲಿ ತಮ್ಮ ಆಸ್ತಿತ್ವ ಸ್ಥಾಪನೆ ಮಾಡಿತ್ತಾ ವಂಶಾಭಿವೃದ್ಧಿ ಮಾಡುವುದು ಸಾಮಾನ್ಯವಂತೆ..
ಇವುಗಳ ಆಹಾರ ಕ್ರಮ ತುಂಬಾ ಕಟ್ಟು ನಿಟ್ಟು ಎನ್ನಲಾಗಿದೆ..ಸಂಪೂರ್ಣ ಸಸ್ಯಾಹಾರಿಯಾದ ಇವುಗಳು,ಜಲಸಸ್ಯ,ಹುಲ್ಲು,ಕೆಲವು ಸೊಪ್ಪು ಹಾಗೂ ಕೆಲವು ಸಣ್ಣ ಸಸ್ಯಗಳನ್ನ ಮಾತ್ರ ತಿನ್ನುತ್ತವೆ,ಮಳೆ,ಚಳಿಗಾಲದಲ್ಲಿ ಹುಲ್ಲು ಹಾಗೂ ಬೇಸಿಗೆಯಲ್ಲಿ ವಿವಿಧ ಬಗೆಯ ಸಸ್ಯ ಇವುಗಳ ಆಹಾರ...
ತಮಗೆ ಚಳಿಗಾಲದಲ್ಲಿ ಸಿಗದ ಪೌಷ್ಟಿಕಾಂಶದ ಕೊರತೆಯನ್ನ ಬೇರೆಯ ಕಾಲಗಳಲ್ಲಿ ತಿಂದು ಸಮತೋಲನ ಮಾಡಿಕೊಳ್ಳುತ್ತವೆಯಂತೆ..
ಒಮ್ಮೊಮ್ಮೆ ಪೌಷ್ಟಿಕಾಂಶದ ಕೊರತೆಯಾದಾಗ ತಮ್ಮ ಮಲವನ್ನ ತಾವೇ ತಿನ್ನುವುದೂ ಇದೆಯಂತೆ!
ದನ,ಎಮ್ಮೆ,ಕುರಿಗಳಂತೆ ಇವು ತಿಂದ ಆಹಾರವನ್ನ ಮೆಲುಕು ಹಾಕುತ್ತವೆ..
ಇವುಗಳ ಹಲ್ಲು ನಿರಂತರ ಬೆಳೆಯುತ್ತಾ ಇರುತ್ತ್ವಂತೆ, ಕಾರಣ ನಿರಂತರ ಹಲ್ಲಿನ ಬಳಕೆಯಿಂದ ಸವೆದು ಹೋದ ಹಲ್ಲು ಮತ್ತೆ ಬೆಳೆಯುತ್ತಾ ಇರೋದು ಇವಕ್ಕೆ ವರದಾನ..
ಇವು ಹೆಚ್ಚಾಗಿ ಗುಂಪಿನಲ್ಲೇ ಬದುಕುತ್ತವೆ 10 ರಿಂದ 20 ಒಟ್ಟೊಟ್ಟಿಗೆ ಬದುಕುತ್ತವೆ..
ಸುಮಾರು 3 ರಿಂದ ನಾಲ್ಕು ಗಂಡು ಹಾಗೂ 7 ರಿಂದ 8 ಹೆಣ್ಣು ಹಾಗೂ ಮರಿಗಳು ಗುಂಪಿನಲ್ಲಿ ಇರುತ್ತವೆ..
ಬೇಸಿಗೆಯಲ್ಲಿ 40 ರಿಂದ100 ಕ್ಕೂ ಹೆಚ್ಚು ಗುಂಪು ಒಟ್ಟಾಗೋದು ಇದೆ ಎನ್ನಲಾಗಿದೆ..
ಅಪಾಯ ಎದುರಾದಾಗ ಅಥವಾ ಗುಂಪಿಗೆ ಎಚ್ಚರಿಸಲು ನಾಯಿ ರೀತಿ ಬೊಗಳಿ ಶಬ್ದ ಮಾಡುತ್ತವೆ..
ಇವು..ಮೂಗು ಹಾಗೂ ಗುದದ್ವಾರದಲ್ಲಿ
ಎರಡು ಕಡೆ ವಾಸನೆ ಗ್ರಂಥಿ ಹೊಂದಿರುತ್ತವೆ,ತಮ್ಮ ಗುಂಪನ್ನು ಗುರುತಿಸಲು ಗುದದ್ವಾರದ ಭಾಗವನ್ನ ಯಾವುದಾದರೂ ಮರಕ್ಕೆ ತಾಗಿಸಿ ಆ ಭಾಗದಲ್ಲಿ ಇದ್ದ ಕೂದಲನ್ನು ಅಲ್ಲಿಗೆ ಅಂಟಿಸಿ ಹೋಗುತ್ತವೆ ಆ ವಾಸನೆ ಬಹಳ ಸಮಯದ ವರೆಗೆ ಇರುತ್ತದೆ ಅದನ್ನ ತನ್ನ ಜೊತೆಗಾರರು ಗುರುತಿಸಿ ತನ್ನ ಗುಂಪು ಅಥವಾ ಸಂಗಾತಿಯನ್ನ ಸೇರಲು ಸಹಾಯಕ ವಾಗುತ್ತದೆ ಹಾಗೂ ಮೂತ್ರ ವಿಸರ್ಜನೆಯೂ ಹೀಗೆ ತಮ್ಮವರನ್ನ ಗುರುತಿಸುತ್ತವೆ ಗಂಡು ಕ್ಯಾಪಿಬರಾ ಮಾತ್ರ..
ಕ್ಯಾಪಿಬರಾ ಗಳು ಸಂತಾನೋತ್ಪತ್ತಿ ಪ್ರಕ್ರಿಯೆ ನೀರಿನಲ್ಲಿ ಮಾಡುತ್ತವೆ..
ಸುಮಾರು 130 ರಿಂದ 150 ದಿನ ಗರ್ಭದರಿಸಿದ ನಂತರ ಹೆಣ್ಣು ಮರಿ ಹಾಕಿ ಕೆಲವೇಹೊತ್ತಿನಲ್ಲಿ ಮತ್ತೆ ತನ್ನ ಗುಂಪನ್ನು ಸೇರಿಕೊಳ್ಳುತ್ತದೆ..
ಒಮ್ಮೆಗೆ 3 ರಿಂದ ನಾಲ್ಕು ಮರಿ ಹಾಕುತ್ತವೆ..ಮರಿಗಳು ಒಂದು ವಾರಕ್ಕೆ ಹುಲ್ಲು ತಿನ್ನಲು ಪ್ರಾರಂಭ ಮಾಡುತ್ತವೆ..16 ವಾರಗಳ ಕಾಲ ತಾಯಿ ಹಾಲುಣಿಸುತ್ತದೆ..
ದೊಡ್ಡವಾದ ಕೂಡಲೇ ಅವುಗಳು ಗುಂಪಿಗೆ ಸೇರಿಕೊಂಡು ಸ್ವಂತ ಜೀವನ ಪ್ರಾರಂಭಿಸುತ್ತವೆ..
ಏಪ್ರಿಲ್ ನಿಂದ ಮೇ ಇವುಗಳು ಮರಿ ಹಾಕುವ ಕಾಲ ಎನ್ನಲಾಗಿದೆ..
ಕ್ಯಾಪಿಬರಾಗಳು ಮೂಗು ಮಾತ್ರ ನೀರಿಂದ ಮೇಲೆ ಇಟ್ಟುಕೊಂಡು ನೀರಿನಲ್ಲೇ ನಿದ್ರಿಸ ಬಲ್ಲವು..
ರಾತ್ರಿ ಹೊತ್ತು ಹೆಚ್ಚು ನಿದ್ರೆ ಮಾಡುತ್ತವೆ..ಉಳಿದ ಸಮಯ ಆಹಾರ ಹುಡುಕಾಟದಲ್ಲಿ ತೊಡಗಿಸಿ ಕೊಳ್ಳುತ್ತವೆ..
ಸುಮಾರು 8ರಿಂದ 10 ವರ್ಷ ಜೀವಿತಾವಧಿ ಹೊಂದಿರುವ ಇವು..
ಈ ಕ್ಯಾಪಿಬರಾ ಗಳು
ವೈರಿಗಳಾದ,ಚಿರತೆ,ನರಿ,ತೋಳ,ಹಸಿರು ಅನಾಕೊಂಡಾ,ಗಿಡುಗ ಗಳ ದಾಳಿಯಿಂದ ಆಯಸ್ಸು ಕಳೆಯುವ ಮೊದಲೇ ಹೆಚ್ಚಾಗಿ ಸಾವಿಗೆ ತುತ್ತಾಗೋದು ಸಾಮಾನ್ಯ ಎನ್ನಲಾಗಿದೆ..
ಒಂದು ಖುಷಿಯ ವಿಷಯ ಎಂದರೆ
ಈ ಅಪರೂಪದ ಪ್ರಾಣಿಗಳು ವಿನಾಶದ ಅಂಚಿನಲ್ಲಿ ಇಲ್ಲ..
ಈ ಫೋಟೋ ನಾರ್ತ್ ವೆಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಜೂ ನಲ್ಲಿ ತೆಗೆದದ್ದು..
ಇಲ್ಲಿ
ಕ್ಯಾಪಿಬರಾ ಮತ್ತು ಸ್ಪೈಡರ್ ಮಂಗಗಳ ನ್ನ ಒಂದೇ ಕಡೆ ಇಡಲಾಗಿದೆ..
ಈ ಪಾಪದ ಕ್ಯಾಪಿಬರಾ ಗಳನ್ನ..
ಈ ಮಂಗ ಮುಂಡೆವು,ಇನ್ನಿಲ್ಲದಂತೆ ಕೀಟಲೆ ತರಲೆ,ಜೀವ ತಿಂದು ರಗಳೆ ಮಾಡಿ,ಹಿಂಸೆ ಮಾಡುತ್ತಾ ಇದ್ದವು..
ಆದರೆ ಅವು ಸುಮ್ಮನೆ ಮಲಗಿದ್ದವು..
ಪಾಪ..
ಪೆಟಗೋನಿಯನ್ ಮಾರಾ.
ಪೆಟಗೋನಿಯನ್ ಮಾರಾ..
ಇದರ ವೈಜ್ಞಾನಿಕ ಹೆಸರು Dolichotis patagonum..
ಇವಕ್ಕೆ Patagonian cavy, Patagonian hare, or dillaby.ಎನ್ನುವ ವಿವಿಧ ಹೆಸರೂ ಇದೆ..
ಇವುಗಳನ್ನ ಸ್ವಲ್ಪ ದೊಡ್ಡ ದೇಹದ ದಂಶಕಗಳು,(Rodent)ಎನ್ನಬಹುದು..
ಜಾಕ್ ಮೊಲ ದಂತೆ ಸ್ವಲ ಮಟ್ಟಿಗೆ ಕಾಣಿಸುವ ಜೀವಿಗಳು,ಇವುಗಳು ಸಂಪೂರ್ಣ ಸಸ್ಯಾಹಾರಿಗಳು..
ಇವುಗಳು ಉದ್ದ ಕಿವಿ,ಉದ್ದ,ತೆಳ್ಳನೆಯ ಕಾಲು ಹೊಂದಿರುತ್ತವೆ,ಹಿಂದಿನ ಕಾಲು ಉದ್ಧವಿದ್ದು,ಮುಂದಿನ ಕಾಲು ಸ್ವಲ್ಪ ಗಿಡ್ಡ ಇರುತ್ತದೆ..
ಮುಂದಿನ ಕಾಲಿನಲ್ಲಿ ನಾಲ್ಕು ಹಾಗೂ ಹಿಂದಿನ ಕಾಲಿನಲ್ಲಿ 3 ಬೆರಳು ಇರುತ್ತವೆ ಓಡಲು ಸಹಾಯವಾಗುವ ಪಂಜವಿರುತ್ತದೆ,ತಲೆ ಮತ್ತು ದೇಹದ ಉದ್ದ 27 ರಿಂದ 30 ಇಂಚು,1.6 ರಿಂದ 2 ಇಂಚು ಉದ್ದದ ಬಾಲ,ಸುಮಾರು 3 ಅಡಿ ಎತ್ತರ,8 ರಿಂದ 16 ಕೆ.ಜಿ ತೂಕವಿರುತ್ತವೆ...
ಬಹಳ ಸಣ್ಣ ಬಾಲ ಹೊಂದಿರುವ ಇವು,ಕೂದಲು ಸ್ವಲ್ಪ ಕಡಿಮೆ ಇರುತ್ತದೆ,ಹೊಟ್ಟೆಯ ಭಾಗದಲ್ಲಿ,ಹಿಂದಿನ ಭಾಗದಲ್ಲಿ ಸ್ವಲ್ಪ ಬಿಳಿಯಬಣ್ಣ ಹಾಗೂ ಸಂಪೂರ್ಣ ಕಂದು ಬಣ್ಣ ಇವುಗಳ ಮೈ ಬಣ್ಣವಿರುತ್ತೆ..
ಕಿತ್ತಳೆ ಬಣ್ಣ ಮುಖದ ಕೆಲವು ಭಾಗದಲ್ಲಿ ಕಾಣಸಿಗುತ್ತೆ..
14 ವರ್ಷ ಇವುಗಳ ಜೀವಿತಾವಧಿ ಎನ್ನಲಾಗಿದೆ..
ಮಾರಾ ಕೇವಲ ಮಧ್ಯ ಹಾಗೂ ದಕ್ಷಿಣ ಅರ್ಜಂಟೈನಾ ಹಾಗೂ ಪೆಟಗೋನಿಯಾದ ಕೆಲವು ಭಾಗದಲ್ಲಿ ಮಾತ್ರ ಕಾಣ ಸಿಗುತ್ತವೆ ಎನ್ನಲಾಗಿದೆ..ಇವುಗಳು ಹೆಚ್ಚಾಗಿ ಕುರುಚಲು ಗಿಡ ಹಾಗೂ ಸಣ್ಣ ಕಾಡಿನಲ್ಲಿ ವಾಸ ಮಾಡುತ್ತವೆ,ಕಾರಣ ವೈರಿಗಳಿಂದ ಅಡಗಿ ಕೂರಲು, ತಪ್ಪಿಸಿ ಕೊಳ್ಳಲು ಅವಕ್ಕೆ ಸಹಾಯಕ..
ದಿನದ 46%ಸಮಯ ಆಹಾರ ಹುಡುಕಲು ತಿನ್ನಲು ತೊಡಗಿಸಿ ಕೊಳ್ಳುತ್ತವೆ..ಅದ್ರಲ್ಲಿ ಹೆಣ್ಣು ಇನ್ನೂ ಹೆಚ್ಚು ಸಮಯ ಆಹಾರ ಹುಡುಕಾಟ ತಿನ್ನುವುದರಲ್ಲಿ ಹೆಚ್ಚು ಸಮಯ ಕಳೆಯುತ್ತದೆ,ಗಂಡು ವೈರಿಗಳನ್ನು ಕಾಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನಲಾಗಿದೆ..
ಗಂಟೆಗೆ 45 ಮೈಲಿ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರುವ ಇವು..
ಉದ್ದನೆಯ ಕಾಲುಗಳೇ ವೈರಿಗಳಿಂದ ತಪ್ಪಿಸಿ ಕೊಳ್ಳಲು ಸಹಾಯಕ ಎನ್ನಲಾಗಿದೆ..!
ಹೆಚ್ಚಾಗಿ ಗಂಡು ಹೆಣ್ಣಿನ ಜೊತೆಯೇ ಇರುತ್ತದೆ ಹಾಗೂ ಅದನ್ನೇ ಅನುಸರಿಸುತ್ತಾ ಹೋಗುತ್ತದೆ..ಸಂಬಂಧ ಉಳಿಸಿ ಕೊಳ್ಳುವ ಹೆಚ್ಚಿನ ಜವಾಬ್ದಾರಿ ಗಂಡಿನದ್ದೇ ಆಗಿರುತ್ತದೆಯಂತೆ,ಮೂತ್ರದ ಮೂಲಕ ಅವುಗಳನ್ನ ಗುರುತಿಸಿ ಹಿಂಬಾಲಿಸುವುದು ಇದೆಯಂತೆ..
ಒಂದು ಸಂಗಾತಿ ತೀರಿ ಕೊಂಡ ಮೇಲಷ್ಟೇ ಇನ್ನೊಂದು ಸಂಗಾತಿ ಆರಿಸಿ ಕೊಳ್ಳುವುದು ಇವುಗಳ ವಿಶೇಷ ಜೀವನ ಶೈಲಿ..!
100 ದಿನ ಗರ್ಭ ಧರಿಸಿ,ಮರಿ ಹಾಕುವ ಸಮಯದಲ್ಲಿ 10 ಅಡಿಗೂ ಹೆಚ್ಚು ಮಣ್ಣಿನಲ್ಲಿ ಹೊಂಡ ತೆಗೆದು ಅಲ್ಲಿ ಮರಿ ಹಾಕಿ ಹಾಲುಣಿಸಿ ಸುಮಾರು 75 ದಿನ ಸಾಕುತ್ತವೆ..ಇವುಗಳ ಪ್ರಭೇಧದಲ್ಲಿ ಇವುಗಳೇ ಹೆಚ್ಚು ದಿನ ಮರಿಗಳನ್ನ ಸಾಕುವ ದ0ಶಕಗಳು ಎನ್ನಲಾಗಿದೆ,ಮರಿ ಹುಟ್ಟಿದ ತಕ್ಷಣ ನಡೆಯುವ ಸಾಮರ್ಥ್ಯ ಹೊಂದಿವೆ,ಇದು ಸೆಪ್ಟೆಂಬರ್ ಅಥವಾ ಆಕ್ಟೊಬರ್ ನಲ್ಲಿ ನಡೆಯುವ ಪ್ರಕ್ರಿಯೆ..ವರ್ಷಕ್ಕೆ ಒಮ್ಮೆ ಒಂದು ಅಥವಾ ಎರಡು ಮರಿಯನ್ನ ಹಾಕುವ ಸಾಮರ್ಥ್ಯ ಹೊಂದಿದೆ ಹೆಣ್ಣು ಮಾರಾ..
ಸಾಕಿದ ಮಾರಾ ಗಳು ಮೂರರಿಂದ ನಾಲ್ಕು ಮರಿ ಹಾಕುವುದೂ ಇದೆಯಂತೆ..!
ಹೆಚ್ಚು ವೈರಿ ಪ್ರಾಣಿಗಳ ದಾಳಿ,ಕೃಷಿ ಭೂಮಿ ವಿಸ್ತರಣೆ,ಕಾಡ್ಗಿಚ್ಚು,ಕಾಡು ನಾಶ ಹಾಗೂ ಮಾಂಸಕ್ಕಾಗಿ,ಚರ್ಮಕ್ಕಾಗಿ ಮನುಷ್ಯ ಮಾಡುತ್ತಿರುವ ಭೇಟೆಯಿಂದಾಗಿ ಈ ಅಪರೂಪದ ಜೀವಿಗಳು ವಿನಾಶದ ಅಂಚಿಗೆ ನಿಧಾನಕ್ಕೆ ತಲುಪುತ್ತಾ ಇವೆ ಅನ್ನೋದು ಆತಂಕಕಾರಿ ಸಂಗತಿ..
ನಾರ್ತ್ ವೆಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಜೂ ನಲ್ಲಿ ತೆಗೆದ ಫೋಟೋ ಇದು..
ಇದರ ವೈಜ್ಞಾನಿಕ ಹೆಸರು Dolichotis patagonum..
ಇವಕ್ಕೆ Patagonian cavy, Patagonian hare, or dillaby.ಎನ್ನುವ ವಿವಿಧ ಹೆಸರೂ ಇದೆ..
ಇವುಗಳನ್ನ ಸ್ವಲ್ಪ ದೊಡ್ಡ ದೇಹದ ದಂಶಕಗಳು,(Rodent)ಎನ್ನಬಹುದು..
ಜಾಕ್ ಮೊಲ ದಂತೆ ಸ್ವಲ ಮಟ್ಟಿಗೆ ಕಾಣಿಸುವ ಜೀವಿಗಳು,ಇವುಗಳು ಸಂಪೂರ್ಣ ಸಸ್ಯಾಹಾರಿಗಳು..
ಇವುಗಳು ಉದ್ದ ಕಿವಿ,ಉದ್ದ,ತೆಳ್ಳನೆಯ ಕಾಲು ಹೊಂದಿರುತ್ತವೆ,ಹಿಂದಿನ ಕಾಲು ಉದ್ಧವಿದ್ದು,ಮುಂದಿನ ಕಾಲು ಸ್ವಲ್ಪ ಗಿಡ್ಡ ಇರುತ್ತದೆ..
ಮುಂದಿನ ಕಾಲಿನಲ್ಲಿ ನಾಲ್ಕು ಹಾಗೂ ಹಿಂದಿನ ಕಾಲಿನಲ್ಲಿ 3 ಬೆರಳು ಇರುತ್ತವೆ ಓಡಲು ಸಹಾಯವಾಗುವ ಪಂಜವಿರುತ್ತದೆ,ತಲೆ ಮತ್ತು ದೇಹದ ಉದ್ದ 27 ರಿಂದ 30 ಇಂಚು,1.6 ರಿಂದ 2 ಇಂಚು ಉದ್ದದ ಬಾಲ,ಸುಮಾರು 3 ಅಡಿ ಎತ್ತರ,8 ರಿಂದ 16 ಕೆ.ಜಿ ತೂಕವಿರುತ್ತವೆ...
ಬಹಳ ಸಣ್ಣ ಬಾಲ ಹೊಂದಿರುವ ಇವು,ಕೂದಲು ಸ್ವಲ್ಪ ಕಡಿಮೆ ಇರುತ್ತದೆ,ಹೊಟ್ಟೆಯ ಭಾಗದಲ್ಲಿ,ಹಿಂದಿನ ಭಾಗದಲ್ಲಿ ಸ್ವಲ್ಪ ಬಿಳಿಯಬಣ್ಣ ಹಾಗೂ ಸಂಪೂರ್ಣ ಕಂದು ಬಣ್ಣ ಇವುಗಳ ಮೈ ಬಣ್ಣವಿರುತ್ತೆ..
ಕಿತ್ತಳೆ ಬಣ್ಣ ಮುಖದ ಕೆಲವು ಭಾಗದಲ್ಲಿ ಕಾಣಸಿಗುತ್ತೆ..
14 ವರ್ಷ ಇವುಗಳ ಜೀವಿತಾವಧಿ ಎನ್ನಲಾಗಿದೆ..
ಮಾರಾ ಕೇವಲ ಮಧ್ಯ ಹಾಗೂ ದಕ್ಷಿಣ ಅರ್ಜಂಟೈನಾ ಹಾಗೂ ಪೆಟಗೋನಿಯಾದ ಕೆಲವು ಭಾಗದಲ್ಲಿ ಮಾತ್ರ ಕಾಣ ಸಿಗುತ್ತವೆ ಎನ್ನಲಾಗಿದೆ..ಇವುಗಳು ಹೆಚ್ಚಾಗಿ ಕುರುಚಲು ಗಿಡ ಹಾಗೂ ಸಣ್ಣ ಕಾಡಿನಲ್ಲಿ ವಾಸ ಮಾಡುತ್ತವೆ,ಕಾರಣ ವೈರಿಗಳಿಂದ ಅಡಗಿ ಕೂರಲು, ತಪ್ಪಿಸಿ ಕೊಳ್ಳಲು ಅವಕ್ಕೆ ಸಹಾಯಕ..
ದಿನದ 46%ಸಮಯ ಆಹಾರ ಹುಡುಕಲು ತಿನ್ನಲು ತೊಡಗಿಸಿ ಕೊಳ್ಳುತ್ತವೆ..ಅದ್ರಲ್ಲಿ ಹೆಣ್ಣು ಇನ್ನೂ ಹೆಚ್ಚು ಸಮಯ ಆಹಾರ ಹುಡುಕಾಟ ತಿನ್ನುವುದರಲ್ಲಿ ಹೆಚ್ಚು ಸಮಯ ಕಳೆಯುತ್ತದೆ,ಗಂಡು ವೈರಿಗಳನ್ನು ಕಾಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನಲಾಗಿದೆ..
ಗಂಟೆಗೆ 45 ಮೈಲಿ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರುವ ಇವು..
ಉದ್ದನೆಯ ಕಾಲುಗಳೇ ವೈರಿಗಳಿಂದ ತಪ್ಪಿಸಿ ಕೊಳ್ಳಲು ಸಹಾಯಕ ಎನ್ನಲಾಗಿದೆ..!
ಹೆಚ್ಚಾಗಿ ಗಂಡು ಹೆಣ್ಣಿನ ಜೊತೆಯೇ ಇರುತ್ತದೆ ಹಾಗೂ ಅದನ್ನೇ ಅನುಸರಿಸುತ್ತಾ ಹೋಗುತ್ತದೆ..ಸಂಬಂಧ ಉಳಿಸಿ ಕೊಳ್ಳುವ ಹೆಚ್ಚಿನ ಜವಾಬ್ದಾರಿ ಗಂಡಿನದ್ದೇ ಆಗಿರುತ್ತದೆಯಂತೆ,ಮೂತ್ರದ ಮೂಲಕ ಅವುಗಳನ್ನ ಗುರುತಿಸಿ ಹಿಂಬಾಲಿಸುವುದು ಇದೆಯಂತೆ..
ಒಂದು ಸಂಗಾತಿ ತೀರಿ ಕೊಂಡ ಮೇಲಷ್ಟೇ ಇನ್ನೊಂದು ಸಂಗಾತಿ ಆರಿಸಿ ಕೊಳ್ಳುವುದು ಇವುಗಳ ವಿಶೇಷ ಜೀವನ ಶೈಲಿ..!
100 ದಿನ ಗರ್ಭ ಧರಿಸಿ,ಮರಿ ಹಾಕುವ ಸಮಯದಲ್ಲಿ 10 ಅಡಿಗೂ ಹೆಚ್ಚು ಮಣ್ಣಿನಲ್ಲಿ ಹೊಂಡ ತೆಗೆದು ಅಲ್ಲಿ ಮರಿ ಹಾಕಿ ಹಾಲುಣಿಸಿ ಸುಮಾರು 75 ದಿನ ಸಾಕುತ್ತವೆ..ಇವುಗಳ ಪ್ರಭೇಧದಲ್ಲಿ ಇವುಗಳೇ ಹೆಚ್ಚು ದಿನ ಮರಿಗಳನ್ನ ಸಾಕುವ ದ0ಶಕಗಳು ಎನ್ನಲಾಗಿದೆ,ಮರಿ ಹುಟ್ಟಿದ ತಕ್ಷಣ ನಡೆಯುವ ಸಾಮರ್ಥ್ಯ ಹೊಂದಿವೆ,ಇದು ಸೆಪ್ಟೆಂಬರ್ ಅಥವಾ ಆಕ್ಟೊಬರ್ ನಲ್ಲಿ ನಡೆಯುವ ಪ್ರಕ್ರಿಯೆ..ವರ್ಷಕ್ಕೆ ಒಮ್ಮೆ ಒಂದು ಅಥವಾ ಎರಡು ಮರಿಯನ್ನ ಹಾಕುವ ಸಾಮರ್ಥ್ಯ ಹೊಂದಿದೆ ಹೆಣ್ಣು ಮಾರಾ..
ಸಾಕಿದ ಮಾರಾ ಗಳು ಮೂರರಿಂದ ನಾಲ್ಕು ಮರಿ ಹಾಕುವುದೂ ಇದೆಯಂತೆ..!
ಹೆಚ್ಚು ವೈರಿ ಪ್ರಾಣಿಗಳ ದಾಳಿ,ಕೃಷಿ ಭೂಮಿ ವಿಸ್ತರಣೆ,ಕಾಡ್ಗಿಚ್ಚು,ಕಾಡು ನಾಶ ಹಾಗೂ ಮಾಂಸಕ್ಕಾಗಿ,ಚರ್ಮಕ್ಕಾಗಿ ಮನುಷ್ಯ ಮಾಡುತ್ತಿರುವ ಭೇಟೆಯಿಂದಾಗಿ ಈ ಅಪರೂಪದ ಜೀವಿಗಳು ವಿನಾಶದ ಅಂಚಿಗೆ ನಿಧಾನಕ್ಕೆ ತಲುಪುತ್ತಾ ಇವೆ ಅನ್ನೋದು ಆತಂಕಕಾರಿ ಸಂಗತಿ..
ನಾರ್ತ್ ವೆಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಜೂ ನಲ್ಲಿ ತೆಗೆದ ಫೋಟೋ ಇದು..
ಸೋಮವಾರ, ಫೆಬ್ರವರಿ 8, 2021
Giant Ant Eater
Giant Ant Eater ಎಂದು ಕರೆಸಿ ಕೊಳ್ಳುವ ಈ ಸುಂದರಪ್ರಾಣಿಯ ಮುಖ ಯಾವುದು ಹಿಂದೆ ಯಾವುದು ಅಂತ ತಿಳಿಯೋಕೆ ಬಹಳ ಸಮಯ ಬೇಕಾಯ್ತು ನನಗೆ...
ಸುಮಾರು 6 ಅಡಿ ಉದ್ದ,
14 ಇಂಚು ಎತ್ತರ,ಗಂಡು 33-41ಕೆ.ಜಿ,ಹೆಣ್ಣು 27-39ಕೆ.ಜಿ ತೂಕ ಇರುತ್ತದೆ,ಈ ಪ್ರಾಣಿಯ ವೈಜ್ಞಾನಿಕ ಹೆಸರು Myrecophaga tridactyla..
ಗಿಯಂಟ್ ಆಂಟ್ ಈಟರ್,ಹೆಚ್ಚು ಕಡಿಮೆ ಕಣ್ಣಿನ ದೃಷ್ಟಿ ಹಾಗೂ ಕಿವಿ ಎರಡೂ ಸ್ವಲ್ಪ ಮಂದ,ಹಲ್ಲುಗಳು ಕೂಡ ಇಲ್ಲದ ಈ ಪ್ರಭೇಧ,ಉದ್ದನೆಯ ಮೂತಿ ಹಾಗೂ ಚಾಮರದಂತ ದಟ್ಟ ಕೂದಲು ಹೊಂದಿರುವ ಬಾಲ ಹೊಂದಿರುತ್ತವೆ,
ಅದ್ಬುತ ಅಘ್ರಾಣ ಶಕ್ತಿ ಹೊಂದಿರುವ ಇವು,
ವಾಸನೆಯ ಮೂಲಕವೇ ಇರುವೆ,ವರಲೇ(ಗೆದ್ದಲು) ಹಾಗೂ ಇನ್ನಿತರೆ ಕೀಟಗಳ ಜಾಗದ ಗೂಡನ್ನು ಹುಡುಕಿ ತನ್ನ ಬಲಿಷ್ಠ ಉಗುರುಗಳ ಮೂಲಕ ಮಣ್ಣನ್ನ ಹೊರ ತೆಗದು 1000ಕ್ಕೂ ಹೆಚ್ಚು ಇರುವೆ,ವರಲೆಗಳನ್ನ(ಗೆದ್ದಲು)ತನ್ನ ಉದ್ದವಾದ ಅಂಟಿರುವ ನಾಲಿಗೆಯ ಸಹಾಯದಿಂದ ಒಮ್ಮೆಲೇ ಸ್ವಾಹ ಮಾಡಿ ಬಿಡುವ ಸಾಮರ್ಥ್ಯ ಹೊಂದಿವೆ..
ಒಂದು ನಿಮಿಷಕ್ಕೆ
150 ಕ್ಕೂ ಹೆಚ್ಚು ಸರಿ ತನ್ನ ನಾಲಿಗೆಯನ್ನ ಹೊರ ಹಾಕುತ್ತವಂತೆ ಈ ಪ್ರಾಣಿಗಳು..!
ಅರಣ್ಯ ನಾಶ,ಕಾಡ್ಗಿಚ್ಚು,ರಸ್ತೆ ಅಪಘಾತ ಹಾಗೂ ನಾಯಿಗಳ ದಾಳಿ,ಮನುಷ್ಯರು ಮಾ0ಸಾಹಾರಕ್ಕೆ,ಹಣಕ್ಕಾಗಿ ವ್ಯಾಪಾರ,ಕಳ್ಳ ಸಾಗಾಣಿಕೆ ತುತ್ತಾಗಿ,ಈ ಅಪರೂಪದ ಪ್ರಭೇಧ ಇತ್ತೀಚೆಗೆ ವಿನಾಶದ ಅಂಚಿಗೆ ಬಂದು ನಿಂತಿದೆ ಅನ್ನೋದು ವಿಷಾದದ ಸಂಗತಿ..!
ಅಂತಹಾ ಅಪಾಯಕಾರಿ ಆಕ್ರಮಣ ಕಾರಿ ಅಲ್ಲದ ಇವುಗಳು,ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿದ್ದೂ ವರಡಿಯಾಗಿದೆಯಂತೆ..!
6 ತಿಂಗಳಿಗೆ ಒಂದು ಸಂತಾನೋತ್ಪತ್ತಿ ಮಾಡುವ ಈ ಪ್ರಭೇಧದ ಜೀವಿತ ಅವಧಿ,
ಸುಮಾರು 16 ರಿಂದ 25 ವರ್ಷದ ವರೆಗೆ ಎನ್ನಲಾಗಿದೆ..!
ಇವುಗಳು ಹೆಚ್ಚಾಗಿ,ಮಧ್ಯ ಅಮೇರಿಕಾ,ಹಾಂದುರಾಸು,ದಕ್ಷಿಣ ಅಮೇರಿಕಾದ,ಬೊಲಿವಿಯಾ ಮತ್ತಿತರ ಒಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ...
ನಿನ್ನ ಮುಖಕ್ಕೆ ವರ್ಲೆ(ಗೆದ್ದಲು) ಹಿಡಿಯಾ ಅಂತ
ಬೇರೆಯವರಿಗೆ ಮಲೆನಾಡ ಬೈಗುಳ ಬೈದರೆ
ಬೇಜಾರಾಗ್ತಾರೋ ಏನೋ..
ಆದ್ರೆ
ಗಿಯ0ಟ್ ಆ0ಟ್ ಈಟರ್ ಗೆ ಹಾಗೇ ಬೈದ್ರೆ
ಸಕತ್ ಖುಷಿ ಯಾಗುತ್ತಾ ಅಂತ..
ಮುಖದಲ್ಲೇ ಗೆದ್ದಲನ್ನ ಆರಾಮಾಗಿ ಹಿಡಿದು ತಿನ್ನ ಬಹುದು ಅಂತ..
ಅಲ್ವಾ
😂
ಅಂದ ಹಾಗೆ ಕೂದಲು ಅಷ್ಟು ಚನ್ನಾಗಿ ಬೆಳೆಯೋಕೆ ಯಾವ ಎಣ್ಣೆ ಹಾಗೂ ಶಾಂಪೂ ಹಾಕುತ್ತೇ ಅಂತ ನನ್ನ ಕೇಳಬೇಡಿ..
ನಾನು ಈ ವಿಷಯ ಕೇಳೋಕೆ ಮರೆತೇ ಅದರ ಹತ್ರ..😂
ಚಿತ್ರಗಳು ತೆಗೆದದ್ದು
ನಾರ್ಥವೇಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಮೃಗಾಲಯದಲ್ಲಿ.
ಸುಮಾರು 6 ಅಡಿ ಉದ್ದ,
14 ಇಂಚು ಎತ್ತರ,ಗಂಡು 33-41ಕೆ.ಜಿ,ಹೆಣ್ಣು 27-39ಕೆ.ಜಿ ತೂಕ ಇರುತ್ತದೆ,ಈ ಪ್ರಾಣಿಯ ವೈಜ್ಞಾನಿಕ ಹೆಸರು Myrecophaga tridactyla..
ಗಿಯಂಟ್ ಆಂಟ್ ಈಟರ್,ಹೆಚ್ಚು ಕಡಿಮೆ ಕಣ್ಣಿನ ದೃಷ್ಟಿ ಹಾಗೂ ಕಿವಿ ಎರಡೂ ಸ್ವಲ್ಪ ಮಂದ,ಹಲ್ಲುಗಳು ಕೂಡ ಇಲ್ಲದ ಈ ಪ್ರಭೇಧ,ಉದ್ದನೆಯ ಮೂತಿ ಹಾಗೂ ಚಾಮರದಂತ ದಟ್ಟ ಕೂದಲು ಹೊಂದಿರುವ ಬಾಲ ಹೊಂದಿರುತ್ತವೆ,
ಅದ್ಬುತ ಅಘ್ರಾಣ ಶಕ್ತಿ ಹೊಂದಿರುವ ಇವು,
ವಾಸನೆಯ ಮೂಲಕವೇ ಇರುವೆ,ವರಲೇ(ಗೆದ್ದಲು) ಹಾಗೂ ಇನ್ನಿತರೆ ಕೀಟಗಳ ಜಾಗದ ಗೂಡನ್ನು ಹುಡುಕಿ ತನ್ನ ಬಲಿಷ್ಠ ಉಗುರುಗಳ ಮೂಲಕ ಮಣ್ಣನ್ನ ಹೊರ ತೆಗದು 1000ಕ್ಕೂ ಹೆಚ್ಚು ಇರುವೆ,ವರಲೆಗಳನ್ನ(ಗೆದ್ದಲು)ತನ್ನ ಉದ್ದವಾದ ಅಂಟಿರುವ ನಾಲಿಗೆಯ ಸಹಾಯದಿಂದ ಒಮ್ಮೆಲೇ ಸ್ವಾಹ ಮಾಡಿ ಬಿಡುವ ಸಾಮರ್ಥ್ಯ ಹೊಂದಿವೆ..
ಒಂದು ನಿಮಿಷಕ್ಕೆ
150 ಕ್ಕೂ ಹೆಚ್ಚು ಸರಿ ತನ್ನ ನಾಲಿಗೆಯನ್ನ ಹೊರ ಹಾಕುತ್ತವಂತೆ ಈ ಪ್ರಾಣಿಗಳು..!
ಅರಣ್ಯ ನಾಶ,ಕಾಡ್ಗಿಚ್ಚು,ರಸ್ತೆ ಅಪಘಾತ ಹಾಗೂ ನಾಯಿಗಳ ದಾಳಿ,ಮನುಷ್ಯರು ಮಾ0ಸಾಹಾರಕ್ಕೆ,ಹಣಕ್ಕಾಗಿ ವ್ಯಾಪಾರ,ಕಳ್ಳ ಸಾಗಾಣಿಕೆ ತುತ್ತಾಗಿ,ಈ ಅಪರೂಪದ ಪ್ರಭೇಧ ಇತ್ತೀಚೆಗೆ ವಿನಾಶದ ಅಂಚಿಗೆ ಬಂದು ನಿಂತಿದೆ ಅನ್ನೋದು ವಿಷಾದದ ಸಂಗತಿ..!
ಅಂತಹಾ ಅಪಾಯಕಾರಿ ಆಕ್ರಮಣ ಕಾರಿ ಅಲ್ಲದ ಇವುಗಳು,ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿದ್ದೂ ವರಡಿಯಾಗಿದೆಯಂತೆ..!
6 ತಿಂಗಳಿಗೆ ಒಂದು ಸಂತಾನೋತ್ಪತ್ತಿ ಮಾಡುವ ಈ ಪ್ರಭೇಧದ ಜೀವಿತ ಅವಧಿ,
ಸುಮಾರು 16 ರಿಂದ 25 ವರ್ಷದ ವರೆಗೆ ಎನ್ನಲಾಗಿದೆ..!
ಇವುಗಳು ಹೆಚ್ಚಾಗಿ,ಮಧ್ಯ ಅಮೇರಿಕಾ,ಹಾಂದುರಾಸು,ದಕ್ಷಿಣ ಅಮೇರಿಕಾದ,ಬೊಲಿವಿಯಾ ಮತ್ತಿತರ ಒಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ...
ನಿನ್ನ ಮುಖಕ್ಕೆ ವರ್ಲೆ(ಗೆದ್ದಲು) ಹಿಡಿಯಾ ಅಂತ
ಬೇರೆಯವರಿಗೆ ಮಲೆನಾಡ ಬೈಗುಳ ಬೈದರೆ
ಬೇಜಾರಾಗ್ತಾರೋ ಏನೋ..
ಆದ್ರೆ
ಗಿಯ0ಟ್ ಆ0ಟ್ ಈಟರ್ ಗೆ ಹಾಗೇ ಬೈದ್ರೆ
ಸಕತ್ ಖುಷಿ ಯಾಗುತ್ತಾ ಅಂತ..
ಮುಖದಲ್ಲೇ ಗೆದ್ದಲನ್ನ ಆರಾಮಾಗಿ ಹಿಡಿದು ತಿನ್ನ ಬಹುದು ಅಂತ..
ಅಲ್ವಾ
😂
ಅಂದ ಹಾಗೆ ಕೂದಲು ಅಷ್ಟು ಚನ್ನಾಗಿ ಬೆಳೆಯೋಕೆ ಯಾವ ಎಣ್ಣೆ ಹಾಗೂ ಶಾಂಪೂ ಹಾಕುತ್ತೇ ಅಂತ ನನ್ನ ಕೇಳಬೇಡಿ..
ನಾನು ಈ ವಿಷಯ ಕೇಳೋಕೆ ಮರೆತೇ ಅದರ ಹತ್ರ..😂
ಚಿತ್ರಗಳು ತೆಗೆದದ್ದು
ನಾರ್ಥವೇಸ್ಟ್ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಮೃಗಾಲಯದಲ್ಲಿ.
Bacterial camel
Bactrian Camel,ಎರಡು ಡುಬ್ಬದ ಒಂಟೆ,(Two Hump)
ಇವುಗಳನ್ನ ಮಂಗೋಲಿಯನ್ ಒಂಟೆ ಅಂತಲೂ ಕರೆಯುತ್ತಾರೆ..
ವೈಜ್ಞಾನಿಕ ಹೆಸರು Camelus Bactrianus..
ಇವುಗಳಿಗೆ ಬ್ಯಾಕ್ಟ್ರಿಯನ್ ಒಂಟೆ ಎಂದು ಹೆಸರು ಬರಲು ಕಾರಣ ಪ್ರಾಚೀನ ಕಾಲದ ಬ್ಯಾಕ್ಟ್ರಿಯನ್ ಎಂಬ ಪ್ರದೇಶದಿಂದ ಎನ್ನಲಾಗಿದೆ...
ಪ್ರಾಚೀನ ಗ್ರೀಕ್ ತತ್ವಜ್ಞಾನಿ ಆರಿಸ್ಟಾಟಲ್ ಮೊತ್ತ ಮೊದಲು ಒಂಟೆಯ ಬಗ್ಗೆ 4 ನೇ ಶತಮಾನದಲ್ಲಿ ಒಂದು ಬೆನ್ನುಬ್ಬು ಇರೋದನ್ನ ಅರೇಬಿಯನ್ ಒಂಟೆ..
ಹಾಗೂ ಎರಡು ಬೆನ್ನುಬ್ಬು ಇರುವ ಒಂಟೆಯನ್ನ ಬ್ಯಾಕ್ಟ್ರಿಯನ್ ಒಂಟೆ ಎಂದು ವಿಂಗಡಿಸಿದ್ದರು ಅಂತಲೂ ಹೇಳಲಾಗಿದೆ..!
ಸುಮಾರು 1.8 ರಿಂದ 2 ಮೀಟರ್ ಎತ್ತರವಿರುವ ಇವುಗಳು 35 ರಿಂದ 40 ವರ್ಷ ಜೀವಿತಾವಧಿ,ಸರಿ ಸುಮಾರು 480 ರಿಂದ 500 ಕೆ.ಜಿ ತೂಕವಿರುತ್ತವೆ..
ಇವುಗಳ ಜೀವಿತ ಅವಧಿ 50 ವರ್ಷದವರೆಗೆ ಎನ್ನಲಾಗಿದೆ..
ಇವುಗಳು ಗಂಟೆಗೆ ಅಪರೂಪಕ್ಕೆ 65 ಕಿಮೀ ಓಡಬಲ್ಲವು, ಹಾಗೂ ಅದ್ಬುತ ಅಘ್ರಾಣ ಶಕ್ತಿ ಮತ್ತು ಕಣ್ಣು ದೃಷ್ಟಿ ಹೊಂದಿವೆ..
ಒಳ್ಳೆಯ ಈಜುಪಟುಗಳೂ ಹೌದಂತೆ..!
ವರ್ಷಕ್ಕೆ ಒಮ್ಮೆ ಒಂದು ಅಥವಾ ಎರಡು ಮರಿಯನ್ನ ಹಾಕುವ ಸಾಮರ್ಥ ಹೊಂದಿರುವ ಇವು..
13 ತಿಂಗಳು ಗರ್ಭ ಧರಿಸಿ ಮರಿಹಾಕುತ್ತವೆ,ಮರಿ ಹುಟ್ಟಿದ ತಕ್ಷಣ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿರುತ್ತವೆ ಹಾಗೂ 36 ಕೆಜಿವರೆಗೆ ತೂಕವಿರುತ್ತವೆ, ತಾಯಿ ಸುಮಾರು 1.5 ವರ್ಷ ಸಾಕಿದ ನಂತರ,3 ವರ್ಷದ ವರಗೆ ತಾಯಿಯ ಜೊತೆಯೇ ಜೀವನ ಸಾಗಿಸುತ್ತವೆ,ದೊಡ್ಡವಾದ ನಂತರ ಬೇರೇಯಾಗುತ್ತವೆ..
ಅಗಲವಾದ ಹಾಸು ಗೊರಸು,ಉದ್ದವಾದ ಕಾಲು ಇರುವುದರಿಂದ ಮರಳಿನಲ್ಲಿ ಸುಲಭವಾಗಿ ನಡೆಯುವುದಕ್ಕೆ ಸಹಾಯಕ ಹಾಗೂ ದಪ್ಪವಾದ ರೋಮ ಬಿಸಿಲಿನಿಂದ ರಕ್ಷಣೆಯಾಗಲು ಹಾಗೂ ರಾತ್ರಿ ಚಳಿಯಿಂದ ರಕ್ಷಣೆಗೆ ಸಹಾಯಕ..
ಬಹಳ ಗಟ್ಟಿಯಾದ ಬಾಯಿ ಹಾಗೂ ನಾಲಿಗೆ ಹೊಂದಿರುವ ಇವು,ಚೂಪಾದ ಮುಳ್ಳು,ಮುಳ್ಳಿನ ಗಿಡ,ಒಣಗಿದ ಗಿಡ ಅಥವಾ ಹುಲ್ಲು,ಉಪ್ಪು ಅಥವಾ ಕಹಿ ಇರುವ ಇನ್ನಿತರೆ ಯಾವುದೇ ಸಸ್ಯಾಹಾರವನ್ನ ಸುಲಭವಾಗಿ ತಿನ್ನುತ್ತವೆ,ಒಮ್ಮೊಮ್ಮೆ ತಮಗೆ ಬೇಕಾದ ಖನಿಜಅಂಶ ಸಿಕ್ಕದೇ ಇದ್ದಾಗ,ಸತ್ತ ಪ್ರಾಣಿಗಳ ಮಾಂಸ,ಚರ್ಮ,ಮೀನು,ಮೂಳೆಗಳಿಗೆ ಹೊಡೆದು,ಟೆಂಟ್ ಹಾಗೂ ದೊಡ್ಡ ಹಗ್ಗ,ಚಪ್ಪಲಿಗಳನ್ನ ಸಹ ಸುಲಭವಾಗಿ ಜಗಿಯುತ್ತ ತಿನ್ನುವುದೂ ಇದೆಯಂತೆ..!!!
ತಿಂದ ಆಹಾರವನ್ನ ಸ್ವಲ್ಪ ಸಮಯದ ನಂತರ,ದನ,ಎಮ್ಮೆ,ಕುರಿಗಳಂತೆ ಮೆಲುಕು ಹಾಕುತ್ತವೆ..
ಚಳಿಗಾಲದಲ್ಲಿ ನೀರಿನ ಅಭಾವ ಇರುವುದರಿಂದ ಹಿಮವನ್ನ ತಿಂದು,ನೀರಿನ ಅವಶ್ಯಕತೆಯನ್ನ ನೀಗಿಸಿ ಕೊಳ್ಳುತ್ತವಂತೆ..
ಇವುಗಳು ನೀರು ಸಿಕ್ಕಾಗ ಒಮ್ಮೆಲೇ 57 ಲೀಟರ್ ವರೆಗೆ ಹೀರಬಲ್ಲ ಸಾಮರ್ಥ್ಯ ಹೊಂದಿದೆ!!
ಹೀಗೆ ಹೀರಿದ ನೀರು,ತಿಂದ ಹಿಮ ಮೇಲಿರುವ ಎರಡು ಡುಬ್ಬದಲ್ಲಿ ಶೇಖರಣೆಯಾದಾಗ ಅವುಗಳು ನೇರವಾಗಿ ನಿಂತಿರುತ್ತದಂತೆ,
ಡುಬ್ಬದ ನೀರಿನ ರೂಪದ ಅಂಶ(ಪ್ಯಾಟ್ ಎನ್ನಲಾಗಿದೆ) ನೀರು ಸಿಗದೇ ಇದ್ದಾಗ,ಅವಶ್ಯಕತೆ ಇದ್ದಾಗ,ಉಪಯೋಗಿಸುತ್ತಾ ಬಂದಂತೆ ನೇರವಾಗಿರುವ ಡುಬ್ಬ ನಿಧಾನವಾಗಿ ಮೆತ್ತಗೆ ಆಗುತ್ತಾ ಬರುತ್ತದೆ,
ಸಂಪೂರ್ಣ
ಖಾಲಿಯಾದಾಗ ಒಂದು ಕಡೆ ವಾಲಿಕೊಂಡು ಬಿಡುತ್ತದೆಯಂತೆ...
ಇದೊಂಥರಾ ಒಂಟೆಯ ನೀರಿನ ಓವರ್ ಹೆಡ್ ಅಲ್ಲಲ್ಲ ಓವರ್ ಬೆನ್ನಿನ ಟ್ಯಾ0ಕ್ ಎನ್ನಬಹುದು..ಅಲ್ವಾ..!
ಈ ಪ್ರಭೇಧಗಳು,ಪ್ರಾಚೀನ ಕಾಲದಿಂದ ಬಹಳ ಶೀತಲ ಪ್ರದೇಶ ಹಾಗೂ ಉಷ್ಣ ಮತ್ತು ನೀರಿನ ಅಭಾವ ಇರುವ ಮರಳುಗಾಡಿನಲ್ಲಿ,ಸಾರಿಗೆ ಹಾಗೂ,ಹಾಲು,ಉಣ್ಣೆ ಮಿಲಿಟರಿ ಹಾಗೂ ಮಾಂಸಕ್ಕಾಗಿ ಬಳಕೆಯಾಗುತ್ತಿದ್ದವಂತೆ....
170 ರಿಂದ 250 ಕೆ.ಜಿ ಭಾರ ಹೊತ್ತು ದಿನಕ್ಕೆ 47 ಕಿಮೀ,ಗಂಟೆಗೆ 4ಕಿಮೀ ಕ್ರಮಿಸುವ ಸಾಮರ್ಥ್ಯ ಹೊಂದಿವೆಯಂತೆ..
ಈಗ 2 ಮಿಲಿಯನ್ ಸಂಖ್ಯೆ ಇರುವ ಇವು ಹೆಚ್ಚಿನ ಸಂಖ್ಯೆಯಲ್ಲಿ ಸಾಕು ಪ್ರಾಣಿಗಳಾಗಿಯೇ ಬಳಕೆಯಾಗುತ್ತಾ ಇವೆ...
ಬ್ಯಾಕ್ಟ್ರಿಯನ್ ಒಂಟೆಗಳು(ಎರಡು ಡುಬ್ಬಇರುವ ಒಂಟೆಗಳು)ಮಧ್ಯ ಏಷಿಯಾ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ..
ಭಾರತೀಯ ಸೈನ್ಯ ಒಬ್ಬರು ಅಧಿಕಾರಿಗಳ ಪ್ರಕಾರ,ಈ ಎರಡು ಡುಬ್ಬದ ಒಂಟೆಗಳು,ಲಡಾಖ್ ಬಾರ್ಡರ್ ನಲ್ಲಿ ಗಸ್ತು ತಿರುಗಲು ಬಹಳ ಸಹಕಾರಿಯಂತೆ ಹಾಗೂ ಸುಮಾರು 170 ಕೆಜಿ ಗೂ ಹೆಚ್ಚು ಭಾರವನ್ನ ಹೊತ್ತು 17000 ಅಡಿ ಸುಲಭವಾಗಿ ಚಲಿಸುತ್ತವೆಯಂತೆ..ಇವು ಅರೇಬಿಯನ್ ಒಂಟೆಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿವೆಯಂತೆ..
ಮಂಗೋಲಿಯಾದಲಿ 4,30,000 ಹೆಚ್ಚು ಬ್ಯಾಕ್ಟ್ರಿಯನ್ ಒಂಟೆಗಳು ಇವೆಯಂತೆ..
ನಮ್ಮ ದೇಶದಲ್ಲಿ ಸುಮಾರು 150 ಬ್ಯಾಕ್ಟ್ರಿಯನ್ ಒಂಟೆಗಳು ಇವೆ ಎಂದು ಹೇಳಲಾಗಿದೆ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)