ಮಂಗಳವಾರ, ಫೆಬ್ರವರಿ 9, 2021

ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಸಾವು

ಬಾಬಿ ಲೀಚ್ ಎಂಬ ವ್ಯಕ್ತಿ 1858ರಲ್ಲಿ ಇಂಗ್ಲೆಂಡ್ ನಲ್ಲಿ ಜನಿಸಿದರು,
ಜುಲೈ 1911ರಲ್ಲಿ,ಅಮೆರಿಕಾದ ಜೋಗ ಜಲಪಾತವಾದ,
ನಯಾಗರ ಜಲಪಾತದಲ್ಲಿ ಬ್ಯಾರೆಲ್ ಮೂಲಕ ಹೋದ ಎರಡನೇ ವ್ಯಕ್ತಿಯಂತೆ,
ಆತ ಇದರಿಂದ ಬಹಳ ಜನಪ್ರಿಯತೆಗಳಿಸಿದ್ದರಂತೆ,
ಹೀಗೆ ನಯಾಗರದಲ್ಲಿ ಬ್ಯಾರೆಲ್ ಮೂಲಕ ಹೋಗುವಾಗ ಬಿದ್ದು ಎರಡು ಮೊಣಕಾಲು ಹಾಗೂ ದವಡೆ ಮುರಿದು,ತೀವ್ರ ಪೆಟ್ಟಾಗಿತ್ತಂತೆ,ನಿಧಾನಕ್ಕೆ ಗುಣ ಮುಖರಾಗಿ ಮತ್ತೆ ಈ ರೀತಿಯ ಅನೇಕ ಸಾಹಸ ಮಾಡಿದ್ದರಂತೆ ಲೀಚ್..
ಹೀಗೆ ತಮ್ಮ 60ನೇ ವಯಸ್ಸಿನಲ್ಲಿ ಲೀಚ್ ಮತ್ತೊಮ್ಮೆ ನಯಾಗರಕ್ಕೆ ಬ್ಯಾರೇಲ್ನಲ್ಲಿ ನೀರಿನ ಸುಳಿಯಲ್ಲಿ ಈಜಲು ಹೋಗಿ,ಹಲವು ಭಾರಿ ವಿಫಲರಾಗಿದ್ದರಂತೆ..

ಒಮ್ಮೆ ಹೀಗೆ ನೀರಿನ ಸುಳಿಯಲ್ಲಿ ಬ್ಯಾರೆಲ್ ಮೂಲಕ ದಾಟಲು ಹೋಗಿ,ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ,ಅವರನ್ನ ವಿಲಿಯಂ ರೆಡ್ ಹಿಲ್ ಅನ್ನುವವರು ರಕ್ಷಣೆ ಮಾಡಿದ್ದರಂತೆ..!

ಪದೇ ಪದೇ ಸಾವಿಗೆ ಸಾವಾಲೊಡ್ಡಿ ಜಯಿಸಿದ್ದ ಈ ವ್ಯಕ್ತಿ,ಸತ್ತಿದ್ದು ಎಷ್ಟು "ಸಿಂಪಲ್"ಗೊತ್ತಾ..!
😢

ಹೇಳ್ತೀನಿ ಕೇಳಿ..

ಬಾಬಿ ಲೀಚ್ ತನ್ನ ಬಗ್ಗೆ ಬುಲ್ಡ್ ಅಪ್ ಕೊಟ್ಟು ಕೊಳ್ಳುತ್ತಾ ಇಂಗ್ಲೆಂಡಿನಿಂದ ನ್ಯೂಜಿಲೆಂಡ್ ದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರಂತೆ..

ಅಲ್ಲಿ ಒಂದು ದಿನ ರಸ್ತೆಯಲ್ಲಿ ನಡೆದು ಹೋಗುತ್ತಾ ಇರುವಾಗ ಗಮನಿಸದೇ ಯಾರೋ ಕಿತ್ತಳೆ ಹಣ್ಣು ತಿಂದು,ಎಸೆದು ಹೋಗಿದ್ದ ಸಿಪ್ಪೆಯ ಮೇಲೆ ಕಾಲು ಇಟ್ಟು ಜಾರಿ ಬಿದ್ದಿದ್ದಾರೆ..!

ಕಾಲಿಗೆ ಸಣ್ಣ ಪೆಟ್ಟಾಗಿದೆ..

ಆ ಪೆಟ್ಟು ನಿಧಾನವಾಗಿ ಗ್ಯಾ0ಗ್ರೀನ್ ಆಗಿ ರೂಪುಗೊಂಡು,ಲೀಚ್ ಅದರಿಂದಲೇ ಮರಣ ಹೊಂದಿ ಬಿಡ್ತಾರೆ..

ಅಂತಹಾ ದೊಡ್ಡ ಜಲಪಾತದಲ್ಲೇ ಹಲವು ಸರಿ ಸಾಯುವ ಸ್ಥಿತಿಯಿಂದ ಬದುಕಿ ಬಂದ ಇವರು..

ಯಕಶ್ಚಿತ್ ಕಿತ್ತಳೆ ಸಿಪ್ಪೆಯಿಂದ ಸಾಯುವ ಹಾಗೆ ಆಯ್ತು ನೋಡಿ..

ಕಿತ್ತಳೆ ಸಿಪ್ಪೆನ ಯಕಶ್ಚಿತ್ ಅಂದ,ಅಂತ ಕಿತ್ತಳೆ ಸಿಪ್ಪೆಲಿ ಚಟ್ನಿ ಮಾಡೋರು ಬಡಿಗೆ ಹಿಡಕಂಡು ಬರಬೇಡಿ ಮಾರಾಯ್ರೆ...

ಲಿಂಬೆ ಹಣ್ಣಿಗೆ ಮಾತ್ರ ಶಕ್ತಿ ಇರಲ್ಲ...
ಕಿತ್ತಳೆ ಸಿಪ್ಪೆಗೂ,ಬಣ್ಣ,ರುಚಿ,(ಸಾಯಿಸುವ)ಶಕ್ತಿ ಇದೆ ನೋಡಿ..
ಅಲ್ವಾ
😂

#ಅವಿವೇಕದ_ಸಾವು

ಕಥೆ_04

#stupid_death

(Source:-Horrible histories Series)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ