ಮಂಗಳವಾರ, ಫೆಬ್ರವರಿ 9, 2021

ಹಲ್ಲಿನಿಂದ ಸಾವು

875-892 ರಲ್ಲಿ ಸಿಗರ್ಡ್ ಐನ್ಸ್ಟಿನ್ಸನ್ ಎಂಬ ಅರ್ಲೆಂಡ್ ಅಪ್ ಆರ್ಕಿ (ಈಗಿನ ಉತ್ತರ ಸ್ಕಾಟ್ಲೆಂಡ್ ನ)ಸಣ್ಣ ಪ್ರದೇಶದ ನಾಯಕರಾಗಿದ್ದರು,

ಅದೇ ಉತ್ತರ ಸ್ಕಾಟ್ಲೆಂಡ್ ನಲ್ಲಿ ಮುರ್ರೆ ಎಂಬ ಒಂದು ಜಾಗದಲ್ಲಿನ,ಪಿಕ್ಟ್ಸ್ ಜನಾಂಗದ ವರಿಷ್ಠ ನಾಯಕ ಮಯಲ್ ಬ್ರೈಟ್ ಎಂಬುವವರು ತಮ್ಮ ಜನಾ0ಗದ ಜೀವನ ಸಾಗಿಸುತ್ತಾ ಇದ್ದರು,

ಒಮ್ಮೆ ಸಿಗರ್ಡ್,ಈ ಮೂರೇ ಎಂಬ ಜನಾ0ಗದ ಜಾಗವನ್ನ ವಶ ಮಾಡಿಸಿ ಕೊಳ್ಳಲು ನಿರ್ಧರಿಸಿ,ಆ ಪ್ರದೇಶಕ್ಕೆ ತನ್ನ ಸೈನ್ಯದೊಂದಿಗೆ ದಂಡೆತ್ತಿ ಹೋಗಲು ನಿರ್ದಾರ ಮಾಡಿದರು,
ನಿರ್ಧರಿಸಿದಂತೆ ದಂಡೆತ್ತಿ ಹೋಗಿ,ವೀರಾವೇಶದಿಂದ ಹೋರಾಟ ಮಾಡಿದ ಸಿಗರ್ಡ್,ಸಂಪೂರ್ಣ ಮುರ್ರೆ ಜಾಗ ಹಾಗೂ ಪಿಕ್ಟ್ಸ್ ಜನಾಂಗದ ಮೇಲೆ ಹಿಡಿತ ಸಾಧಿಸಿ..

ಕೊನೆಗೆ
ಅವರ ನಾಯಕ,ಮಯಿಲ್ ಬ್ರೈಟ್ ನ ತಲೆಯನ್ನ ಕಡಿದು,
ವಿಜಯದ ಸಂಕೇತವಾಗಿ ಪ್ರಶಸ್ತಿಗಳಿಸಿ,ಟ್ರೋಫಿ ಯನ್ನ ಎತ್ತಿ ತರುವಂತೆ,
ತನ್ನ ಪ್ರದೇಶದ ಜನಕ್ಕೆ ತೋರಿಸಲು
ಆ ಕಡಿದ ಮುಂಡವನ್ನ ಹಿಡಿದು ಕೊಂಡು ಕುದುರೆ ಹತ್ತಿ ತನ್ನ ಊರಿನ ಕಡೆಗೆ ಹೊರಟನಂತೆ..!?

ಅದ್ರಲ್ಲೇನು ವಿಶೇಷ ಅಂತೀರಾ?

ಇದರಲ್ಲಿ ಒಂದು ಟ್ವಿಸ್ಟ್ ನೋಡಿ..

ಯುದ್ಧ ಗೆದ್ದು,ಕುದುರೆ ಹತ್ತಿದ ಸಿಗರ್ಡ್,ತಾನು ಕಡಿದ ವೈರಿಯ ತಲೆಯನ್ನ,ತನ್ನ ಹಿಂದೆ ಕಾಲು ಬುಡದಲ್ಲಿ ಕಟ್ಟಿ ನೇತು ಹಾಕಿಕೊಂಡು ವೇಗವಾಗಿ ಖುಷಿಯಿಂದ ತನ್ನ ಪ್ರದೇಶಕ್ಕೆ ಬಂದು ಇಳಿದಿದ್ದಾರೆ..

ತಾನು ಧಾಳಿ ಮಾಡಿ,ಗೆದ್ದ ಸಂಭ್ರಮ ಆಚರಣೆ ಎಲ್ಲಾ ಮುಗಿದು ತನ್ನ ಆಡಳಿತದ ಬಗ್ಗೆ ಗಮನ ಹರಿಸುತ್ತಾ ಇದ್ದ ಈತನಿಗೆ,ಒಂದು ಆಘಾತ ಕಾದಿತ್ತು,!

ಯುದ್ಧ ಗೆದ್ದು,ಕುದುರೆ ಓಡಿಸಿಕೊಂಡು ಬರುತ್ತಾ ಇರುವಾಗ,ಹಿಂದೆ ಕಟ್ಟಿದ್ದ ಮಯಲ್ ಬ್ರೈಟ್ ನ ಹಲ್ಲು ಕಾಲಿಗೆ ತಾಗಿ ಗಾಯವಾಗಿತ್ತು,ಅದು ಸ್ವಲ್ಪ ದಿನಕ್ಕೆ ಸೆಪ್ಟಿಕ್ ಆಗಿ ಬಿಟ್ಟಿತ್ತು,
ಅದೇ ಉಲ್ಬಣವಾಗಿ ಗ್ಯಾಂಗ್ರೀನ್ ಜಾಸ್ತಿಯಾಗಿ ಮರಣ ಹೊಂದಿದರು ಈ ಸಿಗರ್ಡ್..!

ವೈರಿಯನ್ನ ಸಾಯಿಸಿ ತಲೆ ಕಡಿದರೂ,ವೈರಿಯ ಹಲ್ಲು ಛಲ ಬಿಡದೇ ತನ್ನ ಹೋರಾಟ ಮುಂದುವರೆಸಿ ಸೇಡು ತೀರಿಸಿ ಕೊಂಡೇ ಬಿಡ್ತು ನೋಡಿ..

ಕಡಿದ ತಲೆಯಲ್ಲಿ ಇದ್ದ ಅವನ ತುರೆ ಮಣೆ ಹಲ್ಲಿನಿಂದ,ಅಂತಹಾ ದೊಡ್ಡ ಶೂರ,ಗೆಲವಿನ ಸರದಾರನ,ಸಾವು ಆಯ್ತು ಅಂದ್ರೆ ಮರ್ಯಾದೆ ಪ್ರಶ್ನೆ ಅಲ್ವಾ ಮರ್ರೆ..
ಥೋ...

#ಅವಿವೇಕದ_ಸಾವು

ಕಥೆ_05

#stupid_death

(ಮೂಲ:-Horrible histories)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ