ಮಂಗಳವಾರ, ಫೆಬ್ರವರಿ 9, 2021

ಸಗಣಿ ಸಾವು


ಹೆರಾಕ್ಲಿಟಸ್ ಎಂಬ ತತ್ವ ಜ್ಞಾನಿ ಪರ್ಷಿಯನ್ ಎಂಪರರ್ ಎಂಪಿಸಿಸ್ ಎಂಬ ಊರಿನವರು..

ಇಂತಹಾ ತತ್ವಜ್ಞಾನಿ
ಹೆರಾಕ್ಲಿಟಸ್ ಸತ್ತಿದ್ದು ಹೇಗೆ ಗೊತ್ತಾ..

ಇವರಿಗೆ "Dropsy" ಎಂಬ ಮೈಯೆಲ್ಲಾ ಊದಿ ನೀರು ತುಂಬಿದ ರೀತಿ ಆಗುವ ಖಾಯಿಲೆಗೆ ತುತ್ತಾಗಿ ಬಿಡ್ತಾರೆ...
ಇದನ್ನ ಗುಣ ಪಡಿಸಿ ಕೊಳ್ಳಲು ಹಲವು ಚಿಕಿತ್ಸೆ ಪಡೆದು ಕೊಂಡರೂ ಗುಣವಾಗಲೇ ಇಲ್ಲವಂತೆ..
ಖಾಯಿಲೆ ದಿನೇ ದಿನೇ ಉಲ್ಬಣ ವಾಗೋದು ನೋಡಿ..

ಕೊನೆಗೆ ತತ್ವ ಜ್ಞಾನಿ ಹೆರಾಕ್ಲಿಟಸ್,ಒಂದು ಯೋಜನೆ ರೂಪಿಸಿದರು,ಮೈ ಎಲ್ಲಾ ಊದಿಕೊಂಡು ನೀರು ತುಂಬಿದಂತೆ ಆಗಿರುವ ಈ ಖಾಯಿಲೆಯನ್ನ ಶಾಖದಲ್ಲಿ ಇದ್ದರೆ ಮೈಯಲ್ಲಿ ಇರುವ ನೀರು ಆವಿಯಾಗಿ,ಬತ್ತಿ ಹೋಗಿ,ಖಾಯಿಲೆ ಕಡಿಮೆ ಯಾಗಬಹುದು ಎಂದು ತಾವೇ ಊಹಿಸಿ..
ಒಂದು ನಿರ್ದಾರಕ್ಕೆ ಬಂದರಂತೆ..!

ಒಂದಷ್ಟು ಸಗಣಿಯನ್ನ ಒಟ್ಟು ಮಾಡಿ,
ದೊಡ್ಡ ಸಗಣಿಯ ರಾಶಿ ಮಾಡಿ ಅದರ ಮಧ್ಯ ಕಣ್ಣು,ಬಾಯಿ,ಮೂಗು ಬಿಟ್ಟು ಅವರು ಕುಳಿತು ಬಿಟ್ಟರಂತೆ ಹೆರಾಕ್ಲಿಟಸ್..
ಒಂತರಾ ತಪಸ್ಸಿಗೆ ಕುಳಿತ ಹಾಗೆ ಅಂತಿಟ್ಟು ಕೊಳ್ಳಿ..

ಆದರೆ ಜೊತೆಗೆ ನೀರನ್ನು ಇಟ್ಟುಕೊಳ್ಳೋದನ್ನ ಮರೆತು ಬಿಟ್ಟರಂತೆ...!

ಹಾಗೆ ಕುಳಿತವರಿಗೆ,ಒಳಗೆ ಸಗಣಿ ರಾಶಿಯಲ್ಲಿನ ಶಾಖ ಕ್ರಮೇಣ ಹೆಚ್ಚಾಗಿ,
ದೇಹದಲ್ಲಿನ ನೀರು ಹೋಗುವ ಬದಲು..
ನಿರ್ಜಲೀಕರಣ ಹಾಗೂ ನಿಶಕ್ತಿ ಆಗಿ,ಅಂಗಾಂಗ ವೈಫಲ್ಯವಾಗಿ,
ಅವರ ಪ್ರಾಣವೇ ಹೋಗಿ ಬಿಟ್ಟಿಟಂತೆ....!

ಸ್ವಯಂ ವೈದ್ಯರು ಆಗಲು ಹೋದ
ತತ್ವ ಜ್ಞಾನಿ ಕೊನೆಗೆ ತಾವು ವೈದ್ಯರ ಬಳಿ ಹೋಗಲು ಸಮಯವೇ ಸಿಗದೇ ಸತ್ತು ಹೋಗಿ ಬಿಟ್ಟರಂತೆ..!

ಅತಿ ಬುದ್ಧಿವಂತಿಕೆ,ಅಂ* ಚಪ್ಪಟೆ ಅಂತಾರೆ ಹಳ್ಳಿಯ ಕಡೆ..

ಅದೇ ಆಯ್ತು ಅನಿಸುತ್ತೆ ಇವರ ವಿಷಯದಲ್ಲಿ..
ಅಲ್ವಾ..


#ಅವಿವೇಕದ_ಸಾವು

ಕಥೆ_08.

#stupid_death

(Source:-Horrible histories Series)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ