ಸೋಮವಾರ, ಮೇ 18, 2015

#ಸುಮಾರು_2_ವರ್ಷಗಳ_ಹಿಂದಿನ_ಘಟನೆ..(BEING HUMAN...)

#ಸುಮಾರು_2_ವರ್ಷಗಳ_ಹಿಂದಿನ_ಘಟನೆ..(BEING HUMAN...)
ನಾನು ಕೆಲಸ ಮುಗಿಸಿ ಮನೆಗೆ ಆಗಸ್ಟೆ ಬಂದಿದ್ದೆ,ಆಗ ನನಗೆ ನನ್ನ ಪಾರ್ ಕಸಿನ್ ಒಬ್ಬಳು ಕಾಲ್ ಮಾಡಿ ಉಬಯ ಕುಶಲೋಪರಿ ವಿಚಾರಿಸಿ ಒಂದಸ್ಟು ಹೊತ್ತು ಹರಟೆ ಹೊಡೆದು ಕರೆ ಕಟ್ ಮಾಡಿದಳು,ಅದಾದ ಕೆಲವೇ ನಿಮಷಕ್ಕೆ ಆಕೆಯೇ ಮತ್ತೊಮ್ಮೆ ಕರೆ ಮಾಡಿದಳು ನಾನು ಸುಮ್ಮನೆ ಮಾಡಿರಬೇಕು ಎಂದು ಮತ್ತೆ ಕರೆ ಸ್ವೀಕರಿಸಿ ಹೇಳು ಎಂದೆ...ಆದರೆ ಆ ಕಡೆಯಿಂದ ವಿಪರೀತ ಗಲಾಟೆ ಮತ್ತು ನನ್ನ ಕಸಿನ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು,ಏನಾಯಿತು ಎಂದು ಕೇಳಿದರೆ ಹೇಳುತ್ತಿಲ್ಲ..ನನಗೆ ಗಾಬರಿಯಾಯಿತು ಕೊನೆಗೆ ನೀನು ಆದಸ್ಟು ಬೇಗ ಬಾ ಇಲ್ಲಿ ಒಂದು ಆಕ್ಸಿಡೆಂಟ್ ಆಗಿದೆ,ರಿಂಗ್ ರೋಡ್ ಜಾಗದ ಹತ್ತಿರ ಒಂದು ಆಸ್ಪತ್ರೆ ಇದೆ ಅಲ್ಲಿಗೆ ಬಾ ಎಂದು ಅಳುತ್ತಲೇ ಹೇಳಿದಳು,,..ನಾನು ಗಡಿಬಿಡಿಯಲ್ಲಿ ಹೊರಟು ಆಸ್ಪತ್ರೆಗೆ ಹೋದೆ...ಇವಳು ತನ್ನ ಕಂಪನಿಯ ಕ್ಯಾಭ್ನಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು,ಮುಂದಿನ ಸೀಟ್ನಲ್ಲಿ ಯಾರೋ ಒಬ್ಬ ತನ್ನ ಕಾಲು ಹಿಡಿದು ಕೊಂಡು ಕೂತಿದ್ದ..ಕೊನೆಗೆ ಆತನನ್ನು ಡ್ರೈವರ್ ಮತ್ತು ಇನ್ನುಳಿದ ಸಾರ್ವಜನಿಕರ ಸಹಾಯದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದೆವು...ನಾನು ಮತ್ತೆ ನನ್ನ ಕಸಿನ್ಗೆ ಸಮಾದಾನ ಮಾಡಿ ಏನು ವಿಷಯ ಎಂದು ಕೇಳಿದಾಗ,..ಇವಳು ತನ್ನ ಕ್ಯಾಬ್ನಿಂದ ಇಳಿಯುತ್ತಿರುವಾಗ ಈ ಗಾಯಗೊಂಡ ಮನುಷ್ಯ ತನ್ನ ದ್ವಿಚಕ್ರವಾಹನವನ್ನು ವೇಗವಾಗಿ ಪುಟ್ ಪಾತ್ನಲ್ಲಿ ರಾಂಗ್ ಸೈಡ್ನಲ್ಲಿ ಬಂದು ಕಾರಿನ ಡೋರಿಗೆ ಹೊಡಿದಿದ್ದಾನೆ,ನನ್ನ ಕಸಿನ್ ಇವನು ವೇಗವಾಗಿ ಬರುವುದು ನೋಡಿ ಇಳಿಯುತ್ತಿರುವವಳು ತಕ್ಶಣ ಒಳಗೆ ಕೂತು ಡೋರ್ ಎಳೆದು ಕೋಳ್ಳಲು ಪ್ರಯ್ನತ್ನಿಸಿದ್ದಾಳೆ ಆದರೂ ಅಸ್ಟರೊಳಗೆ ಆತ ಬಂದು ಹೊಡೆದು ಬಿದ್ದಿದ್ದಾನೆ...ಅಲ್ಲಿದ್ದವರು ಹಾಗೂ ಈ ಗಾಯಾಳು ಒಟ್ಟಾಗಿ ಭಾಯಿಗೆ ಬಂದಂತೆ ಅವಾಚ್ಯ ಶಬ್ದದಿಂದ ನನ್ನ ಕಸಿನ್ಗೆ ಬೈದು ಹೆದರಿಸಿದ್ದಾರೆ,,...ಅವಳ ಜೊತೆ ಇದ್ದ ಅವಳ ಕಂಪನಿಯ ಉದ್ಯೋಗಿ,ಹಾಗು ಕ್ಯಾಬ್ ಡ್ರೈವರ್ ಹಾಗೂ ಕಂಪನಿ ಸೆಕ್ಯುರಿಟಿ ಯಾರೂ ಕೂಡ ಇವಳ ಸಪೊರ್ಟಿಗೆ ಬರಲಿಲ್ಲವಂತೆ..ಇವಳು ಹೆದರಿ ನನಗೆ ಕಾಲ್ ಮಾಡಿದ್ದಾಳೆ..ಕೊನೆಗೆ ನಾನು ಆತನಿಗೆ ಮಾನವೀಯತೆ ದೃಸ್ಟಿಯಿಂದ ಪ್ರಥಮ ಚಿಕಿತ್ಸೆ ಕೊಡಿಸಿದೆ...ಅಸ್ಟರಲ್ಲಿ ದಾರಿಯಲ್ಲಿ ಹೋಗುತ್ತಿದ್ದ ನನ್ನ ಸ್ನೇಹಿತರೂ,ಊರಿನವರು ಹಾಗೂ ಚಿತ್ರನಟರೊಬ್ಬರು ಅವರ ಸ್ನೇಹತರೊಡನೆ ಹೋಗುತ್ತಿದ್ದಾಗ ಅಕಸ್ಮಾತಾಗಿ ಏನು ನೆಡೆಯುತ್ತಿದೆ ಎಂದು ನೋಡಲು ಬಂದು ನನ್ನನ್ನು ನೋಡಿ ಏನಾಯಿತು ಎಂದರು,ಘಟನೆ ವಿವರಿಸಿದೆ,ಆಗ ಅವರು ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದರು(ಎಸ್ಟಂದರೂ ಊರಿನವರು ನಮ್ಮವರು ನಮ್ಮನ್ನು ಬಿಟ್ಟು ಕೊಡುತ್ತಾರೆಯೇ)..ಕೊನೆಗೆ ಈ ಅಸ್ಪತ್ರೆಯಲ್ಲಿ ಸ್ಕಾನಿಂಗ್ ಸೌಲಭ್ಯವಿಲ್ಲ ಮುಂದಿನ ಆಸ್ಪತ್ರೆಗೆ ಹೋಗಿ ಎಂದು ಅಲ್ಲಿನ ವೈದ್ಯರು ಹೇಳಿದರು..ಇಲ್ಲಿನ ಆಸ್ಪತ್ರೆಯ ಕರ್ಚನ್ನು ನಾನೇ ಭರಿಸಿ,ಇನ್ನೊಂದು ಆಸ್ಪತ್ರೆಗೆ ಈ ಗಾಯಳುವನ್ನು ಕರೆದು ಕೊಂಡು ಹೋದೆವು..ಆ ಗಾಯಳುವೋ ಯಾವ ಎಮ್ಮೆ ಹಾಲು ಕುಡಿದು ಬೆಳೆದವನೋ ಆ ದೇವರೇ ಬಲ್ಲ...ತನ್ನ ಮನೆಯವರಿಗೆ ಕರೆ ಮಾಡಲು ೧ಘಂಟೆ ಸಮಯ ತಗೊಂಡ...ಕೊನೆಗೆ ದೊಡ್ಡ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಎಲ್ಲಾ ಮಾಡಿಸಿ,ಸ್ವಲ್ಪ ಹೈರ್ ಲೈನ್ ಕ್ರಾಕ್ ಇದ್ದಂತೆ ಕಾಣುತ್ತೆ ಬೇರೆ ಏನು ತೊಂದರೆ ಇಲ್ಲ ಅಂದ್ರು ಡಾಕ್ಟ್ರು ಆದರೆ ಈತ ಅಸ್ಟರೊಳಗೆ ತಮಿಳಿನಲ್ಲಿ ಇನ್ಯಾವುದೋ ಭಾಷೆಯಲ್ಲಿ ಯಾರ್ಯಾರಿಗೋ ಕಾಲ್ ಮಾಡುತ್ತಾ ಏನೇನೋ ಇಲ್ಲ ಸಲ್ಲದ ವಿಷಯ ಬಡಬಡಿಸುತ್ತ ಸುಮ್ಮನೆ ಕಾಲ ಹರಣ ಮಾಡತೊಡಗಿದ,ಕೊನೆಗೆ ಇಲ್ಲ...ನಾನು ನಮ್ಮ ಪರಿಚಿತರ ಡಾಕ್ಟರ್ ಒಬ್ಬರ ಆಸ್ಪತ್ರೆ ರಾಜಾಜಿ ನಗರದಲ್ಲಿ ಇದೆ ಅಲ್ಲೇ ಹೋಗಬೇಕೆಂದು ಹೇಳತೊಡಗಿದ...ಆತನ ಕನ್ನಡ ದೇವರಿಗೇ ಪ್ರೀತಿ...ಎಲ್ಲೋ ಬ್ರಿಟನಲ್ಲಿ ಹುಟ್ಟಿದವರ ತಡ ಮಾತಾಡುತ್ತಿದ್ದ..ಆಮೇಲೆ ಅವರ ಸಂಬಂದಿಕರು ಬಂದೊಡನೆ ತಿಳಿಯಿತು ಇವನು ಅಪ್ಪಟ ತಮಿಳಿಯನ್ ಎಂದು ಅವರ ಸಂಬಂದಿಕರು ಬಂದೊಡನೆ ಕೂಗಾಡ ತೊಡಗಿದರು"ಅಸ್ಟು ಗೊತ್ತಾಗಲ್ವ ರಾಂಗ್ ಸೈಡ್ ಡೋರ್ ತೆಗಿಬಾರ್ದು ಅಂತೆಲ್ಲಾ ಏನೇನೋ ಕೂಗ ತೊಡಗಿದರು..ಇವನು ತಮಿಳಲ್ಲಿ ಹೇಳುತ್ತಿದ್ದಾನೆ ಅಯ್ಯೋ ನಾನೆ ರಾಂಗ್ ಸೈಡಲ್ಲಿ ಹೊಡೆದಿದ್ದು ಸುಮ್ಮನಿರು ಅಂತ ಆದ್ರೆ...ಇವರಿಗೆ ಗೊತ್ತಾಗುತ್ತಿಲ್ಲ..
ಕೊನೆಗೆ ಅವನು ಕೇಳಿದ ಅಂತ ಸುಮಾರು ೧೨.೩೦ ರಾತ್ರಿಗೆ ಒಂದು ಆಂಬುಲೆನ್ಸ್ ವ್ಯವಸ್ತೆ ಮಾಡಿದೆ ಆತ ೧೫೦೦ ರೂ ಕೇಳಿದ ಅದನ್ನೂ ನಾನೇ ಕೊಟ್ಟೆ...ಕೊನೆಗೆ ಗಾಯಾಳು ಸಾರ್ ಧನ್ಯವಾದ ಸಾರ್ ನಿಮ್ಮ ಮಾನವೀಯತೆಗೆ ಇಸ್ಟೆಲ್ಲಾ ನನ್ನನ್ನು ನೋಡಿಕೊಂಡಿದ್ದಕ್ಕೆ,ಇದರ ಖರ್ಚು ವೆಚ್ಚವೆಲ್ಲ ನನ್ನ ಆಪೀಸ್ ನೋಡಿಕೊಳ್ಳುತ್ತೆ ಅಂತಂದ..ನನ್ನ ಮೊಭೈಲ್ ನಂಬರ್ ಕೇಳಿದ ನಾನು ಯಾವುದೇ ಅನುಮಾನವಿಲ್ಲದೆ ಕೊಟ್ಟೆ...ಕೊನೆಗೆ ಆತನನ್ನು ಆಂಬುಲೆನ್ಸ್ಗೆ ಹಾಕಿ ಕಳುಹಿಸಿ ಕೊಟ್ಟೆವು..
ನನ್ನ ಸ್ನೇಹಿತರು ನೀವ್ಯಾಕೆ ಇದೆಲ್ಲಾ ಮಾಡ್ತೀರಿ ಸಾರ್ ಬೆಂಗಳೂರಲ್ಲಿ ಮಾನವೀಯತೆ ಎಲ್ಲ ನೆಡೆಯೋಲ್ಲ ಅಂದಿದ್ರು ಆದರೂ ನನ್ನ ಮನಸ್ಸು ತಡೆಯದೇ ನಾನು ಇಸ್ಟೆಲ್ಲ ಮಾಡಿದೆ ಹೋಗ್ಲಿ ಬಿಡಿ ಅಂದಿದ್ದೆ..ಇದಾಗಿ ೩ ದಿನ ಕಳೆಯಿತು...ಆ ಆಸಾಮಿಯ ಕಾಲ್ ಬಂತು ನಾನು ಹೇಗಿದ್ದೀರ ಅಂದೆ ಅಯ್ಯೋ ನನ್ನ ಆಪೀಸ್ನಲ್ಲಿ ಹಣ ಕೊಡುವುದಿಲ್ಲವಂತೆ ನನಗೆ ಕಾಲು ಆಪರೇಟ್ ಮಾಡಬೇಕು ಅಂದಿದ್ದಾರೆ ತುಂಬಾ ಖರ್ಚು ಬೀಳುತ್ತೆ ಅಂತ ಕಥೆ ಹೇಳಲು ಪ್ರಾರಂಭಿಸಿದ...ನಾನು ಅದಕ್ಕೆ ನೀವು ಅವತ್ತೇ ಹೇಳಿದಿರಲ್ಲ...ಆಪೀಸ್ ಕೊಡುತ್ತೆ ಅಂತ ಈಗ ಏನು ಬೇರೆಯದೇ ಹೇಳುತಿದ್ದೀರ ಅಂದೆ...ಇಲ್ಲ ನೀವು ೩೦ ಸಾವಿರ ಕೊಡಬೇಕಾಗುತ್ತೆ ಹಾಗೆ ನನ್ನ ಬೈಕ್ ಕೂಡ ರಿಪೈರ್ ಮಾಡಿಸಿ ಕೊಡಲೇ ಬೇಕಾಗುತ್ತೆ ಅಂತ ಹೊಸ ಕಥೆ ಶುರುವಿಟ್ಟು ಕೊಂಡ..
ನಾನು ಅದಕ್ಕೂ ಏನು ಹೇಳದೇ ನಾನು ಸ್ವಲ್ಪ ಬ್ಯುಸಿ ಇದ್ದ ಕಾರಣ ನಂತರ ಕರೆ ಮಾಡುವಂತೆ ಹೇಳಿದೆ...
ಮತ್ತೆ ಕರೆ ಮಾಡಿದ ಈತ ತನ್ನ ಟಾರಿಪ್ ಹೆಚ್ಚಿಸಿ ನೀವು ೫೦ ಸಾವಿರ ಕೊಡಬೇಕಾಗುತ್ತೆ ಬೈಕ್ ರಿಫೈರ್ ಮಾಡಿಸಿಯಾಗಿದೆ ಆ ಶೋರೂಮ್ ಹತ್ತಿರ ಈಗಲೇ ಬಂದು ಬಿಲ್ ಪಾವತಿಸಿ ಅಂತ ಏರು ಧ್ವನಿಯಲ್ಲಿ ಮಾತಾಡಿದ...ನನಗೆ ಆಸ್ಚರ್ಯ ವಾಯಿತು ನಾನು ಅಂದೆ ಅಲ್ಲ ಸ್ವಾಮಿ ನನಗೆ ಇದು ಸಂಬಂದವಿಲ್ಲ ವಿಷಯ ಮಾನವೀಯತೆ ದೃಸ್ಟಿಯಿಂದ ನಾನು ನಿಮಗೆ ಪ್ರಥಮ ಚಿಕಿತ್ಸೆ ಹಾಗೂ ಇನ್ನಿತರೆ ಸುಮಾರು ೩೦೦೦ ರೂಪಾಯಿ ವ್ಯಯಿಸಿದೆ ಈಗ ನೋಡಿದರೆ ನೀವು ಈ ರೀತಿ ಮಾತನಾಡುವುದು ಯಾವ ನ್ಯಾಯ ಅಂದೆ..ಅದಕ್ಕೆ ಆತ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದ,ನಾನು ಮೊದಲು ಆ ಕೆಲಸ ಮಾಡು ನಾನೇ ರಾಂಗ್ ಸೈಡ್ನಲ್ಲಿ ಬಂದು ಹೊಡೆದು ಆಕ್ಸಿಡೆಂಟ್ ಮಾಡಿದೆ ಅಂತ ಕಂಪ್ಲೆಂಟ್ ಕೊಡು ಅಂದೆ..ಕರೆ ಕಟ್ ಮಾಡಿ,
ಆಮೇಲೆ ನಾನು ನನ್ನ ಲಾಯರ್ಗೆ ಕರೆ ಮಾಡಿ ಘಟನೆ ವಿವರಿಸಿದೆ ಲಾಯರ್ ನನಗೆ ಚನ್ನಾಗಿ ಬೈದರು..ನೀನ್ಯಾಕೆ ಊರು ಉದ್ದಾರ ಮಾಡಲು ಹೋಗಿದ್ದೀಯ ಅದು ನಿನ್ಗೆ ಸಂಬಂದವಿಲ್ಲದ ವಿಷಯ ಅದು ಕ್ಯಾಬ ಚಾಲಕ್ ಹಾಗೂ ಅವನ ವ್ಯವಹಾರ..ನಿನಗಾಗಲಿ ನಿನ್ನ ಕಸಿನ್ಗಾಗಲಿ ಏನೂ ಸಂಬಂದವಿಲ್ಲ..ಅಸ್ಟಕ್ಕೂ ನಿನ್ನ ಕಸಿನ್ಗೆ ಬಾಯಿಗೆ ಬಂದಂಗೆ ಬೈದಿದಕ್ಕೆ ನೀನೇ ಅವಳ ಹತ್ತಿರ ಕಂಪ್ಲೇಟ್ ಈಗಲೆ ಧಾಖಲು ಮಾಡು ಅಂದ್ರು...
ನಾನು ಹೋಗಲಿ ಬಿಡಿ ಸಾರ್ ಅಂತ ಸುಮ್ಮನಾದೆ..
ಆ ಆಸಾಮಿಯ ಸುದ್ದಿ ಇವತ್ತಿಗೂ ಇಲ್ಲ..
ನಿಜ ಬೆಂಗಳೂರಿನಲ್ಲಿ ಮಾನವೀಯತೆಗೆ,ಒಳ್ಳೆಯತನಕ್ಕೆ ಬೆಲೆ ಇಲ್ಲ.
ದುಡ್ಡೇ ಎಲ್ಲಾ...ಅದೇ ನಾನು ಏನು ಮಾಡದೆ ಹೋಗಿದ್ದರೆ ನನ್ನ ೩೦೦೦ ಸಾವಿರ ಉಳಿಯುತ್ತಿತ್ತು..ನನಗಾಗಲಿ ನನ್ನ ಕಸಿನ್ಗಾಗಲಿ ಅವನು ಏನೂ ಮಾಡಲು ಸಾದ್ಯವಿರಲಿಲ್ಲ..
ಈಗ ಹೇಳಿ #ನಾನು_ಸಲ್ಮಾನ್_ಖಾನ್ಗಿಂತ_ಗ್ರೇಟ್_ಅಲ್ಲವೇ(#ಬೀಯಿಂಗ್_ಹ್ಯುಮನ್).. ;-) ;-)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ