ಸೋಮವಾರ, ಮೇ 18, 2015

#ಎಂತೆಂತೋರು_ಈ_ಜಗತ್ತಿನಲ್ಲಿ_ಇರ್ತಾರೆ_ನೋಡಿ :-

#ಎಂತೆಂತೋರು_ಈ_ಜಗತ್ತಿನಲ್ಲಿ_ಇರ್ತಾರೆ_ನೋಡಿ :-
ಸುಮಾರು ೬ ವರ್ಷದ ಹಿಂದೆ ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ,ಆಗ ನನ್ನ ಪರಿಚಯಸ್ತರ ಮಗಳೊಬ್ಬಳು ನನ್ನೊಂದಿಗೆ ಆತ್ಮೀಯವಾಗಿ ಇದ್ದಳು,ಅವಳು ತನ್ನ ಪಧವಿಯನ್ನು ಮುಗಿಸಿ ಕೆಲಸ ಹುಡುಕುವದರಲ್ಲಿದ್ದಳು,ಒಮ್ಮೆ ನನಗೆ ಕರೆ ಮಾಡಿ,ಎಲ್ಲಾದರು ಕೆಲಸವಿದ್ದರೆ ನನಗೆ ತಿಳಿಸು ಎಂದಳು,ನಾನು ಅದಕ್ಕೆ ಸಮ್ಮತಿಸಿ,ಅವಳದೇ ವಿಭಾಗದಲ್ಲಿ ಪದವಿ ಪಡೆದು ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ,ನನ್ನ ಆತ್ಮೀಯ ಸ್ನೇಹಿತನಿಗೆ ಈ ವಿಷಯ ತಿಳಿಸಿದೆ ಅವನು ನನ್ನ ನಂಬರ್ ಅವಳಿಗೆ ಕೊಡು ಅಂದ,ನಾನು ನನ್ನ ಸ್ನೇಹಿತನ ಪೊನ್ ನಂಬರ್ ಅವಳಿಗೆ ಕೊಟ್ಟು ಕರೆ ಮಾಡುವಂತೆ ತಿಳಿಸಿದೆ,ಹಾಗೆ ಅವಳು ಒಂದು ಖಾಸಗಿ ಸಂಸ್ಥೆಗೂ ಸೇರಿ ಕೊಂಡಳು(ನನ್ನ ಸ್ನೇಹಿತ ಕೊಡಿಸಿದ್ದಲ್ಲ), ಆ ನಂತರ ನನಗೆ ಆ ವಿಷಯವನ್ನು ತಿಳಿಸುವ ಸೌಜನ್ಯ ಸಹ ತೋರಲಿಲ್ಲ(ಕೆಲಸವಾದ ಮೇಲೆ ಕೆಲವರು ಅಸ್ಟೆ ಬಿಡಿ),ಆ ನಂತರ ಆಕೆಯ ಪೋನ್ ಇಲ್ಲ ಮೇಸೇಜ್ ಕೂಡ ಇಲ್ಲ,ಹಲವು ತಿಂಗಳು ಕಳೆದ ನಂತರ,ನನಗೆ ಒಂದು ಮಾಹಿತಿ ತಿಳಿಯಿತು,
ನನ್ನ ಸ್ನೇಹಿತ ಮತ್ತು ಈಕೆ ಆತ್ಮೀಯರಾಗಿ,ಬೆಂಗಳೂರನ್ನು ರೌನ್ಡ್ ಹೊಡೆಯುತ್ತಿದ್ದಾರೆ ಅಂತ!!!!,
ಅದಕ್ಕೆ ನನ್ಗೆ ಸಂಬಂದ ವಿಲ್ಲದ ವಿಷಯ ಎಂದು ಸುಮ್ಮನಾದೆ,ನನ್ನ ಸ್ನೇಹಿತನೂ ಕೂಡ ಈ ವಿಷಯವನ್ನು ನನ್ನ ಹತ್ತಿರ ಹಂಚಿ ಕೊಳ್ಳಲಿಲ್ಲ!!!!!,
ನನ್ನ ಸ್ನೇಹಿತ ಆ ಹುಡುಗಿಯ ಕುಟುಂಬದ ಬಗ್ಗೆ ಕೆಲವು ಮಾಹಿತ ಕೂಡ ಕೇಳಿದ,ನಾನು ಕ್ಯಾಸುಯಲ್ ಆಗಿ ಕೇಳುತ್ತಿದ್ದಾನೆ ಎಂದು ಅನ್ಯತಾ ಬಾವಿಸದೇ ನನಗೆ ತಿಳಿದಿದ್ದನ್ನು ಹೇಳಿದೆ,
ಆ ನಂತರ ನನಗೆ ತೀಳಿಯದಂತೆ ನನ್ನ ಸಹಾಯವನ್ನು ಪಡೆದೇ ಕೆಲವು ಸ್ಥಳಗಳಲ್ಲಿ ಅವರಿಬ್ಬರು ವಿಹರಿಸಿದ್ದಾರೆ,ಆದರೆ ನನ್ನ ಹತ್ತಿರ ನನ್ನ ಮಾವನ ಮಗಳು ಎಂದು ಸುಳ್ಳು ಹೇಳಿದ್ದಾನೆ!!!!,ನನಗಿದರ ಅರಿವಿರಲಿಲ್ಲ,ಸ್ವಲ್ಪ ದಿನದ ನಂತರ ಆ ಹುಡುಗಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿದೆ,ಮದುವೆ ಕೂಡ ಆಗಿದೆ,ಇದಾಗಿ ಸ್ವಲ್ಪ ದಿನದ ನಂತರ ನನ್ನ ಸ್ನೇಹಿತ ಕರೆ ಮಾಡಿ "ಇಸ್ಟು ದಿನ ನಾನು ಸುತ್ತಾಡುತ್ತಿದ್ದಿದ್ದು ನನ್ನ ಮಾವನ ಮಗಳ ಜೊತೆ ಅಲ್ಲ,ನಾನು ಇದೇ ಯುವತಿಯ ಜೊತೆ ಇದ್ದದ್ದು,ನಿನ್ನ ಹತ್ತಿರ ಹೇಳ ಬಾರದು ಹಾಗೂ ನಿನ್ನ ಸ್ನೇಹವನ್ನು ಅವನೊಂದಿಗೆ ಶಾಶ್ವತವಾಗಿ ಕಳೆದು ಕೊಳ್ಳಬೇಕು ಎಂದು ಶರತ್ತು ವಿದಿಸಿ ಆಣೆ ಹಾಕಲು ಆ ಯುವತಿ ಹೇಳಿದ್ದಳು",(ಆದರಿಂದ ನಿನ್ನೊಂದಿಗೆ ಈ ವಿಷಯ ಹಂಚಿಕೊಳ್ಳಲಿಲ್ಲ ಅಂದ),"ಅವನು ನನ್ನ ಚಡ್ಡಿ ದೋಸ್ತ್,ನಾನು ಅವನು ಹಲವು ವರ್ಶದಿಂದ ಸ್ನೇಹಿತರು,ನಿನ್ನ ಪರಿಚಯವಾಗಿದ್ದೇ ಅವನಿಂದ ನಾನು ಅವನನ್ನು ದೂರಮಾಡಲು ಸಾದ್ಯವಿಲ್ಲ" ಎಂದು ನೇರವಾಗಿ ಹೇಳಿದ್ದೆ(ನನ್ನ ಸ್ನೇಹಿತ ನಮ್ಮ ಸ್ನೇಹವನ್ನು ಬಿಟ್ಟು ಕೊಟ್ಟಿಲ್ಲ)ಎಂದು ನನಗೆ ನೆಡೆದ ಘಟನೆ ವಿವರಿಸಿದ...
ನನಗೆ ಇವತ್ತಿಗೂ ಅರ್ಥವಾಗದ ವಿಷಯ,ನಾನು ಉಪಕಾರ ಮಾಡಿದ್ದಕ್ಕೆ ಆಕೆ ನನ್ನ ಸ್ನೇಹಿತನನ್ನು ನನ್ನಿಂದ ದೂರ ಮಾಡಲು ಪ್ರಯತ್ನಿಸಿದಳಾ?
ಈ ಪ್ರಶ್ನೆ ಇಂದಿಗೂ ನಿಘೂಡವಾಗಿದೆ!!!
ನೋಡಿ ಅದಕ್ಕೆ ಅಲ್ವಾ ದೊಡ್ಡವರು ಹೇಳಿದ್ದು "#ಉಪಕಾರ_ಸ್ಮರಣೆಯಲಿ_ಪ್ರಾಣಿಗಳು_ಬಲು_ಮೇಲು_ಕೆಲಜನರು_ಬಲು_ಕೀಳು"
ಅದಿಕ್ಕೆ ಹೇಳೋದು"ಊರು ಪಾರು ಪತ್ತಿಗೆ ಕಟ್ಕೊಂಡು ಖಾಜಿ ಸಾಬ್ರು ಬಡವಾಗಿದ್ರಂತೆ"...ಅಲ್ವಾ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ