ಮಂಗಳವಾರ, ಮೇ 3, 2016

ಕ್ವಾಸನ ಪಾನ ಗೋಷ್ಠಿ

ಕ್ವಾಸ ತನ್ನ ಸ್ನೇಹಿತ ಕಲ್ಯನೊಡನೆ ದಿನವೂ ಬಾರ್ ಗೆ ಹೋಗಿ ಪಾನ ಗೋಷ್ಟಿ ಮಾಡಿ
ಎಲ್ಲರಿಗೂ ಮೊಳೆ ಹೊಡೆದು,ತಾನೂ ಮೊಳೆ ಹೊಡೆಸಿಕೊಂಡು ಮನೆಗೆ ಬರೋದು ಅವನ ಬಹಳ ವರ್ಷದ ಅಭ್ಯಾಸ..
ಇಬ್ಬರೂ ಒಂದೇ ಟೇಬಲ್ಲಿನಲ್ಲಿ ಕೂತು ಎರಡು ಗ್ಲಾಸ್ ಇಟ್ಕೊಂಡು ಕುದ್ರೆ ಕುಡಿಯೋ ಬ್ರಾಂಡ್ ತರಿಸಿ ಅದನ್ನ ಗಂಟಲಿನವರೆಗೆ ಕುಡಿದೇಹೊರಡುವವರು Daily,

ಇವರಿಗೆ ಒಬ್ಬ ಕಾಯಂ ಸಪ್ಲೈಯರ್ ಗುಂಡ ಅಂತ ಇದ್ದ,

ಒಂದು ದಿನ ಕ್ವಾಸ ಒಬ್ಬನೇ ಬಂದು
ಟೇಬಲ್ನಲ್ಲಿ ಕೂತು,ಎರಡು ಗ್ಲಾಸ್ ಹಾಗೂ ಕುದ್ರೆ ಕುಡಿಯೋ ಬ್ರಾಂಡ್ ದಿನಲೂ  ತರಲು    ಹೇಳುವಂತೆ,ಕಾಯಂ ಸಪ್ಲೈಯರ್ ಗುಂಡನಿಗೆ ಆರ್ಡರ್ ಮಾಡಿದ,
ಆತ
ಕ್ವಾಸನ ಕಾಯಂ ಕುದ್ರೆ ಕುಡಿಯುವ ಬ್ರಾಂಡ್ ತಂದಿಟ್ಟ,
ಎರಡು ಗ್ಲಾಸಿಗೂ ಎಣ್ಣೆ ಸುರಿದು ಕುಡಿಯ ತೊಡಗಿದ ಕ್ವಾಸ..🍻🍺

ಸಪ್ಲೈಯರ್ ಕುತೂಹಲ ತಾಳಲಾರದೆ
ಭಯದಿಂದ
"ಸಾ...ನಿಮ್ಮ ಪ್ರೆಂಡ್ ಎಲ್ಲಿ ಸಾರ್ ಬರ್ಲಿಲ್ಲ" ಅಂದ..
ಅದಕ್ಕೆ
ಕ್ವಾಸ :-ನನ್ನ ಪ್ರೆಂಡ್ ಅನಾರೋಗ್ಯದಿಂದ ತೀರ್ಕೊಂಡ ಕಣೋ"
ಅಂತ ಗೋಳೋ ಆಂತ ಅಳಲು ಶುರುವಿಟ್ಟುಕೊಂಡ..

ಆದ್ರೆ ಸಪ್ಲೈಯರ್ಗೆ ಇನ್ನೂ ಕುತೂಹಲ ತಣಿದಿರಲಿಲ್ಲ...

"ಸಾ..ಹೀಗಾಗ ಬಾರದಿತ್ತು.."😞
ಅಂದು
ಮತ್ತೆ ತನ್ನ ಅನುಮಾನ ಪರಿಹರಿಸಿಕೊಳ್ಳಲು ಮುಂದಾದ..
"ಸಾ....ಮತ್ಯಾಕೆ ಎರಡು ಗ್ಲಾಸಿನಲ್ಲಿ ಕುಡೀತಾ ಇದ್ದೀರಾ ಸಾ..."
ಅಂದ
ಅದಕ್ಕೆ ಕ್ವಾಸ..
"ನೋಡೋ...
ನನ್ನ ಸ್ನೇಹಿತ ನಾನು ಒಟ್ಟಿಗೆ ಕುಡೀತಾ ಇದ್ವಿ..
ಈಗ ಅವನು ಇಲ್ಲ,ಅವನನ್ನ ಬಿಟ್ಟು ಹೇಗೋ ಕುಡೀಲಿ,ಅದಕ್ಕೆ ಅವನ ಪಾಲಿಂದು ನನ್ನ ಪಾಲಿಂದು ಎರಡೂ ಕುಡೀತಾ ಇದ್ದೀನಿ" ಅಂದ
ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ..😭😭😭😭😭

ಸಪ್ಲೈಯರ್:-"ಅಬ್ಬಾ ಎಂತಾ ಸ್ನೇಹ ಸಾ..ನಿಮ್ದು".👏👏 ಅಂತಾ ಕ್ವಾಸನನ್ನು ಸಮಾಧಾನ ಮಾಡಿ ಹೋದ..

ಹೀಗೇ ಹಲವು ದಿನ ನಡೆಯಿತು,

ಆದರೆ ಒಂದು ದಿನ ಸಪ್ಲೈಯರ್ಗೆ ಮತ್ತೆ ಆಶ್ಚರ್ಯ ಕಾದಿತ್ತು

ಕ್ವಾಸ ಒಂದೇ ಗ್ಲಾಸ್ ತರಲು ಹೇಳಿದ ಹಾಗೂ ಅದಕ್ಕೆ ತನ್ನ ರೆಗ್ಯುಲರ್ ಎಣ್ಣೆ ಹಾಕಿ ಕುಡಿಯಲಾರಂಭಿಸಿದ,

ಸಪ್ಲೈಯರ್ಗೆ ಮತ್ತೆ ಕುತೂಹಲ, ಕೇಳಲೋ ಬೇಡ್ವೋ ಅಂತ ದೈರ್ಯ ಮಾಡಿ..

"ಸಾ...ಇವತ್ಯಾಕೆ ಸಾ ಒಂದೇ ಗ್ಲಾಸಲ್ಲಿ ಕುಡೀತಾ ಇದ್ದೀರ"ಅಂದ

ಕ್ವಾಸ:-
"ನಾನು ಕುಡಿಯೋದು ಬಿಟ್ಟೆ ಕಣೋ" ಅಂದ..

ಸಪ್ಲೈಯರ್:- "ಮತ್ಯಾಕೆ ಈ ಗ್ಲಾಸಲ್ಲಿ ಕುಡೀತಾ ಇದ್ದೀರ" ಅಂದ..

ಕ್ವಾಸ:-"ಇದು ನನ್ನ ಆತ್ಮ ಸ್ನೇಹತನ ಪಾಲು ಕಣೋ,ಅವನಿಗೆ ನಾನು ಯಾವತ್ತೂ ದ್ರೋಹ ಮಾಡಲ್ಲ" ಅಂದ...

ಸಪ್ಲೈಯರ್ ಕಣ್ಣು ಬಿಟ್ಟು ನೋಡಿದ್ರೆ ಆಸ್ಪತ್ರೆಯಲ್ಲಿ ಇದ್ನಂತೆ..😂😂😂😂😂

ಈ ಕಥೆಯ ನೀತು ಥೋ ನೀತಿ..
.
.
.
.
.
.
.
.
.
ಸ್ನೇಹ ಅಮರ ಅನ್ಕೊಂಡ್ರಾ..
ಎಂತ ಕರ್ಮನೂ ಇಲ್ಲ..
ಕ್ವಾಸಂಗೆ ಎಣ್ಣೆ ಹಾಕೋಕೆ ಒಂದು ರೀಸನ್ ಬೇಕಿತ್ತು ಅಷ್ಟೆ..🍻🍻🍻🍻🍻
(ಸೂಚನೆ:-ಈ ಕಥೆ ಎಲ್ಲೋ ಓದಿದ್ದೋ.ಕೇಳಿದ್ದೋ ನೆನಪು,
ಸ್ವಲ್ಪ ಮಾಡಿಪೈ ಮಾಡಲಾಗಿದೆ)

ಕ್ವಾಸ ನ ಗೋಳು ಭಾಗ 3

ಕ್ವಾಸ ಈ ಬಾರಿ ಅಂತೂ ಬಹಳ ಬೇಜಾರಾಗಿಬಿಟ್ಟಿದ್ದ,ಬೇಕಿತ್ತಾ ನನಗೆ ಸಾಲ ಮಾಡಿ ಈ ಕೋಳಿ ಪಾರಂ ಮಾಡುವ ಕೆಲ,ಸ ಅಂತ ತನ್ನನ್ನು ತಾನು ಶಪಿಸುತ್ತಾ,ಕೂತಿದ್ದ..😅😅😅
ದೂರದಲ್ಲಿ ಯಾರೋ ಗಿರಾಕಿ ಬರ್ತಾ ಇರೋದು ಕಾಣಿಸ್ತು..😊

ಕ್ವಾಸ ಈ ಭಾರಿ ಅತ್ಯಂತ ಜಾಗರೂಕತೆಯಿಂದ ಹಾಗೂ ಬುದ್ದಿವಂತಿಕೆಯಿಂದ ಇವರನ್ನು ಸಂಬಾಳಿಸಿ ವ್ಯಾಪಾರ ಮಾಡಬೇಕು ಮತ್ತೊಂದು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಾರದು ಅಂತ ದೃಡ ನಿರ್ಧಾರ ತೆಗೆದುಕೊಂಡ..

ಗಿರಾಕಿ ಬಂದರು..

"ಬನ್ನಿ ಸಾರ್..ಎಷ್ಟು ಕೋಳಿ 🐔🐓🐔🐓🐔ಬೇಕಿತ್ತು"ಅಂತ ಬಹಳ ವಿನಮ್ರತೆ ಹಾಗೂ ಜಾಗರೂಕತೆಯಿಂದ ಮಾತನಾಡಲು ಶುರುವಿಟ್ಟು ಕೊಂಡ ಕ್ವಾಸ..

ಗಿರಾಕಿ:-"ಹೌದು,ನಮಗೆ ಕೋಳಿ 🐔🐓🐔🐓🐔ಬೇಕಿತ್ತು,ಆದರೆ ಕೋಳಿ ನೋಡೋಕೆ ಸೂಪರ್ ಆಗಿ ಇದ್ದಾವೆ ಅಂದ ಹಾಗೆ ಏನು ಪುಡ್ ಎಲ್ಲಿಂದ ತಂದು ಹಾಕ್ತೀರ" ಅಂದ್ರು..

ಕ್ವಾಸ:- (ಈ ಭಾರಿ ತನ್ನೆಲ್ಲಾ ಬುದ್ದಿವಂತಿಕೆಯನ್ನು ಉಪಯೋಗಿಸಿ ಬಹಳ ಯೋಚಿಸಿ,ಒಳ್ಳೆಯ ಉತ್ತರ ಮೊದಲೇ ರೆಡಿ ಮಾಡಿಕೊಂಡಿದ್ದ).
ಕೂಡಲೇ ಕ್ವಾಸ..
"ಸಾರ್..ನಾವು ಪುಡ್ ಎಲ್ಲಾ ಏನೂ ತರಿಸಿ ಹಾಕಲ್ಲ,
ದಿನಾ ಬೆಳಿಗ್ಗೆ ಪ್ರತಿಯೊಂದು ಕೋಳಿಗೂ🐓🐔🐓🐔🐓💷💶💴 10 ರೂಪಾಯಿ ಕೊಟ್ಟು,ಅವಕ್ಕೆ ಏನೇನು ಬೇಕೋ ಅದನ್ನ ಖರೀಧಿಸಿ ತಿಂದು ಕೊಳ್ಳೋಕೆ ಹೇಳ್ತೀವಿ,ಅವು ತಿಂದು ಚನ್ನಾಗಿ ಬೆಳೆಯುತ್ತವೆ,ನಾವು ಹಾಗಂತ ರೇಟ್ ಜಾಸ್ತಿ ಹೇಳಲ್ಲ, ಎಲ್ಲರೂ ಮಾರುವ ರೇಟ್ಗೆ ಕೊಡ್ತೀವಿ" ಅಂದ..😂😂😂😂😂
.
.
.
.
.
ಗಿರಾಕಿ ಎಚ್ಚರ ತಪ್ಪಿ ಅಲ್ಲೇ ಕುಸಿದು ಬಿದ್ದನಂತೆ..😞😞😞
.
ಮೋರಲ್ 😜
.
.
.
.
..
.
ಮೋರಲ್ ಏನೂ ಇಲ್ಲ,ಕ್ವಾಸ ಟೆನ್ಶನಲ್ಲಿ ಇದ್ದಾನೆ ನಿಮಗೆ ಮೋರಲ್ ಬೇಕಾ,ಎಂತಾ ಜನ ಮರ್ರೆ ನೀವು..😉
ಕ್ವಾಸ ಕುಸಿದು ಬಿದ್ದಿದ್ದ ಗಿರಾಕಿನ ಆಸ್ಪತ್ರೆಗೆ ಸೇರಿಸಿ ಅವನ ಆಸ್ಪತ್ರೆ ಖರ್ಚು ಎಲ್ಲಾ ಕೊಟ್ಟು,ಕೈ ಕಾಲಿ ಮಾಡಿಕೊಂಡು,ಹೈರಾಣ ಆಗಿ ಬಂದು..
ಕೂಡಲೇ ಕೋಳಿ ಪಾರಂ ಮುಚ್ಚಿದನಂತೆ..😞😞😞

ಅಂದ ಹಾಗೆ
ಈ ಜೋಕ್ ಮೂಲ ಕರ್ತೃ ನಮ್ಮ ಖುಷಿ ಖುಷಿಯಲ್ಲಿ,
ದಿನವೂ 90 ಹಾಕುತ್ತಾ 99 ವರ್ಷ ನೆಮ್ಮದಿಯಾಗಿ ಬದುಕಿದ್ದ ಖುಷ್ವಂತಜ್ಜ..
..

ನಾನು ಕೋಳಿ ಸ್ಟೋರಿಗೆ ಮಸಾಲೆ ಹಾಕಿ,ಮದುವೆ ಮಾಡಿ ಹಾಕಿದ್ದೇನೆ ಅಷ್ಟೇ.. 😂😂😂😂
ಕ್ಷಮೆ ಇರಲಿ.ಖುಷ್ವಂತಜ್ಜ..

ಕ್ವಾಸ ನ ಗೋಳು ಭಾಗ 2

ಕ್ವಾಸನ ಗೋಳು Part-2. cont.....

ಕ್ವಾಸನ ಕೋಳಿ ಪಾರಂ ಗೆ ಐ ಟಿ ಯವರು ಬಂದು, ಇವನು ಅತಿಯಾಗಿ ಬುಲ್ಡ್ ಅಪ್ ಕೊಟ್ಟು,ಸಮಸ್ಯೆ ಆಗಿ ಹಣ ಕಳಕೊಂಡ ಮೇಲೆ,
ಕ್ವಾಸ ಬಹಳ ಎಚ್ಚರಿಕೆ ಇಂದ ವ್ಯವಹಾರ ಮಾಡೋಕೆ ತೀರ್ಮಾನ ಮಾಡಿದ್ದ...

ಒಂದಿನ ಬೆಳಿಗ್ಗೆ 🌇ಟಿಪ್ ಟಾಪಾಗಿ ಡ್ರೆಸ್ ಮಾಡಿಕೊಂಡು,ಬಹಳ ಅಪಿಶಿಯಲ್ ಆಗಿ ಕಾಣುವ ಇಬ್ರು ಬಂದ್ರು,
ಕ್ವಾಸ ಈಗ ಫುಲ್ ಜಾಗ್ರತೆಯಿಂದ ಮಾತಾಡೋಕೆ ಸುರು ಮಾಡಿದ..
ಕ್ವಾಸ:- ಬನ್ನಿ ಸಾ...ಹೇಗಿದ್ದೀರ..??
ಕೋಳಿ ಎಷ್ಟು ಕೆ ಜಿ ಬೇಕು??
ಗಿರಾಕಿಗಳು:-ಏನ್ರಿ,ಕೋಳಿಗೆ ಏನು ಫುಡ್ ಹಾಕ್ತಿರ,ಸಕತ್ತಾಗಿ ಕಾಣ್ತಾ ಇದ್ದಾವೆ ದಷ್ಟ ಪುಷ್ಟವಾಗಿ..

ಕ್ವಾಸ:- (ಬಹಳ ಜಾಗ್ರತೆಯಿ0ದ ಏನು ಹೇಳೋದು ಅಂತ,ಸಿಕ್ಕಾಬಟ್ಟೆ ಯೋಚನೆ ಮಾಡಿ ಕೊನೆಗೆ ಸೇಪರ್ ಸೈಡ್ ಇರ್ಲಿ ಅಂತ)
"ಸಾ...ಕೋಳಿಗೆ 🐓🐔🐓🐔🐓🐔ನಾವು ಏನು ಹಾಕಲ್ಲ ಸಾ..ಬರಿ ನೀರು ಕುಡ್ಕೊ0ಡು ಮತ್ತೆ ಗಾಳಿ ತಗೊಂಡು ಹಾಗೇ ಬೆಳಿತಾವೆ ಸಾ...ಹಾಗಂತ ನಾವು ಎಲ್ಲರು ಕೊಡೋ ರೇಟ್ಗೆ ನಾವು ಕೋಳಿ🐓🐔🐓🐔 ಮಾರೋದು ಸಾರ್ "ಅಂತ ಹಲ್ಲು ಕಿರುಯುತ್ತಾ ಹೇಳ್ದ..😁😀😁😀

ಗಿರಾಕಿ:-(ಫುಲ್ ರೈಸ್ ಆಗ್ಬಿಟ್ರು)😈😈😈😈,"ಏನ್ರಿ ಏನು ತಮಾಷೆ ಮಾಡ್ತಾ ಇದ್ದೀರಾ??ನಮ್ಮನ್ನು ಬಕ್ರಾ ಅನ್ಕೋ0ಡಿದ್ದೀರ??
ಅದು ಹೇಗೆ ಬರಿ ಗಾಳಿ ನೀರು,ಸೇವಿಸ್ಕೊಂಡುಇಷ್ಟು ಬೆಳೆಯೋಕೆ ಸಾಧ್ಯ??
ನಾವು ಪ್ರಾಣಿದಯಾ ಸಂಘದವರು,ನಿಮ್ಮ ಮೇಲೆ ಪ್ರಾಣಿ ಹಿಂಸೆ ಮಾಡ್ತಾ ಇದ್ದೀರಾ,ಯಾವುದೇ ದಯೆ ಇಲ್ದೆ,ಕೋಳಿಗೆ ಆಹಾರವನ್ನು ಸಹಾ ಕೊಡದೆ,ಸಾಕಿ ಹಣ ಮಾಡ್ತಾ ಇದ್ದೀರಾ???
ಕೇಸ್ ಹಾಕ್ಸಿ ಜೈಲಿಗೆ ಹಾಕಿಸುತ್ತಿನಿ"
ಅಂದ್ರು..

ಕ್ವಾಸ:- (ನಡುಗ್ಬಿಟ್ಟ)"😞
"ತಕ್ಷಣವೇ ಸಾರ್ ಕ್ಷಮಿಸಿ ಅಂತ"ಹಿಂದೆ ನಡೆದ ಕಥೆ ಹೇಳಿದ,
ಆಗ ಅವರು ಅದನ್ನು ಒಪ್ಪಿ ಹೋಗಲಿ ಬಿಡಿ,ಇನ್ನೇನು ಹೀಗೆ ಸುಳ್ಳು ಹೇಳಬೇಡಿ ಅಂದು ಹೊರಟರು..😷

ಕ್ವಾಸ,ಸ್ವಲ್ಪ ಹಣ ಮತ್ತು ಎರಡು ಕೋಳಿ🐔🐓🐔🐓🐔 ಕೊಡೋಕೆ ಹೋದ..
ಅವರು ಕೋಳಿ 🐓🐔🐓🐔🐓ತಗೊಳ್ಳೋಕೆ ಒಪ್ಪಲಿಲ್ಲ..

ಯಾಕೆ ಗೊತ್ತಾ???😃

ಅವರು ಇಬ್ಬರೂ ಶಿವರಾಜ್ ಕುಮಾರರ ಕಟ್ಟಾ ಅಭಿಮಾನಿಗಳು,ಅವರನ್ನ ತುಂಬಾ ಪಾಲೋ ಮಾಡೋರು..😉
.
.
.
.
.
.
.
.
.
.
ಥೋ...
ಅದೇ ಹಾಡು ಇಲ್ವಾ ಸಾ...ಅವರದ್ದು ಯಾವುದೋ ಪಿಚ್ಚರಲ್ಲಿ
"ಕುರಿ 🐏🐑🐏🐑ಕೋಳಿನಾ🐓🐔🐓🐔🐓,ಸೋಮವಾರ,ಶನಿವಾರ "ಕೊಯ್ಯೊ"ಹಾಗಿಲ್ಲ ಅಂತ..😂"

ಅವತ್ತು ಸೋಮವಾರ ಅಂತ ಒಬ್ಬನಿಗೆ ನೆನಪಾಯ್ತು ಗೊತ್ತಾ..!!
ಅದ್ಕೆ ನೋ ಕೋಳಿ..🐓🐔🐓🐔🐓😂

ಮೋರಲ್
.
.
.
.
.
.
.
.
.
ಇಲ್ಲ ಅ0ತ ತಿಳ್ಕಂಡ್ರಾ..
ಸೂಟ್ ಬೂಟ್ ಹಾಕಿದವರೆಲ್ಲಾ income tax Deptವರಲ್ಲ,
ಪ್ರಾಣಿದಯಾ ಸಂಘದವರು ಇರ್ತಾರೆ ಅಂತ ಅಷ್ಟೇ..

ಕ್ವಾಸ ನ ಗೋಳು ಭಾಗ 1

ಒಮ್ಮೆ ಕ್ವಾಸ ಸ್ವಂತ ಉದ್ಯಮ ಮಾಡಬೇಕೆಂದು ನಿರ್ಧರಿಸಿ,
ತಾನು ಬ್ಯಾಂಕಿನಿಂದ ಸಾಲ ತೆಗೆದು,
ಕೋಳಿ ಪಾರಂ ಮಾಡಲು ನಿರ್ಧರಿಸಿದ..🐓🐔🐓🐔🐓
ಕೋಳಿ ಪಾರಂ ಮಾಡಿ ವ್ಯಾಪಾರವನ್ನು ಶುರುಮಾಡಿಕೊಂಡ. 
ಒಂದು ದಿನ,ಕ್ವಾಸ ನ ಫಾರಂಗೆ  ಬಾರಿ ಶ್ರೀಮಂತರಂತೆ ಕಾಣುವ  ಸೂಟ್ ಬೂಟ್ ಹಾಕಿರುವ ಇಬ್ಬರು ವ್ಯಕ್ತಿಗಳು ಬಂದರು..

ಕ್ವಾಸ ಸಂತಸದಿಂದ ಅವರನ್ನು ಬರ ಹೇಳಿ..😃

ಇವರನ್ನು ಕುರಿ ಮಾಡಿ,ವ್ಯಾಪಾರ ಚನ್ನಾಗಿ ಮಾಡಿ ದುಡ್ಡು ಮಾಡಬೇಕು ಇವತ್ತೇ ಎಂದು ಮನಸ್ಸಿನಲ್ಲೆ ಲೆಕ್ಕ ಹಾಕಿದ..😍

ಬಂದವರು

"ಏನ್ರಿ ಕೋಳಿಗೆ 🐓🐓🐓🐓ಏನು ಹಾಕ್ತಿರ ಚನಾಗಿದಾವೆ ನೋಡೋಕೆ ಅಂದ..???😃

ಕ್ವಾಸ:-(ಖುಷಿಯಿಂದ ಉಬ್ಬಿ ಹೋದ ಬುಲ್ಡ್ ಅಪ್ ಕೊಡೊ ಭರದಲ್ಲಿ)"ಸಾರ್ ನಾವು ಕೋಳಿಗೆ🐔🐓🐔🐓🐔🐓
ಭಾರಿ ಕಾಸ್ಟ್ಲಿ ಫುಡ್ ಹಾಕ್ತಿವಿ
ದ್ರಾಕ್ಷಿ,ಗೋಡಂಬಿ,ಉತ್ತುತ್ತೆ, ಹಾಲು,ಮೊಸರು ಪೌಷ್ಟಿಕಾಂಶ ಸಿಗೋ ಎಲ್ಲಾ ಆಹಾರ ಹಾಕ್ತಿವಿ ಆದ್ರೆ ರೇಟ್ ಮಾತ್ರ ಎಲ್ಲರೂ ಕೊಡುವ ರೇಟಿಗೆ ಕೊಡ್ತೀವಿ,
ಅಂತ ಹಳಿ ಇಂಜಿನ್ ಏನೂ ಇರದ ರೈಲು ಬಿಟ್ಟು,ಸಿಕ್ಕಾಬಟ್ಟೆ ಬುಲ್ಡ್ ಅಪ್ ಕೊಟ್ಟ..😛😛😛😛

ಬಂದವರು:-
"ನಾವು ಇನ್ಕಮ್ ಟ್ಯಾಕ್ಸ್ ನವರು,ನಿಮಗೆ ಎಲ್ಲಿಂದ ಇಷ್ಟೆಲ್ಲಾ ಹಣ ಬರುತ್ತೆ,ಅದು ಹೇಗೆ ನಿಮಗೆ ಲಾಭ ಆಗುತ್ತೆ.. ಲೆಕ್ಕ ಕೊಡಿ"
ಅಂದ್ರು..

ಕ್ವಾಸ:-(ಫುಲ್ ತಬ್ಬಬ್ಬು)"ಸಾರ್,ತಪ್ಪಾಯ್ತು ಸಾರ್,ನಾನು ವ್ಯಾಪಾರ ಆಗ್ಲಿ ಅಂತ ಹೀಗೆ ಸುಳ್ಳು ಹೇಳಿದೇ ಸಾರ್, ಹಾಗೆಲ್ಲಾ ಏನೂ ಹಾಕಲ್ಲ ಸಾರ್..ಎಲ್ಲರ ಹಾಗೆ ನಾನೂ ಸಾಕುತ್ತೀನಿ ಅಂತ ಏನೇನೋ ಹೇಳಿ,ಅತ್ತು ಕರೆದು,ಕೊನೆಗೆ ಕೈಕಾಲು ಹಿಡಿದು,ಸ್ವಲ್ಪ ದುಡ್ಡು💵💶💷💸 ಎರಡು ಕೋಳಿ 🐓🐔ಕೊಟ್ಟು ಕಳುಹಿಸಿ ನಿಟ್ಟುಸಿರು ಬಿಟ್ಟ..😢😔
.
.
ಮೋರಲ್:-
.
.
.
.
.
.
.
.
ಮೋರಲ್ ಇಲ್ಲ ಎಣ್ಣೆ ಬ್ಯಾರಲ್ ಇಲ್ಲಾ.😷
ಕ್ವಾಸ ಸುಮ್ನೆ ಸುಳ್ಳು ಹೇಳಿ,ಲಾಸ್ ಮಾಡಿಕೊಂಡೆ ಅಂತಾ ಸಿಡಿಲು ಹೊಡೆಸಿಕೊಂಡು ಒಂದೇ ಕಣ್ಣಲ್ಲಿ ಅಳ್ತಾ ಕೂತಿದ್ದಾನೆ,ಸಮಾಧಾನ ಮಾಡಿ...
ಇದರಲ್ಲೂ ಮೋರಲ್ ಬೇಕಾ ನಿಮಗೆ..😂😂😂

ಒಂದು ಕೆಟ್ಟ ಅನುಭವ ಪರಮಾತ್ಮನ ಸನ್ನಿಧಿಯಲ್ಲಿ

ನಾನು ಕೆಲವು ತಿಂಗಳ ಹಿಂದೆ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿದ್ದೆ,ಹಾಗೆ ಶ್ರೀಕೃಷ್ಣ ಪರಮಾತ್ಮನ ದರುಶನ ಮಾಡೋಣವೆಂದು ದೇವಸ್ಥಾನದ ಬಳಿ ಹೋಗಿ,ಕನಕನ ಕಿಂಡಿಯ ಮೂಲಕ ದರುಶನ ಮಾಡಿ ಹೊರಡಲು ಅಣಿಯಾದೆ,

ಆದರೆ ಜೊತೆಗಿದ್ದ ಸ್ನೇಹಿತರು,ಒಳಗಡೆ ಹೋಗಿ ದರ್ಶನ ಮಾಡೋಣ ಅಂದ್ರು ನಾನು ಹೋಗೋಣ ಅಂತ ಒಳ ನಡೆದು ಯಾವುದೋ ಸೇವೆಗೆ ಚೀಟಿಯನ್ನು ಸಹ ಪಡೆದು,ಇನ್ನೇನು ಒಳ ಹೋಗ ಬೇಕು ಅನ್ನುವಾಗ,

ಬಲಗಡೆ ಇರುವ ಕಲ್ಯಾಣಿಗೆ ಎಲ್ಲರೂ ಹೋಗುತ್ತಿದ್ದರು,ಹಾಗೆ ನಾವು ಹೋಗೋಣಾ ಅಂತ,ಗೇಟ್ ದಾಟಿ ಒಳ ನಡೆದು ನೀರು ನೋಡುತ್ತಾ ಮೆಟ್ಟಿಲ ಮೇಲೆ ಕೂತಿದ್ದೆವು,ಅಲ್ಲಿ  ಹಲವು ವಟುಗಳು ಸಂಧ್ಯಾವಂಧನೆ ಮಾಡುತ್ತಿದ್ದರು,ಕೆಲವು ಮಹಿಳೆಯರು ಇನ್ನೇನೋ ಪಠಿಸುತ್ತಾ ಕೂತಿದ್ದರು,ಕಲ್ಯಾಣಿಯಲ್ಲಿ ಯಾವುದೇ ಮುಲಾಜಿಲ್ಲದೆ ಪಂಚೆ ಇನ್ನಿತರೇ ಬಟ್ಟೆಯನ್ನು (ಮಠದವರು ಅನ್ನಿಸುತ್ತೆ)ನೀರಿನಲ್ಲಿ ಅದ್ದಿ ತೊಳೆಯುತ್ತಿದ್ದರು,ಪಾಪ ಕಲ್ಯಾಣಿಗೆ ಬಂದ ನಮ್ಮಂತವರು ಅದರ ಅರಿವಿಲ್ಲದೇ ಅದೇ ನೀರನ್ನು ತಲೆಗೆ ಚಿಮುಕಿಸಿ ಕೊಂಡು ಹೋಗ್ತಾ ಇದ್ರೂ..😂😂😉😉

ಹಾಗೆ ಈ ಪ್ರಹಸನವೆಲ್ಲಾ ನೋಡುತ್ತಿದ್ದವರಿಗೆ,
ಕೂಡಲೇ ಒಂದು ಆವಾಜ್ ಕೇಳಿತು..
"ಏನ್ರಿ ಯಾರೀ ಇಲ್ಲಿ ನಿಮಗೆ ಬರೋಕೆ ಹೇಳಿದ್ದು,ಅಷ್ಟು ಗೊತ್ತಾಗಲ್ವಾ,ಏನು ತಿಳ್ಕಂಡಿದ್ದೀರ,ಯಾರು ಬಿಟ್ರು ನಿಮಗೆ"
ಅಂತ ಒಬ್ಬ ಗಾರ್ಡ್ ಕೂಗುತ್ತಾ,ನಮಗೆ ಬಯ್ಯಲು ಶುರುವಿಟ್ಟು ಕೊಂಡ...
ನಾನು ತುಂಬಾ ಕೂಲ್ ಆಗಿ,
"ಎಲ್ಲರೂ ಬರುತ್ತಿದ್ದರು ನಾವು ಬಂದ್ವಿ"ಅಂದೆ,
ನನ್ನ ಸ್ನೇಹಿತರೂ ಅದನ್ನೇ ಹೇಳಿದರು,
"ನಮಗೇನು ಗೊತ್ತು ಇಲ್ಲಿ ಬರಬಾರದು ಅಂತ ಹಾಗಂತ ಬೋರ್ಡ್ ಇಲ್ವಲ್ಲಾ,ಎಲ್ಲರೂ ಇದ್ದಾರಲ್ಲ ಅಂದ್ರು..."

ಆದರೂ ಏನೇನೋ ಬಡಬಡಿಸುತ್ತಲೇ ಆತ ಯಾರಿಗೋ ಕಾಲ್ ಮಾಡಿ ತುಳುವಿನಲ್ಲಿ ಮಾತನಾಡ ತೊಡಗಿದ,

ನಾನು ಏನೂ ಲೆಕ್ಕಿಸದೆ ಬಾಯಿ ಮುಚ್ಚಿಕೊಂಡು ಹೊರ ಹೊರಟೆ,
ನನ್ನ ಸ್ನೇಹಿತರು,ಬೇಡಿ ಹಾಗೆಮಾಡಬೇಡಿ ಇಲ್ಲಿ ವರೆಗೆ ಬಂದಿದ್ದೀರ ಒಳಗಡೆ ದರ್ಶನ ಮಾಡೇ ಹೋಗೋಣ ಅಂತ ಒತ್ತಾಯ ಮಾಡಿದರು,
ಕ್ಯೂ ನಲ್ಲಿ ನಿಂತು ದರ್ಶನ ಮಾಡುತ್ತಿದ್ದಾಗ ನನಗೆ ಅನ್ನಿಸಿದ್ದು,
ಇದು ಗೊತ್ತಿದ್ದೆ ಕೃಷ್ಣ ಪರಮಾತ್ಮ ಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೆ ದರ್ಶನ ಕೊಡಲು ತಿರುಗಿ ನಿಂತಿದ್ದ ಅಂತಾ..!!!!

ನನಗೆ ತುಂಬಾ ಬೇಸರವಾಯಿತು,ಪಂಕ್ತಿ ಭೇದ ಇನ್ನೊಂದು ಮತ್ತೊಂದು ಅವರ ವೈಯಕ್ತಿಕ ನನ್ನ ವಿರೋಧವಿಲ್ಲ,
ಆದರೆ ಹೀಗೆ ಅಲ್ಲಿ ಬಂದವರನ್ನು ಭಾಯಿಗೆ ಬಂದಂತೆ ಬೈಯುವುದು,ಯಾವ ಮಠದ ಹಾಗೂ ದೇವಸ್ಥಾನದ ಸಭ್ಯತೆ,ಸಂಪ್ರದಾಯ,ಸಂಸ್ಕಾರ !????

ನನ್ನ ಸ್ನೇಹಿತರು ಕೇಳಿದರು ಅಲ್ಲಾ,ನೀವು ಅಷ್ಟು ಶಾರ್ಟ್ ಟೆಂಪರ್ ಮನುಷ್ಯ,ಯಾಕೆ ಸುಮ್ಮನೆ ಇದ್ರಿ ಹೆಚ್ಚು ಮಾತನಾಡಲ್ಲಿಲ್ಲ ಅಂದ್ರು,

ನಾನಂದೆ "ಅದು ಅವರ ಮಠ,ಅದು ವೈಯಕ್ತಿಕ ಆಸ್ತಿ,ಹೋಗಿದ್ದು ಮೊದಲು ನಮ್ಮ ತಪ್ಪು,
ನಿಂಗ್ಯಾರು ಇಲ್ಲಿ ಬರೋಕೆ ಹೇಳಿದ್ರು ಅಂತ ಮಠಕ್ಕೆ ಸಂಬಂಧ ಪಟ್ಟವರು  ಕೇಳಿದ್ರೆ,ಏನು ಹೇಳೋಕಾಗುತ್ತೆ ಉತ್ತರ,(ಇಲ್ಲಾ ಅಂದಿದ್ರೆ ಅವನಿಗೆ ಸಹಸ್ರನಾಮ ಅರ್ಚನೆ ಮಾಡಿ ಬರ್ತಿದ್ದೆ ಅದು ಬೇರೆ ಪ್ರಶ್ನೆ ಬಿಡಿ)😉
ಹೊರಗಿಂದಲೆ ದರ್ಶನ ಮಾಡಿಕೊಂಡು ಹೋಗಿದ್ದರೆ, ಇದೆಲ್ಲಾ ಆಗ್ತಿತ್ತಾ ಅಂದೆ..!!!!

ಇಂತಹಾ ಕೆಲವು ಜನ ಮಾಡುವ ಘನ ಕಾರ್ಯಕ್ಕೆ,ಆ ಹಿರಿಯ ಸ್ವಾಮಿಗಳು ಅನ್ನಿಸಿಕೊಳ್ಳುತ್ತಾರೆ,ಮೊದಲು ಸ್ವಾಮೀಜಿ ಮತ್ತು ಮಠದ ಆಡಳಿತ ಮಂಡಳಿ ಇಂತಹಾ ವಿಷಯಗಳನ್ನು ನಿಯಂತ್ರಣಕ್ಕೆ ತರೋದು ಒಳ್ಳೆಯದು...
ಎಲ್ರನ್ನು ಮನುಷ್ಯರಂತೆ ಟ್ರೀಟ್ ಮಾಡೋಕೆ, ಅವರ ಮಠದ ಎಂಪ್ಲಾಯ್ಸ್ಗೆ ಮೊದಲು ಸೂಚಿಸೋದು ಉತ್ತಮ.