ಶುಕ್ರವಾರ, ನವೆಂಬರ್ 15, 2019

ಅನುಭವ

ಹಲವರಿಗೆ ಹಲವು ಸರಿ ಇಂತಹ ಅನುಭವ ಆಗಿರಬಹುದು..

ನೀವು ಎಲ್ಲಾದರೂ ಹೋಗೋಣ ಅಂತ ತೀರ್ಮಾನಿಸಿ ಜೊತೆ ಇರುವ ಕೆಲವು ಸ್ನೇಹಿತರಿಗೆ ಹೇಳಿದಾಗ,
ಹೊರಡೋಣ ಅಂತಾರೆ
ಆದರೆ
ಹೇಗೆ ಹೋಗೋಣ ಅಂತ ಕೇಳಿದ್ರೆ..

ಅದರಲ್ಲಿ ಕೆಲವರು..
"ಹೇಯ್...ಹೇಗಾದ್ರೂ ಆಯ್ತು, ನೀವು ಹೇಳಿದ ಹಾಗೆ,ನನಗೆ ಅಷ್ಟು ಐಡಿಯಾ ಇಲ್ಲಪ್ಪ"ಅಂತಾರೆ..
ಅದೇ...
ನಾವು ನಮಗೆ ಗೊತ್ತಿದ್ದ ದಾರಿಯಲ್ಲಿ ಅವರನ್ನ ಕರೆದು ಕೊಂಡು ಬಂದು ಸ್ವಲ್ಪ ಹೊತ್ತಿಗೆ....
ಒಂದು ಸಣ್ಣ ತಣ್ಣನೆಯ ಡೈಲಾಗ್ ತೇಲಿ ಬಿಡ್ತಾರೆ...

"ಅಯ್ಯೋ..ಇದು ಸಿಕ್ಕಾಪಟ್ಟೆ ದೂರ ಆಯ್ತಪ್ಪ,ಎಷ್ಟು ಸಿಗ್ನಲ್ ಸಿಕ್ಕುತ್ತೆ,ಟ್ರಾಫಿಕ್ ಬೇರೆ,ರೋಡ್ ಬೇರೆ ಸರಿ ಇರಲಿಲ್ಲ,ಏರಿಯಾ ಒಂತರಾ ಇತ್ತು..
ಆ ರೋಡ್ ನಿಂದ ಬರಬಹುದಿತ್ತಪ್ಪ..ಅಲ್ವಾ!?"
ಅಂತ...

ಆದರೆ ಮೊದಲೇ ಕೇಳಿದಾಗ,ಗೊತ್ತಿದ್ದರೂ ಅವರ ಅಭಿಪ್ರಾಯ ಹೇಳಿರೋದೇ ಇಲ್ಲ..!
ಇದೇ
ರೀತಿ ಸೇಫ್ ಗೇಮ್,
ಹೋಟೆಲ್ ಹೋದಾಗಲೂ ಮಾಡ್ತಾರೆ,

ಯಾವ ಹೋಟೆಲ್ಗೆ ಹೋಗೋಣ ಅಂದರೆ..
ನೀವೇ ಹೇಳಿದಲ್ಲಿ ಹೋಗೋಣ ನಮಗೇನು ತೊಂದರೆ ಇಲ್ಲಪ್ಪ,ಅದೇ ಬೇಕು ಇದೆ ಬೇಕು ಅಂತೆಲ್ಲಾ ಇಲ್ಲ ಅಂತಾರೆ..

ಅಲ್ಲಿ ಹೋಗಿ ಊಟ ತಿಂಡಿ ಎಲ್ಲಾ ಮುಗಿಸಿ ಹೊರಬಂದಮೇಲೆ,

ಥೋ ಚೂರು ಚನ್ನಾಗಿರಲಿಲ್ಲ,ಸಾಂಬಾರು ಉಪ್ಪು ಕಡಿಮೆ,ಪಲ್ಯ ಎರಡನೇ ಸರಿ ಹಾಕಲೇ ಇಲ್ಲ,ಅನ್ನ ಫುಲ್ ಗಟ್ಟಿ ಇತ್ತು,ಹಪ್ಪಳನಾ ಅದು..
ಚಪಾತಿ ಕೊಟ್ಟಿದ್ದ,ನಾಯಿ,ಚಕಳ ಎಳೆದು ತಿಂದ ಹಾಗೆ ಅನಿಸ್ತು..!
ಇನ್ನೊಂದು ಕಡೆ ಹೋಗಬಹುದಿತ್ತು ಅಲ್ವಾ!?"ಅಂತ ರಾಗ ತೆಗೆಯುತ್ತಾರೆ..!

ಬಟ್ಟೆ ಅಂಗಡಿ,ಇನ್ನಿತರೆ ಯಾವುದೇ ಶಾಪಿಂಗ್ ಮಾಡೋಕೆ ಜಾಗಕ್ಕೆ ಹೋಗೋಣ ಅಂದರು ಇದೇ ಪಾರ್ಮುಲಾ ಬಳಸುತ್ತಾರೆ ಕೆಲವರು..
ಅಲ್ಲಿ ಹೋಗುವವರೆಗೆ ಸುಮ್ಮನೆ ಇದ್ದು ಆಮೇಲೆ,
ಅಲ್ಲೇ ಚೀಪ್ ಸಿಗೋದು,ಇಲ್ಲಿ ಏನು ಚನ್ನಾಗಿಲ್ಲ ಅಲ್ವಾ
ಅಂತ ಒಗ್ಗರಣೆ ಶುರುವಾಗುತ್ತೆ..!

ನೀವು ಹೇಗೆ ಹೇಳ್ತೀರೋ ಹಾಗೆ ನನಗೆ ಅಷ್ಟು ಐಡಿಯಾ ಇಲ್ಲಪ್ಪ ಅಂತ ಹೇಳಿ..
ಕೊನೆಗೆ ತಮ್ಮ ಹಳೇ ರಾಗ ತೆಗೆಯೋರು ಎಲ್ಲಾ ಕಡೆ ಸಿಗ್ತಾರೆ ಅನಿಸುತ್ತೆ.

ಈ ರೀತಿ ಸೇಫ್ ಗೇಮ್ ಆಡುತ್ತಾ.
ತಾವು ಸೇಫ್ ಸೈಡ್ ಇದ್ದು,ಕೊನೆಗೆ ನೀವು ತಗೊಂಡ ತೀರ್ಮಾನ ಸರಿಯಿಲ್ಲ ನನಗೆ ಎಲ್ಲಾ ಗೊತ್ತಿತ್ತು ಅಂತ ಕ್ರೆಡಿಟ್ ತಗೊಳ್ಳೋಕೆ ಮತ್ತು ನಾವೇ ಸರಿ ಅಂತ ಎಲ್ಲರ ಹತ್ರ ಒಳ್ಳೆಯವರಾಗಿ ಹೈಲೈಟ್ ಆಗೋಕೆ ಪ್ರಯತ್ನ ಪಡೋರು, ಎಲ್ಲಾ ಕ್ಷೇತ್ರದಲ್ಲೂ ಇರ್ತಾರೆ..

ಮೈಮೇಲೆ ಹರಳೆಣ್ಣೆ ಹಾಗು ಗ್ರೀಸ್ ಹಚ್ಚಿಕೊಂಡ್ ಇರೋ ಜನ ಅನ್ನಬಹುದು ಅಂಥವರನ್ನು..
ಯಾವ ಸಮಸ್ಯೆ,ಜವಾಬ್ದಾರಿಗೂ ಸಿಕ್ಕಿಕೊಳ್ಳಲ್ಲ,ಜಾರಿಕೊಳ್ಳುತ್ತಾರೆ..

ಎಲ್ಲರ ಹತ್ರ ಒಳ್ಳೆಯರಾಗಿ ಇರಬೇಕು,ಒಳ್ಳೆಯವರು ಅಂತ ಹೇಳಿಸಿ ಕೊಳ್ಳಬೇಕು,ಹೊಗಳಿಕೆ ಬೇಕು..
ನಾವು ಮಾತ್ರ ಯಾವುದೇ ಜವಾಬ್ದಾರಿ ತಗೊಳ್ಳಲ್ಲ,ಎಲ್ಲದರಿಂದ ನುಣುಚಿ ಕೊಳ್ಳಬೇಕು..
ಆದರೆ ಯಾವುದೇ ತೀರ್ಮಾನ,ನೇತೃತ್ವ ತಗೊಂಡು ರಿಸ್ಕ್ ತಗೊಳ್ಳೋಕೆ ತಯಾರಿರಲ್ಲ..

ಬೇರೆಯವರು ತಪ್ಪಿಗೆ ಸಿಕ್ಕಿಕೊಳ್ಳೋದೇ ಕಾಯ್ತಾ ಇರ್ತಾರೆ, ಕೊಂಕು ಮಾತಾಡಿ ತಾವು ಸರಿ ಅಂತ ಹೇಳೋಕೆ ಎಲ್ಲಾ ಸಂಧರ್ಭದಲ್ಲಿ ಹೊಂಚು ಹಾಕುತ್ತಾ ತವಕಿಸ್ತಾ ಇರ್ತಾರೆ...!😢

ಅದೇ ಕೆಲವರ ಅತಿ ಬುದ್ಧಿವಂತಿಕೆ..

ಕೊನೆಯವರೆಗೂ ಹಾಗೆ ಇಮೇಜ್ ಮುಂದುವರೆಸಿಕೊಂಡು ಬರೋಕೆ ಪ್ರಯತ್ನ ಪಡ್ತಾರೆ ನಮ್ಮ ನಿಮ್ಮ ನಡುವೆ ಇರುವವರಲ್ಲೇ ಕೆಲವರು...

"ಹೇಗಾದ್ರೂ ಆಯ್ತು,ನೀವು ಹೇಳಿದ ಹಾಗೆ ನಮಗೆ ಏನೂ ತೊಂದರೆ ಇಲ್ಲಪ್ಪ"..
😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ