ನೀವು ಒಂದು ಕಪ್ಪೆಯನ್ನು ಪಾತ್ರೆಯ ಒಳಗೆ ಹಾಕಿ ಪಾತ್ರೆಯನ್ನು ಬಿಸಿಯಾಗಲು ಇಡಿ..
ಪಾತ್ರೆಯಲ್ಲಿರುವ ನೀರು ಬಿಸಿಯಾಗುತ್ತಾಹೋದಂತೆ ಕಪ್ಪೆ ಆ ಬಿಸಿಗೆ ತಕ್ಕಂತೆ ತನ್ನ ದೇಹವನ್ನು ಶಕ್ತಿ ಮೀರಿ ಹೊಂದಿಸಿ ಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ...
ಇನ್ನೇನು ಕುದಿಯುವ ಬಿಂದು ಅತಿ ಹೆಚ್ಚಾದಾಗ ಕಪ್ಪೆ ಇನ್ನೇನು ಆ ಪಾತ್ರೆಯಲ್ಲಿ ಇರುವುದು ಕಷ್ಟ ಸಾಧ್ಯ ಎಂದಾಗ,ಅಲ್ಲಿಂದ ಅದು ನೆಗೆದು ಹೊರ ಹಾರಲು ತೀರ್ಮಾನಿಸುತ್ತದೆ..
ಹಾಗೆ ಹೊರ ಹಾರಲು ಪ್ರಯತ್ನಿಸುತ್ತದೆ ಆದರೆ ಅದರಿಂದ ಅದು ಕಷ್ಟ ಸಾಧ್ಯವಾಗುತ್ತದೆ,ಏಕೆಂದರೆ ಅದು ತನ್ನ ದೇಹವನ್ನು ಬಿಸಿ ಏರುತ್ತಿರುವ ನೀರಿನಲ್ಲಿ ಹೊಂದಿಸಿ ಕೊಂಡು ಇರಲು ಪ್ರಯತ್ನಿಸುವ ಸಮಯದಲ್ಲಿ ತನ್ನ ಎಲ್ಲಾ ಶಕ್ತಿಯನ್ನು ಕಳೆದು ಕೊಂಡು ಆಶಕ್ತವಾಗಿರುತ್ತದೆ..
ಕೊನೆಗೆ ಹೊರಬರಲಾಗದೆ ಮರಣ ಹೊಂದುತ್ತದೆ.😢😢😢😢
ಕಪ್ಪೆ ಸಾಯಲು ಕಾರಣವೇನು??😨😨😨
ಬಹಳ ಜನ ಹೇಳುವ ಉತ್ತರ..
ಕುದಿಯುತ್ತಿರುವ ನೀರಿಂದ ಕಪ್ಪೆ ಸತ್ತಿತು ಎಂದು..😷
ಆದರೆ ಉತ್ತರ ಅದಲ್ಲ..
ಸರಿಯಾದ ಸಮಯದಲ್ಲಿ ಕಪ್ಪೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ತೀರ್ಮಾನ ತೆಗೆದು ಕೊಳ್ಳುವಲ್ಲಿ ವಿಪಲ ವಾಗಿದ್ದೇ ಕಾರಣ.😜
ನಾವು ಜನರು ಹಾಗೂ ಸಂಧರ್ಭಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗುವುದು ಅಗತ್ಯ..😃
ಆದರೆ
ನಮಗೆ ಯಾವಾಗ ಹೊಂದಿಕೊಳ್ಳಬೇಕು,ಯಾರಿಗೆ ಹೊಂದಿ ಕೊಳ್ಳಬೇಕು,ಯಾವಾಗ ಅವರಿಗೆ ಪ್ರತ್ಯುತ್ತರ ನೀಡ ಬೇಕು ಅಥವಾ ಅವರನ್ನು ಎದುರಿಸ ಬೇಕು,ಅನ್ನುವುದು ಚೆನ್ನಾಗಿ ತಿಳಿದಿರ ಬೇಕು..👍
ಕೆಲವು ಸಂಧರ್ಭಗಳು ಕೆಲವರನ್ನು ಎದುರಿಸಲು ಹಾಗೂ ನಮ್ಮನ್ನ ನಾವು ರಕ್ಷಿಸಿ ಕೊಳ್ಳಲು ಪ್ರತಿಕ್ರಿಯಿಸ ಬೇಕಾಗುತ್ತದೆ, ಅದಕ್ಕೆ ತಯಾರಿರಬೇಕು..👍
ನಾವು ಕೆಲವು ಜನರನ್ನು ನಮ್ಮ,ಒಳ್ಳೆಯತನ,ಹಣ,ಮಾನಸಿಕವಾಗಿ,ದೈಹಿಕವಾಗಿ ದುರ್ಭಳಕೆ ಮಾಡಲು ಬಿಟ್ಟೆವೆಂದರೆ..
ಅವರು ಅದನ್ನೇ ಮುಂದುವರೆಸಲು ಪ್ರಯತ್ನಿಸುತ್ತಾರೆ..😈
ನಾವು ಯಾವಾಗ ಹಾರಬೇಕೆಂದು..ನಮ್ಮ ಶಕ್ತಿ ಕುಂದುವುದಕ್ಕಿಂತ ಮೊದಲು,
ನಾವೇ ತೀರ್ಮಾನಿಸ ಬೇಕು. 😎
.!!!
ಇದರ ಬಗ್ಗೆ ಒಮ್ಮೆ ಯೋಚಿಸಿ..😂☺
ಕೃಪೆ:ಪೇಸುಬುಕ್ನಲ್ಲಿ ಸಿಕ್ಕಿದ್ದು
ಇಂಗ್ಲೀಶ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು..