ಹಲವು ತಿಂಗಳ,ಹಿಂದೆ ಕಸ್ತೂರಿ ರಂಗನ್ ವರದಿ ಬಂದಿದೆ,ಅದರಲ್ಲಿ ಮೂರು ಜೋನ್ ಮಾಡಿದ್ದಾರೆ,ಅದರಲ್ಲಿ ಒಂದೊಂದು ಜೋನ್ ಒಂದೊಂದು ನಿಯಮಾವಳಿ ಇದೆ,ಅದರಂತೆ ಕೆಲವರು mane ಜಮೀನು ಎಲ್ಲಾ ಬಿಟ್ಟು ಬೇರೆ ಕಡೆ ಹೋಗ ಬೇಕಾಗುತ್ತೆ ಅಂತ ಏನೇನೋ ಮಾತುಗಳುಚರ್ಚೆಗಳು,ನಮ್ಮ ಮಲೆನಾಡು ಭಾಗದಲ್ಲಿ ಕೇಳಿ ಬರುತ್ತಿತ್ತು,ಅದರ ಬಗ್ಗೆ ತಾಲೂಕ್ ಮಟ್ಟದಲ್ಲಿ ಬಹಳ ಹೋರಾಟಗಳು ನಡೆದವು..
ಇದರಿಂದ ಹಲವು ಜನರು ಆತಂಕಗೊಂಡಿದ್ದರು ಕೂಡ..
ರಿಕ್ಕಿ.....
ಈ ಚಿತ್ರ ನೋಡಿದಾಗ,ನನಗೆ ಅನ್ನಿಸಿದ್ದು ಇದೇ..
ಎಷ್ಟೋ ಜನ ಹೀಗೆ ಸರ್ಕಾರದ ಯೋಜನೆಗಳಿಂದಾಗಿ ಅನಿವಾರ್ಯವಾಗಿ ಹಲವು ದಶಕಗಳಿಂದ ವಾಸವಿದ್ದ ಮನೆ, ಜೀವನಕ್ಕಾಗಿ ಮಾಡುತ್ತಿದ್ದ ವ್ಯವಸಾಯ, ಹಾಗೂ ಅವರ ಪೂರ್ವಜರು ಮಾಡಿಟ್ಟ ಆಸ್ಥಿ ಎಲ್ಲವನ್ನೂ ಬಿಟ್ಟು ,ಏನೂ ಅರಿಯದ ಜನ ಹಾಗೂ ಜಾಗಕ್ಕೆ ಹೋಗಿ ಅಂದರೆ ಒಮ್ಮೆ ಬರಸಿಡಿಲು ಬಡಿದಂತೆ ಆಗುವುದು ಸತ್ಯ,
ಬಹಳ ಜನ ತಮ್ಮ ಜಮೀನು,ಮನೆ ಹಾಗೂ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂದವನ್ನು ಇಟ್ಟು ಕೊಂಡಿರುತ್ತಾರೆ,ಅದನ್ನೆಲ್ಲ ಬಿಟ್ಟು ಒಮ್ಮೆಲೆ ಹೋಗುವುದು ಕಷ್ಟ ಅದರಿಂದ ಆಘಾತವಾಗುವುದು ಸಹಜ..
ಅದರಿಂದ ಉಂಟಾದ ಮಾನಸಿಕ ಅಘಾತದಿಂದ ಕೆಲವರು ಹೊರ ಬರಬಹುದು,
ಕೆಲವರಿಗೆ ಜೀವನಕ್ಕೆ ಬೇರೆ ದಾರಿ ಇರಬಹುದು, ಆದರೆ ಕೆಲವರು ಅದನ್ನು ತಡೆಯದೆ ಜೀವ ಕಳೆದು ಕೊಳ್ಳಬಹುದು,!!😞😞😞
ಕೆಲವರು ದ್ವೇಷ ತುಂಬಿಕೊಂಡು,ನಾವು ನ್ಯಾಯ ಪಡೆಯುತ್ತೇವೆ ರಕ್ತ ಪಾತದಿಂದ ಎಂದು,ವ್ಯವಸ್ತೆಯ ವಿರುದ್ದ ಬಂದೂಕು ಹಿಡಿದು ನಿಲ್ಲುತ್ತಾರೆ..!!😠😠😠
ಅದು ಅವರ ಮನಸ್ಸನ್ನು ಅಷ್ಟು ಕಲ್ಲಾಗಿಸಿ ವ್ಯವಸ್ತೆಯ ವಿರುದ್ದ ಹೋರಾಡುವಂತೆ ಮಾಡಿ,
ತಮ್ಮ ಜೀವವನ್ನೇ ಕಳೆದು ಕೊಳ್ಳುವಂತೆ ಮಾಡುತ್ತದೆ,
ಈ ನಕ್ಸಲ್ ಹೋರಾಟ ನಮ್ಮ ಮಲೆನಾಡ ಕಡೆ ಇನ್ನೂ ಇದೆ..😞😞😞
ಇಂತಹಾ ಅಮಾಯಕ ಯುವಕ ಯುವತಿಯರು,ಈ ಹುಚ್ಚು ಹೋರಾಟ ಮಾಡಲು ಹೋಗಿ ಪೋಲೀಸರ ಗುಂಡಿನಿಂದ ಜೀವ ಕಳೆದು ಕೊಂಡಿದ್ದಾರೆ..
ಇದನ್ನೆಲ್ಲಾ ನೋಡಿದರೆ..
ಯಾರನ್ನು ದೂರುವುದು ತಿಳಯುತ್ತಿಲ್ಲ..
ಸರ್ಕಾರವನ್ನೋ..!!??
ಸರ್ಕಾರದ ಯೋಜನೆಯನ್ನೋ!!??
ಪೋಲೀಸರನ್ನೋ..!!??
ಅಥವಾ ಹೀಗೆ ವ್ಯವಸ್ತೆಯ ವಿರುದ್ದ ಹೋರಾಡಿ ರಕ್ತ ಪಾತ ಮಾಡಿ ಗೆಲ್ಲುತ್ತೇವೆ ಎಂದು ಹೊರಟಿರುವ ಈ ಹುಡುಗರನ್ನೋ..
ಕೊನೆಗಾಣದ ಸಮಸ್ಯೆಯಾ ಇದು..??
ನಕ್ಸಲಿಸಮ್ ಬಗ್ಗೆ ಎಳೆ ಇಟ್ಟು ಕೊಂಡು ಮಾಡಿದ ಚಿತ್ರ
"ರಿಕ್ಕಿ "
ಒಳ್ಳೆಯ ಪ್ರಯತ್ನ..
ಅಭಿನಂದನೆಗಳು ರಿಕ್ಕಿ ಚಿತ್ರತಂಡಕ್ಕೆ.
ಖಂಡಿತ ನೋಡಲೇ ಬೇಕಾದ ಚಿತ್ರ..
ಚಿತ್ರೀಕರಣದ ಸ್ಥಳಗಳು ಹಾಗೂ ಕ್ಯಾಮೆರಾ ವರ್ಕ್ ಹಾಗೂ ಸಂಭಾಷಣೆ,
ರಕ್ಷಿತ್ ಹಾಗೂ ಇನ್ನಿತರರ ನಟನೆಯೂ ಚನ್ನಾಗಿದೆ,
ಕೆಲವು ಹಾಡುಗಳು ತುರುಕಿದಂತಿದೆ ಬಿಟ್ಟರೆ ಮತ್ತೆ ಚಲನಚಿತ್ರ ಚನ್ನಾಗಿ ಮೂಡಿಬಂದಿದೆ.
ಮತ್ತೊಮ್ಮೆ ಅಭಿನಂದನೆಗಳು ಋಶಬ್ ಹಾಗೂ Rakshit Shettyit Shetty