ಗದ್ದೆ ಮತ್ತು ತೋಟಗಳನ್ನು ಜಾನುವಾರುಗಳು ನುಗ್ಗಿ ಹಾಳು ಮಾಡದಂತೆ ತಡೆಯಲು ನಮ್ಮ ಕಡೆ ಐಬೆಕ್ಸ್ ಬೇಲೆ ಅಂತ ಹಾಕಿರುತ್ತಾರೆ.ಇದಕ್ಕೆ ಬಹಳ ಕಡಿಮೆ ಪ್ರಮಾಣದ ಬ್ಯಾಟರಿ ವಿದ್ಯುತ್ ಹರಿಸಿ ಸಣ್ಣ ಶಾಕ್ ಹೊಡೆಯುವಂತೆ,ಮಾಡಿರುತ್ತಾರೆ..
ಆದರೆ ಇದರಿಂದ ಪ್ರಾಣಾಪಾಯ ಯಾರಿಗೂ ಇಲ್ಲ.. .
ಒಮ್ಮೆ ನಮ್ಮ ಕ್ವಾಸ ಗರಬಡಿದವನಂತೆ ರಸ್ತೆ ಬದಿ ಗಾಬರಿ ಇಂದ ನಡುಗುತ್ತಾ ನಿತ್ತಿದ್ದ..😞😞😞😞
ಮಂಜಪ್ಪ ಗೌಡ್ರು:-ಏ ಕ್ವಾಸ ಎಂತಾಗ್ಯದ ಡೈರಿಗೆ ಹಾಲ್ ಕೊಡಕೆ ಬರಲನಾ ಹಿಂಗೆ ಹೆದ್ರುಕುಂಡು ನಿತ್ಗುಂಡಿಯಲಾ ಅಂದ್ರು.😊
ಕ್ವಾಸ:-ಬೆವರು ಒರೆಸಿಕೊಂಡು, ಎಂತಾಇಲ್ಲಗೌಡ್ರೆ ಸುಮ್ನೆ ನಿತ್ತಿನಿ...😆
ಮಂ.ಗೌಡ್ರು:- ಏ ಸುಳ್ಳು ಹೇಳದ ಬ್ಯಾಡ,ಎಂತಾ ಐಬೆಕ್ಸ್ ಬೇಲಿ ಕರೆಂಟ್ ಹೊಡಿತನಾ ಥೋ....😃
ಕ್ವಾಸ:- ಹೌದು ಗೌಡ್ರೆ...😞😞😞
ಮಂ.ಗೌಡ್ರು :- ಅಷ್ಟು ಗೊತ್ತಾಗಲ ನಿಂಗೆ ನೋಡ್ಕಿಂಡು ನಿದಾನಕ್ಕೆ ಬೆನ್ನು ಬಗ್ಸಿ ನುಸಿಯದಲ, ಎಲ್ಡು ವೈರ್ ಮದ್ಯ..😤ಬೆನ್ನು ತಾಗ್ತಾ ಹಂಗ್ಯರೆ..???
ನೀನುಂದು ಮರಾಯ..😠
ಕ್ವಾಸ:- ಇಲ್ಲಾ ಗೌಡ್ರೆ,ಎಲ್ಲಾ ಕರೆಕ್ಟಾಗಿ ದಾಟಿನಿ..ಆದ್ರು ಹೊಡಿತು ಮರ್ರೆ..😞😞😞
ಗೌಡ್ರು:-ಅದೆಂಗೆ ಹೊಡಿತದೆ ಕಾಲು ಅಚಿಗಿಚಿಗೆ ಇಟ್ಟು ಬೆನ್ನು ಬಗ್ಗಿಸಿ ದಾಟಿರೆ,ಹೇಂಗೆ ಹೊಡಿತದೆ ಹೇಳು ನೋಡನಾ..😠😠😠
.
.
.
.
.
.
ಕ್ವಾಸ:- ಹಾಲ್ ಡೈರಿಗೆ ಬರ ಗಡಿಬಿಡಿಲಿ,ಮನಿಯಿಂದ ಬರ ಹೊತ್ತಿಗೆ,
ಚಡ್ಡಿ ಹಾಕಿರ್ಲ ಮರಾಯ್ರೆ..😊
ಮಂ.ಗೌಡ್ರು:-ಥೋ...ನಿನ್ನ ಮಕಕೆ ವರ್ಲೆ ಹಿಡಿಯಾ😂😂😂😂🙈🙈🙈🙈
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ