ನನಗೊಂದು ಅರ್ಥವಾಗದ ವಿಷಯ.
ಈ ಜೋತಿಷ್ಯ ಕಾರ್ಯಕ್ರಮ ನೋಡಿ ಎಷ್ಟು ಜನ ಮನೆ,ಮಟ ಕಳೆದು ಕೊಂಡಿದ್ದಾರೆ??
ಸಂಸಾರ ಹಾಳು ಮಾಡಿಕೊಂಡಿದ್ದಾರೆ?
ಅದರಿಂದ ಯಾರಿಗೆ ಹಾನಿಯಾಗಿದೆ?
ಜೋತಿಷ್ಯ ಕಾರ್ಯಕ್ರಮ ನೋಡುವಾಗ ಚಾನಲ್ ಚೇಂಜ್ ಆಗದಂತೆ ಏನಾದ್ರು ಮಾಡ್ಸಿರ್ತಾರ ಜೋತಿಷಿಗಳು?
ಇಲ್ವಲ್ಲಾ..ಬೇಕಾದ್ರೆ ನೋಡೋದು,ಬೇಡ ಅಂದ್ರೆ ಚಾನಲ್ ಚೇಂಜ್ ಅಷ್ಟೆ..
ನೋಡೋದು ಬಿಡೋದು ಜನಗಳ ವೈಯಕ್ತಿಕ ವಿಷಯ,ಹಾಗಂತ ಈ ಕೆಲವು ಜೋತಿಷಿಗಳು ಸುಮ್ಮನೆ ಇಲ್ಲದನ್ನು ಹೇಳುವುದು ನಿಜ,
ಎಲ್ಲರೂ ಸರಿ ಇದ್ದಾರೆ ಎನ್ನುವುದು ನಂಬಲಸಾದ್ಯ,
ಆದರೆ
ಹಾಗಂತ ಜೋತಿಷ್ಯ ಮೂದನಂಬಿಕೆ ಎನ್ನುವುದು ಸುಳ್ಳು,,
ಅಷ್ಟಕ್ಕೂ ಜೋತಿಷಿಗಳೇನು ಜನಗಳ ಜೇಬಿಗೆ ಕೈ ಹಾಕಿ ಹಣ ತೆಗೆದು ಕೊಳ್ತಾ ಇದ್ದಾರ ಅಥವಾ ಬಾಂಬ್ ಹಾಕಿ ಅಥವಾ ಇನ್ನಿತರೆ ಸಮಾಜ ಘಾತುಕ ಚಟುವಟಿಕೆ ಮಾಡಿ ಅಂತ ಹೇಳ್ತಿದ್ದಾರ??
ಏನೋ ಗೊತ್ತಾಗ್ತಿಲ್ಲ..
ಬೇರೆ ಧರ್ಮದವರು ಮಾಡುವ ಕೆಲಸಗಳಿಗೂ ಇದೇ ಮಾತು ಹೇಳ್ತಾರಾ ಇವರುಗಳು..?!!
ಅಲ್ಲಾ
ಸಮಸ್ಯೆಗಳು ಸಾವಿರ ಇದೆ ಅದನ್ನು ಪರಿಹರಿಸೋದು ಬಿಟ್ಟು,ಸುಮ್ಮನೆ ಯಾವುದೋ ವಿಷಯ ಇಟ್ಟು ಕೊಂಡು ಅವರ ಮೇಲೆ ದ್ವೇಶ ಸಾದಿಸೋ ಅಗತ್ಯ ಇದೆಯೇ?
ಇಷ್ಟೆಲ್ಲಾ ಸಮಾಜದ ಕಾಳಜಿ ಇರುವ ಇವರುಗಳು..
ಸಿಗರೇಟ್ ನಿಷೇದಿಸಲಿ..
ಮದ್ಯಪಾನ ನಿಷೇದಿಸಲಿ..
ತಂಬಾಕು ನಿಷೇದಿಸಲಿ..
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆ ನಿಲ್ಲಿಸಲಿ..
ಭೂಮಾಪಿಯಾ ಹಾಗೂ ಮರಳು ಮಾಪಿಯಾ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿ..
ಬೆಂಗಳೂರಿನ ಟ್ರಾಪಿಕ್ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿ..
ಕಸದ ವಿಲೇವಾರಿ ಬಗ್ಗೆ ಯೋಚಿಸಲಿ..
ಅವರ ಪಕ್ಷದವರೇ ಮಾಡುತ್ತಿರುವ ಬ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳಲಿ..
ರಸ್ತೆಗಳನ್ನು ದುರಸ್ತಿ ಮಾಡಲಿ..
ಅನ್ಯಾಯವಾಗಿ ಜೀವ ಕಳೆದು ಕೊಳ್ಳುತ್ತಿರುವ ರೈತರಿಗೆ,ಹಾಗಾಗದಂತೆ ಶಾಶ್ವತ ಪರಿಹಾರ ಕಂಡುಹಿಡಿಯಲಿ..
ವಿಧ್ಯುತ್ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ..
ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಉನ್ನತ ಶಿಕ್ಷಣದ ವರೆಗೆ ಉಚಿತವಾಗಿ ಶಿಕ್ಷಣ ಕೊಡಲಿ..
ರೈತನಿಗೆ ಎಲ್ಲಾ ಬೆಳೆಗಳಿಗೂ ಒಂದು ನ್ಯಾಯವಾದ ಬೆಂಬಲ ಬೆಲೆ ಕೊಡಿಸಲಿ..
ಯುವಕರು ಕೃಷಿಯ ಬಗ್ಗೆ ಹೆಚ್ಚಿನ ಒಲವು ತೋರುವಂತೆ ಏನಾದರು ಕಾರ್ಯಕ್ರಮ ಹಮ್ಮಿಕೊಳ್ಳಲಿ..
ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯೋಜನೆಯನ್ನು ಬಿಟ್ಟು ಅವರಿಗೆ ಕೆಲಸ ಕೊಡಲಿ..
ಜಾತಿ ರಾಜಕೀಯ ಮೊದಲು ಬಿಡಲಿ..
ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣಲಿ..
ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಾ ಸಮಾಜವನ್ನು ಒಡೆಯಲು ಹಾಗೂ ಅದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳಲಿ..
ಎಲ್ಲರಿಗೂ ಗೌರವಿಸೋದು ಹಾಗೂ ಅವರವರ ನಂಬಿಕೆಗಳಿಗೆ ಯಾವುದೇ ಅಡ್ಡಿ ಬರದೇ ಇದ್ದರೆ,ಅದೇ ಈ "ಜ್ಯಾತ್ಯಾತೀತ"ಸರ್ಕಾರ ಅಂತ ಮೂರು ಹೊತ್ತು ಡಂಗುರ ಸಾರುತ್ತ,ದಿನವೂ ಜಾತಿಯ ಬಗ್ಗೆ ಮಾತನಾಡುವ ಸರ್ಕಾರ ಜನರಿಗೆ ಮಾಡುವ ದೊಡ್ಡ ಉಪಕಾರ..
ಮಾಡೋ ಕೆಲ್ಸ ಬಿಟ್ಟುಕೊಂಡು..ಹಾಡೋ ದಾಸಯ್ಯನ ಹಿಂದೆ ಹೋಗ್ತಿದ್ದಾರೆ..
ಇದೆಲ್ಲಾ ಬೇಕಾ??
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ