ಸೋಮವಾರ, ಫೆಬ್ರವರಿ 8, 2016

ಅಕ್ರಮ ವಲಸಿಗರು

ಬಾಂಗ್ಲಾ ದೇಶದಿಂದ ಅಕ್ರಮ ವಲಸಿಗರು ಬಂದಿದ್ದಾರೆ,ಎಂದು ಹಲವು ಮಾದ್ಯಮಗಳು ಈ ಹಿಂದೆ ಹಲವು ಬಾರಿ ವರದಿ ಮಾಡಿದ್ದವು..
ಮೊನ್ನೆ ಸುವರ್ಣವಾರ್ತಾವಾಹಿನಿಯಲ್ಲಿ, ವಿಜಯಲಕ್ಶ್ಮಿ ಶಿಬರೂರು ಅವರು ಕೂಡ,ಕುಟುಕು ಕಾರ್ಯಚರಣೆಯಲ್ಲಿ,ಬೆಂಗಳೂರಿನ ಹೊರವಲಯದಲ್ಲಿ ಇರುವ ಜಾಗಕ್ಕೆ ಹೋಗಿ,ಅಲ್ಲಿನ ನಿವಾಸಿಗಳನ್ನು ಮಾತನಾdiಸಿದರು,ಅವರು ಯಾವುದೇ ಮುಜುಗರ ಹಾಗೂ ಹೆದರಿಕೆ ಇಲ್ಲದೆ..

"ಹೌದು ನಾವು ಬಾಂಗ್ಲಾ ದವರು,ನಮ್ಮ ಬಳಿ ವೀಸಾ ಏನೂ ಇಲ್ಲ..ಇಲ್ಲಿನ ಸಿಟಿಜೆನ್ ಕಾರ್ಡ್ ಕೂಡ ಇಲ್ಲ..ಬಾರ್ಡರಿನಲ್ಲಿ ಬಿ ಎಸ್ ಎಪ್ ನವರಿಗೆ 1000 ರೂ ಕೊಟ್ಟರೆ ಯಾವಾಗ ಬೇಕಾದ್ರೆ ಬರಬಹುದು ವಾಪಾಸ್ ಹೋಗಬಹುದು"ಎಂದು ದೈರ್ಯವಾಗಿ ಹೇಳುತ್ತಾನೆ..
ಒಮ್ಮೆ Indian border ಒಳದಾಟಿದರೆ ರೈಲಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಓಡಾಡಬಹುದು ಎನ್ನುತ್ತಾರೆ..
ರಾಜ್ಯ ಸರ್ಕಾರ ಏನು ಮಾಡುತ್ತಿದೆ..??
ಇದಕ್ಕೆಲ್ಲಾ ಯಾರು ಜವಾಬ್ದಾರರು..??
ಮುಂದೆ ಎಂತಾ ಅನಾಹುತ ಕಾದಿದೆ ಎಂಬ ಅರಿವು ಯಾರಿಗೂ ಇಲ್ಲವೇ??

ನಮ್ಮ ಬಗಲಿನಲ್ಲೇ ಇಷ್ಟು ದೊಡ್ಡ ಆತಂಕವನ್ನು ಇಟ್ಟು ಕೊಂಡು,ಕಂಡು ಕಾಣದಂತೆ ನಾವುಗಳು ನಿರಮ್ಮಳವಾಗಿ ಕೂತಿದ್ದೀವಲ್ಲಾ..
ಎಂತಹಾ ಅಸಹಾಯಕತೆ ನಮ್ಮದು..
ಮುಂದೊಂದು ದಿನ ಇದರಿಂದ ಆಗುವ ಅನಾಹುತಕ್ಕೆ..
ಅವರ party ಮೇಲೆ ಇವರು,ಇವರ party ಮೇಲೆ ಅವರು ಕೆಸರೆರೆಚಾಡೋದು,ಆಮೇಲೆ ಸುಮ್ಮನೆ ವಿಷಯವನ್ನು ಮರೆತು ಬೀಡೋದು ಬಿಟ್ಟರೆ ಇನ್ನೇನು ಆಗುವುದಿಲ್ಲ..
ಇದರಿಂದ ತೊಂದರೆ ಅನುಭವಿಸುವವರು ಸಾಮಾನ್ಯ ಜನರು ಮಾತ್ರ..

ಎಲ್ಲರಿಗೂ ಅವರವರ ಚಿಂತೆ ಬಿಟ್ಟರೆ..
ಬೇರೆಯ ಅನಾಹುತದ ಬಗ್ಗೆ ಯೋಚನೆಯೇ ಇಲ್ಲ..😞😞

ನಮ್ಮ ಸರ್ಕಾರಗಳಿಗೆ, ಅರ್ಜೆಂಟ್ ಆದಾಗಲೇ ಟಾಯ್ಲೆಟ್ ಎಲ್ಲಿದೆ ಅಂತ ಹುಡುಕೋದು ಸಾಮಾನ್ಯ ವಾಗಿದೆ..ಎಲ್ಲಾ ವಿಷಯದಲ್ಲೂ..😠😠😠
Please save our state from like these kind of elements.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ