ಸುವರ್ಣ ನ್ಯೂಸ್ನಲ್ಲಿ ಕವರ್ ಸ್ಟೋರಿಯಲ್ಲಿ ಇಂದು ನರಸೀಪುರದ ಆಯುರ್ವೇದ ನಾಟಿ ವೈದ್ಯರ ಬಗ್ಗೆ ಕಾರ್ಯಕ್ರಮ ಪ್ರಸಾರವಾಯಿತು..
ಆದರೆ ಕಾರ್ಯಕ್ರಮದಲ್ಲಿ ಹೇಳಿದ್ದೇ ಹೇಳುವ, ಹಾಗೂ ಏನೋ ಹೈಪ್ ಕ್ರಿಯೇಟ್ ಮಾಡಿ ಕೊನೆಗೆ ಏನೂ ಹೇಳದೆ, ಇಡೀ ಕಾಡು ನಾಶವಾಗಿದೆ ಇವರಿಂದ,ಇದು ದೊಡ್ಡ ಮಾಪಿಯಾ,ಯಾರಿಗೂ ಗುಣವಾಗಿಲ್ಲ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ,ಅಂತ ಹೇಳಿ, ಇವರು ಕೇವಲ ಮೂರು ಜನ ಹೇಳಿದ್ದೇ ಹೇಳುವವರನ್ನು ನಿಲ್ಲಿಸಿಕೊಂಡು,ಊರಿನ ಜನ ಏನು ಹೇಳ್ತಾರೆ ಕೇಳಿ ಅಂತ ಅವರತ್ರ ಮಾತ್ನಾಡಿಸಿದ್ರು..
ಇವರ ಉದ್ದೇಶ ಏನು ತಿಳಿಯಲಿಲ್ಲ..
ನೇರವಾಗಿ ನಾಟಿ ವೈದ್ಯರನ್ನು ಪ್ರಶ್ನಿಸಬಹುದಿತ್ತಲ್ಲಾ..???
ಎಲ್ಲಿಂದ ಇದು ಬರುತೆ,?
ಇದು ಹೇಗೆ ಸಾದ್ಯ?
ಕಾಡು ನಾಶ ಮಾಡುತಿದ್ದೀರ?
ಇದು ತಪ್ಪಲ್ಲವೇ ಎಂದು,
ಆಗ ಅವರ ಉತ್ತರ ಏನು ಕೇಳಬಹುದಿತ್ತು..!!!
ಅದು ಬಿಟ್ಟು,ಈ ಹಿಡನ್ ಕಾರ್ಯಾಚರಣೆ ಯಾಕೆ? ತಿಳಿಯಲಿಲ್ಲ..!!!
ಅದಿರಲಿ..
ಆಶ್ಚರ್ಯ ಅಂದ್ರೆ,
ಅಲ್ಲಿ ಹೋದವರಲ್ಲಿ ,ಹೆಚ್ಚಿನವರು ಗುಣವಾಗಿದೆ, ಇಂಪ್ರೂವ್,ಆಗಿದೆ ಎನ್ನುತ್ತಾರೆ(ನನಗೆ ತೀರಾ ಹತ್ತಿರದವರು ಹೇಳಿದ್ದು),ಹಾಗಾದರೆ ಇಲ್ಲಿ ಯಾರನ್ನ ನಂಬೋದು..????
ಮೊದಲು ಇವರು,ಉಚಿತವಾಗೇ ಔಷದಿ ಕೊಡುತ್ತಿದ್ದರಂತೆ,ಆದರೆ ಈಗೀಗ 200 ರಿಂದ 300 ಹಣವನ್ನು ಚಾರ್ಚ್ ಮಾಡುತ್ತಿದ್ದಾರಂತೆ..!!
ಹಾಗಾದರೆ ಗುಣವಾಗದೆ,ಅಲ್ಲಿ ಏನೂ ಉಪಯೋಗವಾಗದೆ ಇದ್ರೆ,ಯಾಕೆ ದೂರದ ಊರಿನ ಜನರು ಅಲ್ಲಿ ಬಂದು ಕಾದು ಕೂತು,ಔಷದಿ ಪಡೆಯುತ್ತಾರೆ..??
ಇದರಿಂದ ಇಷ್ಟೊಂದು ಕಾಡು ನಾಶವಾಗುತ್ತೆ,ಜನರಿಗೆಲ್ಲಾ ತೊಂದರೆ ಆಗುತ್ತೆ ಅಂದರೆ ಅಲ್ಲಿರುವ ಸ್ಥಳೀಯರು ಹಾಗೂ.ಜನಪ್ರತಿನಿದಿಗಳಿಗೆ ತಿಳಿದಿಲ್ಲವೇ..?
ಅವರು ಸುಮ್ಮನಿರುತ್ತಾರೆಯೇ?
ಜನರು ಅಷ್ಟು ಮೂರ್ಖರೇ..?
ಏನಿದರ ಅಸಲಿಯತ್ತು..
ತಿಳಿದವರು ಹೇಳಬೇಕು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ