ಬುಧವಾರ, ಜೂನ್ 29, 2022
ಅಔರಿಗಾ ಲ್ಯಾಬ್ ಪ್ರಾಡ್
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 1ನೇ ತಾರೀಖು ಬೆಳಿಗಿನ ಜಾವ 4.45 ಬಂದಿಳಿದ ಕೂಡಲೇ "ಅವರಿಗಾ"ಲ್ಯಾಬ್ಸ್ ನ ಥೋ Auriga Lab ಸಿಬ್ಬಂದಿ ಬಂದು ಒಂದು QR ಕೋಡ್ ಇರುವ ಸಣ್ಣ ಚೀಟಿ ಕೈಗೆ ನೀಡಿ..
ಇದನ್ನ ನಿಮ್ಮ ಮೊಬೈಲ್ನಲ್ಲಿ ಸ್ಕಾನ್ ಮಾಡಿ ನಿಮ್ಮ ವಿವರ ನೀಡಿ ನಂತರ ಆನ್ ಲೈನ್ ಹಣ ಪಾವತಿ ಮಾಡಿ ಇಲ್ಲವಾದರೆ,ಇಲ್ಲೇ ನಿಮ್ಮ ಕಾರ್ಡ್ ಅಥವಾ ನಗದು ಕೂಡ ಕೊಡುವ ವ್ಯವಸ್ಥೆ ಇದೆ ಎಂದು ವಿನಮ್ರವಾಗಿ ವರದಿ ಒಪ್ಪಿಸಿದರು..!
ಕೇಳಿದ ಪ್ರಶ್ನೆಗೆ ಮಿನಿಮಮ್ 10 ಸರಿ ತಲೆ ಕೆರೆದುಕೊಂಡು..
"ಬಂದೆ ಸಾ..."
ಅಂತ ಆ ಕಡೆ ಈ ಕಡೆ ಓಡಾಡಿ..
"ಸಾರ್... ಇವತ್ತು ಮೊದಲ ದಿನ ಆದ್ದರಿಂದ ನಮಗೂ ಹೆಚ್ಚಿನ ಮಾಹಿತಿಯಿಲ್ಲ,
ದಯಮಾಡಿ ಸಹಕರಿಸಿ ಅಂದರು.."
ಅಂದಿನಿಂದ ವಿದೇಶದಿಂದ ನಮ್ಮ ದೇಶಕ್ಕೆ ಬೆಳಿಗ್ಗಿನ ಜಾವ 4 ಗಂಟೆಯ ನಂತರ ಬಂದ ಎಲ್ಲಾ ವಿಮಾನಗಳ ಪ್ರಯಾಣಿಕರನ್ನ ಕಡ್ಡಾಯವಾಗಿ RT-PCR ಪರೀಕ್ಷೆ(Real time-polymerase chain reaction)ಮಾಡಿಸಿ ಋಣಾತ್ಮಕ ಅಂತ ವರದಿ ಬಂದ ಮೇಲೆ ವಿಮಾನ ನಿಲ್ದಾಣದಿಂದ ಹೊರ ಕಳಿಸುವಂತೆ ಸಾಮಾನ್ಯ ಪ್ರಜೆಗಳಿಗೆ ಮಾತ್ರ ಆದೇಶ ನೀಡಲಾಗಿತ್ತು(ಬೇರೆಯವರ ಬಗ್ಗೆ ನಂಗೊತ್ತಿಲ್ಲ!)
ಹೆಂಗೆ ಲಕ್ ನಮ್ಮದು..😉
ನಂತರದ್ದು ಎಲ್ಲಾ ಅಯೋಮಾಯ..
ಒಬ್ಬರು...
ಎರಡೂ ಮುಕ್ಕಾಲು ಅಡಿಯ ಅಂತರಲ್ಲಿ ಕಾಟಾಚಾರಕ್ಕೆ ಇಟ್ಟ ಚೇರ್ ನಲ್ಲಿ ಕೂರೋಕೆ ಹೇಳಿದ್ರೆ..
ಇನ್ನೊಬ್ಬ ಸಿಬ್ಬಂದಿ ಬಂದು..
ಸರತಿ ಸಾಲಲ್ಲಿ ನಿಲ್ಲಿ ಅಂತಿದ್ರು,ಯಾರ ಮಾತು ಕೇಳೋದು ಅಂತ ಮೀನ,ಮೇಷ ಎಣಿಸುತ್ತಾ ಅಲ್ಲಿ ಇಲ್ಲಿ ನೋಡುತ್ತಾ ನಿಂತಿದ್ದಾಗ ನನಗಿಂತ ಹಿಂದೆ ಇದ್ದವರು ಹಲವು ಜನ,ನಿದ್ರೆಗಣ್ಣಲ್ಲಿ ಕಣ್ಣು ಉಜ್ಜುತ್ತಾ ಮುಂದೆ ಹೋಗೆ ಬಿಟ್ರು..!
ನಾನು ಆಗಲೇ ಮೊಸಳೆ ಬಾಯಿ ಕಳೆದಷ್ಟು ಅಗಲ 25 ಸರಿ ಆಕಳಿಸಿ ಆಗಿತ್ತು,ನಂಗೆ ಅದು ನಿದ್ರೆಯ ಸಮಯ..!
ನಾವೇನು ಮಾಡೋದು ಅಂತ ಕೇಳಿದ್ರೆ ಮತ್ತೆ ಆ ಸಿಬ್ಬಂದಿ
ಅದೇ ತಲೆ ಕೆರೆಯುವ ಪ್ರೊಸೆಸ್ ಮುಂದು ವರಿಸಿದ್ರು..
ಕೊನೆಗೆ ಸರತಿ ಸಾಲಲ್ಲಿ ನಿಂತು ಹಣ ಪಾವತಿ ಮಾಡುವ ಸ್ಥಳ ಹೇಗೋ ತಲುಪಿಯಾಯ್ತು ..
ಹಣ ಪಾವತಿ ಮಾಡುವ ಜಾಗದಲ್ಲಿ,
ಹೋಟೆಲ್ ನಲ್ಲಿ ಏನಿದೆ ಕೇಳಿದಾಗ
ಮಸಾಲೆ ದೋಸೆ..
ಸೆಟ್ದೋಸೆ..
ಇಡ್ಲಿ ಸ್ವಲ್ಪ ಲೇಟ್ ಆಗುತ್ತೇ ನೋಡಿ..
ವಡೆ ಮಾತ್ರ ಈಗಲೇ ಕೊಡ್ತೇವೆ ಕೊನೆಗೆ ವಡೆ ಕಾಲಿ ಆದ್ರೆ ನಿಮಗೆ ಕಷ್ಟ ಅಂತ ಭಯ ಪಡಿಸಲ್ವಾ!
ಹಾಗೆ..
ನೋಡಿ
500 ರೂಪಾಯಿ
ಮತ್ತೆ
3000 ರೂಪಾಯಿ
ಇದೆ ಆರ್ "ಡಿ ಬಿ" ಸಿ ಆರ್,(RT-PCR)
ಅಂದರು ಆ ಮಹಾತ್ಮ ತಮಿಳು ಮಿಶ್ರಿತ ಕನ್ನಡದಲ್ಲಿ..
ಎರಡರ ಮಧ್ಯ ಏನು ವ್ಯತ್ಯಾಸ ಕೇಳಿದ್ರೆ..!?
500 ರೂಪಾಯಿದು 4 ಗಂಡೆಯಿಂದ 14 ಗಂಡೇ ಆದ್ರೂ ಆಗಬಹುದು..
3000 ರೂಪಾಯಿದು ಕೇವಲ 30 ನಿಮಿಷದಲ್ಲಿ ನಿಮಗೆ ಕೊರೊನಾ ಪರೀಕ್ಷೆ ಪಲಿತಾಂಶ..
ಅಂದ್ರು,
ಈ ಆಪರ್ ನಿಮಗೆ ಮಾತ್ರ,ಫಲಿತಾಂಶ ಖಚಿತ ತ್ವರೆ ಮಾಡಿ ಅಂತ
ಉಜಾಲಾ ಜಾಹೀರಾತಿನ ತರ ಹೇಳಿದ್ರೂ..😂
ನನ್ನ ಜೊತೆಗೇ ಬಂದಿದ್ದ ನನ್ನ ಆಪ್ತ ಸ್ನೇಹಿತರು ಸರತಿ ಸಾಲಲ್ಲೇ ನನಗೆ ಹೇಳಿದ್ರೂ,
ನಾನು 500 ದ್ದೇ ತಗೋತಿನಿ ನಿಧಾನ ಆದ್ರೂ ಪರವಾಗಿಲ್ಲ ಸುಮ್ಮನೆ ಹಣ ಯಾಕೆ ಪೋಲು ಮಾಡೋದು ಅಂದ್ರು..
ನಾನು 3000 ರೂಪಾಯದ್ದು ತಗೋತೆನೆ..
ಇಲ್ಲಿದ್ದು ಮತ್ತೆ ಸೋಂಕು ಬಂದ್ರೆ ರಗಳೆ ಆದಷ್ಟು ಬೇಗ ಹೊರಗೆ ಹೋಗಬೇಕಪ್ಪ,
ವಿಷಯ ಏನು ಅಂದ್ರೆ..
ಹಸಿವಾಗ್ತಾ ಇದೆ ಒಂದು ಮಸಾಲೆ,ದೋಸೆ ಕಾಯಿ ಚಟ್ನಿ ಹಾಗೇ ಇಡ್ಲಿ ವಡೆ,ಒಂದು ಲೋಟ ಬೋರಮ್ಮನವಿಟಾ ಸಿಕ್ಕಿದ್ರೆ ಸಾಕಾಗಿದೆ ಅಂತ ಸುಮ್ನೆ ನೇರವಾಗಿ ಹೇಳೋ ಹಾಗಿಲ್ಲ ಅಲ್ವಾ..
ಅದಕ್ಕೆ ಈ ರೀತಿ ಡೈಲಾಗ್ ದೋಸೆ ಮಗುಚಿ ಹಾಕಿದ ಹಾಗೆ ಅವರಿಗೆ ಹೇಳಿದ್ದು ಅನ್ನೋದನ್ನ ಹೇಳೋಕೆ ಬಯಸುತ್ತೇನೆ..😁
ನನ್ನ ಹಿಂದೆ ಇದ್ದೆ ನನ್ನ ಸ್ನೇಹಿತರು 500 ರೂಪಾಯಿಯ ಪರೀಕ್ಷೆಗೆ ಕೊಡಿ ಅಂದರು..!
ಆ ವ್ಯಕ್ತಿ ಅವರನ್ನ ಹೇಗೆ ಮೇಲಿಂದ ಕೆಳಗೆ ನೋಡಿದ ಅಂದ್ರೆ ಏನೋ ಅಪರಾಧ ಮಾಡಿ ಬಿಟ್ರು 500ರೂಪಾಯಿ ಪರೀಕ್ಷೆಗೆ ಕೇಳಿ ಅನ್ನುವ ಹಾಗೆ..!!!
ಆದರೂ ಆ ಹಣ ತೆಗೆದು ಕೊಳ್ಳುವ ವ್ಯಕ್ತಿ ಮತ್ತೆ ತನ್ನ ಪ್ರಯತ್ನ ಬಿಡಲಿಲ್ಲ...
ಸಾರ್..
ನನಕೆ ಬೈಯಬೇಡ ನೀನು,4 ರಿಂದ 14 ಗಂಟೆ ಆಗುತ್ತೆ..
ಅಂತ ಮತ್ತೆ ಅದೇ ವಿಚಿತ್ರವಾದ ತಮಿಳು ಮಿಶ್ರಿತ ಹೇಳಿಕೆ ಕೊಟ್ರು..
ಆದ್ರೆ ನನ್ನ ಸ್ನೇಹಿತರು ಪರವಾಗಿಲ್ಲ ಅಂತ ಛಲ ಬಿಡದ ತ್ರಿವಿಕ್ರಮನಾಗಿ ಹಣ ಪಾವತಿ ಮಾಡಿ,ನನ್ನ ನೋಡಿ ಗೆಲುವಿನ ಮುಗುಳು ನಗೆ ಬೀರಿದರು,ನೀವು 3000 ಕೊಟ್ಟು ಪೆದ್ದರಾದ್ರಿ ಅನ್ನೋ ಹಾಗೆ ಇತ್ತು ಅವರ ನಗು...ನಾನು ನೋವಿನಿಂದ, ಭಾರದ ಹೆಜ್ಜೆ ಮುಂದೆ ಇಟ್ಟೆ..
ಸ್ವಲ್ಪ ಮುಂದೆ ಆಧಾರ್ ನಂಬರ್ ತೆಗೆದು ಕೊಂಡು,
ಮೂಗಿನ ಮೂಲಕ ಮೆದುಳಿಗೆ ಹೆಟ್ಟುವ ಒಂದು ಪ್ಯಾಕ್ ನಲ್ಲಿರುವ ಕಡ್ಡಿ ಯನ್ನ ನಮ್ಮ ಬಳಿ ಕೊಟ್ಟರು ಇನ್ನೊಬ್ಬರು "ಅವರಿಗಾ" ಸಿಬ್ಬಂದಿ..
ಸಾರ್ವಜನಿಕ ಕಾರ್ಯಕ್ರಮದಲ್ಲಿ ಒಂದೊಂದು ರೀತಿಯ ಪಾವತಿ ಮಾಡಿದವರಿಗೆ ಇಂತಿಂತ ಸರತಿ ಸಾಲು ಅಂತಿರುತ್ತಲ್ಲ ಹಾಗೆ 3000 ಲೈನ್ ಇದು ಇಲ್ಲಿ ಹೋಗಿ ಅಂತ ಹೇಳಿ ಕಳುಹಿಸಿದ್ರು,
ಅಡ್ಡ ಗೋಡೆ ಹಳೇ ಸೀರೆ ಮಾಡಿ ಕಟ್ಟಿದ ಜಾಗದಲ್ಲಿ, ಅಲ್ಯಾರೋ ಇದ್ದ ಮಲೆಯಾಳಿ ನರಸಮ್ಮ,
"ನೀವು ಇಲ್ಲಿ ಗೂರಿ",ಅಂತ ಒಂದು ಕೃಶವಾದ ಚೇರ್ ತೋರಿಸಿ,
ಅದು
"ಇಲ್ಲಿ ಗೊಡಿ" ಅಂತ ಕೈಯಲ್ಲಿದ್ದ ಮೂಗುಗೆ ಚುಚ್ಚುವ ಕಡ್ಡಿಯನ್ನ ಕಿತ್ತು ಕೊಂಡು,ಅದರ ಕವರ್ ತೆಗೆದು ಕಡ್ಡಿಯನ್ನ ಮೆದುಳು ವರೆಗೆ ಹಾಕೋಕೆ ಪ್ರಯತ್ನ ಪಟ್ಟು ನನ್ನ ಹತ್ರ ಬೈಸಿ ಕೊಂಡು,ಕೊನೆಗೆ ಕಡ್ಡಿ ಮೆದುಳು ಅಲ್ಲಲ್ಲ ಮೂಗಿನಿಂದ ತೆಗೆದು ಅಲ್ಲೇ ಪಕ್ಕದಲ್ಲಿದ್ದ ಟ್ರೇ ಗೆ ಜಾ0ಟಿ ರೋಡ್ಸ್ ತರ ಗುರಿ ಇಟ್ಟು ಎಸೆದರು..ಅಲ್ಲೇ ಪಕ್ಕದಲ್ಲಿದ್ದ ಟ್ರೇ ಗೆ ಹೋಗಿ ಬಿತ್ತು ಆ ಮೆದುಳು ಕೆರೆಯುವ ಕಡ್ಡಿ..!
ಜೇರ್ ಅಲ್ಲಲ್ಲ ಚೇರ್ ನಿಂದ ಎದ್ದು ಹಿಂದೆ ನೋಡಿದ್ರೆ ನನ್ನ ಸ್ನೇಹಿತರು..!
"ಹೋ..ನಿಮಗೂ ಬಿಟ್ರ ಇಲ್ಲೇ"ಅಂದೆ..!?
"ಹೇ...ಇಲ್ಲ ಮಾರಾಯ್ರೆ..
ನನಗೇ ಭಯ ಆಯ್ತು ಕೊನೆಗೆ ಇವರು 500ರೂಪಾಯಿ ಅಂತ 4 ಗಂಟೆ ಆದ್ರೂ ಫಲಿತಾಂಶ ಕೊಡಲ್ಲ ಅಂತ ಹೇಳಿದ್ರೆ ಕಷ್ಟ ಅಂತ ಅದಕ್ಕೆ ಉಳಿದ 2500 ಹಣ ಪಾವತಿ ಮಾಡಿ 3000 ದ್ದೇ ತಗೊಂಡು ಬಂದೆ" ಅಂತ ಹ್ಯಾಪ್ ಮೋರೆ ಹಾಕೊಂಡು ಹೇಳಿದ್ರೂ..😉
ನಾನೇ 3ಸಾವಿರ ಕೊಟ್ಟು ಪೆದ್ದ ಆದನೇನೋ,500 ನವರಿಗೇ ನಮಗೆ ಒಟ್ಟಿಗೆ ಪಲಿತಾಂಶ ಕೊಡ್ತಾರಾ ಅಂತ,
"ಕೆಲವು" ಹೆಣ್ಣು ಮಕ್ಕಳು 99 ಬಂದಿದ್ರೆ ಪಕ್ಕದವಳಿಗೆ 98 ಅಂಕ ಬಂದಿದೆ ಅಂತ ಹೊಟ್ಟೆ ಕಿಚ್ಚು,ಬೇಜಾರು ಮಾಡಿಕೊಳ್ತಾರಲ್ಲ ಹಾಗೆ ಬೇಜಾರಲ್ಲಿ ಇದ್ದವನಿಗೆ..
ಅವರ ಹ್ಯಾಪ್ ಮೋರೆ ನೋಡಿ ಸಮಾಧಾನಾ ಆಯ್ತು ಅಂತ ಸತ್ಯ ಹೇಳ್ತಿನಪ್ಪ..!
😂
ಕೊನೆಗೆ ಫಲಿತಾಂಶಕ್ಕಾಗಿ (ಎಸ್ ಎಸ್ ಎಲ್ ಸಿ ದೂ ಕೂಡ ಹೀಗೆಲ್ಲಾ ಕಾಯುತ್ತಾ ಕುಳಿತಿರಲಿಲ್ಲ ಬಿಡಿ😂)
ಕಾಯುತ್ತಾ ಕೂರುವ ಸರದಿ ನಮ್ಮದು..!
ಅಲ್ಲೇ ಇದ್ದ ಸಹಾಯಕ ಸಿಬ್ಬಂದಿ ಗವಾಕ್ಷಿ ಮುಂದೆ ಜನರು ಕೊರೊನಾ ಅಂದ್ರೆ ಏನು ಅಂತಲೇ ತಲೆ ಕೆಡಿಸಿ ಕೊಳ್ಳದೇ ಈ ಭಯಂಕರ "ಟಾಪ್" ಬರೋರು ಶಾಲೆಲಿ ಫಲಿತಾಂಶ ನೋಡೋಕೆ ಫಲಿತಾಂಶ ಹಲಗೆ ಹತ್ರ, ನುಗ್ಗಿ ನುಗ್ಗಿ,ಬಗ್ಗಿ ಬಗ್ಗಿ ಅತಿ ನಟನೆ ಮಾಡ್ತಾ ನೋಡ್ತಾರಲ್ಲ ಹಾಗೆ ಮುತ್ತಿಗೆ ಹಾಕಿ ಕೇಳ್ತಾ ಇದ್ರು..!
ಅರ್ಧ ಗಂಟೆ ಆಯ್ತು 45 ನಿಮಿಷ ಆಯ್ತು ಒಂದು ಗಂಟೆ ಆದ್ರೂ ಫಲಿತಾಂಶ ಬರಲೇ ಇಲ್ಲ..
ಅಲ್ಲಲ್ಲಿ ಹೋರಾಟಗಾರರು ಎದೆ ಸೆಟೆದು ನಿಂತು ಎಲ್ಲಿ ನನ್ನ 3000ಸಾವಿರ,ವಾಟ್ ದ ಡಕ್ ಈಸ್ ದಿಸ್,ನಾವು 500 ಕೊಡ್ತಾ ಇದ್ವಿ ಇಷ್ಟು ನಿಧಾನ ಅಂತಾಗಿದ್ರೆ,2500 ಹೆಚ್ಚು ಕೊಟ್ಟ ಹಾಗಾಯ್ತು ಅಂತ ತರ ತರದ ಬೆಂಕಿ ಉಗಳೋಕೆ ಶುರುವಾಯ್ತು..!
ಇದೆಲ್ಲ ಗಲಾಟೆ ಮಧ್ಯ,
ಇಷ್ಟೆಲ್ಲಾ ಹಣ RT-PCR ಗೆ ತಗೊಂಡು ಅರ್ಧ ಗಂಟೆ ಗೆ ಫಲಿತಾಂಶ ಅನ್ನೋದು,
"ಅವರಿಗಾ"!?
"ಇವರಿಗಾ"!?
ಯಾರಿಗ!? ಅಂತ
"Auriga Lab"ಬಗ್ಗೆ ಗೂಗಲ್ ಮಾಡಿ ನೋಡಿದ್ರೆ ಬಹಳ ಬಿರುದು ಬಾವಲಿಗಳು,ಕೇಸ್ಗಳು ಇದ್ದಿದ್ದು ಕಂಡು ಬಂತು..!
(ನೀವು ಅದರ ಬಗ್ಗೆ ಹುಡುಕಿ ನೋಡಿ ಆಸಕ್ತಿ ಇದ್ದರೆ!)
ಕೊನೆಗೆ ಫಲಿತಾಂಶ ನೋಡೋಕೆ ಅಂತ ಇಟ್ಟಿದ್ದ ಒಂದು ಸಣ್ಣ ಪರದೆ ಕೂಡ ಕೊನೆ ಉಸಿರು ಎಳೆಯಿತು ಅಂತ ಹಲವರು ಉಘ್ರ ರೂಪ ತಾಳಿದ್ರು..
ಅದರ ಮಧ್ಯ ಯಾರೋ ಕನ್ನಡಿಗರು ಒಂದು ವೆಬ್ ಸೈಟ್ ಕೊಂಡಿ ಕೊಟ್ಟು ಅದರಲ್ಲಿ ಫಲಿತಾಂಶ ಸಿಗುತ್ತಾ ನೋಡಿ ಅಂದ್ರು..
25 ಸರಿ ನಮ್ಮ ಫೋನ್ ನಂಬರ್ ಹೊಡೆದು ಬುಕಿಂಗ್ ನಂಬರ್ ಹೊಡೆದಮೇಲೆ ನನ್ನ ಫಲಿತಾಂಶ ಬಂದೇ ಬಿಡ್ತು..
ಕೊನೆಗೂ ಪಾಸಾಗಿದ್ದೆ ಅದೇ ಋಣಾತ್ಮಕ ಫಲಿತಾಂಶ!...😂
ಆದರೆ ನನ್ನ ಸ್ನೇಹಿತರು 500 ಕೊಡೋಕೆ ಹೋಗಿ ಕೊನೆಗೆ 3ಕ್ಕೆ ತಿರುಗಿದ್ದವರು ಆಗ ರುದ್ರ ತಾಂಡವ ಆಡೋಕೆ ಶುರು ಮಾಡಿದ್ರು..!
ಅವರ ಬಾಯಲ್ಲಿ @$#%ನ್,@#%$^ನ್,ಇನ್ನೇನೋ ಬರೋಕೆ ಶುರು ಆಗಿದ್ರಲ್ಲಿತ್ತು..
ಅದನ್ನ ಗಮನಿಸಿದ ಒಬ್ಬಳು ಹುಡುಗಿ ಸಿಬ್ಬಂದಿ ಬಂದು ಅವರ ಬುಕಿಂಗ್ ನಂಬರ್ ತೆಗೆದು ಕೊಂಡು,
ನೋಡ್ತೇನೆ ಸಾರ್ ಅಂತ ಹೋದಳು..
ಅವಳು ಫಲಿತಾಂಶ ಕೇಳೋಕೆ,ಕೊರೊನಾ ಜನ್ಮ ಸ್ಥಳ ಚೀನಾದ ವುವಾನ್ ಗೆ ಹೋಗಿದ್ದಾ ಏನೋ..ನಂತರ ಅವಳ ವಿಳಾಸ,ಮುಖದರ್ಶನವೇ ಇಲ್ಲ..!.
ಕೊನೆಗೆ ಅಲ್ಲೇ ಇದ್ದ ಸಹಾಯ ಗವಾಕ್ಷಿ ಸಿಬ್ಬಂದಿ ಹರಸಾಹಸ ಪಟ್ಟು,
ಕೆಲವೇ ಕ್ಷಣದಲ್ಲಿ ಅಪ್ ಡೇಟ್ ಮಾಡಿ ಕೊಟ್ರು,ಇವರ ಫಲಿತಾಂಶ ಬಂದೇ ಬಿಡ್ತಪ್ಪ..!🤪
ಫಲಿತಾಂಶ ಬಂದಿದ್ದು ಸುಮಾರು 1.45 ಗಂಟೆ ನಂತರ...
3000 ರೂಪಾಯಿ ಪ್ರತಿಯೊಬ್ಬರ ಬಳಿ ನುಣ್ಣಗೆ ಬೋಳಿಸಿದ್ದು ಯಾಕೆ ಅಂತ,
ದಟ್ಟ ಕೂದಲು ಇರುವ ಆರೋಗ್ಯ ಸಚಿವರ ಹತ್ರ
ಅವರಿಗಾ,ಇವರಿಗಾ ಕೇಳೋಕೇ ಹೋಗಿಲ್ಲಪ್ಪ..!
ಮುಖ ಗವಸು ಹಾಕದ,
ಕೊರೊನಾ ನಿಯಮ ಪಾಲಿಸದ,ಸಾಮಾನ್ಯ ನಾಗರೀಕನದ್ದು ಘೋರ ಅಪರಾಧ ಅಂತ ಸರ್ಕಾರ ಯಾವುದೇ ಮುಲಾಜು ನೋಡದೇ ಕ್ರಮ ಕೈಗೊಂಡು ಹಣವನ್ನ ಕಿತ್ತು ಕೊಂಡು,ಆ ಹಣವನ್ನ
ಕರ್ನಾಟಕ ರಾಜ್ಯದ ಜನತೆಯ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಮಾತ್ರ ಅಂತ ನಮಗೆ ನಿಮಗೆಲ್ಲಾ ಅರಿವಿದೆಯಲ್ಲವೇ...!!
😂
ಜೈ ಅವರಿಗಾ,ಇವರಿಗಾ,ಯಾರುಯಾರಿಗಾ?!!
ಮಾನ್ಯಥ್ ರಾಯರ ಕಥೆ
ಮನ್ನ್ಯಾಥ ರಾಯ್ರ ತೋಟ ಹಾಗೂ ಗದ್ದೆ,ತರಕಾರಿಗೆ ಮಂಗನ ಕಾಟ ತಡೆಯೋಕಾಗದೆ..
ಬಹಳ ತಲೆ ಬಿಸಿಲಿ ಇದ್ರು..
ಬಹಳ ವರ್ಷಗಳ ಹಿಂದೆ ಹೊಸದಾಗಿ ಸಾಫ್ಟ್ವೇರ್ ಕಂಪನಿ ಪ್ರಾರಂಭವಾದಾಗ ಆಗಲೇ ಡಿಗ್ರಿ ಮಾಡಿ,ಸಾಪ್ಟವೇರ್ ಬಗ್ಗೆ ಅಲ್ಪ ಸ್ವಲ್ಪ ಕಲಿತಿದ್ದ ಮನ್ ನ್ಯಾಥ ರಾಯ್ರ ಮಗ ವಿಸ್ನಾಥ್ ಬೆಂಗಳೂರು ಹೋಗಿ ಹಲವು ವರ್ಷ ಉದ್ಯೋಗ ಮಾಡಿ,ಸಾಕಪ್ಪ ಈ ಕೆಲಸ ಅಂತ ಊರು ಕಡೆ ಹೋಗಿ ತ್ವಾಟ ನೋಡ್ ಕಂಡು ಅಪ್ಪಗೆ ಸಹಾಯ ಮಾಡಿಕೊಂಡು ಇರೋಣ ಅಂತ ಊರಿಗೆ ಬಂದಿದ್ದರು ಅಷ್ಟೇ..
ಅಪ್ಪನ ತಲೆ ಬಿಸಿ,ಚಡಪಡಿಕೆ,ಟೆನ್ಷನ್ ದಿನಾ ನೋಡುತ್ತಾ ಇದ್ದವರು..
"ಎಂತಾಯ್ತು ಮಾರಾಯ್ರೆ"ಅಂದ್ರು..
"ಈ ಮಲೆನಾಡು ರೈತನಿಗೆ ಮಂಗನ ಕಾಟ ತಪ್ಪಲ್ಲ ಮರಾಯಾ,
ಎಂತಾ ಸಾಯದು ತ್ವಾಟದಲ್ಲಿ ಹಿಂಗಾರ,ಏಲಕ್ಕಿ,ಕಾಪಿ ಬೀಜ,ಬಾಳೆ ಕೊನೆ ಎಂತೂ ಬಿಡಲ್ಲ ನೋಡು,ಹೆಂಗೆ ಬದುಕುಕು ನಾವು" ಅಂದ್ರು..
ಅಪ್ಪನ ಒದ್ದಾಟ ನೋಡಿ ಬೇಸರವಾಗಿ,
ಕೂಡಲೇ ತನ್ನೊಳಿಗಿನ ಹಳೆಯ ಹೋರಾಟಗಾರನನ್ನ ಜಾಗೃತ ಗೊಳಿಸಿದ ವಿಸ್ನಾಥ್...
ಈ ಮಂಗನ ಕಾಟಕ್ಕೆ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಶಪಥ ಗೈದು ಬಿಟ್ರು..
ಹಲವು ತಾಂತ್ರಿಕ ಪುಸ್ತಕಗಳನ್ನೆಲ್ಲಾ ಹುಡುಕಾಡಿ,ಗೂಗಲ್ ನೋಡಿ,ತನ್ನ ಕಂಪನಿಯ ಪ್ರಚಂಡ ಬುದ್ಧಿವಂತರನ್ನ ಸಂಪರ್ಕ ಮಾಡಿ,ತನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ದಿನವೂ ಪ್ರೋಗ್ರಾಮ್ ಬರೆಯಲು ಪ್ರಯತ್ನಿಸಿ ಒಂದೊಂದು ಪ್ರಯೋಗ ಮಾಡ ತೊಡಗಿದ್ರು..
ಒಂದು ದಿನ
ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ತು..!
ಅದೇನೆಂದರೆ ಮಂಗನ ಅಂಡು ಮೇಲೆ ಹೊಡೆಯೋ ರೋಬೋಟ್..
ಮಂಗಗಳು ಬೇಲಿ ದಾಟಿ ಗದ್ದೆ ತೋಟಕ್ಕೆ ಬಂದ ಕೂಡಲೇ ಅದರ ಶಬ್ದಕ್ಕೆ,ಈ ರೋಬೋಟ್ ಎಷ್ಟೇ ದರುಗು,ಹೊಂಡ, ತ್ವಾಟದ ಕಪ್ ಇದ್ರೂ,ಸದ್ದಿಲ್ಲದೇ ಹತ್ತಿರ ಶರವೇಗದಲ್ಲಿ ಹೋಗಿ ಮಂಗನ ಅಂಡಿಗೆ ಗುರಿ ಇಟ್ಟು ಬಾರು ಕೋಲಿನಲ್ಲಿ ಬಡಿಯೋದು..
ಆ ಬಾರು ಕೋಲಿನ ಹೊಡೆತದಿಂದ ಆದ ಬಾಸುಂಡೆ,ತುರಿಕೆ ಹಾಗೂ ಉರಿಯ ವ್ಯಾಲಿಡಿಟಿ ಮಿನಿಮಮ್ 72 ಗಂಟೆ...!
ಮಂಗಗಳಿಗೆ ಅಂಡು ತುರಿಸೋಕೆ ಎರಡು ಕೈ ಸಾಲದು ಆಗಬೇಕು ಅಷ್ಟು ತುರಿಕೆ ಬರುವ ಹಾಗೆ ಪೆಟ್ಟು..!
ಕೆಲವು ದಿನದ ಈ ಯಂತ್ರದ ಪೆಟ್ಟಿನ ಕಾರ್ಯಾಚರಣೆಗೆ ಹೆದರಿ ಮಂಗಗಳು ಅವರ ತೋಟಕ್ಕೆ ಬರೋದು ಇರಲಿ,ತಿರುಗಿ ನೋಡೋಕೆ ಭಯ ಪಡು ವ ಹಾಗೆ ಆಗಿ ಬಿಟ್ಟವು,ಸಂಪೂರ್ಣ ಮಂಗಗಳಿಂದ ಬಿಡುಗಡೆ ಸಿಕ್ತು ಮನ್ನ್ಯಾಥ್ ರಾಯರಿಗೆ..
ಮಗನ ಸಾಧನೆಗೆ ಶಬ್ಬಾಶ್ ಅಂದ್ರು ರಾಯರು..
ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ...!
ಕೆಲಸ ಆಯ್ತಾ..
ವಿಸ್ನಾಥ ಮಂಗಗಳ ಕುಂಡೆ ಮೇಲೆ ಹೊಡೆಯೋ ರೋಬೋಟ್ ನ ಹಿತ್ತಲಕಡೆ ಕೊಟ್ಟಿಗೆ ಮೂಲೆಗೆ ಇಟ್ಟರು..
ಅದು ಬ್ಯಾಟರಿ ಡವ್ನ್ ಆಗಿ ಸುಮ್ಮನೆ ಪಕ್ಕಕ್ಕೆ ಕೂತಿತ್ತು..
ಕೆಲವು ದಿನದ ನಂತರ ಅದರ ಮೇಲೆ ಹಲವು ಕೃಷಿ ಉಪಕರಣಗಳು ಬಂದು ಕೂತವು..
ಒಂದು ಹಳೆಯ ಟೇಬಲ್ ಆಗಿ ಪರಿವರ್ತನೆ ಆಯ್ತು ರೋಬೋಟ್..!
ಕೆಲವು ಸಮಯದ ನಂತರ ಪ್ಯಾಟೆಲಿ ಕೃಷಿ ಮೇಳ ಇದೆಯಂತೆ ಅಂತ ಯಾರೋ ಮೆಸೇಜ್ ಮಾಡಿದ್ದು ನೋಡಿ..
ತನ್ನ ಬಜಾಜ್ ಎಂ.ಎಂಬತ್ತು ಬೈಕ್ ತಗೊಂಡು ವಿಸ್ ನಾತ ರ ಸವಾರಿ ಪೇಟೆಗೆ ಹೊರಡ್ತು..
ಬಜಾಜ್.ಎಂ.
ಎಂಬತ್ತು ಒಂದು ಕಡೆ ನಿಲುಗಡೆ ಮಾಡಿ..
ಕೃಷಿ ಮೇಳ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಿ ಒಂದೊಂದೇ ಮಳಿಗೆಯಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನ ನೋಡುತ್ತಾ ಯಾಕೋ ಒಂದು ಕಡೆ ಕಣ್ಣು ಆಡಿಸ್ತಾರೆ..
ವಿಸ್ನಾಥ್ ತಯಾರಿಸಿದ್ದೆ ತರದ ಮಂಗನ ಕುಂಡೆ ಮೇಲೆ ಬಾರುಕೋಲಿನಲ್ಲಿ ಬಾರಿಸೋ ರೋಬೋಟ್ ಪರೀಕ್ಷಾ ಪ್ರದರ್ಶನ ನಡೆಯುತ್ತಾ ಇದೆ..
ಅದರ ಹೆಸರು "ಮಂಕುಮೇ" ರೋಬೋಟ್ ಅಂತ ಬೇರೆ ಇಟ್ಟು ಬೆಲೆ ಬೇರೆ ಹಾಕಿದ್ರೂ..
ಯಂತ್ರ ಬಹಳ ಸುಂದರವಾಗಿ ವಿನ್ಯಾಸ ಗೊಳಿಸಿದ್ದರು,ನೋಡೋಕೆ ಚನ್ನಾಗಿ ಕಾಣಿಸುತ್ತಾ ಇತ್ತು,
ಆದರೆ ಮಾಡುವ ಕೆಲಸ,ಸೇಮ್ ವಿಸ್ ನಾಥ್ ಮಾಡಿದ್ದ ರೋಬೋಟ್ ಕೆಲಸವನ್ನೇ...!!
ಜನ ಮುಗಿಬಿದ್ದು ಯಂತ್ರ ಖರೀದಿಗೆ ಮುಂಗಡ ಪಾವತಿ ಮಾಡ್ತಾ ಇದ್ರು..
ಇದನ್ನೆಲ್ಲಾ ನೋಡಿದ
ಮನ್ನ್ಯಾಥ್ ರಾಯರ ಮಗ ವಿಸ್ನಾಥ..
ಹೌ ಹಾರಿದ್ರು..
"ಅಯ್ಯೋ..ನಾನು ಹೇಗೆಗೋ ತಿಂಗಳು ಗಟ್ಟಲೆ ಕಷ್ಟ ಪಟ್ಟು ಓದಿ,ಯೋಚಿಸಿ,ಗೂಗಲ್ ನಲ್ಲಿ ಎಲ್ಲಾ ಹುಡುಕಿ ಪ್ರೋಗ್ಗ್ರಾಮ್ ಬರೆದು,ಟೆಸ್ಟಿಂಗ್ ಮಾಡಿ,ಕಚ್ಚಾ ವಸ್ತುಗಳನ್ನ ಒಟ್ಟು ಹಾಕಿ ರೋಬೋಟ್ ತಯಾರಿಸಿ ಯಶಸ್ವಿ ಯಾಗಿ ಅದು ಓಡಾಡುವಂತೆ ಮಾಡಿ...ಮಂಗಗಳ ಕುಂಡೆಗೆ ಯಶಸ್ವಿಯಾಗಿ ಪೆಟ್ಟು ಕೊಟ್ಟು ಶಾಶ್ವತ ವಾಗಿ ಓಡಿಸಿದ್ದು..ಈಗ ಯಾರೋ ಅದೇ ತರಹದ್ದು ರೋಬೋಟ್ ಮಾಡಿ,
ಸಾವಿರಗಟ್ಟಲೆ ದುಡ್ಡಿಗೆ ಮಾರುತ್ತಾ ಇದ್ದಾರೆ..
ಇದು ಅನ್ಯಾಯ ಅಂತ ಕೆಂಡಾ ಮಂಡಲವಾಗ್ತಾರೆ..."
ಇದರ ವಿರುದ್ಧ ಹೋರಾಡ್ತೇನೆ ಅಂತ ಫೇಸ್ಬುಕ್,ಟ್ವಿಟ್ಟರ್ ಎಲ್ಲಾ ಕಡೆ #ವಿಸ್ನಾಥಗೆವಿಷ ಅಂತ ಹ್ಯಾಶ್ ಟ್ಯಾಗ್ ಹಾಕಿ,ಪ್ಲೀಸ್ ಸ್ಟಾ0ಡ್,ಸಿಟ್,ಏನಾದ್ರು ಮಾಡಿ,ವಿತ್ ಮಿ ಅಂತ ಹಾಕಬೇಕು ಅಂತ ತೀರ್ಮಾನ ಮಾಡಿ,ಅಲ್ಲಿಂದ ಬಾಜಾಜ್ ಎಂ.ಎಂಬತ್ತು ಹತ್ತಿ 80 ಕಿಮೀ ವೇಗದಲ್ಲಿ ಬರೋಕೆ ಆಕ್ಸಲರೇಟರ್ ತಿರುಪುತ್ತಾ ಪ್ರಯತ್ನಿಸುತ್ತಾ..ಮನೆ ಕಡೆ ನಿಧಾನಕ್ಕೆ ಬಂದರು..!
ಇದನ್ನ ಊರಲ್ಲೇ ಇರೋ ತನ್ನ ಆಪ್ತ ಸ್ನೇಹಿತರಿಗೂ ಹೇಳಿ ಕೊಂಡಿದ್ದರಿಂದ,ಒಮ್ಮೆ ಅವರಿಗೂ ತಮ್ಮ ನೋವನ್ನ ತೋಡಿ ಕೊಳ್ಳೋಣ ಅಂತ ಎಲ್ಲರನ್ನೂ ತಾವು ದಿನಾ ಸೇರೋ ಜಾಗಕ್ಕೆ ಬನ್ನಿ ಅಂತ ವಾಟೆ ಸೊಪ್ಪಲ್ಲಿ ಇರೋ ಗ್ರೂಪಲ್ಲಿ ಮೆಸೇಜ್ ಹಾಕಿದ್ರು..!
ಮನ್ನ್ಯಾಥ್ ರಾಯರು,ಗೊಬ್ಬರ ಗುಂಡಿಲಿ ಗೊಬ್ಬರದ ಹೆಡಗೆ ತಲೆ ಮೇಲೆ ಇಟ್ಟುಕೊಂಡವರು ಮಗ ಗಡಿಬಿಡಿಲಿ ಬಂದಿದ್ದು ನೋಡಿ.
"ಎಂತಾಯ್ತು ಮರಯಾ..ಹಂಗೇ ಬಂದ್ಯಲ್ಲ ಅಂದ್ರು.."
"ಎಂತಿಲ್ಲಾ,ಅಂದ ವಿಸ್ನಾಥ ಒಂದು ಲೋಟ ಕರಿ ಕಾಪಿ ಅಮ್ಮನ ಹತ್ರ ಕೇಳಿ ಕುಡಿದು,
ಪಂಚೆ ಉಟ್ಟು
ಸ್ನೇಹಿತರನ್ನ ಭೇಟಿಯಾಗೋಕೆ ಮತ್ತೆ ಗಡಿಬಿಡಿಲಿ ಎಂ ಎಂಬತ್ತು ತಗೊಂಡು "ಶರವೇಗದಲ್ಲಿ" ನಿಧಾನಕ್ಕೆ ಹೋದ್ರು..!
ಖಾಯಂ ಮೀಟಿಂಗ್ ಸೇರೋ ಜಾಗಕ್ಕೆ ಬಂದ್ರೂ ಎಲ್ಲಾ ಸ್ನೇಹಿತರು..
ಶುರು ಮಾಡಿದ್ರು ತನ್ನ ಸಿಟ್ಟು ಮಿಶ್ರಿತ ನೋವಿನ ಸಂಗತಿ ವಿಸ್ ನಾಥ...!
ಎಲ್ಲಾ ಕತೆ ಮುಗಿದ ಮೇಲೆ ಅವನ ಸ್ನೇಹಿತ ರಮೇಸ ಹೇಳಿದ..
"ಅಲಾ ಮರಾಯಾ..
ನೀನು ಮಂಗನ ಕುಂಡೆ ಮೇಲೆ ಹೊಡೆಯೋ ಮಷಿನ್ ಕಂಡು ಹಿಡಿದು,ಅದರ ಉಪಯೋಗ ಆದ ಮೇಲೆ,ಊರು ಮನೆ ಬಿಟ್ಟು,ಬೇರೆ ಕಡೆ
ಇನ್ನೊಬ್ಬರಿಗೆ ಉಪಯೋಗ ಆಗಲಿ ಅಂತ ಕೊಟ್ಟಿಯಾ..!?
ಅಥವಾ ಪ್ರಚಾರ ಮಾಡಿದ್ಯಾ..!?ಇದರ ಬಗ್ಗೆ ಹೇಳಿ ಕೊಂಡಿಯಾ!?
ಅಥವಾ ಅದನ್ನ ಅನುಷ್ಠಾನ ಮಾಡೋಕೆ ಪ್ರಯತ್ನ ಪಟ್ಟಿಯಾ!?
ಎಂತಾ ಇಲ್ಲ..
ಈಗ ಯಾರೋ ಯಶಸ್ವಿಯಾಗಿ ಮಾಡಿದ ಕೂಡಲೇ..
ಇದನ್ನ ನಾನು ಮಾಡಿದ್ದು..
ಇದನ್ನ ಕಾಪಿ ಮಾಡಿದ್ದಾರೆ..
ಇದು ಅನ್ಯಾಯ,ಅಕ್ರಮ..
ಇದು ಬಹಳ ಹಿಂದೆ ನಾನು ಮಾಡಿ ಬಿಟ್ಟಿದ್ದು,ಈಗ ಮಾಡಿದವರು ಸರಿ ಇಲ್ಲ ಅಂತ ಅವರನ್ನ ದೂರೋದು,ಸರಿ ಇಲ್ಲ ಅನ್ನೋದು,ಸಿಟ್ಟು ಮಾಡೋದು,ಆಕ್ರೋಶ ವ್ಯಕ್ತ ಪಡಿಸೋದು ಸರಿಯಾ!?
ಅವರು ಮಾಡಿದ್ದೆ ಸರಿ ಇಲ್ಲ ಎನ್ನುವ ಹಾಗೆ,ಪ್ರತಿಭೆಗೆ,ಬುದ್ಧಿವಂತಿಕೆಗೆ,ಜ್ಞಾನಕ್ಕೆ,ಎಪರ್ಟ್ ಗೆ ಬೆಲೆ ಇಲ್ಲದ ಹಾಗೆ ಹೇಳೋದು ಇಷ್ಟು ಸರಿ..!?
ಅಂದ್ರು ರಮೇಸ...!
"ಅದೆಲ್ಲಾ ಸರಿ,ಬೆಲೆ ಇಲ್ವಾ ಮರಾಯಾ ನಮ್ಮ ಎಪರ್ಟ್ ಗೆ ಹಂಗಾದ್ರೆ"ಅಂದ್ರು..
ವಿಸ್ನಾಥ ರಾಯ್ರು..
ರಮೇಸ:-ನಿನ್ನ ಪ್ರತಿಭೆಗೆ,ಶ್ರಮಕ್ಕೆ ಬೆಲೆ ಇದೆ ಮರಾಯ..
ಆದ್ರೆ,ಮಾಡಿದ್ದ ಕೆಲಸ ಯಶಸ್ವಿ ಆಗಿ,ಅದನ್ನ ಸರಿಯಾಗಿ ಅನುಷ್ಠಾನ ಮಾಡಿ,ಎಲ್ಲರಿಗೂ ತಲುಪುವಂತೆ ಮಾಡೋದು ನಿನ್ನದೆ ಕೆಲಸ..
ಅದು ಬಿಟ್ಟು ನೀನು ಮನೇಲಿ ಮೂಲೆಗೆ ಇಟ್ಟು,
ಬೇರೆಯವರು,ಸಂಶೋಧನೆ ಮಾಡಿದ್ದು,ಕಂಡು ಹಿಡಿದಿದ್ದು,ಅವರ ಶ್ರಮ,ಅವರ ಪ್ರತಿಭೆ ಅಥವಾ ಸಾಧನೆ ಎಲ್ಲವನ್ನ..ನಾವು ಇದನ್ನ ಬಹಳ ಹಿಂದೆ ಕಂಡು ಹಿಡಿದ್ದಿದ್ದು,ಇದೇನು ದೊಡ್ಡ ವಿಶೇಷ,ನಮ್ಮ ಹತ್ರಾನೆ ತಗೊಂಡರು,ಈಗ ಕಂಡು ಹಿಡಿದದ್ದು ಅಪ್ರಯೋಜಕ ಅಂದರೆ ಅರ್ಥವಿರುತ್ತಾ!?,ಇನ್ನೊಬ್ಬರ ಎಪರ್ಟ್,ಅಥವಾ ಸಾಧನೆಯನ್ನ ಕೀಳಾಗಿ ಕಾಣೋದು,ಅದು ಅಪ್ರಯೋಜಕ,ನಂದೆ ಕಾಪಿ ಎನ್ನುವ ಹಾಗೆ ಹೇಳೋದು ಸರಿಯಲ್ಲ..!
ನಮಗೆ ಅದನ್ನ ಎನ್ ಕ್ಯಾಶ್ ಮಾಡುವ ಶಕ್ತಿ ಇರಲಿಲ್ಲ,ಹಾಗಾಗಿ ಅದು ಜನರಿಗೆ ತಲುಪಿಲ್ಲ,ಅವರಿಗೆ ಆ ಶಕ್ತಿ,ಯುಕ್ತಿ ಇತ್ತು ಅದಕ್ಕೆ ಅವರು ಜನರಿಗೆ ತಲುಪಿಸಿ,ಎನ್ ಕ್ಯಾಶ್ ಮಾಡಿಕೊಂಡು ಹಣ ಮಾಡಿದ್ದಾರೆ ಅಷ್ಟೇ ಅನ್ನೋ ಸತ್ಯ ಒಪ್ಪಿಕೊಳ್ಳಬೇಕು.. ಅದ್ಕಯಾಕೆ ನೀನು ಅಸಮಾಧಾನ ವ್ಯಕ್ತ ಮಾಡ್ತಿಯಾ ಅಂದ್ರು..!
ನಿಮಗೆ ಏನು ಅನಿಸ್ತು..
ನಿಜ ಅಲ್ವಾ..
ಯಾರೋ ಸಾಧಿಸಿದ್ದಕ್ಕೆ ವ್ಯ0ಗ್ಯವಾಡಿ, ಇದನ್ನ ಹಲವು ವರ್ಷದ ಹಿಂದೆ ಮಾಡಿದ್ದುಅನ್ನೋದಕ್ಕಿಂತ ಒಳ್ಳೆಯದು ಅಂತ ಬೆನ್ನು ತಟ್ಟೋದು ದೊಡ್ಡ ತನ ಅಲ್ವಾ!?
ಯಾವುದೋ ಕೆಲಸ ಮಾಡಿ,ನಮಗೆ ಧಕ್ಕಿಸಿ ಕೊಳ್ಳಲಾಗದೇ,ಅದರಲ್ಲಿ ಯಶಸ್ಸು ಪಡೆಯಲಾಗದೇ
ಅದು ಪೈಲ್ಯೂರ್ ಆದರೆ ಅದರಲ್ಲಿ,ನಮ್ಮ ಸೋಮಾರಿತನ,ನಮ್ಮ ಉಡಾಫೆ,ಪ್ರಚಾರ,ನಮ್ಮ ಲೋಪ ಇನ್ನೂ ಏನೇನೋ ಇದ್ದದ್ದರಿಂದ ಆದ ಸೋಲೇ ಹೊರತು..!
ಅದೇ ಕೆಲಸವನ್ನ ಇನ್ನೊಬ್ಬರು ಮಾಡಿ ಧಕ್ಕಿಸಿ ಕೊಂಡವರು ನಮಗೆ
ಮಾಡಿದ ಮೋಸ,ವಂಚನೆ ಆಗೋಕೆ ಸಾಧ್ಯವಿಲ್ಲ..
ಅವನಿಗೆ ಆ ಟ್ಯಾಲೆಂಟ್ ಇತ್ತು ಮಾಡಿ ಧಕ್ಕಿಸಿ ಕೊಂಡ..
ನಮಗೆ ಇರಲಿಲ್ಲ ಸೋತೆವು ಮತ್ತೆ ಪ್ರಯತ್ನಿಸಿ ನೋಡೋಣ ಅಂತ ಅಷ್ಟೇ ಅಲ್ವಾ..!
ಬಹಳ ತಲೆ ಬಿಸಿಲಿ ಇದ್ರು..
ಬಹಳ ವರ್ಷಗಳ ಹಿಂದೆ ಹೊಸದಾಗಿ ಸಾಫ್ಟ್ವೇರ್ ಕಂಪನಿ ಪ್ರಾರಂಭವಾದಾಗ ಆಗಲೇ ಡಿಗ್ರಿ ಮಾಡಿ,ಸಾಪ್ಟವೇರ್ ಬಗ್ಗೆ ಅಲ್ಪ ಸ್ವಲ್ಪ ಕಲಿತಿದ್ದ ಮನ್ ನ್ಯಾಥ ರಾಯ್ರ ಮಗ ವಿಸ್ನಾಥ್ ಬೆಂಗಳೂರು ಹೋಗಿ ಹಲವು ವರ್ಷ ಉದ್ಯೋಗ ಮಾಡಿ,ಸಾಕಪ್ಪ ಈ ಕೆಲಸ ಅಂತ ಊರು ಕಡೆ ಹೋಗಿ ತ್ವಾಟ ನೋಡ್ ಕಂಡು ಅಪ್ಪಗೆ ಸಹಾಯ ಮಾಡಿಕೊಂಡು ಇರೋಣ ಅಂತ ಊರಿಗೆ ಬಂದಿದ್ದರು ಅಷ್ಟೇ..
ಅಪ್ಪನ ತಲೆ ಬಿಸಿ,ಚಡಪಡಿಕೆ,ಟೆನ್ಷನ್ ದಿನಾ ನೋಡುತ್ತಾ ಇದ್ದವರು..
"ಎಂತಾಯ್ತು ಮಾರಾಯ್ರೆ"ಅಂದ್ರು..
"ಈ ಮಲೆನಾಡು ರೈತನಿಗೆ ಮಂಗನ ಕಾಟ ತಪ್ಪಲ್ಲ ಮರಾಯಾ,
ಎಂತಾ ಸಾಯದು ತ್ವಾಟದಲ್ಲಿ ಹಿಂಗಾರ,ಏಲಕ್ಕಿ,ಕಾಪಿ ಬೀಜ,ಬಾಳೆ ಕೊನೆ ಎಂತೂ ಬಿಡಲ್ಲ ನೋಡು,ಹೆಂಗೆ ಬದುಕುಕು ನಾವು" ಅಂದ್ರು..
ಅಪ್ಪನ ಒದ್ದಾಟ ನೋಡಿ ಬೇಸರವಾಗಿ,
ಕೂಡಲೇ ತನ್ನೊಳಿಗಿನ ಹಳೆಯ ಹೋರಾಟಗಾರನನ್ನ ಜಾಗೃತ ಗೊಳಿಸಿದ ವಿಸ್ನಾಥ್...
ಈ ಮಂಗನ ಕಾಟಕ್ಕೆ ಒಂದು ಶಾಶ್ವತ ಪರಿಹಾರ ಕಂಡು ಹಿಡಿಯಲೇ ಬೇಕು ಎಂದು ಶಪಥ ಗೈದು ಬಿಟ್ರು..
ಹಲವು ತಾಂತ್ರಿಕ ಪುಸ್ತಕಗಳನ್ನೆಲ್ಲಾ ಹುಡುಕಾಡಿ,ಗೂಗಲ್ ನೋಡಿ,ತನ್ನ ಕಂಪನಿಯ ಪ್ರಚಂಡ ಬುದ್ಧಿವಂತರನ್ನ ಸಂಪರ್ಕ ಮಾಡಿ,ತನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ದಿನವೂ ಪ್ರೋಗ್ರಾಮ್ ಬರೆಯಲು ಪ್ರಯತ್ನಿಸಿ ಒಂದೊಂದು ಪ್ರಯೋಗ ಮಾಡ ತೊಡಗಿದ್ರು..
ಒಂದು ದಿನ
ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ತು..!
ಅದೇನೆಂದರೆ ಮಂಗನ ಅಂಡು ಮೇಲೆ ಹೊಡೆಯೋ ರೋಬೋಟ್..
ಮಂಗಗಳು ಬೇಲಿ ದಾಟಿ ಗದ್ದೆ ತೋಟಕ್ಕೆ ಬಂದ ಕೂಡಲೇ ಅದರ ಶಬ್ದಕ್ಕೆ,ಈ ರೋಬೋಟ್ ಎಷ್ಟೇ ದರುಗು,ಹೊಂಡ, ತ್ವಾಟದ ಕಪ್ ಇದ್ರೂ,ಸದ್ದಿಲ್ಲದೇ ಹತ್ತಿರ ಶರವೇಗದಲ್ಲಿ ಹೋಗಿ ಮಂಗನ ಅಂಡಿಗೆ ಗುರಿ ಇಟ್ಟು ಬಾರು ಕೋಲಿನಲ್ಲಿ ಬಡಿಯೋದು..
ಆ ಬಾರು ಕೋಲಿನ ಹೊಡೆತದಿಂದ ಆದ ಬಾಸುಂಡೆ,ತುರಿಕೆ ಹಾಗೂ ಉರಿಯ ವ್ಯಾಲಿಡಿಟಿ ಮಿನಿಮಮ್ 72 ಗಂಟೆ...!
ಮಂಗಗಳಿಗೆ ಅಂಡು ತುರಿಸೋಕೆ ಎರಡು ಕೈ ಸಾಲದು ಆಗಬೇಕು ಅಷ್ಟು ತುರಿಕೆ ಬರುವ ಹಾಗೆ ಪೆಟ್ಟು..!
ಕೆಲವು ದಿನದ ಈ ಯಂತ್ರದ ಪೆಟ್ಟಿನ ಕಾರ್ಯಾಚರಣೆಗೆ ಹೆದರಿ ಮಂಗಗಳು ಅವರ ತೋಟಕ್ಕೆ ಬರೋದು ಇರಲಿ,ತಿರುಗಿ ನೋಡೋಕೆ ಭಯ ಪಡು ವ ಹಾಗೆ ಆಗಿ ಬಿಟ್ಟವು,ಸಂಪೂರ್ಣ ಮಂಗಗಳಿಂದ ಬಿಡುಗಡೆ ಸಿಕ್ತು ಮನ್ನ್ಯಾಥ್ ರಾಯರಿಗೆ..
ಮಗನ ಸಾಧನೆಗೆ ಶಬ್ಬಾಶ್ ಅಂದ್ರು ರಾಯರು..
ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ...!
ಕೆಲಸ ಆಯ್ತಾ..
ವಿಸ್ನಾಥ ಮಂಗಗಳ ಕುಂಡೆ ಮೇಲೆ ಹೊಡೆಯೋ ರೋಬೋಟ್ ನ ಹಿತ್ತಲಕಡೆ ಕೊಟ್ಟಿಗೆ ಮೂಲೆಗೆ ಇಟ್ಟರು..
ಅದು ಬ್ಯಾಟರಿ ಡವ್ನ್ ಆಗಿ ಸುಮ್ಮನೆ ಪಕ್ಕಕ್ಕೆ ಕೂತಿತ್ತು..
ಕೆಲವು ದಿನದ ನಂತರ ಅದರ ಮೇಲೆ ಹಲವು ಕೃಷಿ ಉಪಕರಣಗಳು ಬಂದು ಕೂತವು..
ಒಂದು ಹಳೆಯ ಟೇಬಲ್ ಆಗಿ ಪರಿವರ್ತನೆ ಆಯ್ತು ರೋಬೋಟ್..!
ಕೆಲವು ಸಮಯದ ನಂತರ ಪ್ಯಾಟೆಲಿ ಕೃಷಿ ಮೇಳ ಇದೆಯಂತೆ ಅಂತ ಯಾರೋ ಮೆಸೇಜ್ ಮಾಡಿದ್ದು ನೋಡಿ..
ತನ್ನ ಬಜಾಜ್ ಎಂ.ಎಂಬತ್ತು ಬೈಕ್ ತಗೊಂಡು ವಿಸ್ ನಾತ ರ ಸವಾರಿ ಪೇಟೆಗೆ ಹೊರಡ್ತು..
ಬಜಾಜ್.ಎಂ.
ಎಂಬತ್ತು ಒಂದು ಕಡೆ ನಿಲುಗಡೆ ಮಾಡಿ..
ಕೃಷಿ ಮೇಳ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಿ ಒಂದೊಂದೇ ಮಳಿಗೆಯಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನ ನೋಡುತ್ತಾ ಯಾಕೋ ಒಂದು ಕಡೆ ಕಣ್ಣು ಆಡಿಸ್ತಾರೆ..
ವಿಸ್ನಾಥ್ ತಯಾರಿಸಿದ್ದೆ ತರದ ಮಂಗನ ಕುಂಡೆ ಮೇಲೆ ಬಾರುಕೋಲಿನಲ್ಲಿ ಬಾರಿಸೋ ರೋಬೋಟ್ ಪರೀಕ್ಷಾ ಪ್ರದರ್ಶನ ನಡೆಯುತ್ತಾ ಇದೆ..
ಅದರ ಹೆಸರು "ಮಂಕುಮೇ" ರೋಬೋಟ್ ಅಂತ ಬೇರೆ ಇಟ್ಟು ಬೆಲೆ ಬೇರೆ ಹಾಕಿದ್ರೂ..
ಯಂತ್ರ ಬಹಳ ಸುಂದರವಾಗಿ ವಿನ್ಯಾಸ ಗೊಳಿಸಿದ್ದರು,ನೋಡೋಕೆ ಚನ್ನಾಗಿ ಕಾಣಿಸುತ್ತಾ ಇತ್ತು,
ಆದರೆ ಮಾಡುವ ಕೆಲಸ,ಸೇಮ್ ವಿಸ್ ನಾಥ್ ಮಾಡಿದ್ದ ರೋಬೋಟ್ ಕೆಲಸವನ್ನೇ...!!
ಜನ ಮುಗಿಬಿದ್ದು ಯಂತ್ರ ಖರೀದಿಗೆ ಮುಂಗಡ ಪಾವತಿ ಮಾಡ್ತಾ ಇದ್ರು..
ಇದನ್ನೆಲ್ಲಾ ನೋಡಿದ
ಮನ್ನ್ಯಾಥ್ ರಾಯರ ಮಗ ವಿಸ್ನಾಥ..
ಹೌ ಹಾರಿದ್ರು..
"ಅಯ್ಯೋ..ನಾನು ಹೇಗೆಗೋ ತಿಂಗಳು ಗಟ್ಟಲೆ ಕಷ್ಟ ಪಟ್ಟು ಓದಿ,ಯೋಚಿಸಿ,ಗೂಗಲ್ ನಲ್ಲಿ ಎಲ್ಲಾ ಹುಡುಕಿ ಪ್ರೋಗ್ಗ್ರಾಮ್ ಬರೆದು,ಟೆಸ್ಟಿಂಗ್ ಮಾಡಿ,ಕಚ್ಚಾ ವಸ್ತುಗಳನ್ನ ಒಟ್ಟು ಹಾಕಿ ರೋಬೋಟ್ ತಯಾರಿಸಿ ಯಶಸ್ವಿ ಯಾಗಿ ಅದು ಓಡಾಡುವಂತೆ ಮಾಡಿ...ಮಂಗಗಳ ಕುಂಡೆಗೆ ಯಶಸ್ವಿಯಾಗಿ ಪೆಟ್ಟು ಕೊಟ್ಟು ಶಾಶ್ವತ ವಾಗಿ ಓಡಿಸಿದ್ದು..ಈಗ ಯಾರೋ ಅದೇ ತರಹದ್ದು ರೋಬೋಟ್ ಮಾಡಿ,
ಸಾವಿರಗಟ್ಟಲೆ ದುಡ್ಡಿಗೆ ಮಾರುತ್ತಾ ಇದ್ದಾರೆ..
ಇದು ಅನ್ಯಾಯ ಅಂತ ಕೆಂಡಾ ಮಂಡಲವಾಗ್ತಾರೆ..."
ಇದರ ವಿರುದ್ಧ ಹೋರಾಡ್ತೇನೆ ಅಂತ ಫೇಸ್ಬುಕ್,ಟ್ವಿಟ್ಟರ್ ಎಲ್ಲಾ ಕಡೆ #ವಿಸ್ನಾಥಗೆವಿಷ ಅಂತ ಹ್ಯಾಶ್ ಟ್ಯಾಗ್ ಹಾಕಿ,ಪ್ಲೀಸ್ ಸ್ಟಾ0ಡ್,ಸಿಟ್,ಏನಾದ್ರು ಮಾಡಿ,ವಿತ್ ಮಿ ಅಂತ ಹಾಕಬೇಕು ಅಂತ ತೀರ್ಮಾನ ಮಾಡಿ,ಅಲ್ಲಿಂದ ಬಾಜಾಜ್ ಎಂ.ಎಂಬತ್ತು ಹತ್ತಿ 80 ಕಿಮೀ ವೇಗದಲ್ಲಿ ಬರೋಕೆ ಆಕ್ಸಲರೇಟರ್ ತಿರುಪುತ್ತಾ ಪ್ರಯತ್ನಿಸುತ್ತಾ..ಮನೆ ಕಡೆ ನಿಧಾನಕ್ಕೆ ಬಂದರು..!
ಇದನ್ನ ಊರಲ್ಲೇ ಇರೋ ತನ್ನ ಆಪ್ತ ಸ್ನೇಹಿತರಿಗೂ ಹೇಳಿ ಕೊಂಡಿದ್ದರಿಂದ,ಒಮ್ಮೆ ಅವರಿಗೂ ತಮ್ಮ ನೋವನ್ನ ತೋಡಿ ಕೊಳ್ಳೋಣ ಅಂತ ಎಲ್ಲರನ್ನೂ ತಾವು ದಿನಾ ಸೇರೋ ಜಾಗಕ್ಕೆ ಬನ್ನಿ ಅಂತ ವಾಟೆ ಸೊಪ್ಪಲ್ಲಿ ಇರೋ ಗ್ರೂಪಲ್ಲಿ ಮೆಸೇಜ್ ಹಾಕಿದ್ರು..!
ಮನ್ನ್ಯಾಥ್ ರಾಯರು,ಗೊಬ್ಬರ ಗುಂಡಿಲಿ ಗೊಬ್ಬರದ ಹೆಡಗೆ ತಲೆ ಮೇಲೆ ಇಟ್ಟುಕೊಂಡವರು ಮಗ ಗಡಿಬಿಡಿಲಿ ಬಂದಿದ್ದು ನೋಡಿ.
"ಎಂತಾಯ್ತು ಮರಯಾ..ಹಂಗೇ ಬಂದ್ಯಲ್ಲ ಅಂದ್ರು.."
"ಎಂತಿಲ್ಲಾ,ಅಂದ ವಿಸ್ನಾಥ ಒಂದು ಲೋಟ ಕರಿ ಕಾಪಿ ಅಮ್ಮನ ಹತ್ರ ಕೇಳಿ ಕುಡಿದು,
ಪಂಚೆ ಉಟ್ಟು
ಸ್ನೇಹಿತರನ್ನ ಭೇಟಿಯಾಗೋಕೆ ಮತ್ತೆ ಗಡಿಬಿಡಿಲಿ ಎಂ ಎಂಬತ್ತು ತಗೊಂಡು "ಶರವೇಗದಲ್ಲಿ" ನಿಧಾನಕ್ಕೆ ಹೋದ್ರು..!
ಖಾಯಂ ಮೀಟಿಂಗ್ ಸೇರೋ ಜಾಗಕ್ಕೆ ಬಂದ್ರೂ ಎಲ್ಲಾ ಸ್ನೇಹಿತರು..
ಶುರು ಮಾಡಿದ್ರು ತನ್ನ ಸಿಟ್ಟು ಮಿಶ್ರಿತ ನೋವಿನ ಸಂಗತಿ ವಿಸ್ ನಾಥ...!
ಎಲ್ಲಾ ಕತೆ ಮುಗಿದ ಮೇಲೆ ಅವನ ಸ್ನೇಹಿತ ರಮೇಸ ಹೇಳಿದ..
"ಅಲಾ ಮರಾಯಾ..
ನೀನು ಮಂಗನ ಕುಂಡೆ ಮೇಲೆ ಹೊಡೆಯೋ ಮಷಿನ್ ಕಂಡು ಹಿಡಿದು,ಅದರ ಉಪಯೋಗ ಆದ ಮೇಲೆ,ಊರು ಮನೆ ಬಿಟ್ಟು,ಬೇರೆ ಕಡೆ
ಇನ್ನೊಬ್ಬರಿಗೆ ಉಪಯೋಗ ಆಗಲಿ ಅಂತ ಕೊಟ್ಟಿಯಾ..!?
ಅಥವಾ ಪ್ರಚಾರ ಮಾಡಿದ್ಯಾ..!?ಇದರ ಬಗ್ಗೆ ಹೇಳಿ ಕೊಂಡಿಯಾ!?
ಅಥವಾ ಅದನ್ನ ಅನುಷ್ಠಾನ ಮಾಡೋಕೆ ಪ್ರಯತ್ನ ಪಟ್ಟಿಯಾ!?
ಎಂತಾ ಇಲ್ಲ..
ಈಗ ಯಾರೋ ಯಶಸ್ವಿಯಾಗಿ ಮಾಡಿದ ಕೂಡಲೇ..
ಇದನ್ನ ನಾನು ಮಾಡಿದ್ದು..
ಇದನ್ನ ಕಾಪಿ ಮಾಡಿದ್ದಾರೆ..
ಇದು ಅನ್ಯಾಯ,ಅಕ್ರಮ..
ಇದು ಬಹಳ ಹಿಂದೆ ನಾನು ಮಾಡಿ ಬಿಟ್ಟಿದ್ದು,ಈಗ ಮಾಡಿದವರು ಸರಿ ಇಲ್ಲ ಅಂತ ಅವರನ್ನ ದೂರೋದು,ಸರಿ ಇಲ್ಲ ಅನ್ನೋದು,ಸಿಟ್ಟು ಮಾಡೋದು,ಆಕ್ರೋಶ ವ್ಯಕ್ತ ಪಡಿಸೋದು ಸರಿಯಾ!?
ಅವರು ಮಾಡಿದ್ದೆ ಸರಿ ಇಲ್ಲ ಎನ್ನುವ ಹಾಗೆ,ಪ್ರತಿಭೆಗೆ,ಬುದ್ಧಿವಂತಿಕೆಗೆ,ಜ್ಞಾನಕ್ಕೆ,ಎಪರ್ಟ್ ಗೆ ಬೆಲೆ ಇಲ್ಲದ ಹಾಗೆ ಹೇಳೋದು ಇಷ್ಟು ಸರಿ..!?
ಅಂದ್ರು ರಮೇಸ...!
"ಅದೆಲ್ಲಾ ಸರಿ,ಬೆಲೆ ಇಲ್ವಾ ಮರಾಯಾ ನಮ್ಮ ಎಪರ್ಟ್ ಗೆ ಹಂಗಾದ್ರೆ"ಅಂದ್ರು..
ವಿಸ್ನಾಥ ರಾಯ್ರು..
ರಮೇಸ:-ನಿನ್ನ ಪ್ರತಿಭೆಗೆ,ಶ್ರಮಕ್ಕೆ ಬೆಲೆ ಇದೆ ಮರಾಯ..
ಆದ್ರೆ,ಮಾಡಿದ್ದ ಕೆಲಸ ಯಶಸ್ವಿ ಆಗಿ,ಅದನ್ನ ಸರಿಯಾಗಿ ಅನುಷ್ಠಾನ ಮಾಡಿ,ಎಲ್ಲರಿಗೂ ತಲುಪುವಂತೆ ಮಾಡೋದು ನಿನ್ನದೆ ಕೆಲಸ..
ಅದು ಬಿಟ್ಟು ನೀನು ಮನೇಲಿ ಮೂಲೆಗೆ ಇಟ್ಟು,
ಬೇರೆಯವರು,ಸಂಶೋಧನೆ ಮಾಡಿದ್ದು,ಕಂಡು ಹಿಡಿದಿದ್ದು,ಅವರ ಶ್ರಮ,ಅವರ ಪ್ರತಿಭೆ ಅಥವಾ ಸಾಧನೆ ಎಲ್ಲವನ್ನ..ನಾವು ಇದನ್ನ ಬಹಳ ಹಿಂದೆ ಕಂಡು ಹಿಡಿದ್ದಿದ್ದು,ಇದೇನು ದೊಡ್ಡ ವಿಶೇಷ,ನಮ್ಮ ಹತ್ರಾನೆ ತಗೊಂಡರು,ಈಗ ಕಂಡು ಹಿಡಿದದ್ದು ಅಪ್ರಯೋಜಕ ಅಂದರೆ ಅರ್ಥವಿರುತ್ತಾ!?,ಇನ್ನೊಬ್ಬರ ಎಪರ್ಟ್,ಅಥವಾ ಸಾಧನೆಯನ್ನ ಕೀಳಾಗಿ ಕಾಣೋದು,ಅದು ಅಪ್ರಯೋಜಕ,ನಂದೆ ಕಾಪಿ ಎನ್ನುವ ಹಾಗೆ ಹೇಳೋದು ಸರಿಯಲ್ಲ..!
ನಮಗೆ ಅದನ್ನ ಎನ್ ಕ್ಯಾಶ್ ಮಾಡುವ ಶಕ್ತಿ ಇರಲಿಲ್ಲ,ಹಾಗಾಗಿ ಅದು ಜನರಿಗೆ ತಲುಪಿಲ್ಲ,ಅವರಿಗೆ ಆ ಶಕ್ತಿ,ಯುಕ್ತಿ ಇತ್ತು ಅದಕ್ಕೆ ಅವರು ಜನರಿಗೆ ತಲುಪಿಸಿ,ಎನ್ ಕ್ಯಾಶ್ ಮಾಡಿಕೊಂಡು ಹಣ ಮಾಡಿದ್ದಾರೆ ಅಷ್ಟೇ ಅನ್ನೋ ಸತ್ಯ ಒಪ್ಪಿಕೊಳ್ಳಬೇಕು.. ಅದ್ಕಯಾಕೆ ನೀನು ಅಸಮಾಧಾನ ವ್ಯಕ್ತ ಮಾಡ್ತಿಯಾ ಅಂದ್ರು..!
ನಿಮಗೆ ಏನು ಅನಿಸ್ತು..
ನಿಜ ಅಲ್ವಾ..
ಯಾರೋ ಸಾಧಿಸಿದ್ದಕ್ಕೆ ವ್ಯ0ಗ್ಯವಾಡಿ, ಇದನ್ನ ಹಲವು ವರ್ಷದ ಹಿಂದೆ ಮಾಡಿದ್ದುಅನ್ನೋದಕ್ಕಿಂತ ಒಳ್ಳೆಯದು ಅಂತ ಬೆನ್ನು ತಟ್ಟೋದು ದೊಡ್ಡ ತನ ಅಲ್ವಾ!?
ಯಾವುದೋ ಕೆಲಸ ಮಾಡಿ,ನಮಗೆ ಧಕ್ಕಿಸಿ ಕೊಳ್ಳಲಾಗದೇ,ಅದರಲ್ಲಿ ಯಶಸ್ಸು ಪಡೆಯಲಾಗದೇ
ಅದು ಪೈಲ್ಯೂರ್ ಆದರೆ ಅದರಲ್ಲಿ,ನಮ್ಮ ಸೋಮಾರಿತನ,ನಮ್ಮ ಉಡಾಫೆ,ಪ್ರಚಾರ,ನಮ್ಮ ಲೋಪ ಇನ್ನೂ ಏನೇನೋ ಇದ್ದದ್ದರಿಂದ ಆದ ಸೋಲೇ ಹೊರತು..!
ಅದೇ ಕೆಲಸವನ್ನ ಇನ್ನೊಬ್ಬರು ಮಾಡಿ ಧಕ್ಕಿಸಿ ಕೊಂಡವರು ನಮಗೆ
ಮಾಡಿದ ಮೋಸ,ವಂಚನೆ ಆಗೋಕೆ ಸಾಧ್ಯವಿಲ್ಲ..
ಅವನಿಗೆ ಆ ಟ್ಯಾಲೆಂಟ್ ಇತ್ತು ಮಾಡಿ ಧಕ್ಕಿಸಿ ಕೊಂಡ..
ನಮಗೆ ಇರಲಿಲ್ಲ ಸೋತೆವು ಮತ್ತೆ ಪ್ರಯತ್ನಿಸಿ ನೋಡೋಣ ಅಂತ ಅಷ್ಟೇ ಅಲ್ವಾ..!
ಕೆಲವರ ಮನಸ್ಥಿತಿ
ನಮ್ಮೂರಲ್ಲಿ,ಒಬ್ಬರು,ದೂರದ ಊರಿನವರು,ಒಂದು ಖಾಸಗಿ ಗಣಿಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ,ಅಲ್ಲೇ ವಾಸವಿದ್ದರು,
ಅವರ ಸ್ವಭಾವ ಹೇಗೆ ಅಂದ್ರೆ,
ಯಾರು ಏನೇ ವಿಷಯವನ್ನ ಪ್ರಸ್ತಾಪ ಮಾಡಿದ್ರು,ಏನೇ ಒಳ್ಳೆಯ ಸುದ್ದಿಯನ್ನ,ಸಾಧನೆಯನ್ನ,ಸಕ್ಸಸ್,ಸಂತಸ,ಖುಷಿ ಹೇಳಿ ಕೊಂಡರೂ,
ಏಯ್..ಅದೆಲ್ಲಾ ಎಂತಾ ದೊಡ್ಡ ವಿಷಯವಾ..ನಂದು ಏನು ಆಗಿತ್ತು ಗೊತ್ತಾ,ಅದರ ಮುಂದೆ ಇದೆಲ್ಲಾ ಯಾವ ಲೆಕ್ಕ,ಯಾವ ಸಾಧನೆ,ಯಾವ ಸಕ್ಸಸ್,ಇದೆಲ್ಲಾ ಕಾಮನ್ ಅಂತ ಕತೆ ಶುರು ಮಾಡ್ತಾ ಇದ್ರು...
ಹಾಗೆ
ಕೆಲವರು
ಯಾವುದೇ ವಿಷಯ ಹೇಳಿ..
ಅದಕ್ಕೆ
ಇದನ್ನ ನಾವು ಯಾವಾಗಲೋ ನೋಡಿ ಬಿಟ್ಟಾಗಿದೆ,ಈಗ ಗೆದ್ದಿರೋದು,ಸಾಧಿಸೋರು ಇದೇನು ಸಾಧನೆ..
ನೀವ್ಯಾವ ಲೆಕ್ಕ,ನಾವೇ ಗ್ರೇಟ್,ನಮ್ಮದೇ ಗ್ರೇಟ್ ಎನ್ನುತ್ತಾ ಇನ್ನೊಬ್ಬರನ್ನ ತೀರಾ ನಿಕೃಷ್ಟವಾಗಿ ಕಾಣೋದು,ಬೇರೆಯವರ ಸಾಧನೆ,ಖುಷಿ,ಸಕ್ಸಸ್,ಕೆಲಸ ಅಪ್ರಯೋಜಕವಾದದ್ದು ಅನ್ನುವ ಹಾಗೆ ರಾಗ ಎಳೆಯೋದು,ಕೊಕ್ಕೆ ಹಾಕೋದು,ಕೊಂಕು ತೆಗೆಯೋದು ಒಂತರ ಕೆಟ್ಟ ಖಯಾಲಿ ಬೆಳೆಸಿ ಕೊಂಡಿರ್ತಾರೆ...
ಅದು ಕೆಲವರಲ್ಲಿ ಬಹಳ ಸಾಮಾನ್ಯ ಅನಿಸುತ್ತೆ ಅಲ್ವಾ!!?
ಅದೇನು ಸಮಸ್ಯೆ ಇರುತ್ತೋ ಏನೋ..
ಒಬ್ಬರಿಗೆ
ತೋಟದಲ್ಲಿರುವ
ಪೇರಲೇ(ಸೀಬೆ ಕಾಯಿ) ಮರ ಹತ್ತಿ,ಇರುವೆ ಹತ್ರ ಕಚ್ಚಿಸಿ ಕೊಂಡು
ಪೇರಲೇ ಹಣ್ಣು ಉದುರಿಸಿ,ಕಳೆ ಮಧ್ಯೆ ಪೇರಲೇ ಕಾಯಿ ಎಲ್ಲಿ ಬಿದ್ದಿದೆ ಅಂತ ಹುಡುಕಿ ಅಂಡಿಗೆ ಒರೆಸಿ ಕೊಂಡು ಕ್ಲಿನ್ ಆಯ್ತು ಅಂತ ಅಂದು ಕೊಂಡು ತಿಂದರೆ ಅದೇ ಖುಷಿ,ಅದೇ ಸಾಧನೆ,ಗ್ರೇಟ್ನೆಸ್
ಮತ್ತೊಬ್ಬರಿಗೆ
ಕಾಶ್ಮೀರಿ ಸೇಬು ಹಣ ಕೊಟ್ಟು ಸೂಪರ್ ಸ್ಟೋರ್ ನಿಂದ ತಂದು 25 ಸರಿ ಬಟ್ಟೆ ತೊಳೆದಂತೆ ತೊಳೆದು,ಸಿಪ್ಪೆ ತೆಗೆದು,ಕತ್ತರಿಸಿ ಬೀಜ ಎಲ್ಲಾ ಬೇರ್ಪಡಿಸಿ,ಒಂದು ಗಾಜಿನ ತಟ್ಟೆಯಲ್ಲಿ ಸುಂದರವಾಗಿ ಜೋಡಿಸಿ,ಚುಚ್ಚಿ ತಿನ್ನಲು ಒಂದು ಚಮಚ ಹಾಕಿಕೊಂಡು ಸೋಪಾದ ಮೇಲೆ ಕೂತು ತಿನ್ನೋದು ಸಾಧನೆ,ಖುಷಿ...ಗ್ರೇಟ್ನೆಸ್...
ಅಷ್ಟೇ..
ಅವರವರ ಖುಷಿ,ಅವರವರ ಸಾಧನೆ,ಅವರವರ ಭಾವಕ್ಕೆ..
ಅಲ್ವಾ...
ಅವರ ಸ್ವಭಾವ ಹೇಗೆ ಅಂದ್ರೆ,
ಯಾರು ಏನೇ ವಿಷಯವನ್ನ ಪ್ರಸ್ತಾಪ ಮಾಡಿದ್ರು,ಏನೇ ಒಳ್ಳೆಯ ಸುದ್ದಿಯನ್ನ,ಸಾಧನೆಯನ್ನ,ಸಕ್ಸಸ್,ಸಂತಸ,ಖುಷಿ ಹೇಳಿ ಕೊಂಡರೂ,
ಏಯ್..ಅದೆಲ್ಲಾ ಎಂತಾ ದೊಡ್ಡ ವಿಷಯವಾ..ನಂದು ಏನು ಆಗಿತ್ತು ಗೊತ್ತಾ,ಅದರ ಮುಂದೆ ಇದೆಲ್ಲಾ ಯಾವ ಲೆಕ್ಕ,ಯಾವ ಸಾಧನೆ,ಯಾವ ಸಕ್ಸಸ್,ಇದೆಲ್ಲಾ ಕಾಮನ್ ಅಂತ ಕತೆ ಶುರು ಮಾಡ್ತಾ ಇದ್ರು...
ಹಾಗೆ
ಕೆಲವರು
ಯಾವುದೇ ವಿಷಯ ಹೇಳಿ..
ಅದಕ್ಕೆ
ಇದನ್ನ ನಾವು ಯಾವಾಗಲೋ ನೋಡಿ ಬಿಟ್ಟಾಗಿದೆ,ಈಗ ಗೆದ್ದಿರೋದು,ಸಾಧಿಸೋರು ಇದೇನು ಸಾಧನೆ..
ನೀವ್ಯಾವ ಲೆಕ್ಕ,ನಾವೇ ಗ್ರೇಟ್,ನಮ್ಮದೇ ಗ್ರೇಟ್ ಎನ್ನುತ್ತಾ ಇನ್ನೊಬ್ಬರನ್ನ ತೀರಾ ನಿಕೃಷ್ಟವಾಗಿ ಕಾಣೋದು,ಬೇರೆಯವರ ಸಾಧನೆ,ಖುಷಿ,ಸಕ್ಸಸ್,ಕೆಲಸ ಅಪ್ರಯೋಜಕವಾದದ್ದು ಅನ್ನುವ ಹಾಗೆ ರಾಗ ಎಳೆಯೋದು,ಕೊಕ್ಕೆ ಹಾಕೋದು,ಕೊಂಕು ತೆಗೆಯೋದು ಒಂತರ ಕೆಟ್ಟ ಖಯಾಲಿ ಬೆಳೆಸಿ ಕೊಂಡಿರ್ತಾರೆ...
ಅದು ಕೆಲವರಲ್ಲಿ ಬಹಳ ಸಾಮಾನ್ಯ ಅನಿಸುತ್ತೆ ಅಲ್ವಾ!!?
ಅದೇನು ಸಮಸ್ಯೆ ಇರುತ್ತೋ ಏನೋ..
ಒಬ್ಬರಿಗೆ
ತೋಟದಲ್ಲಿರುವ
ಪೇರಲೇ(ಸೀಬೆ ಕಾಯಿ) ಮರ ಹತ್ತಿ,ಇರುವೆ ಹತ್ರ ಕಚ್ಚಿಸಿ ಕೊಂಡು
ಪೇರಲೇ ಹಣ್ಣು ಉದುರಿಸಿ,ಕಳೆ ಮಧ್ಯೆ ಪೇರಲೇ ಕಾಯಿ ಎಲ್ಲಿ ಬಿದ್ದಿದೆ ಅಂತ ಹುಡುಕಿ ಅಂಡಿಗೆ ಒರೆಸಿ ಕೊಂಡು ಕ್ಲಿನ್ ಆಯ್ತು ಅಂತ ಅಂದು ಕೊಂಡು ತಿಂದರೆ ಅದೇ ಖುಷಿ,ಅದೇ ಸಾಧನೆ,ಗ್ರೇಟ್ನೆಸ್
ಮತ್ತೊಬ್ಬರಿಗೆ
ಕಾಶ್ಮೀರಿ ಸೇಬು ಹಣ ಕೊಟ್ಟು ಸೂಪರ್ ಸ್ಟೋರ್ ನಿಂದ ತಂದು 25 ಸರಿ ಬಟ್ಟೆ ತೊಳೆದಂತೆ ತೊಳೆದು,ಸಿಪ್ಪೆ ತೆಗೆದು,ಕತ್ತರಿಸಿ ಬೀಜ ಎಲ್ಲಾ ಬೇರ್ಪಡಿಸಿ,ಒಂದು ಗಾಜಿನ ತಟ್ಟೆಯಲ್ಲಿ ಸುಂದರವಾಗಿ ಜೋಡಿಸಿ,ಚುಚ್ಚಿ ತಿನ್ನಲು ಒಂದು ಚಮಚ ಹಾಕಿಕೊಂಡು ಸೋಪಾದ ಮೇಲೆ ಕೂತು ತಿನ್ನೋದು ಸಾಧನೆ,ಖುಷಿ...ಗ್ರೇಟ್ನೆಸ್...
ಅಷ್ಟೇ..
ಅವರವರ ಖುಷಿ,ಅವರವರ ಸಾಧನೆ,ಅವರವರ ಭಾವಕ್ಕೆ..
ಅಲ್ವಾ...
ಶೌಚಾಲಯ
ಇಂಗ್ಲೆಂಡ್ ನಲ್ಲಿ,ಕೆಲವು ವಿಕ್ಟೊರಿಯನ್ ಟೈಮ್ ನಲ್ಲಿ
ದೊಡ್ಡ ಪಟ್ಟಣಗಳಲ್ಲಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲಿ ಒಂದೇ ಶೌಚಾಲಯವನ್ನ ಸುಮಾರು 100 ಕ್ಕೂ ಹೆಚ್ಚು ಜನರು ಬಳಸ ಬೇಕಾದ ಅನಿವಾರ್ಯವಿತ್ತಂತೆ...
ಹೀಗೆ ಬಳಕೆ ಯಾದ ಶೌಚಾಲಯದಿಂದ ಸಂಗ್ರಹವಾದ ಶೌಚದ ಗುಂಡಿ ಒಮ್ಮೊಮ್ಮೆ ತುಂಬಿ ಉಕ್ಕಿ ಬೀದಿಗೆ ಹಾಗೂ ಕೆಲವೊಮ್ಮೆ ದಿನ ನಿತ್ಯ ಕೆಲಸಕ್ಕೆ ಬಳಸುವ ನೀರಿನ ನಾಲೆ ಹಾಗೂ ಕಾಲುವೆಗೆ ಸೇರುವ ಹಾಗೂ ಆಗೋದು ಸಾಮಾನ್ಯವಾಗಿತ್ತಂತೆ...!?
ಇದನ್ನೆಲ್ಲಾ ಗಮನಿಸಿದ ಸರ್ಕಾರ
1848 ರಲ್ಲಿ ಪ್ರತಿ ಮನೆಯಲ್ಲೂ ಶೌಚ ಗುಂಡಿ(Toilet Pit)ಕಡ್ಡಾಯ ಎಂಬ ಕಾನೂನು ತಂದರಂತೆ..
ಈ ಗುಂಡಿಯನ್ನ ಸ್ವಚ್ಛ ಗೊಳಿಸಲು,ಕಾಲಿ ಮಾಡಲು,ನೈಟ್ ಸಾಯಿಲ್ ಮ್ಯಾನ್ ಎಂಬವರನ್ನ ನೇಮಕ ಮಾಡಿಲಾಗಿತ್ತಂತೆ..
ರೋಮನ್ನರು ಪ್ರಾರಂಭಿಸಿದ್ದ ಸಾರ್ವಜನಿಕ ಶೌಚಾಲಯದ ಮಾದರಿ ಕೆಳಗೆ ಇದೆ..
ಮರದಲ್ಲಿ ಮಾಡಲಾಗುತ್ತಾ ಇದ್ದ ಈ ಶೌಚಾಲಯದಲ್ಲಿ ಖಾಸಗೀತನ ಕೇಳಲೇ ಬೇಡಿ..ಎಲ್ಲಾ ಖುಲ್ಲಂ ಖುಲ್ಲಾ,
ಪಕ್ಕ ಪಕ್ಕವೇ ಕುಳಿತು ಉಭಯ ಕುಶಲೋಪರಿ ಮಾತಾಡುತ್ತಾ ಶೌಚಾಲಯ ಬಳಸ ಬೇಕಾಗಿತ್ತು..
ಏನಂದ್ರಿ..
ಚಿಕ್ಕವರಿದ್ದಾಗ ಟಾಯ್ಲೆಟ್ ಹೋಗೋದು ಬೇಜಾರು ಅಂತ ಸ್ನೇಹಿತರು,ಕಸಿನ್ ಗಳ ಜೊತೆ,ಗೋಲಿ,ಲಗೋರಿ,ಚಿನ್ನಿದಾಂಡು,ಬಸ್ ಆಟ ಇನ್ನಿತರೆ ಕ್ರೀಡೆಗಳ ಬಗ್ಗೆ ಗಂಭೀರ ಸಮಾಲೋಚನೆ ಮಾಡುತ್ತಾ,ಅಡಿಕೆ ತೋಟದ ಕಪ್ ನಲ್ಲಿ,ಬಯಲಲ್ಲಿ,ಕಾಡಲ್ಲಿ, ಹೊಳೆ,ನದಿ ಬದಿ ಹೋಗಿದ್ದು ನೆನಪಾಯ್ತಾ..
ಈ ಚಿತ್ರ ನೋಡಿ..
😂
ದೊಡ್ಡ ಪಟ್ಟಣಗಳಲ್ಲಿ ಹೆಚ್ಚು ಜನಸಂಖ್ಯೆ ಇರುವ ಸ್ಥಳಗಳಲ್ಲಿ ಒಂದೇ ಶೌಚಾಲಯವನ್ನ ಸುಮಾರು 100 ಕ್ಕೂ ಹೆಚ್ಚು ಜನರು ಬಳಸ ಬೇಕಾದ ಅನಿವಾರ್ಯವಿತ್ತಂತೆ...
ಹೀಗೆ ಬಳಕೆ ಯಾದ ಶೌಚಾಲಯದಿಂದ ಸಂಗ್ರಹವಾದ ಶೌಚದ ಗುಂಡಿ ಒಮ್ಮೊಮ್ಮೆ ತುಂಬಿ ಉಕ್ಕಿ ಬೀದಿಗೆ ಹಾಗೂ ಕೆಲವೊಮ್ಮೆ ದಿನ ನಿತ್ಯ ಕೆಲಸಕ್ಕೆ ಬಳಸುವ ನೀರಿನ ನಾಲೆ ಹಾಗೂ ಕಾಲುವೆಗೆ ಸೇರುವ ಹಾಗೂ ಆಗೋದು ಸಾಮಾನ್ಯವಾಗಿತ್ತಂತೆ...!?
ಇದನ್ನೆಲ್ಲಾ ಗಮನಿಸಿದ ಸರ್ಕಾರ
1848 ರಲ್ಲಿ ಪ್ರತಿ ಮನೆಯಲ್ಲೂ ಶೌಚ ಗುಂಡಿ(Toilet Pit)ಕಡ್ಡಾಯ ಎಂಬ ಕಾನೂನು ತಂದರಂತೆ..
ಈ ಗುಂಡಿಯನ್ನ ಸ್ವಚ್ಛ ಗೊಳಿಸಲು,ಕಾಲಿ ಮಾಡಲು,ನೈಟ್ ಸಾಯಿಲ್ ಮ್ಯಾನ್ ಎಂಬವರನ್ನ ನೇಮಕ ಮಾಡಿಲಾಗಿತ್ತಂತೆ..
ರೋಮನ್ನರು ಪ್ರಾರಂಭಿಸಿದ್ದ ಸಾರ್ವಜನಿಕ ಶೌಚಾಲಯದ ಮಾದರಿ ಕೆಳಗೆ ಇದೆ..
ಮರದಲ್ಲಿ ಮಾಡಲಾಗುತ್ತಾ ಇದ್ದ ಈ ಶೌಚಾಲಯದಲ್ಲಿ ಖಾಸಗೀತನ ಕೇಳಲೇ ಬೇಡಿ..ಎಲ್ಲಾ ಖುಲ್ಲಂ ಖುಲ್ಲಾ,
ಪಕ್ಕ ಪಕ್ಕವೇ ಕುಳಿತು ಉಭಯ ಕುಶಲೋಪರಿ ಮಾತಾಡುತ್ತಾ ಶೌಚಾಲಯ ಬಳಸ ಬೇಕಾಗಿತ್ತು..
ಏನಂದ್ರಿ..
ಚಿಕ್ಕವರಿದ್ದಾಗ ಟಾಯ್ಲೆಟ್ ಹೋಗೋದು ಬೇಜಾರು ಅಂತ ಸ್ನೇಹಿತರು,ಕಸಿನ್ ಗಳ ಜೊತೆ,ಗೋಲಿ,ಲಗೋರಿ,ಚಿನ್ನಿದಾಂಡು,ಬಸ್ ಆಟ ಇನ್ನಿತರೆ ಕ್ರೀಡೆಗಳ ಬಗ್ಗೆ ಗಂಭೀರ ಸಮಾಲೋಚನೆ ಮಾಡುತ್ತಾ,ಅಡಿಕೆ ತೋಟದ ಕಪ್ ನಲ್ಲಿ,ಬಯಲಲ್ಲಿ,ಕಾಡಲ್ಲಿ, ಹೊಳೆ,ನದಿ ಬದಿ ಹೋಗಿದ್ದು ನೆನಪಾಯ್ತಾ..
ಈ ಚಿತ್ರ ನೋಡಿ..
😂
ವಿಶೇಷ ಜಾಗ
ಆಗಾಗ ಕೆಲವರು ಇಂತಾ ಜಾಗಕ್ಕೆ ಹೋಗಿ ಇರಬೇಕಪ್ಪ..ಪ್ರಕೃತಿ,ಹಸಿರು,
ನೆಮ್ಮದಿಯಾಗಿರುತ್ತೆ ಜೀವನ,ಯಾರ ತಂಟೆ ತಾಪತ್ರಯ ಇರಲ್ಲ,ಸ್ವರ್ಗ,
ಅಂತ ಕೆಲವು ಫೋಟೋ ಹಂಚಿ ಕೊಂಡು,ಕವನ,ಕವಿತೆ,ಕತೆ, ಮೂಲಕ
ತಮ್ಮ ಅಭಿಪ್ರಾಯ,ಆಸೆ ವ್ಯಕ್ತ ಪಡಿಸೋದು ಆಗಾಗ ಗಮನಿಸಿರುತ್ತೇವೆ..
ಇತ್ತೀಚೆಗೆ
ಸಾಮಾಜಿಕ ಜಾಲತಾಣಗಳಲ್ಲಿ,ದೂರದಲ್ಲಿರುವ
ಒಂದು ದ್ವೀಪ ಪ್ರದೇಶ ಅದರ ಮಧ್ಯ ಒಂದು ಬಿಳಿ ಬಣ್ಣದ ಕಟ್ಟಡದ ಫೋಟೋ ಎಲ್ಲಾ ಕಡೆ ಹರಿದಾಡುತ್ತಾ ಇತ್ತು..
ಕೆಲವರು ಅದನ್ನ ಫೋಟೋ ಶಾಪ್,ಅಸ್ತಿತ್ವದಲ್ಲೇ ಇಲ್ಲ,ಫೇಕ್ ಅಂದಿದ್ರು,ಕೆಲವರು ಅದು ಅಲ್ಲಿದೆ,ಇಲ್ಲಿದೆ ಸ್ವರ್ಗ ಅಲ್ಲೇ ಹೋಗಿ ಜೀವನ ಮಾಡಬೇಕು ತಲೆಬಿಸಿ ಇರಲ್ಲ ಅಂತಲೂ ಹೇಳಿದ್ದೂ ಗಮನಿಸಿರಬಹುದು..!
ಆದರೆ ಈ ಕಟ್ಟಡ ಇರೋದು ನಿಜ.
ಹೌದು..
ಈ ಬಿಳಿಯ ಮನೆ ಅಸ್ತಿತ್ವದಲ್ಲಿ ಇದೆ..
ಯುರೋಪ್ ನ ಒಂದು ದೇಶವಾದ ಐಸ್ ಲ್ಯಾನ್ಡ್ ದಕ್ಷಿಣ ಭಾಗದ Elidaey ಎಂಬಲ್ಲಿ,Vestmannaeyjar, Archipelago ಎಂಬ 15 ರಿಂದ 18 ಹಲವು ದ್ವೀಪ ಸಮೂಹದ,ಒಂದು ದ್ವೀಪದ ಭಾಗದಲ್ಲಿ ಈ ಬಿಳಿ ಬಣ್ಣದ ಕಟ್ಟಡ ನಿರ್ಜನ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದೆ..
ಕೆಲವು ವರದಿಯ ಪ್ರಕಾರ ಹಲವು ವರ್ಷಗಳ ಹಿಂದೆ ಸುಮಾರು 5 ಕುಟುಂಬ ಗಳು ಇಲ್ಲಿ ವಾಸವಿದ್ದವು,ಆಗಲೇ ಈ ಮನೆ ಕಟ್ಟಲಾಗಿತ್ತು,1930ರ ನಂತರ ಈ ದ್ವೀಪವನ್ನ ತೊರೆದು ಜನ ಇರುವ ಪ್ರದೇಶಕ್ಕೆ ಜೀವನ ಅರಸಿ ಹೊರಟರು,ಅದರ ನಂತರ ಇದು ನಿರ್ಜನ ಪ್ರದೇಶದ ಹಾಗೆ ಆಗಿದೆ ಅಂತಲೂ ಹೇಳಲಾಗಿದೆ..
ಇದರ ಬಗ್ಗೆ ನಿಖರ ಮಾಹಿತಿ ಅಥವಾ ದಾಖಲೆಗಳು ಗೊತ್ತಿಲ್ಲ!!
ಕೆಲವು ರೂಮರ್ ಗಳು ಯಾರೋ ಕೋಟಿಪತಿ ಈ ಜಾಗದಲ್ಲಿ ಜೋಂಬಿ ಅಪಕಲಿಪ್ಸ್ ಎಂಬ ಯಾವುದೋ ಈವೆಂಟ್ ಕೆಲಸಕ್ಕೆ ಈ ಕಟ್ಟಡ ಕಟ್ಟಿಸಿದ್ದರು ಅಂತ ಸುದ್ದಿಯೂ ಓಡಾಡಿತ್ತು.!
ಬಲ್ಲ ಮೂಲದ ಪ್ರಕಾರ ಒಂದು ಸಣ್ಣ ಕಟ್ಟಡ,ಈ ಕಟ್ಟಡದ ಪಕ್ಕ ಇದೆ..ಕೆಲವು ರಿಸರ್ಚರ್ ಪಕ್ಷಿಗಳ ಮೇಲೆ ರಿಸರ್ಚ್ ಮಾಡುವ ಸಲುವಾಗಿ ಈ ಜಾಗಕ್ಕೆ ಬಂದು ಕೆಲವು ಸಮಯ ತಂಗುತ್ತಾ ಇದ್ದರು..
ಅದೇ ಮೊದಲು ಕಟ್ಟಿದ್ದು ನಂತರ ಈ ಮನೆಯನ್ನ ಕಟ್ಟಲಾಯ್ತು
ಎನ್ನುವ ಮಾತು ಇದೆ..!
1950ರಲ್ಲಿ ಹಂಟಿಂಗ್ ಅಸೋಸಿಯೇಷನ್ ಈ ಕಟ್ಟಡವನ್ನು ಕಟ್ಟಿಸಿದ್ದಾರೆ ಎನ್ನುವ ಸುದ್ದಿಯೂ ಇದೆ..!
Bjork ಎಂಬ ಹಾಡುಗಾರರು ದೇಶಕ್ಕೆ ಸಲ್ಲಿಸಿದ ಸೇವೆ ಪರಿಗಣನೆ ಮಾಡಿ,ಐಸ್ ಲ್ಯಾನ್ಡ್ ಸರ್ಕಾರ ಈ ದ್ವೀಪ ಕೊಡುಗೆಯಾಗಿ ನೀಡಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು..!
ಈಗ Ellideay Hunter's association ಎಂಬ ಸಂಸ್ಥೆ ಈ ಮನೆ ಹಾಗೂ ಜಾಗವನ್ನ ನೋಡಿಕೊಳ್ಳುತ್ತಾ ಇದೆ ಹಾಗೂ ಪ್ರವಾಸಿಗರಿಗೆ ಕೆಲವು ಟೂರಿಸ್ಟ್ ಸಂಸ್ಥೆಗಳು ಒಂದು ದಿನದ ಪ್ರವಾಸ ವನ್ನ ಕೂಡ ಏರ್ಪಾಡು ಮಾಡುತ್ತಾರೆ ಎನ್ನಲಾಗಿದೆ..!
ಹೀಗೆ ಹತ್ತು ಹಲವು ಅಂತೆ ಕಂತೆಗಳು,ಕನ್ ಪ್ಯೂಜ್ ನಲ್ಲಿ ಇರುವ ಈ ಜಾಗದ ಇತಿಹಾಸದ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರ ಬಳಿ ಇದೆಯೋ ಗೊತ್ತಿಲ್ಲ..!!?
ಯುಟ್ಯೂಬರ್ ಒಬ್ಬರು ತೀರಾ ಇತ್ತೀಚೆಗೆ ಈ ದ್ವೀಪಕ್ಕೆ ಹೋಗಿ ಇದರ ಬಗ್ಗೆ ಮಾಹಿತಿ ಅವರಿಗೆ ಸಿಕ್ಕಿದ್ದನ್ನು ಒದಗಿಸಿದ್ದಾರೆ,ಆಸಕ್ತರು ಕೆಳಗೆ ಹಾಕಿರುವ ಲಿಂಕ್ ಬಳಸಿ ವೀಡಿಯೊ ನೋಡ ಬಹುದು..!
ನಂತರ ಜಗತ್ತಿನ ನಿರ್ಜನ ಪ್ರದೇಶದಲ್ಲಿರುವ ಮನೆಯಲ್ಲಿ ಬಂದು ಜೀವನ ಮಾಡುವುದರ ಬಗ್ಗೆ ತಯಾರಿ ಮಾಡಿ ಕೊಳ್ಳಬಹುದು..
😉
ನೆಮ್ಮದಿಯಾಗಿರುತ್ತೆ ಜೀವನ,ಯಾರ ತಂಟೆ ತಾಪತ್ರಯ ಇರಲ್ಲ,ಸ್ವರ್ಗ,
ಅಂತ ಕೆಲವು ಫೋಟೋ ಹಂಚಿ ಕೊಂಡು,ಕವನ,ಕವಿತೆ,ಕತೆ, ಮೂಲಕ
ತಮ್ಮ ಅಭಿಪ್ರಾಯ,ಆಸೆ ವ್ಯಕ್ತ ಪಡಿಸೋದು ಆಗಾಗ ಗಮನಿಸಿರುತ್ತೇವೆ..
ಇತ್ತೀಚೆಗೆ
ಸಾಮಾಜಿಕ ಜಾಲತಾಣಗಳಲ್ಲಿ,ದೂರದಲ್ಲಿರುವ
ಒಂದು ದ್ವೀಪ ಪ್ರದೇಶ ಅದರ ಮಧ್ಯ ಒಂದು ಬಿಳಿ ಬಣ್ಣದ ಕಟ್ಟಡದ ಫೋಟೋ ಎಲ್ಲಾ ಕಡೆ ಹರಿದಾಡುತ್ತಾ ಇತ್ತು..
ಕೆಲವರು ಅದನ್ನ ಫೋಟೋ ಶಾಪ್,ಅಸ್ತಿತ್ವದಲ್ಲೇ ಇಲ್ಲ,ಫೇಕ್ ಅಂದಿದ್ರು,ಕೆಲವರು ಅದು ಅಲ್ಲಿದೆ,ಇಲ್ಲಿದೆ ಸ್ವರ್ಗ ಅಲ್ಲೇ ಹೋಗಿ ಜೀವನ ಮಾಡಬೇಕು ತಲೆಬಿಸಿ ಇರಲ್ಲ ಅಂತಲೂ ಹೇಳಿದ್ದೂ ಗಮನಿಸಿರಬಹುದು..!
ಆದರೆ ಈ ಕಟ್ಟಡ ಇರೋದು ನಿಜ.
ಹೌದು..
ಈ ಬಿಳಿಯ ಮನೆ ಅಸ್ತಿತ್ವದಲ್ಲಿ ಇದೆ..
ಯುರೋಪ್ ನ ಒಂದು ದೇಶವಾದ ಐಸ್ ಲ್ಯಾನ್ಡ್ ದಕ್ಷಿಣ ಭಾಗದ Elidaey ಎಂಬಲ್ಲಿ,Vestmannaeyjar, Archipelago ಎಂಬ 15 ರಿಂದ 18 ಹಲವು ದ್ವೀಪ ಸಮೂಹದ,ಒಂದು ದ್ವೀಪದ ಭಾಗದಲ್ಲಿ ಈ ಬಿಳಿ ಬಣ್ಣದ ಕಟ್ಟಡ ನಿರ್ಜನ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದೆ..
ಕೆಲವು ವರದಿಯ ಪ್ರಕಾರ ಹಲವು ವರ್ಷಗಳ ಹಿಂದೆ ಸುಮಾರು 5 ಕುಟುಂಬ ಗಳು ಇಲ್ಲಿ ವಾಸವಿದ್ದವು,ಆಗಲೇ ಈ ಮನೆ ಕಟ್ಟಲಾಗಿತ್ತು,1930ರ ನಂತರ ಈ ದ್ವೀಪವನ್ನ ತೊರೆದು ಜನ ಇರುವ ಪ್ರದೇಶಕ್ಕೆ ಜೀವನ ಅರಸಿ ಹೊರಟರು,ಅದರ ನಂತರ ಇದು ನಿರ್ಜನ ಪ್ರದೇಶದ ಹಾಗೆ ಆಗಿದೆ ಅಂತಲೂ ಹೇಳಲಾಗಿದೆ..
ಇದರ ಬಗ್ಗೆ ನಿಖರ ಮಾಹಿತಿ ಅಥವಾ ದಾಖಲೆಗಳು ಗೊತ್ತಿಲ್ಲ!!
ಕೆಲವು ರೂಮರ್ ಗಳು ಯಾರೋ ಕೋಟಿಪತಿ ಈ ಜಾಗದಲ್ಲಿ ಜೋಂಬಿ ಅಪಕಲಿಪ್ಸ್ ಎಂಬ ಯಾವುದೋ ಈವೆಂಟ್ ಕೆಲಸಕ್ಕೆ ಈ ಕಟ್ಟಡ ಕಟ್ಟಿಸಿದ್ದರು ಅಂತ ಸುದ್ದಿಯೂ ಓಡಾಡಿತ್ತು.!
ಬಲ್ಲ ಮೂಲದ ಪ್ರಕಾರ ಒಂದು ಸಣ್ಣ ಕಟ್ಟಡ,ಈ ಕಟ್ಟಡದ ಪಕ್ಕ ಇದೆ..ಕೆಲವು ರಿಸರ್ಚರ್ ಪಕ್ಷಿಗಳ ಮೇಲೆ ರಿಸರ್ಚ್ ಮಾಡುವ ಸಲುವಾಗಿ ಈ ಜಾಗಕ್ಕೆ ಬಂದು ಕೆಲವು ಸಮಯ ತಂಗುತ್ತಾ ಇದ್ದರು..
ಅದೇ ಮೊದಲು ಕಟ್ಟಿದ್ದು ನಂತರ ಈ ಮನೆಯನ್ನ ಕಟ್ಟಲಾಯ್ತು
ಎನ್ನುವ ಮಾತು ಇದೆ..!
1950ರಲ್ಲಿ ಹಂಟಿಂಗ್ ಅಸೋಸಿಯೇಷನ್ ಈ ಕಟ್ಟಡವನ್ನು ಕಟ್ಟಿಸಿದ್ದಾರೆ ಎನ್ನುವ ಸುದ್ದಿಯೂ ಇದೆ..!
Bjork ಎಂಬ ಹಾಡುಗಾರರು ದೇಶಕ್ಕೆ ಸಲ್ಲಿಸಿದ ಸೇವೆ ಪರಿಗಣನೆ ಮಾಡಿ,ಐಸ್ ಲ್ಯಾನ್ಡ್ ಸರ್ಕಾರ ಈ ದ್ವೀಪ ಕೊಡುಗೆಯಾಗಿ ನೀಡಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು..!
ಈಗ Ellideay Hunter's association ಎಂಬ ಸಂಸ್ಥೆ ಈ ಮನೆ ಹಾಗೂ ಜಾಗವನ್ನ ನೋಡಿಕೊಳ್ಳುತ್ತಾ ಇದೆ ಹಾಗೂ ಪ್ರವಾಸಿಗರಿಗೆ ಕೆಲವು ಟೂರಿಸ್ಟ್ ಸಂಸ್ಥೆಗಳು ಒಂದು ದಿನದ ಪ್ರವಾಸ ವನ್ನ ಕೂಡ ಏರ್ಪಾಡು ಮಾಡುತ್ತಾರೆ ಎನ್ನಲಾಗಿದೆ..!
ಹೀಗೆ ಹತ್ತು ಹಲವು ಅಂತೆ ಕಂತೆಗಳು,ಕನ್ ಪ್ಯೂಜ್ ನಲ್ಲಿ ಇರುವ ಈ ಜಾಗದ ಇತಿಹಾಸದ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರ ಬಳಿ ಇದೆಯೋ ಗೊತ್ತಿಲ್ಲ..!!?
ಯುಟ್ಯೂಬರ್ ಒಬ್ಬರು ತೀರಾ ಇತ್ತೀಚೆಗೆ ಈ ದ್ವೀಪಕ್ಕೆ ಹೋಗಿ ಇದರ ಬಗ್ಗೆ ಮಾಹಿತಿ ಅವರಿಗೆ ಸಿಕ್ಕಿದ್ದನ್ನು ಒದಗಿಸಿದ್ದಾರೆ,ಆಸಕ್ತರು ಕೆಳಗೆ ಹಾಕಿರುವ ಲಿಂಕ್ ಬಳಸಿ ವೀಡಿಯೊ ನೋಡ ಬಹುದು..!
ನಂತರ ಜಗತ್ತಿನ ನಿರ್ಜನ ಪ್ರದೇಶದಲ್ಲಿರುವ ಮನೆಯಲ್ಲಿ ಬಂದು ಜೀವನ ಮಾಡುವುದರ ಬಗ್ಗೆ ತಯಾರಿ ಮಾಡಿ ಕೊಳ್ಳಬಹುದು..
😉
ಬಿಳಿ ಕುದುರೆ ಸಾವು
ಉತ್ತರ ಇಂಗ್ಲೆಂಡ್ ನ,ವೆಸ್ಟ್ ಯಾರ್ಕ್ ಶೈರ್ ಎಂಬಲ್ಲಿ ಒಂದು ಬೆಟ್ಟವಿದೆ ಬೀಕನ್ ಹಿಲ್ ಎಂದು ಕರೆಯಲಾಗುವ ಈ ಬೆಟ್ಟ ಹತ್ತೋದು,ಒಂತರಾ ಎತ್ತರದ ಮರ ಹತ್ತಿದ ಹಾಗೆ,ಬಹಳ ಕಡಿದಾದ ದಾರಿ,
ತಣ್ಣನೆ ಗಾಳಿಯಲ್ಲಿ ಬೆಟ್ಟ ಹತ್ತುವಾಗ ಎಂತಹಾ ಚಳಿಯಲ್ಲೂ ಬೆವರು ಬರದವರು ಇಲ್ಲವೇನೋ..!
ಹೈಕಿಂಗ್,ಮೌಂಟೈನ್ ಬೈಕ್,ವಾಕಿಂಗ್,ರನ್ನಿಂಗ್,ಹಾಗೂ ಪಿಕ್ನಿಕ್,ಗೆ ಜನರು ಇಲ್ಲಿಗೆ ಬೇರೆ ಬೇರೆ ಊರಿನಿಂದ ಬರೋದು ಬಹಳ ಸಾಮಾನ್ಯ..
ಈ ಬೆಟ್ಟ ಹತ್ತಿ ಸ್ವಲ್ಪ ದೂರ ಹೋದ ಮೇಲೆ ಕೆಲವು ಮನೆ ಹಾಗೂ ಕೃಷಿ ಭೂಮಿ,ಸಾಕು ಪ್ರಾಣಿಗಳಾದ,ಲಾಮ,ಅಲ್ಪಾಕ,ಉಣ್ಣೆ ಕುರಿ,ಕುದುರೆ,ಫೋನಿ(ಸಣ್ಣ ಕುದುರೆ)ರೈತರ ಜಾಗದಲ್ಲಿ ಬೇಲಿಯ ಒಳಗೆ ಮೇಯುತ್ತಾ ಇರೋದು ಹಾಗೂ ಬಹಳ ಅಪರೂಪಕ್ಕೆ ರೈತರು ಕಾಣಸಿಗೋದು ಇರುತ್ತೆ..
ಹೀಗೆ ಮೊದಲ ಸಲ ಹೋದಾಗ,ಒಂದು ದೊಡ್ಡ ಬಿಳಿಯ ಕುದುರೆ(Percheron breed) ಹಾಗೂ ಇನ್ನೆರಡು ಸಣ್ಣ ಕುದುರೆ ಪೋನಿ ಅಂದು ಹೇಳಲಾಗುವ ಕುದುರೆಯನ್ನ,ಒಬ್ಬರು ರೈತ ಮಹಿಳೆ,ಅವರ ಇಬ್ಬರು ಮಕ್ಕಳು ಸವಾರಿ ಮಾಡಿಕೊಂಡು ಬರುತ್ತಾ ಇದ್ದರು,
ದೂರದಿಂದಲೇ ಫೋಟೋ ತೆಗದು ಕೊಂಡೇ..
ಸಾಮಾನ್ಯವಾಗಿ ನಡೆದು ಹೋಗುತ್ತಾ ಇರುವವರಿಗೆ ಮೊದಲು ಜಾಗ ಕೊಡುವುದು ಇಲ್ಲಿ ಸಾಮಾನ್ಯ..ಬಹಳ ಹತ್ತಿರ ಬಂದಾಗ ನಮಗೆ ಜಾಗ ಕೊಡಲು ನಿಂತಾಗ ನನ್ನ ನೋಡಿ ಹೇಗಿದಿರಿ ಅಂದರು ರೈತ ಮಹಿಳೆ,ಚನ್ನಾಗಿದ್ದೇವೆ ಎಂದು ಮಾತಿಗಿಳಿದು,
ಕುದುರೆಯನ್ನ ಮುಟ್ಟ ಬಹುದಾ ಎಂದೇ..
ಓಹ್..ಧಾರಾಳವಾಗಿ ಅಂದ್ರು..
ತಮ್ಮ ಮಕ್ಕಳನ್ನ ಕುದುರೆ ಸವಾರಿಗೆ ಆಗಾಗ ಅಭ್ಯಾಸ ಆಗಲಿ ಅಂತ ಕರೆದು ಕೊಂಡು ಬರ್ತೇನೆ..
ಇದು ನನ್ನ ಇಷ್ಟದ ಕುದುರೆ ಅಂತ ತಾನು ಸವಾರಿ ಮಾಡುತ್ತಾ ಇದ್ದ ಕುದುರೆಗೆ ಹೇಳಿದ್ರೂ..
ಕುದುರೆಗಳನ್ನ ಬಹಳ ಹಚ್ಚಿ ಕೊಂಡಂತೆ ಕಂಡರು,ಹೆಚ್ಚಿನವರು ನಾಯಿ,ಕುದುರೆ,ಬೆಕ್ಕು,ಇನ್ನಿತರ ಪ್ರಾಣಿಗಳನ್ನ ಮಕ್ಕಳಂತೆ ಕಾಣುತ್ತಾರೆ ಇಲ್ಲಿ..
ಹೀಗೆ ಕೆಲವು ವಿಷಯ ಮಾತಾಡಿ,ಕೊನೆಗೆ ಹೊರಟರು..
ಅವರ ಚಿಕ್ಕ ಮಗಳು,ಮಗ ಕೂಡ ಸ್ಮೈಲ್,ಬಾಯ್,ಟೇಕ್ ಕೇರ್,ಸೀ ಯು ಲೇಟರ್ ಹೇಳಿ ಹೊರಟರು..
ನಂತರ ಕೆಲವು ಬಾರಿ ಆ ಜಾಗಕ್ಕೆ ಭೇಟಿ ಕೊಟ್ಟಾಗ ಅದೇ ಬಿಳಿ ಕುದುರೆ ಅವರದ್ದೇ ಜಾಗದಲ್ಲಿ ಮೇಯುತ್ತಾ ಇದ್ದಾಗ,ಹೊರಗೆ ನಿಂತು, "ಏಯ್ ಬಿಳಿಯ ಬಾರೋ ಇಲ್ಲಿ" ಅಂದರೆ ಏನೋ ನನಗೆ ಕನ್ನಡದಲ್ಲಿ ಕರೆದಿದ್ದು ಅರ್ಥವಾಯ್ತು ಅನ್ನುವ ಹಾಗೆ ಓಡಿ ಬಂದು ಹತ್ರ ನಿಲ್ಲುತ್ತಾ ಇದ್ದ ಬಿಳಿಯ,ನಮ್ಮ ಭೇಟಿಗೆ ಬಂದ ಆಪ್ತರನ್ನ ಈ ಜಾಗಕ್ಕೆ ಕರೆದು ಕೊಂಡು ಹೋದಾಗ ಹಲವರು,ಈ ಬಿಳಿಯ ಹಾಗೂ ಸಣ್ಣ ಕುದುರೆಗಳನ್ನ ಹತ್ತಿರದಿಂದ ನೋಡಿ ಫೋಟೋ ತೆಗೆದು ಖುಷಿ ಪಟ್ಟಿದ್ದರು..!
ಆದರೆ ಚಳಿಗಾಲದಲ್ಲಿ ಹಲವು ಸಮಯ ಇಲ್ಲಿಗೆ ಭೇಟಿ ಕೊಟ್ಟಿರಲಿಲ್ಲ..!
ತೀರಾ ಇತ್ತೀಚೆಗೆ ಒಬ್ಬನೇ ಹೋಗಿದ್ದೆ ಅದೇ ಜಾಗಕ್ಕೆ..
ಎಲ್ಲಿ ಹುಡುಕಿದರೂ ಬೇಲಿಯ ಪಕ್ಕ ಮೇಯುತ್ತಾ ಇದ್ದ ನಮ್ಮ ಬಿಳಿಯ ಕಾಣಿಸಲೇ ಇಲ್ಲ..
ಬೇಲಿಯ ಪಕ್ಕ ಬಿಳಿಯದಾದ 2 ಒಂದರ ಕೆಳಗೆ ಒಂದು ವೈರ್ ಕಟ್ಟಲಾಗಿತ್ತು,
ಬೇಲಿಯ ಎದುರು ಹಲವು ಕಡೆ "ಡೋಂಟ್ ಫೀಡ್ ದ ಹಾರ್ಸ್ ದೇ ಆರ್ ಇನ್ ಸ್ಪೆಶಲ್ ಡಯಟ್"ಅಂತ ಪಲಕ ಹಾಕಲಾಗಿತ್ತು..
ಏನೋ ಅನುಮಾನ ಬಂತು..
ಅಲ್ಲಿ ಇಲ್ಲಿ ನೋಡಿದೆ ಯಾವುದೋ ಒಮ್ಮೆಯೂ ನೋಡದ ಎರಡು ಸಣ್ಣ ಹಾಗೂ ಒಂದು ದೊಡ್ಡ ಕುದುರೆ ಮೇಯುತ್ತಾ ಇದ್ದವು..!
ಯಾಕೋ ಅನುಮಾನ ಹಾಗೂ ತಳಮಳವಾಯ್ತು,ಏನೋ ಅವಘಡ ಆಗಿದೆ ಅಂತ ಅನಿಸ್ತು..
ವಾಪಾಸ್ ಬಂದೆ...
ಮತ್ತೆ ಅದಾದ ನಂತರ ಹಲವು ಸಲ ಭೇಟಿ ಕೊಟ್ಟಾಗಲೂ ಬಿಳಿಯನ ಪತ್ತೆ ಇಲ್ಲ..
ಕೇಳೋಣ ಎಂದರೆ ಹಲವು ಭಾರಿ ಭೇಟಿ ಕೊಟ್ಟಾಗಲೂ ಅದರ ಮಾಲೀಕರು ಜಮೀನಿನ ಸುತ್ತಮುತ್ತ ಎಲ್ಲೂ ಕಾಣಿಸಲಿಲ್ಲ!!?
ನಂತರ ಒಮ್ಮೆ ಪಕ್ಕದ ಜಮೀನಿನ ರೈತರು ಸಿಕ್ಕಾಗ,ಅವರ ಬಳಿ ಬಿಳಿ ಕುದುರೆ ಬಗ್ಗೆ ಕೇಳಿದಾಗ ಅವರು ಹೇಳಿದ್ದು,
ಬೆಟ್ಟಕ್ಕೆ ಅಂತ ಕುಟುಂಬದ ಜೊತೆ ಪಿಕ್ನಿಕ್ ಬರುವ ಕೆಲವರು
ತಾವು ತಿಂದು ಉಳಿದ ಆಹಾರವನ್ನ ಹೀಗೆ ಬೇಲಿಯ ಬಳಿ ಬಂದು ಸಾಕು ಪ್ರಾಣಿಗೆ ಕೊಡ್ತಾರೆ,ಅದನ್ನ ತಿಂದು ಫುಡ್ ಪಾಯ್ಸನ್ ಆಗಿ ಕುದುರೆ ಆರೋಗ್ಯ ಹಾಳಾಗಿತ್ತು ನಂತರ ಅದು ತೀರಿ ಹೋಯ್ತು ಎಂದು ಹೇಳಿದ್ರೂ..!
ಬಹಳ ನೋವು,ಬೇಸರವಾಯ್ತು,
ಅಷ್ಟು ಪ್ರೀತಿಯಿಂದ ಸಾಕಿದ್ದ ಅಷ್ಟು ದೈತ್ಯ ದೇಹಿ ಪ್ರಾಣಿಯನ್ನ ಹೀಗೆ ಯಾರೋ ಮಾಡಿದ ತಪ್ಪಿಗೆ ಕಳೆದು ಕೊಂಡಾಗ ಅದರ ಮಾಲೀಕರಿಗೆ ಎಷ್ಟು ನೋವಾಗ ಬಹುದು ಅಲ್ವಾ!!?
ಯಾರದ್ದೋ,ಪ್ರಾಣಿ,ಪಕ್ಷಿಗಳಿಗೆ,ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ,ಪಾರ್ಕ್ ನಲ್ಲಿರುವ ಪಕ್ಷಿಗಳಿಗೆ,ಪ್ರವಾಸಕ್ಕೆ ಹೋದಾಗ ಕಾಡಿನ ಮಧ್ಯ ರಸ್ತೆಯಲ್ಲಿ ನಿಲ್ಲಿಸಿ ನಾವು ತಿಂದು ಉಳಿದ,ಬ್ರೆಡ್,ರೈಸಬಾತ್,ದೋಸೆ,ಚಪಾತಿ,ಬಿಸ್ಕೆಟ್,ಹಾಳಾದ ಹಣ್ಣು ಪ್ಲಾಸ್ಟಿಕ್ ಸಹಿತ ಎಸೆಯೋದು,ತಿನ್ನಿಸೋದು,ಅವಕ್ಕೆ ಒಗ್ಗದ ಆಹಾರ ಕೊಟ್ಟು ಅವುಗಳ ಆರೋಗ್ಯ ಹಾಳು ಮಾಡಿ ಅವುಗಳ ಸಾವಿಗೆ ಕಾರಣವಾಗೋದು ಸರಿ ಅಲ್ಲ ಅಲ್ವಾ!?
ಅವುಗಳ ಆಹಾರ ಪದ್ಧತಿಯೇ ಬೇರೆ ಇರುತ್ತೆ ಅನ್ನೋದು ಗಮನದಲ್ಲಿ ಇಟ್ಟು ಕೊಳ್ಳೋದು ಅವುಗಳಿಗೆ ನಾವು ಮಾಡುವ ಸಹಾಯ..
ಅವು ಅಳಿದು ಉಳಿದ ಹಾಳಾದ ಆಹಾರ ಹೊಟ್ಟೆಗೆ ತುಂಬಿ ಕೊಳ್ಳುವ ಡಸ್ಟ್ ಬಿನ್ ಗಳು ಅಲ್ಲ..
ನಮ್ಮ ನಿಮ್ಮ ಹಾಗೆ ಜೀವ ಇರುವ ಪ್ರಾಣಿಗಳು..
ತಾಯಂದಿರ ದಿನ
Mother's Day....
ಅಮೇರಿಕಾ ತಾಯಂದಿರ ದಿನ,
ಇತ್ತೀಚಿನ ವರ್ಷದಲ್ಲಿ ವಿಶ್ವ ತಾಯಂದಿರ ದಿನವಾಗಿರುವ
ಈ ದಿನವನ್ನ
1864ರಲ್ಲಿ ಅಮೆರಿಕಾದ ವೆಬ್ಸ್ಟರ್,ವೆಸ್ಟ್ ವರ್ಜಿನಿಯಾ ಎಂಬಲ್ಲಿ ಜನಿಸಿದ,
ಅನಾ ಮರಿಯಾ ಜಾರ್ವಿಸ್
(Anna maria Jarvis)ಎಂಬುವವರು ಮೊಟ್ಟಮೊದಲು,ತಾಯಂದಿರ ದಿನ ಆಚರಣೆಗೆ ತಂದರು..!
ಇವರ ತಾಯಿ ಆನ್ ಜಾರ್ವಿಸ್(Ann Jarvis),ಸಾಮಾಜಿಕ ಕಾರ್ಯಕರ್ತೆಯಾಗಿ,ಅಂಡ್ರ್ಯುಸ್ ಮೆತಾಡಿಸ್ಟ್ ಚರ್ಚ್ ನಲ್ಲಿ ತಾಯಂದಿರ ಕ್ಲಬ್ ಮಾಡಿ ಕೊಂಡು ಅಲ್ಲೇ ಸೇವೆ ಸಲ್ಲಿಸುತ್ತಾ ಇದ್ದರಂತೆ,ಇವರಿಂದ ಪ್ರೇರೇಪಿತರಾದ,ಅನಾ ಮರಿಯಾ ತನ್ನ ವಿದ್ಯಾಭ್ಯಾಸ ಮುಗಿಸಿ ಪಬ್ಲಿಕ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಾ ತನ್ನ ತಾಯಿಗೆ ಚರ್ಚ್ ಕೆಲಸದಲ್ಲಿ ಸಹಾಯ ಮಾಡಿಕೊಂಡು ಜೀವನ ನಡೆಸುತ್ತಾ ಇದ್ದರಂತೆ..
9 ಮೇ 1905 ರಲ್ಲಿ ಪಿಲಡೆಲ್ಪಿಯಾ ದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಅನಾ ರ ತಾಯಿ ಕೊನೆ ಉಸಿರು ಎಳೆಯುತ್ತಾರೆ...
ಇದಾದ
ಮೂರುವರ್ಷದ ನಂತರ 10 ಮೇ 1908 ರಲ್ಲಿ ತನ್ನ ತಾಯಿಯ ಆಸೆಯಂತೆ ಅವರ ಸ್ಮರಣೆ ಹಾಗೂ ಎಲ್ಲಾ ಅಂಡ್ರ್ಯುಸ್ ಮೆತಾಡಿಸ್ಟ್ ಚರ್ಚ್ ನ ತಾಯಂದಿರ ಗೌರವ ಸಮರ್ಪಣೆ ಕಾರ್ಯಕ್ರಮ ಮಾಡಿದ್ದರಂತೆ..
ಇಂದಿಗೂ ಅಂತಾರಾಷ್ಟ್ರೀಯ ತಾಯಂದಿರ ದಿನದ ದೇಗುಲ,ಗ್ರಾಪ್ಟನ್,ವೆಸ್ಟ್ ವರ್ಜಿನಿಯಾದಲ್ಲಿದೆ ಹಾಗೂ ಮೊಟ್ಟ ಮೊದಲು ಇದೇ ಜಾಗದಲ್ಲಿ ಅಧಿಕೃತ ವಾಗಿ ತಾಯಂದಿರ ದಿನ ಆಚರಿಸಿದ್ದು ಎನ್ನಲಾಗಿದೆ..!
ಆದರೆ ಈ ಕಾರ್ಯಕ್ರಮ ಕ್ಕೆ ಅವರೇ ಗೈರಾಗಿದ್ದರು ಎನ್ನೋದು ವಿಶೇಷ..!
ಈ ಸ್ಥಳವನ್ನ ಅಕ್ಟೊಬರ್ 1995 ರಂದು National Historic landmark ಎಂದು ಗುರುತಿಸಲಾಗಿದೆ..!
ನಂತರದ ದಿನಗಳಲ್ಲಿ ಈ ಆಚರಣೆ ಸಂಪೂರ್ಣ ವ್ಯವಹಾರಿಕ ವಾಗಿ ಬದಲಾಯ್ತು ಎಂದು
ಬೇಸರಗೊಂಡು ವಿರೋಧಿಸಿದ್ದರಂತೆ ಅನಾ..
ಹೂವಿನ ವ್ಯಾಪಾರಿಗಳು ಹಾಗೂ ಗ್ರೀಟಿಂಗ್ ಕಾರ್ಡ್ ವ್ಯಾಪಾರಿಗಳು ಈ ತಾಯಂದಿರ ದಿನವನ್ನ ಲಾಭಕ್ಕಾಗಿ ಬಳಸುವುದರ ಬಗ್ಗೆ ವಿರೋಧ ಮಾಡುತ್ತಲೇ ಬಂದಿದ್ದರಂತೆ ಅನಾ..
1920 ರ ಹೊತ್ತಿಗೆ ಸಂಪೂರ್ಣ ಕಮರ್ಷಿಯಲ್ ಆಗಿ, ಹೂವಿನ ದರ ಅತಿ ಹೆಚ್ಚು ಮಾಡಿ ಮಾರಾಟ ಮಾಡಲು ಶುರುವಿಟ್ಟು ಕೊಂಡಿದ್ದರಂತೆ
ಕೆಂಪು ಹೂವಿನ ಗುಚ್ಛ ಬದುಕಿರುವ ತಾಯಂದಿರಿಗೆ..
ಬಿಳಿ ಹೂವಿನ ಗುಚ್ಛ ಮರಣ ಹೊಂದಿರುವ ತಾಯಂದಿರಿಗೆ ಎಂದು ಹೇಳಿ ಕೊಡಲಾರಂಭಿಸಿದ್ದರಂತೆ,ಈ ಭಾವನಾತ್ಮಕ ವಿಷಯವನ್ನ ಈ ರೀತಿ ವ್ಯಾವಹಾರಿಕವಾಗಿ ಬಳಸಿ ಕೊಳ್ಳಲು ಪ್ರಾರಂಭಿಸಿದ್ದ ಈ ವ್ಯಾಪಾರಸ್ಥರ ವಿರುದ್ಧ ಆಕ್ರೋಶ ಗೊಂಡು,ಅನಾ ತಾಯಂದಿರ ದಿನದ ಎಂಬ್ಲಮ್ ಬಳಸಲು ಪ್ರಾರಂಬಿಸಿದ್ದರಂತೆ..!
ಸ್ವತಃ ಅನಾ..
ಈ ದಿನವನ್ನ ಆಡಂಭರದ ದಿನವಾಗಿ ಆಚರಿಸುವ ಉದ್ದೇಶವಿರಲಿಲ್ಲವಂತೆ..
ಯಾವುದೋ ಪ್ರಿಂಟ್ ಇರುವ ಕಾರ್ಡ್,ಇನ್ನೇನೋ ಲೆಟರ್ ಕೊಡುವ ಬದಲು ಸೋಮಾರಿತನ ಬಿಟ್ಟು,ಸ್ವಲ್ಪ ಸಮಯ ವ್ಯಯಿಸಿ ನಿಮ್ಮ ಕೈಯಲ್ಲೇ ಬರೆದು ಪ್ರೀತಿಯಿಂದ ಕೊಡಿ..
ಚಾಕಲೇಟ್ ತೆಗೆದು ಕೊಂಡು ಹೋಗಿ ಅಮ್ಮ ತಿನ್ನದೆ ಇಟ್ಟಾಗಿ ನೀವೇ ತಿನ್ನುವುದು,ಅವರಿಗೆ ಸಲ್ಲಿಸುವ ಕೃತಜ್ಞತೆ,ಪ್ರೀತಿ,ಗೌರವ ಅಲ್ಲ..
ಯಾವುದೋ ಆಡಂಭರದ ದುಬಾರಿ ಗಿಫ್ಟ್ ಕೂಡ ಈ ದಿನದ ಆಚರಣೆ ಅಲ್ಲ..
ಪ್ರೀತಿ,ಗೌರವದಿಂದ ಮಾತಾಡಿಸಿ,ದೂರವಿದ್ದರೆ ಹೋಗಿ ಭೇಟಿಯಾಗಿ, ಫೋನ್ ಮಾಡಿ,ಅಥವಾ ಸ್ವಂತ ನೀವೇ ಪತ್ರ ಬರೆಯಿರಿ,ಅವರಿಗೆ ಕೈಲಾದ ಸಹಾಯ ಮಾಡಿ ಎನ್ನುತ್ತಾ ಇದ್ದರಂತೆ..
ಅನಾ..
ಸ್ವತಃ ತಾಯಿಯೇ ಆಗಿರದ ಅನಾ,ಈ ವಿಷಯದಿಂದ ಯಾವ ಲಾಭವನ್ನು ಪಡೆಯಲು ತಯಾರಿರಲಿಲ್ಲವಂತೆ,ತನ್ನ ತಾಯಿಯ ತ್ಯಾಗ ಹಾಗೂ ಮಮತೆ,ಪ್ರೀತಿಗಾಗಿ,
ತಾಯಿಯ ದಿನ ಯಾವುದೇ,ಸ್ವಾರ್ಥ,ಲಾಭದ ನಿರೀಕ್ಷೆ ಇಲ್ಲದೆ,ತಾಯಿಗೆ ಗೌರವಿಸುವ ಸಲುವಾಗಿ ಆಚರಿಸಲು ಪ್ರಾರಂಭಿಸಿದ್ದ ಅನಾ..
24 ನವೆಂಬರ್
1948ರಲ್ಲಿ,ವೆಸ್ಟ್ ಚೆಸ್ಟರ್,ಪೆನ್ಸಿಲ್ವೇನಿಯಾದಲ್ಲಿ ಮರಣ ಹೊಂದುತ್ತಾರೆ....
ಈಗ ಇಡೀ ವಿಶ್ವದಲ್ಲಿ ಹಲವರು
ಮೇ8(ಮೇ8 ಯಾಕೆ ಮಾಹಿತಿ ಇಲ್ಲ) ರಂದು ತಾಯಂದಿರ ದಿನ ಎಂದು ತಮ್ಮ ಪ್ರೀತಿ,ವಿಶ್ವಾಸ,ಗೌರವ,ಕೃತಜ್ಞತೆ,ಅವರದೇ ರೀತಿಯಲ್ಲಿ ಬೇರೆ ಬೇರೆ ವಾಹಿನಿಗಳ ಮೂಲಕ ವ್ಯಕ್ತ ಪಡಿಸುತ್ತಾರೆ..
❤️
ಅಮೇರಿಕಾ ತಾಯಂದಿರ ದಿನ,
ಇತ್ತೀಚಿನ ವರ್ಷದಲ್ಲಿ ವಿಶ್ವ ತಾಯಂದಿರ ದಿನವಾಗಿರುವ
ಈ ದಿನವನ್ನ
1864ರಲ್ಲಿ ಅಮೆರಿಕಾದ ವೆಬ್ಸ್ಟರ್,ವೆಸ್ಟ್ ವರ್ಜಿನಿಯಾ ಎಂಬಲ್ಲಿ ಜನಿಸಿದ,
ಅನಾ ಮರಿಯಾ ಜಾರ್ವಿಸ್
(Anna maria Jarvis)ಎಂಬುವವರು ಮೊಟ್ಟಮೊದಲು,ತಾಯಂದಿರ ದಿನ ಆಚರಣೆಗೆ ತಂದರು..!
ಇವರ ತಾಯಿ ಆನ್ ಜಾರ್ವಿಸ್(Ann Jarvis),ಸಾಮಾಜಿಕ ಕಾರ್ಯಕರ್ತೆಯಾಗಿ,ಅಂಡ್ರ್ಯುಸ್ ಮೆತಾಡಿಸ್ಟ್ ಚರ್ಚ್ ನಲ್ಲಿ ತಾಯಂದಿರ ಕ್ಲಬ್ ಮಾಡಿ ಕೊಂಡು ಅಲ್ಲೇ ಸೇವೆ ಸಲ್ಲಿಸುತ್ತಾ ಇದ್ದರಂತೆ,ಇವರಿಂದ ಪ್ರೇರೇಪಿತರಾದ,ಅನಾ ಮರಿಯಾ ತನ್ನ ವಿದ್ಯಾಭ್ಯಾಸ ಮುಗಿಸಿ ಪಬ್ಲಿಕ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಾ ತನ್ನ ತಾಯಿಗೆ ಚರ್ಚ್ ಕೆಲಸದಲ್ಲಿ ಸಹಾಯ ಮಾಡಿಕೊಂಡು ಜೀವನ ನಡೆಸುತ್ತಾ ಇದ್ದರಂತೆ..
9 ಮೇ 1905 ರಲ್ಲಿ ಪಿಲಡೆಲ್ಪಿಯಾ ದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಅನಾ ರ ತಾಯಿ ಕೊನೆ ಉಸಿರು ಎಳೆಯುತ್ತಾರೆ...
ಇದಾದ
ಮೂರುವರ್ಷದ ನಂತರ 10 ಮೇ 1908 ರಲ್ಲಿ ತನ್ನ ತಾಯಿಯ ಆಸೆಯಂತೆ ಅವರ ಸ್ಮರಣೆ ಹಾಗೂ ಎಲ್ಲಾ ಅಂಡ್ರ್ಯುಸ್ ಮೆತಾಡಿಸ್ಟ್ ಚರ್ಚ್ ನ ತಾಯಂದಿರ ಗೌರವ ಸಮರ್ಪಣೆ ಕಾರ್ಯಕ್ರಮ ಮಾಡಿದ್ದರಂತೆ..
ಇಂದಿಗೂ ಅಂತಾರಾಷ್ಟ್ರೀಯ ತಾಯಂದಿರ ದಿನದ ದೇಗುಲ,ಗ್ರಾಪ್ಟನ್,ವೆಸ್ಟ್ ವರ್ಜಿನಿಯಾದಲ್ಲಿದೆ ಹಾಗೂ ಮೊಟ್ಟ ಮೊದಲು ಇದೇ ಜಾಗದಲ್ಲಿ ಅಧಿಕೃತ ವಾಗಿ ತಾಯಂದಿರ ದಿನ ಆಚರಿಸಿದ್ದು ಎನ್ನಲಾಗಿದೆ..!
ಆದರೆ ಈ ಕಾರ್ಯಕ್ರಮ ಕ್ಕೆ ಅವರೇ ಗೈರಾಗಿದ್ದರು ಎನ್ನೋದು ವಿಶೇಷ..!
ಈ ಸ್ಥಳವನ್ನ ಅಕ್ಟೊಬರ್ 1995 ರಂದು National Historic landmark ಎಂದು ಗುರುತಿಸಲಾಗಿದೆ..!
ನಂತರದ ದಿನಗಳಲ್ಲಿ ಈ ಆಚರಣೆ ಸಂಪೂರ್ಣ ವ್ಯವಹಾರಿಕ ವಾಗಿ ಬದಲಾಯ್ತು ಎಂದು
ಬೇಸರಗೊಂಡು ವಿರೋಧಿಸಿದ್ದರಂತೆ ಅನಾ..
ಹೂವಿನ ವ್ಯಾಪಾರಿಗಳು ಹಾಗೂ ಗ್ರೀಟಿಂಗ್ ಕಾರ್ಡ್ ವ್ಯಾಪಾರಿಗಳು ಈ ತಾಯಂದಿರ ದಿನವನ್ನ ಲಾಭಕ್ಕಾಗಿ ಬಳಸುವುದರ ಬಗ್ಗೆ ವಿರೋಧ ಮಾಡುತ್ತಲೇ ಬಂದಿದ್ದರಂತೆ ಅನಾ..
1920 ರ ಹೊತ್ತಿಗೆ ಸಂಪೂರ್ಣ ಕಮರ್ಷಿಯಲ್ ಆಗಿ, ಹೂವಿನ ದರ ಅತಿ ಹೆಚ್ಚು ಮಾಡಿ ಮಾರಾಟ ಮಾಡಲು ಶುರುವಿಟ್ಟು ಕೊಂಡಿದ್ದರಂತೆ
ಕೆಂಪು ಹೂವಿನ ಗುಚ್ಛ ಬದುಕಿರುವ ತಾಯಂದಿರಿಗೆ..
ಬಿಳಿ ಹೂವಿನ ಗುಚ್ಛ ಮರಣ ಹೊಂದಿರುವ ತಾಯಂದಿರಿಗೆ ಎಂದು ಹೇಳಿ ಕೊಡಲಾರಂಭಿಸಿದ್ದರಂತೆ,ಈ ಭಾವನಾತ್ಮಕ ವಿಷಯವನ್ನ ಈ ರೀತಿ ವ್ಯಾವಹಾರಿಕವಾಗಿ ಬಳಸಿ ಕೊಳ್ಳಲು ಪ್ರಾರಂಭಿಸಿದ್ದ ಈ ವ್ಯಾಪಾರಸ್ಥರ ವಿರುದ್ಧ ಆಕ್ರೋಶ ಗೊಂಡು,ಅನಾ ತಾಯಂದಿರ ದಿನದ ಎಂಬ್ಲಮ್ ಬಳಸಲು ಪ್ರಾರಂಬಿಸಿದ್ದರಂತೆ..!
ಸ್ವತಃ ಅನಾ..
ಈ ದಿನವನ್ನ ಆಡಂಭರದ ದಿನವಾಗಿ ಆಚರಿಸುವ ಉದ್ದೇಶವಿರಲಿಲ್ಲವಂತೆ..
ಯಾವುದೋ ಪ್ರಿಂಟ್ ಇರುವ ಕಾರ್ಡ್,ಇನ್ನೇನೋ ಲೆಟರ್ ಕೊಡುವ ಬದಲು ಸೋಮಾರಿತನ ಬಿಟ್ಟು,ಸ್ವಲ್ಪ ಸಮಯ ವ್ಯಯಿಸಿ ನಿಮ್ಮ ಕೈಯಲ್ಲೇ ಬರೆದು ಪ್ರೀತಿಯಿಂದ ಕೊಡಿ..
ಚಾಕಲೇಟ್ ತೆಗೆದು ಕೊಂಡು ಹೋಗಿ ಅಮ್ಮ ತಿನ್ನದೆ ಇಟ್ಟಾಗಿ ನೀವೇ ತಿನ್ನುವುದು,ಅವರಿಗೆ ಸಲ್ಲಿಸುವ ಕೃತಜ್ಞತೆ,ಪ್ರೀತಿ,ಗೌರವ ಅಲ್ಲ..
ಯಾವುದೋ ಆಡಂಭರದ ದುಬಾರಿ ಗಿಫ್ಟ್ ಕೂಡ ಈ ದಿನದ ಆಚರಣೆ ಅಲ್ಲ..
ಪ್ರೀತಿ,ಗೌರವದಿಂದ ಮಾತಾಡಿಸಿ,ದೂರವಿದ್ದರೆ ಹೋಗಿ ಭೇಟಿಯಾಗಿ, ಫೋನ್ ಮಾಡಿ,ಅಥವಾ ಸ್ವಂತ ನೀವೇ ಪತ್ರ ಬರೆಯಿರಿ,ಅವರಿಗೆ ಕೈಲಾದ ಸಹಾಯ ಮಾಡಿ ಎನ್ನುತ್ತಾ ಇದ್ದರಂತೆ..
ಅನಾ..
ಸ್ವತಃ ತಾಯಿಯೇ ಆಗಿರದ ಅನಾ,ಈ ವಿಷಯದಿಂದ ಯಾವ ಲಾಭವನ್ನು ಪಡೆಯಲು ತಯಾರಿರಲಿಲ್ಲವಂತೆ,ತನ್ನ ತಾಯಿಯ ತ್ಯಾಗ ಹಾಗೂ ಮಮತೆ,ಪ್ರೀತಿಗಾಗಿ,
ತಾಯಿಯ ದಿನ ಯಾವುದೇ,ಸ್ವಾರ್ಥ,ಲಾಭದ ನಿರೀಕ್ಷೆ ಇಲ್ಲದೆ,ತಾಯಿಗೆ ಗೌರವಿಸುವ ಸಲುವಾಗಿ ಆಚರಿಸಲು ಪ್ರಾರಂಭಿಸಿದ್ದ ಅನಾ..
24 ನವೆಂಬರ್
1948ರಲ್ಲಿ,ವೆಸ್ಟ್ ಚೆಸ್ಟರ್,ಪೆನ್ಸಿಲ್ವೇನಿಯಾದಲ್ಲಿ ಮರಣ ಹೊಂದುತ್ತಾರೆ....
ಈಗ ಇಡೀ ವಿಶ್ವದಲ್ಲಿ ಹಲವರು
ಮೇ8(ಮೇ8 ಯಾಕೆ ಮಾಹಿತಿ ಇಲ್ಲ) ರಂದು ತಾಯಂದಿರ ದಿನ ಎಂದು ತಮ್ಮ ಪ್ರೀತಿ,ವಿಶ್ವಾಸ,ಗೌರವ,ಕೃತಜ್ಞತೆ,ಅವರದೇ ರೀತಿಯಲ್ಲಿ ಬೇರೆ ಬೇರೆ ವಾಹಿನಿಗಳ ಮೂಲಕ ವ್ಯಕ್ತ ಪಡಿಸುತ್ತಾರೆ..
❤️
HF kathe
ಒಮ್ಮೆ ಯಾವುದೋ ವೀಡಿಯೊ ದಲ್ಲಿ ನೋಡಿದ್ದ ನೆನಪು..
ವಿದೇಶಿ ಯುವತಿ ಭಾರತಕ್ಕೆ ಪ್ರವಾಸ ಬಂದವರಿಗೆ ಯಾರೋ ಪ್ರಶ್ನಿಸಿದ್ದರು..
ನೀವು ಭಾರತದಿಂದ ಏನು ತೆಗೆದು ಕೊಂಡು ಹೋಗೋಕೆ ಇಷ್ಟ ಪಡ್ತೀರಿ ಅನ್ನುವ ಹಾಗೆ ಏನೋ ಪ್ರಶ್ನೆ ಇತ್ತು..!?
ಅದಕ್ಕೆ ಯುವತಿ H.F(Health faucet)/Jet spray,ಶೌಚಾಲಯದಲ್ಲಿ I.W.C(ಇಂಡಿಯನ್ ವಾಟರ್ ಕ್ಲಾ ಸೆಟ್ ಕೆಲವು ಕಡೆ ಮಾತ್ರ!!)
E.W.C(European Water Closet/ ಕಾಮೋಡ್ ಪಕ್ಕ ಇಟ್ಟಿರುವ ನೀರು ಸಿಂಪಡಣೆ ಮಾಡುವ ಪೈಪಿಗೆ ಅಳವಡಿಸಿರುವ ನಳ)ಎಂದಿದ್ದರಂತೆ!....
ಯುರೋಪ್ ಹಾಗೂ ಅಮೇರಿಕಾ ಇನ್ನಿತರೆ "ಅಭಿವೃದ್ಧಿ ಶೀಲ"ರಾಷ್ಟ್ರಗಳಲ್ಲಿ..
ಶೌಚಾಲಯಗಳಲ್ಲಿ Health Faucet (ಅದೇ ಜೆಟ್ ಸ್ಪ್ರೇ) ವ್ಯವಸ್ಥೆ ಹೆಚ್ಚಿನ ಕಡೆ ಇರುವುದಿಲ್ಲ..!
ಹೆಸರೇ ಹೇಳುವಂತೆ IWC(Indian Water closet)ಲಭ್ಯವೇ ಇರುವುದಿಲ್ಲ,(ಅದು ನಮ್ಮ ದೇಶದಲ್ಲೇ ಹೆಚ್ಚು ಬಳಕೆ ಆಗೋದು,ಹೈಜನಿಕ್ ಕೂಡ,ಬಳಸುವವರಿಗೂ ಮಾನಸಿಕ ನೆಮ್ಮದಿ,ಸಣ್ಣ ಸಣ್ಣ ಇನ್ಪೇಕ್ಷನ್ ಆಗೋದು ಕಡಿಮೆ,ಆರೋಗ್ಯಕ್ಕೂ ಅಷ್ಟು ಸಮಸ್ಯೆ ಆಗಲ್ಲ..ಬಿಡಿ..)
ಅಥವಾ ಪಕ್ಕದಲ್ಲಿ ಒಂದು Tap(ನಳ/ನಲ್ಲಿ)ಅದರ ಕೆಳಗೆ ಹಳೆಯ ಪೈಂಟ್ ಬಕೆಟ್,ತಗಡಿನ ಡಬ್ಬ ಅಥವಾ ಓಬಿ ರಾಯನ ಕಾಲದ ತಂಬಿಗೆ ಬಕೆಟ್,ಜಗ್,ಹೊಸಾ ಮಗ್ ಇರಲ್ಲ..!
ಅಸಲಿಗೆ ಹೆಚ್ಚಿನ ಮನೆಗಳಲ್ಲಿ ಹೆಚ್ಚಿನ ಶೌಚಾಲಯ,ಸ್ನಾನ ಗೃಹ ಒಟ್ಟಿಗೆ ಇರುತ್ತೆ..
ಶೌಚಾಲಯದ ಪ್ರದೇಶ ಒಣ ಪ್ರದೇಶ(wet area)ಇರುತ್ತೆ..ಹೊರಗೆ ನೀರು ಚೆಲ್ಲುವ ಹಾಗಿರಲ್ಲ..ಹಾಗಾಗಿ ನೀರು ಬಳಕೆ ಮಾಡೋದು ಸ್ವಲ್ಪ ಕಷ್ಟವೇ...
ವಿದೇಶದಲ್ಲಿರುವ ಹೆಚ್ಚಿನ ಭಾರತೀಯರ ಮನೆಯ ಶೌಚ ಗ್ರಹದಲ್ಲಿನ,
ಪ್ಲಷಿಂಗ್ ಟ್ಯಾ0ಕ್ ಮೇಲೆ ಅಥವಾ ಹ್ಯಾನ್ಡ್ ವಾಶ್ ಬಳಿ ಒಂದು ಸಣ್ಣ ಮೊಸರಿನ ಸಣ್ಣ ಡಬ್ಬ ಖಾಯಂ ಆಸೀನವಾಗಿರುತ್ತೆ..
ನಮ್ಮವರು ಮನೆಗೆ ಬಂದರೆ ಅವರಿಗೆ ಅರ್ಥವಾಗಿಬಿಡುತ್ತೆ..
ಓಹ್ ಕೆಲಸ ಮುಗಿದ ಮೇಲೆ ಅಂ* ಸ್ವಚ್ಛ ಮಾಡೋಕೆ ಇಟ್ಟಿದ್ದಾರೆ ಅಂತ..
ಅದೇ ಇಲ್ಲಿಯವರೆ ಬಂದರೆ..
ಯೋಗರ್ಟ್(ಮೊಸರು) ಡಬ್ಬ ಬಿನ್ ಗೆ ಹಾಕೋದು ಬಿಟ್ಟು ಇಲ್ಯಾಕ್ ಇಟ್ಟಿದ್ದಾರೆ ಅಂತ ತಲೆ ಕೆರೆದುಕೊಳ್ಳೋದು ಹಾಗೂ ಪ್ರಶ್ನೆ ಮಾಡೋದು ಬಹಳ ಸಾಮಾನ್ಯ..!
ಕಾರಣ
ಅವರಿಗೆ ಹೆಚ್ಚಿನವರಿಗೆ ಶೌಚದ ನಂತರ ನೀರು ಬಳಸುವ ಅಭ್ಯಾಸ ಇರಲ್ಲ..!
ಟಿಶ್ಯು ಪೇಪರ್/ಟಾಯ್ಲೆಟ್ ಪೇಪರ್/ಶೌಚ ಕಾಗದ
ಬಳಸೋದು ಬಹಳ ಸಾಮಾನ್ಯ ಅಭ್ಯಾಸ..
ಸಾರ್ವಜನಿಕ ಶೌಚಾಲಯಕ್ಕೆ ಹೋದರಂತೂ ಬಿಡಿ,
ಭಾರತೀಯರಿಗೆ ಬಹಳ ಕಷ್ಟ ಹಾಗೂ ಹಿಂಸೆ..
ಹ್ಯಾ0ಡ್ ವಾಶ್ ಬೇರೆ ಹಾಗೂ ಮೂತ್ರ ಮಾಡುವ ಸ್ಥಳ ಹಾಗೂ ಶೌಚಾಲಯ ಬೇರೆ ಬೇರೆ ಇರೋದು ಸಾಮಾನ್ಯ,
ಶೌಚಾಲಯದಲ್ಲಿ ಪ್ಲಶ್ ಟ್ಯಾ0ಕ್ ಹೊರಗೆ ಇದ್ದರೆ ಪ್ಲಶ್ ಟ್ಯಾ0ಕ್ ಕ್ಯಾಪ್ ತೆಗೆದು ನೀರಾದ್ರು ಬಳಸ ಬಹುದು,
ಕನ್ಸೀಲ್ಡ್ ಪ್ಲಶ್ ವ್ಯವಸ್ಥೆ ಇದ್ದರಂತೂ(ಗೋಡೆಯ ಒಳಗೆ ಪೈಪ್ ಅಳವಡಿಸಿ ಕಾಮೋಡ್ ಗೆ ಪ್ಲಶ್ ಆಗುವ ವ್ಯವಸ್ಥೆ) ಮುಗಿಯಿತು ಕತೆ,ನೀರು ನಿಮ್ಮ ಕೈಗೆ ಸಿಗಲ್ಲ,ಟ್ಯಾಪ್/ನಲ್ಲಿ/ನಳ ಇರುವುದಿಲ್ಲ,
ಶೌಚಕಾಗದವೇ ಗತಿ,ಮುಂಜಾಗ್ರತೆಯಿದ್ದು ನೀರಿನ ಬಾಟಲ್ ಬ್ಯಾಗ್ ನಲ್ಲಿದ್ದರೆ ನಮ್ಮ ಪುಣ್ಯ ಬಚಾವ್ ಅಷ್ಟೇ..
😂
ಇತ್ತೀಚೆಗೆ
ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೂಪರ್ ಸ್ಟೋರ್ ಗಳಲ್ಲಿ ಶೌಚ ಕಾಗದಕ್ಕಾಗಿ ಗಲಾಟೆಗಳು ನಡೆದದ್ದನ್ನ ಸ್ಮರಿಸಬಹುದು..!ಆಹಾರ ಪದಾರ್ಥಕ್ಕೆ ಯಾವ ಗಲಾಟೆ ನಡೆದ ಉದಾಹರಣೆ ಇಲ್ಲ ಅನಿಸುತ್ತೆ..😂
ಬಹಳ ಹಿಂದೆ ಅಂದರೆ 1800 ರಲ್ಲಿ ಸಮಯದಲ್ಲಿ ಶೌಚದ ನಂತರ ಹುಲ್ಲು,ಒಣಹುಲ್ಲು,ಕಲ್ಲು,ಮರದ ತುಂಡು,ಕೇಬಲ್ ಗಳನ್ನ ಬಳಸಿ ಸ್ವಚ್ಛ ಗೊಳಿಸೋದು ಬಹಳ ಸಾಮಾನ್ಯವಿತ್ತಂತೆ..
ಇದರಿಂದ ಹತ್ತು ಹಲವು ಸಮಸ್ಯೆ ಆಗಿದ್ದೂ ಇದೆಯಂತೆ..
ರಾಯಲ್ ಪ್ಯಾಮಿಲಿಗೆ ಸ್ವಚ್ಛ ಮಾಡೋಕೆ ಸೇವಕರು ಇರುತ್ತಿದ್ದರಂತೆ...ಅದು ಬೇರೆ ಬಿಡಿ😂
ನಂತರ 1875ರಲ್ಲಿ ಮೊಟ್ಟ ಮೊದಲು ಜೋಸೆಫ್ ಗಯ್ಯಟ್ಟಿ ಎಂಬ ಅಮೆರಿಕಾದ ನ್ಯೂಯಾರ್ಕ್ ಮೂಲದ ವ್ಯಕ್ತಿ ಕಮರ್ಷಿಯಲ್ ಶೌಚಕಾಗದ ಪೊಟ್ಟಣ 500 ನಂಬರ್ ನಲ್ಲಿ 50 ಸೆಂಟ್ ಗೆ ಮಾರಾಟ ಮಾಡಲು ಪ್ರಾರಂಭಿಸಿದರಂತೆ,
ಇದರ ಮೊದಲು ಶೌಚಕಾಗದ ಬಳಕೆಯಲ್ಲಿ ಇತ್ತು ಎಂದೂ ಹೇಳಲಾಗಿದೆ ಹಾಗೂ ಕೆಲವು ಶೌಚ ಕಾಗದವಲ್ಲದ,ಹಳೆಯ ವೃತ್ತ ಪತ್ರಿಕೆಯ ಬಳಕೆ ಮಾಡುತ್ತಾ ಇದ್ದವರು ಇದ್ದರಂತೆ ಅದರಿಂದ ಸಮಸ್ಯೆಗಳು ಆಗಿತ್ತು ಎನ್ನಲಾಗಿದೆ..
ನಂತರದ ದಿನಗಳಲ್ಲಿ ಶೌಚ ಕಾಗದ,ಟಿಶ್ಯು ಪೇಪರ್ ಬಳಕೆ ಸಾಮಾನ್ಯವಾಯಿತು,ಹತ್ತು ಹಲವು ಉತ್ಪಾದನಾ ಕೈಗಾರಿಕೆ ಉದ್ಯಮಿಗಳು ಇದರ ತಯಾರಿಕೆಯಲ್ಲಿ ತೊಡಗಿದವು,
ಈಗ ಶೌಚ ಕಾಗದದಲ್ಲೂ ನಾನಾ ದರದ, ವಿಧಗಳಲ್ಲೂ ಲಭ್ಯವಿದೇ..
ಆದರೆ ಹೆಚ್ಚಿನ ಭಾರತೀಯರಿಗೆ
ಮೊಸರು ಡಬ್ಬದ ಮುಂದೆ ಅದೆಲ್ಲಾ ನತಿಂಗ್ ಯಾ....!😂
ವಿದೇಶಿ ಯುವತಿ ಭಾರತಕ್ಕೆ ಪ್ರವಾಸ ಬಂದವರಿಗೆ ಯಾರೋ ಪ್ರಶ್ನಿಸಿದ್ದರು..
ನೀವು ಭಾರತದಿಂದ ಏನು ತೆಗೆದು ಕೊಂಡು ಹೋಗೋಕೆ ಇಷ್ಟ ಪಡ್ತೀರಿ ಅನ್ನುವ ಹಾಗೆ ಏನೋ ಪ್ರಶ್ನೆ ಇತ್ತು..!?
ಅದಕ್ಕೆ ಯುವತಿ H.F(Health faucet)/Jet spray,ಶೌಚಾಲಯದಲ್ಲಿ I.W.C(ಇಂಡಿಯನ್ ವಾಟರ್ ಕ್ಲಾ ಸೆಟ್ ಕೆಲವು ಕಡೆ ಮಾತ್ರ!!)
E.W.C(European Water Closet/ ಕಾಮೋಡ್ ಪಕ್ಕ ಇಟ್ಟಿರುವ ನೀರು ಸಿಂಪಡಣೆ ಮಾಡುವ ಪೈಪಿಗೆ ಅಳವಡಿಸಿರುವ ನಳ)ಎಂದಿದ್ದರಂತೆ!....
ಯುರೋಪ್ ಹಾಗೂ ಅಮೇರಿಕಾ ಇನ್ನಿತರೆ "ಅಭಿವೃದ್ಧಿ ಶೀಲ"ರಾಷ್ಟ್ರಗಳಲ್ಲಿ..
ಶೌಚಾಲಯಗಳಲ್ಲಿ Health Faucet (ಅದೇ ಜೆಟ್ ಸ್ಪ್ರೇ) ವ್ಯವಸ್ಥೆ ಹೆಚ್ಚಿನ ಕಡೆ ಇರುವುದಿಲ್ಲ..!
ಹೆಸರೇ ಹೇಳುವಂತೆ IWC(Indian Water closet)ಲಭ್ಯವೇ ಇರುವುದಿಲ್ಲ,(ಅದು ನಮ್ಮ ದೇಶದಲ್ಲೇ ಹೆಚ್ಚು ಬಳಕೆ ಆಗೋದು,ಹೈಜನಿಕ್ ಕೂಡ,ಬಳಸುವವರಿಗೂ ಮಾನಸಿಕ ನೆಮ್ಮದಿ,ಸಣ್ಣ ಸಣ್ಣ ಇನ್ಪೇಕ್ಷನ್ ಆಗೋದು ಕಡಿಮೆ,ಆರೋಗ್ಯಕ್ಕೂ ಅಷ್ಟು ಸಮಸ್ಯೆ ಆಗಲ್ಲ..ಬಿಡಿ..)
ಅಥವಾ ಪಕ್ಕದಲ್ಲಿ ಒಂದು Tap(ನಳ/ನಲ್ಲಿ)ಅದರ ಕೆಳಗೆ ಹಳೆಯ ಪೈಂಟ್ ಬಕೆಟ್,ತಗಡಿನ ಡಬ್ಬ ಅಥವಾ ಓಬಿ ರಾಯನ ಕಾಲದ ತಂಬಿಗೆ ಬಕೆಟ್,ಜಗ್,ಹೊಸಾ ಮಗ್ ಇರಲ್ಲ..!
ಅಸಲಿಗೆ ಹೆಚ್ಚಿನ ಮನೆಗಳಲ್ಲಿ ಹೆಚ್ಚಿನ ಶೌಚಾಲಯ,ಸ್ನಾನ ಗೃಹ ಒಟ್ಟಿಗೆ ಇರುತ್ತೆ..
ಶೌಚಾಲಯದ ಪ್ರದೇಶ ಒಣ ಪ್ರದೇಶ(wet area)ಇರುತ್ತೆ..ಹೊರಗೆ ನೀರು ಚೆಲ್ಲುವ ಹಾಗಿರಲ್ಲ..ಹಾಗಾಗಿ ನೀರು ಬಳಕೆ ಮಾಡೋದು ಸ್ವಲ್ಪ ಕಷ್ಟವೇ...
ವಿದೇಶದಲ್ಲಿರುವ ಹೆಚ್ಚಿನ ಭಾರತೀಯರ ಮನೆಯ ಶೌಚ ಗ್ರಹದಲ್ಲಿನ,
ಪ್ಲಷಿಂಗ್ ಟ್ಯಾ0ಕ್ ಮೇಲೆ ಅಥವಾ ಹ್ಯಾನ್ಡ್ ವಾಶ್ ಬಳಿ ಒಂದು ಸಣ್ಣ ಮೊಸರಿನ ಸಣ್ಣ ಡಬ್ಬ ಖಾಯಂ ಆಸೀನವಾಗಿರುತ್ತೆ..
ನಮ್ಮವರು ಮನೆಗೆ ಬಂದರೆ ಅವರಿಗೆ ಅರ್ಥವಾಗಿಬಿಡುತ್ತೆ..
ಓಹ್ ಕೆಲಸ ಮುಗಿದ ಮೇಲೆ ಅಂ* ಸ್ವಚ್ಛ ಮಾಡೋಕೆ ಇಟ್ಟಿದ್ದಾರೆ ಅಂತ..
ಅದೇ ಇಲ್ಲಿಯವರೆ ಬಂದರೆ..
ಯೋಗರ್ಟ್(ಮೊಸರು) ಡಬ್ಬ ಬಿನ್ ಗೆ ಹಾಕೋದು ಬಿಟ್ಟು ಇಲ್ಯಾಕ್ ಇಟ್ಟಿದ್ದಾರೆ ಅಂತ ತಲೆ ಕೆರೆದುಕೊಳ್ಳೋದು ಹಾಗೂ ಪ್ರಶ್ನೆ ಮಾಡೋದು ಬಹಳ ಸಾಮಾನ್ಯ..!
ಕಾರಣ
ಅವರಿಗೆ ಹೆಚ್ಚಿನವರಿಗೆ ಶೌಚದ ನಂತರ ನೀರು ಬಳಸುವ ಅಭ್ಯಾಸ ಇರಲ್ಲ..!
ಟಿಶ್ಯು ಪೇಪರ್/ಟಾಯ್ಲೆಟ್ ಪೇಪರ್/ಶೌಚ ಕಾಗದ
ಬಳಸೋದು ಬಹಳ ಸಾಮಾನ್ಯ ಅಭ್ಯಾಸ..
ಸಾರ್ವಜನಿಕ ಶೌಚಾಲಯಕ್ಕೆ ಹೋದರಂತೂ ಬಿಡಿ,
ಭಾರತೀಯರಿಗೆ ಬಹಳ ಕಷ್ಟ ಹಾಗೂ ಹಿಂಸೆ..
ಹ್ಯಾ0ಡ್ ವಾಶ್ ಬೇರೆ ಹಾಗೂ ಮೂತ್ರ ಮಾಡುವ ಸ್ಥಳ ಹಾಗೂ ಶೌಚಾಲಯ ಬೇರೆ ಬೇರೆ ಇರೋದು ಸಾಮಾನ್ಯ,
ಶೌಚಾಲಯದಲ್ಲಿ ಪ್ಲಶ್ ಟ್ಯಾ0ಕ್ ಹೊರಗೆ ಇದ್ದರೆ ಪ್ಲಶ್ ಟ್ಯಾ0ಕ್ ಕ್ಯಾಪ್ ತೆಗೆದು ನೀರಾದ್ರು ಬಳಸ ಬಹುದು,
ಕನ್ಸೀಲ್ಡ್ ಪ್ಲಶ್ ವ್ಯವಸ್ಥೆ ಇದ್ದರಂತೂ(ಗೋಡೆಯ ಒಳಗೆ ಪೈಪ್ ಅಳವಡಿಸಿ ಕಾಮೋಡ್ ಗೆ ಪ್ಲಶ್ ಆಗುವ ವ್ಯವಸ್ಥೆ) ಮುಗಿಯಿತು ಕತೆ,ನೀರು ನಿಮ್ಮ ಕೈಗೆ ಸಿಗಲ್ಲ,ಟ್ಯಾಪ್/ನಲ್ಲಿ/ನಳ ಇರುವುದಿಲ್ಲ,
ಶೌಚಕಾಗದವೇ ಗತಿ,ಮುಂಜಾಗ್ರತೆಯಿದ್ದು ನೀರಿನ ಬಾಟಲ್ ಬ್ಯಾಗ್ ನಲ್ಲಿದ್ದರೆ ನಮ್ಮ ಪುಣ್ಯ ಬಚಾವ್ ಅಷ್ಟೇ..
😂
ಇತ್ತೀಚೆಗೆ
ಸಾಂಕ್ರಾಮಿಕ ರೋಗದ ಸಮಯದಲ್ಲಿ ಸೂಪರ್ ಸ್ಟೋರ್ ಗಳಲ್ಲಿ ಶೌಚ ಕಾಗದಕ್ಕಾಗಿ ಗಲಾಟೆಗಳು ನಡೆದದ್ದನ್ನ ಸ್ಮರಿಸಬಹುದು..!ಆಹಾರ ಪದಾರ್ಥಕ್ಕೆ ಯಾವ ಗಲಾಟೆ ನಡೆದ ಉದಾಹರಣೆ ಇಲ್ಲ ಅನಿಸುತ್ತೆ..😂
ಬಹಳ ಹಿಂದೆ ಅಂದರೆ 1800 ರಲ್ಲಿ ಸಮಯದಲ್ಲಿ ಶೌಚದ ನಂತರ ಹುಲ್ಲು,ಒಣಹುಲ್ಲು,ಕಲ್ಲು,ಮರದ ತುಂಡು,ಕೇಬಲ್ ಗಳನ್ನ ಬಳಸಿ ಸ್ವಚ್ಛ ಗೊಳಿಸೋದು ಬಹಳ ಸಾಮಾನ್ಯವಿತ್ತಂತೆ..
ಇದರಿಂದ ಹತ್ತು ಹಲವು ಸಮಸ್ಯೆ ಆಗಿದ್ದೂ ಇದೆಯಂತೆ..
ರಾಯಲ್ ಪ್ಯಾಮಿಲಿಗೆ ಸ್ವಚ್ಛ ಮಾಡೋಕೆ ಸೇವಕರು ಇರುತ್ತಿದ್ದರಂತೆ...ಅದು ಬೇರೆ ಬಿಡಿ😂
ನಂತರ 1875ರಲ್ಲಿ ಮೊಟ್ಟ ಮೊದಲು ಜೋಸೆಫ್ ಗಯ್ಯಟ್ಟಿ ಎಂಬ ಅಮೆರಿಕಾದ ನ್ಯೂಯಾರ್ಕ್ ಮೂಲದ ವ್ಯಕ್ತಿ ಕಮರ್ಷಿಯಲ್ ಶೌಚಕಾಗದ ಪೊಟ್ಟಣ 500 ನಂಬರ್ ನಲ್ಲಿ 50 ಸೆಂಟ್ ಗೆ ಮಾರಾಟ ಮಾಡಲು ಪ್ರಾರಂಭಿಸಿದರಂತೆ,
ಇದರ ಮೊದಲು ಶೌಚಕಾಗದ ಬಳಕೆಯಲ್ಲಿ ಇತ್ತು ಎಂದೂ ಹೇಳಲಾಗಿದೆ ಹಾಗೂ ಕೆಲವು ಶೌಚ ಕಾಗದವಲ್ಲದ,ಹಳೆಯ ವೃತ್ತ ಪತ್ರಿಕೆಯ ಬಳಕೆ ಮಾಡುತ್ತಾ ಇದ್ದವರು ಇದ್ದರಂತೆ ಅದರಿಂದ ಸಮಸ್ಯೆಗಳು ಆಗಿತ್ತು ಎನ್ನಲಾಗಿದೆ..
ನಂತರದ ದಿನಗಳಲ್ಲಿ ಶೌಚ ಕಾಗದ,ಟಿಶ್ಯು ಪೇಪರ್ ಬಳಕೆ ಸಾಮಾನ್ಯವಾಯಿತು,ಹತ್ತು ಹಲವು ಉತ್ಪಾದನಾ ಕೈಗಾರಿಕೆ ಉದ್ಯಮಿಗಳು ಇದರ ತಯಾರಿಕೆಯಲ್ಲಿ ತೊಡಗಿದವು,
ಈಗ ಶೌಚ ಕಾಗದದಲ್ಲೂ ನಾನಾ ದರದ, ವಿಧಗಳಲ್ಲೂ ಲಭ್ಯವಿದೇ..
ಆದರೆ ಹೆಚ್ಚಿನ ಭಾರತೀಯರಿಗೆ
ಮೊಸರು ಡಬ್ಬದ ಮುಂದೆ ಅದೆಲ್ಲಾ ನತಿಂಗ್ ಯಾ....!😂
ಲಿಯನಾರ್ಡೊ ಡಾ ವಿನ್ಸಿ
ಇಟಾಲಿಯನ್ ಚಿತ್ರ ರಚನಕಾರ,ಲಿಯನಾರ್ಡೊ ಡಾ ವಿನ್ಸಿ ರಚಿಸಿರುವ,ಪ್ರಾನ್ಸ್ ನ ಪ್ಯಾರಿಸ್,ಲವರೆ ಮ್ಯೂಸಿಯಂ ನಲ್ಲಿರುವ ಮೋನಾಲಿಸಾ(Lisa Gherardini /Lisa del Giocondo) ಆಯಿಲ್ ಪೇಯಿಂಟಿಂಗ್ ಗೆ,ವೀಲ್ ಚೇರ್ ನಲ್ಲಿ ಅಜ್ಜಿಯ ರೀತಿ ವೇಷ ಮಾಡಿಕೊಂಡು ಬಂದ ವ್ಯಕ್ತಿ ದಾಳಿಗೆ ಮುಂದಾಗಿದ್ದಾರೆ,ದಾಳಿ ಮಾಡಿದ್ದು ಕೇಕ್ನಿಂದ..
ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ವ್ಯಕ್ತಿ ಯನ್ನ ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ವಶಕ್ಕೆ ಕೊಟ್ಟಿದ್ದಾರೆ,
ಅವರು ಫ್ರೆಂಚ್ನಲ್ಲಿ ಏನೇನೋ ಬಡಬಡಿಸುತ್ತಾ ಇದ್ದರು ಎನ್ನಲಾಗಿದೆ..!
ಮಾನಸಿಕ ಚಿಕಿತ್ಸೆ ಗಾಗಿ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಾ ಇದೆ..
1503 ರಲ್ಲಿ ಡಾ ವಿನ್ಸಿ ರಚಿಸಿದ್ದ ಕೆಲವು ವರ್ಷಗಳ ನಂತರ ಈ ಆಯಿಲ್ ಪೇಯಿಂಟಿಂಗ್, ಕೆಲವು ಸಮಯದ ನಂತರ
ಪ್ರಾನ್ಸ್ ನ ರಾಜ ಪ್ರಾನ್ಸಿಸ್ 1 ವಶಕ್ಕೆ ತೆಗೆದು ಕೊಂಡಿದ್ದರಂತೆ,
1797 ರಿಂದ "ಲವರೆ ವಸ್ತು ಸಂಗ್ರಹಾಲಯದಲ್ಲಿ" ಈ ಆಯಿಲ್ ಪೇಯಿಂಟಿಂಗ್ ಇರಿಸಲಾಗಿದೆ.!
1911ರಲ್ಲಿ ಸಂಗ್ರಹಾಲಯದಲ್ಲಿ ಕೆಲಸಕ್ಕೆ ಇದ್ದ ಕೆಲಸಗಾರ ಮೋನಾಲಿಸಾ ಪೇಯಿಂಟಿಂಗ್ ಕದ್ದು ಯಾರಿಗೋ ಹಣಕ್ಕಾಗಿ ಕೊಡುವಾಗ ಸಿಕ್ಕಿ ಹಾಕಿಕೊಂಡು ನಂತರ ತರಲಾಗಿತ್ತಂತೆ...
1956 ರಲ್ಲಿ ಪ್ರವಾಸದಲ್ಲಿದ್ದಾಗ ಮೊ0ಟಬಾನ್,ಪ್ರಾನ್ಸ್ ಎಂಬಲ್ಲಿ ಈ ಕಲಾಕೃತಿಯ ಮೇಲೆ ಆಸಿಡ್ ನ ಎರಚಿದ್ದರಂತೆ ಆದರೆ ಗಾಜಿನ ಪರದೆ ಇದ್ದದ್ದರಿಂದ ಪೇಯಿಂಟಿಂಗ್ ಗೆ ತೊಂದರೆ ಆಗಿರಲಿಲ್ಲವಂತೆ ಸ್ವಲ್ಪ ದಿನದ ನಂತರ ಇನ್ನೊಬ್ಬರು ಡಿಸ್ಎಂಬರ್ ತಿಂಗಳಿನಲ್ಲಿ ಅಮೇರಿಕಾದ ಪ್ರಜೆ ಒಬ್ಬರು ಕಲ್ಲನ್ನ ಎಸೆದು ಸ್ವಲ್ಪ ಮಟ್ಟಿಗೆ ಗಾಜಿಗೆ ಹಾನಿ ಮಾಡಿದ್ದರಂತೆ..
1974ರಲ್ಲಿ ಮೋನಾಲಿಸಾ ಪೇಯಿಂಟಿಂಗ್ ಟೋಕಿಯೋ ಪ್ರವಾಸದಲ್ಲಿದ್ದಾಗ ಟೋಕಿಯೋ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಒಬ್ಬರು ಮಹಿಳೆ ಅಂಗವಿಕಲರಿಗೆ ವಸ್ತು ಸಂಗ್ರಹಾಲಯದಲ್ಲಿ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಸ್ಪ್ರೇ ಪೇಯಿಂಟ್ ಹೊಡೆದಿದ್ದರಂತೆ..
2009 ರಲ್ಲಿ ರಷ್ಯಾ ಮಹಿಳೆಯೊಬ್ಬರು ಸಿಟಿಜನ್ ಶಿಪ್ ಸಿಗಲಿಲ್ಲ ಎಂಬ ಸಿಟ್ಟಿಗೆ ಕಾಪಿ ಕಪ್ ನ್ನ ಪೇಯಿಂಟಿಂಗ್ ಕಡೆ ಎಸೆದಿದ್ದರಂತೆ ಆದರೆ ಗಾಜಿನ ಪ್ರೊಟೆಕ್ಷನ್ ಇದ್ದದ್ದರಿಂದ ಯಾವುದೇ ತೊಂದರೆ ಆಗಿರಲಿಲ್ಲವಂತೆ..
ಹೀಗೆ ಹಲವು ಬಾರಿ ಬುಲೆಟ್ ಪ್ರುಪ್ ರಕ್ಷಣೆ ಇರುವ ಮೋನಾಲಿಸಾ ಪೇಯಿಂಟಿಂಗ್ ಮೇಲೆ ವಿವಿಧ ಕಾರಣಕ್ಕೆ ಧಾಳಿಯಾಗಿದೆ..
ತೀರಾ ಇತ್ತೀಚೆಗೆ ಅಂದರೆ ನಿನ್ನೆ ಮತ್ತೊಮ್ಮೆ ಕೇಕ್ ಮೂಲಕ ದಾಳಿ ಮಾಡಲಾಗಿದೆ..
ಕಾರಣ ಆ ವ್ಯಕ್ತಿ ಹೇಳಿದ್ದು..
ಎಲ್ಲಾ ಆರ್ಟಿಸ್ಟ್ ಗಳು ಭೂಮಿಯ ಬಗ್ಗೆ ಯೋಚಿಸ್ತಾರೆ,ಪ್ಲಾನೆಟ್ ಬಗ್ಗೆ ಯೋಚಸಿ ಅದಕ್ಕೆ ಈ ರೀತಿ ಮಾಡಿದ್ದು ಅಂತ ಏನೋ..😁
🙏
ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆ ವ್ಯಕ್ತಿ ಯನ್ನ ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ವಶಕ್ಕೆ ಕೊಟ್ಟಿದ್ದಾರೆ,
ಅವರು ಫ್ರೆಂಚ್ನಲ್ಲಿ ಏನೇನೋ ಬಡಬಡಿಸುತ್ತಾ ಇದ್ದರು ಎನ್ನಲಾಗಿದೆ..!
ಮಾನಸಿಕ ಚಿಕಿತ್ಸೆ ಗಾಗಿ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಾ ಇದೆ..
1503 ರಲ್ಲಿ ಡಾ ವಿನ್ಸಿ ರಚಿಸಿದ್ದ ಕೆಲವು ವರ್ಷಗಳ ನಂತರ ಈ ಆಯಿಲ್ ಪೇಯಿಂಟಿಂಗ್, ಕೆಲವು ಸಮಯದ ನಂತರ
ಪ್ರಾನ್ಸ್ ನ ರಾಜ ಪ್ರಾನ್ಸಿಸ್ 1 ವಶಕ್ಕೆ ತೆಗೆದು ಕೊಂಡಿದ್ದರಂತೆ,
1797 ರಿಂದ "ಲವರೆ ವಸ್ತು ಸಂಗ್ರಹಾಲಯದಲ್ಲಿ" ಈ ಆಯಿಲ್ ಪೇಯಿಂಟಿಂಗ್ ಇರಿಸಲಾಗಿದೆ.!
1911ರಲ್ಲಿ ಸಂಗ್ರಹಾಲಯದಲ್ಲಿ ಕೆಲಸಕ್ಕೆ ಇದ್ದ ಕೆಲಸಗಾರ ಮೋನಾಲಿಸಾ ಪೇಯಿಂಟಿಂಗ್ ಕದ್ದು ಯಾರಿಗೋ ಹಣಕ್ಕಾಗಿ ಕೊಡುವಾಗ ಸಿಕ್ಕಿ ಹಾಕಿಕೊಂಡು ನಂತರ ತರಲಾಗಿತ್ತಂತೆ...
1956 ರಲ್ಲಿ ಪ್ರವಾಸದಲ್ಲಿದ್ದಾಗ ಮೊ0ಟಬಾನ್,ಪ್ರಾನ್ಸ್ ಎಂಬಲ್ಲಿ ಈ ಕಲಾಕೃತಿಯ ಮೇಲೆ ಆಸಿಡ್ ನ ಎರಚಿದ್ದರಂತೆ ಆದರೆ ಗಾಜಿನ ಪರದೆ ಇದ್ದದ್ದರಿಂದ ಪೇಯಿಂಟಿಂಗ್ ಗೆ ತೊಂದರೆ ಆಗಿರಲಿಲ್ಲವಂತೆ ಸ್ವಲ್ಪ ದಿನದ ನಂತರ ಇನ್ನೊಬ್ಬರು ಡಿಸ್ಎಂಬರ್ ತಿಂಗಳಿನಲ್ಲಿ ಅಮೇರಿಕಾದ ಪ್ರಜೆ ಒಬ್ಬರು ಕಲ್ಲನ್ನ ಎಸೆದು ಸ್ವಲ್ಪ ಮಟ್ಟಿಗೆ ಗಾಜಿಗೆ ಹಾನಿ ಮಾಡಿದ್ದರಂತೆ..
1974ರಲ್ಲಿ ಮೋನಾಲಿಸಾ ಪೇಯಿಂಟಿಂಗ್ ಟೋಕಿಯೋ ಪ್ರವಾಸದಲ್ಲಿದ್ದಾಗ ಟೋಕಿಯೋ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಒಬ್ಬರು ಮಹಿಳೆ ಅಂಗವಿಕಲರಿಗೆ ವಸ್ತು ಸಂಗ್ರಹಾಲಯದಲ್ಲಿ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಸ್ಪ್ರೇ ಪೇಯಿಂಟ್ ಹೊಡೆದಿದ್ದರಂತೆ..
2009 ರಲ್ಲಿ ರಷ್ಯಾ ಮಹಿಳೆಯೊಬ್ಬರು ಸಿಟಿಜನ್ ಶಿಪ್ ಸಿಗಲಿಲ್ಲ ಎಂಬ ಸಿಟ್ಟಿಗೆ ಕಾಪಿ ಕಪ್ ನ್ನ ಪೇಯಿಂಟಿಂಗ್ ಕಡೆ ಎಸೆದಿದ್ದರಂತೆ ಆದರೆ ಗಾಜಿನ ಪ್ರೊಟೆಕ್ಷನ್ ಇದ್ದದ್ದರಿಂದ ಯಾವುದೇ ತೊಂದರೆ ಆಗಿರಲಿಲ್ಲವಂತೆ..
ಹೀಗೆ ಹಲವು ಬಾರಿ ಬುಲೆಟ್ ಪ್ರುಪ್ ರಕ್ಷಣೆ ಇರುವ ಮೋನಾಲಿಸಾ ಪೇಯಿಂಟಿಂಗ್ ಮೇಲೆ ವಿವಿಧ ಕಾರಣಕ್ಕೆ ಧಾಳಿಯಾಗಿದೆ..
ತೀರಾ ಇತ್ತೀಚೆಗೆ ಅಂದರೆ ನಿನ್ನೆ ಮತ್ತೊಮ್ಮೆ ಕೇಕ್ ಮೂಲಕ ದಾಳಿ ಮಾಡಲಾಗಿದೆ..
ಕಾರಣ ಆ ವ್ಯಕ್ತಿ ಹೇಳಿದ್ದು..
ಎಲ್ಲಾ ಆರ್ಟಿಸ್ಟ್ ಗಳು ಭೂಮಿಯ ಬಗ್ಗೆ ಯೋಚಿಸ್ತಾರೆ,ಪ್ಲಾನೆಟ್ ಬಗ್ಗೆ ಯೋಚಸಿ ಅದಕ್ಕೆ ಈ ರೀತಿ ಮಾಡಿದ್ದು ಅಂತ ಏನೋ..😁
🙏
ಶುಕ್ರವಾರ, ಜೂನ್ 24, 2022
ಕಾಲ ಕೆಟ್ಟೋಯ್ತು,Anne Lister
ಕಾಲ ಕೆಟ್ಟೋಯ್ತು...
ಶೀ... ಇಶೀ...
ಹುಡ್ಗನ್ನ ಹುಡುಗನೆ ಮದುವೆ ಆಗದಂತೆ..
ಹುಡ್ಗಿನ ಹುಡ್ಗಿನೇ ಮದುವೆ ಆಗೋದಂತೆ
ಅದೇನು ಕಾಲ ಬಂತಪ್ಪಾ,ನಮ್ಮ ಮಗ/ಮಗಳು ಹುಡುಗಿ/ಹುಡುಗನ್ನೇ ಲವ್ ಮಾಡಿ ಮನೆಗೆ ಕರೆದು ಕೊಂಡು ಬರಲ್ಲಪ್ಪ ಅಂತ,
LGBT,(Lesbian,Gay,Bisexual,Transgender)ಸಂಬಂಧಗಳ ಸುದ್ದಿ,ಪೇಪರ್ ಹಾಗೂ ಸುದ್ದಿವಾಹಿನಿಗಳಲ್ಲಿ ಕೇಳಿ,ನೋಡಿ, ಹಲವರು ಗೊಣಗೋದು ನೋಡಿರ್ತೀರಿ..!
ಇದರ ಬಗ್ಗೆ ಹತ್ತು ಹಲವು ತಮಾಷೆಗಳನ್ನ ಚಲನ ಚಿತ್ರ ಹಾಗೂ ಇನ್ನಿತರೆ ಕಡೆ ಗಮನಿಸಿರ್ತಿರಿ...
ಇದು ಇತ್ತೀಚಿನ ದಿನದಲ್ಲಿಯೇ ಹಲವರಿಗೆ ಹೀಗನಿಸುವಾಗ..
ಇನ್ನು 1804 ನೇ ಇಸವಿಯಲ್ಲಿ ನಡೆದದ್ದು ಕೇಳಿದರೆ ಹೇಗನಿಸ ಬಹುದು!?
ಹೌದು..
ಸುಮಾರು 1791 ರಲ್ಲಿ Anne Lister,ವೆಸ್ಟ್ ಯಾರ್ಕ್ ಶೈರ್,ಹ್ಯಾಲಿಪ್ಯಾಕ್ಸ್ ಎಂಬ ಉತ್ತರ ಇಂಗ್ಲೆಂಡ್ ನ ಒಂದು ಸಣ್ಣ ನಗರದಲ್ಲಿ ಜೇರಿಮಿ ಲಿಸ್ಟರ್ ಎಂಬುವ ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡುತ್ತಾ ಇದ್ದ ವ್ಯಕ್ತಿಗೆ ಎರಡನೇ ಹೆಣ್ಣು ಮಗುವಾಗಿ ಜನ್ಮತಾಳುತ್ತಾರೆ..
ನಂತರದ ದಿನಗಳಲ್ಲಿ ಕಲಿಕೆಗಾಗಿ ಯಾರ್ಕ್ ಎಂಬ ನಗರಕ್ಕೆ ಹೋಗುತ್ತಾರೆ..
ಅಲ್ಲಿ ಮೊಟ್ಟ ಮೊದಲು 1804 ರಲ್ಲಿ ತಮ್ಮ ಪ್ರಿಯತಮೆ ಎಲಿಸಾ ರೇನ್ ಎಂಬುವವರನ್ನ ಸಂಧಿಸುತ್ತಾರೆ..
ಎಲಿಸಾ ಆಂಗ್ಲೋ ಇಂಡಿಯನ್...!
ಅವರ ತಂದೆ,ಈಸ್ಟ್ ಇಂಡಿಯಾ ಕಂಪನಿಯ ಸಮಯದಲ್ಲಿ, ಮದ್ರಾಸ್ ನಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ..
ಕೆಲವು ವರ್ಷದ ನಂತರ ದೊಡ್ಡವರ ಹಾಗೆ ಜೊತೆಗೆ ಇದ್ದು ಸಂಸಾರ ಮಾಡೋಣ ಎಂದು ಹೇಳಿದ್ದರಂತೆ,ಕಾರಣ Anne Lister,Isabella,Mariana ಇನ್ನಿತರ ಮಹಿಳೆಯರನ್ನ ಸಂಗಾತಿಯಾಗಿ ಮಾಡಿ ಕೊಂಡಿದ್ದರು..
ಆದರೆ anne ಇದಕ್ಕೆ ಒಪ್ಪದೆ ಬೇರೆಯಾದರು..
ಅದರ ಪರಿಣಾಮ ಎಲಿಸಾ ಮಾನಸಿಕ ಆರೋಗ್ಯ ಕೇಂದ್ರ ಕ್ಕೆ ಸೇರಬೇಕಾಯ್ತು..
ನಂತರದ ದಿನಗಳಲ್ಲಿ Anne lister ಚಿಕ್ಕಪ್ಪನಿಗೆ ಸೇರಿದ್ದ Shibden ಎಸ್ಟೇಟ್ ಅವರ ಮರಣಾನಂತರ,ತಂದೆಗೆ ಬಂದು ನಂತರದ ದಿನ ಸಂಪೂರ್ಣ ಆಸ್ತಿ,ಹಣ ಇವರಿಗೆ ಸಿಗುತ್ತದೆ..
Anne ತನಗೆ ಬಂದ ಹಣದಲ್ಲಿ ಎಸ್ಟೇಟ್ ಅಭಿವೃದ್ದಿ ಮಾಡಿ,ಹಣವನ್ನ ರೈಲ್ವೆ ಹಾಗೂ ಕೆನಾಲ್ ಇನ್ನಿತರೆ ಕಡೆ ಇನ್ವೆಸ್ಟ್ ಕೂಡ ಮಾಡಿ,ತಮ್ಮ ಅಂತಸ್ತು ಹೆಚ್ಚಿಸಿ ಕೊಳ್ತಾರೆ...ದೊಡ್ಡ ಜಮೀನು ದಾರಳು ಆಗುತ್ತಾರೆ..
Anne ಯಾವಾಗಲೂ ಪುರುಷರ ರೀತಿಯೇ ಇರಲು ಇಷ್ಟ ಪಡುತ್ತಾ ಇದ್ದರಂತೆ,ಕಪ್ಪು ಗೌನು(ಆಗ ಪುರುಷರ ಪೋಷಾಕು)ತೊಟ್ಟು ಕೊಂಡು ಸಭೆ ಸಮಾರಂಭಕ್ಕೆ ಆಗಮಿಸೋದು ಅವರ ಅಭ್ಯಾಸವಂತೆ..
ಸುಮಾರು 2 ದಶಕಗಳ ಕಾಲ ಮರ್ರಿಯಾನ ಲಾಟನ್ ಎಂಬ ಪ್ರಿಯತಮೆ ಜೊತೆ ಜೀವನ ಮಾಡಿದ್ದರಂತೆ ಇವರು..
Shibden Estate ನ್ನ ಸಂಪೂರ್ಣ ಅವರದ್ದೇ ಶೈಲಿಯಲ್ಲಿ ಅಭಿವೃದ್ಧಿ ಮಾಡಿದ ಮಹಿಳೆ ಈಕೆ..
ಅಂದ ಹಾಗೆ ಮೊಟ್ಟಮೊದಲು ಮದುವೆಯಾದ ಲೆಸ್ಬಿಯನ್ ಬ್ರಿಟನ್ ಮಹಿಳೆ ಈಕೆ ಎಂಬ ಮಾಹಿತಿಯೂ ಇದೆ..!
ಇಂತಿಪ್ಪ Anne,49 ವರ್ಷವಿದ್ದಾಗ (22 ಸೆಪ್ಟಂಬರ್ 1840)ಜಾರ್ಜಿಯಾ ದಲ್ಲಿ ಮರಣ ಹೊಂದುತ್ತಾರೆ..
ಇವರ ಮರಣದ ನಂತರ
ಸ್ಥಳೀಯ ಆಡಳಿತ ಈ ಸುಂದರವಾದ ಜಾಗವನ್ನು ಅಚ್ಚುಕಟ್ಟಾಗಿ ಇದನ್ನ ನಿರ್ವಹಣೆ ಮಾಡುತ್ತಾ ಇದೆ..
ಈಗ ಅವರ ಜಮೀನು Shibden Park ಆಗಿ ಬದಲಾಗಿದೆ..
ಸಣ್ಣ ಕೆರೆ ಅದರಲ್ಲಿ ಬೋಟಿಂಗ್ ವ್ಯವಸ್ಥೆ,ಮಿನಿಯೇಚರ್ ರೈಲ್,ಹಾಗೂ ಮಕ್ಕಳ ಆಟದ ಸ್ಥಳ,ರನಿಂಗ್ ಟ್ರಾಕ್,ಕೆರೆಯಲ್ಲಿ ಒಂದಷ್ಟು ಹಂಸ,ಬಾತು ಕೋಳಿ,ಕೆನಾಡಿಯನ್ ಗೂಸ್,Shibden Hall(ಅವರ ವಾಸ ಸ್ಥಾನ ವಾಗಿತ್ತು)ಎಲ್ಲವೂ ಇರುವ ಈ ಜಾಗ ಬರೋಬ್ಬರಿ 10 ಎಕರೆ ಇದೆ..
ಶಿಬ್ಡನ್ ಹಾಲ್ ವಸ್ತು ಪ್ರದರ್ಶನ ಕೇಂದ್ರವಾಗಿ ಬದಲಾಗಿದೆ..ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶವೂ ಇದೆ..
ಹಾಗೂ
ಆಗಾಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾರ್ಕ್ ನಲ್ಲಿ ನಡೆಯುವುದು ಇದೆ..
ಪಾರ್ಕ್ ಮಧ್ಯ ಭಾಗದಲ್ಲಿ LGBT ಯ ದೊಡ್ಡ ದ್ವಜವನ್ನ ಕೂಡ ನಡೆಲಾಗಿದೆ..ಅದು ಯಾವಾಗಲೂ ಹಾರಾಡುತ್ತಾ ಇರುತ್ತದೆ..!
ವಾರದ ಕೊನೆಯಲ್ಲಿ ಮಕ್ಕಳು ಹಾಗೂ ಹಿರಿಯರ ನೆಚ್ಚಿನ ಪಿಕ್ನಿಕ್ ತಾಣ ಈ ಶಿಬ್ಡನ್ ಪಾರ್ಕ್..
ಕೊಸರು:- ಈಗಲೂ ಯುಕೆಯಲ್ಲಿ, ಇಬ್ಬರು ಹುಡುಗಿಯರು ಕೈ ಕೈ ಹಿಡಿದು ನಡೆದು ಹೋದರೆ..
ಇಬ್ಬರು ಹುಡ್ಗರು ಒಟ್ಟಿಗೆ ಬೀಡಿ, ಸಿಗರೇಟ್ ಸೇಯ್ತಾ ನಿಂತಿದ್ದರೆ ಅದಕ್ಕೆ ಅವರು "ಆ" ತರ ಅಂತ ಹೇಳಲ್ಲ ಜನ..
ಯಾರೋ ನಂಬರ್69 ಬೀಡಿ ಗೋಡೆಗೆ ಕಾಲು ಕೊಟ್ಟು ಎಳಿಯುತ್ತಾರೆ ಅಂತಾದ್ರೆ..
ಊರಲ್ಲಿ ಇದ್ದವರು ಎಲ್ಲಾ ಅದೇ ಮಾಡ್ತಾರೆ ಅಂತ ಆ ವ್ಯಕ್ತಿ ಹೇಳೋಕಾಗಲ್ಲ ಅಲ್ವಾ..!ಕೆಲವರು ಹೇಳಿದಂತೆ..
🙏
ಶೀ... ಇಶೀ...
ಹುಡ್ಗನ್ನ ಹುಡುಗನೆ ಮದುವೆ ಆಗದಂತೆ..
ಹುಡ್ಗಿನ ಹುಡ್ಗಿನೇ ಮದುವೆ ಆಗೋದಂತೆ
ಅದೇನು ಕಾಲ ಬಂತಪ್ಪಾ,ನಮ್ಮ ಮಗ/ಮಗಳು ಹುಡುಗಿ/ಹುಡುಗನ್ನೇ ಲವ್ ಮಾಡಿ ಮನೆಗೆ ಕರೆದು ಕೊಂಡು ಬರಲ್ಲಪ್ಪ ಅಂತ,
LGBT,(Lesbian,Gay,Bisexual,Transgender)ಸಂಬಂಧಗಳ ಸುದ್ದಿ,ಪೇಪರ್ ಹಾಗೂ ಸುದ್ದಿವಾಹಿನಿಗಳಲ್ಲಿ ಕೇಳಿ,ನೋಡಿ, ಹಲವರು ಗೊಣಗೋದು ನೋಡಿರ್ತೀರಿ..!
ಇದರ ಬಗ್ಗೆ ಹತ್ತು ಹಲವು ತಮಾಷೆಗಳನ್ನ ಚಲನ ಚಿತ್ರ ಹಾಗೂ ಇನ್ನಿತರೆ ಕಡೆ ಗಮನಿಸಿರ್ತಿರಿ...
ಇದು ಇತ್ತೀಚಿನ ದಿನದಲ್ಲಿಯೇ ಹಲವರಿಗೆ ಹೀಗನಿಸುವಾಗ..
ಇನ್ನು 1804 ನೇ ಇಸವಿಯಲ್ಲಿ ನಡೆದದ್ದು ಕೇಳಿದರೆ ಹೇಗನಿಸ ಬಹುದು!?
ಹೌದು..
ಸುಮಾರು 1791 ರಲ್ಲಿ Anne Lister,ವೆಸ್ಟ್ ಯಾರ್ಕ್ ಶೈರ್,ಹ್ಯಾಲಿಪ್ಯಾಕ್ಸ್ ಎಂಬ ಉತ್ತರ ಇಂಗ್ಲೆಂಡ್ ನ ಒಂದು ಸಣ್ಣ ನಗರದಲ್ಲಿ ಜೇರಿಮಿ ಲಿಸ್ಟರ್ ಎಂಬುವ ಬ್ರಿಟಿಷ್ ಸೈನ್ಯದಲ್ಲಿ ಕೆಲಸ ಮಾಡುತ್ತಾ ಇದ್ದ ವ್ಯಕ್ತಿಗೆ ಎರಡನೇ ಹೆಣ್ಣು ಮಗುವಾಗಿ ಜನ್ಮತಾಳುತ್ತಾರೆ..
ನಂತರದ ದಿನಗಳಲ್ಲಿ ಕಲಿಕೆಗಾಗಿ ಯಾರ್ಕ್ ಎಂಬ ನಗರಕ್ಕೆ ಹೋಗುತ್ತಾರೆ..
ಅಲ್ಲಿ ಮೊಟ್ಟ ಮೊದಲು 1804 ರಲ್ಲಿ ತಮ್ಮ ಪ್ರಿಯತಮೆ ಎಲಿಸಾ ರೇನ್ ಎಂಬುವವರನ್ನ ಸಂಧಿಸುತ್ತಾರೆ..
ಎಲಿಸಾ ಆಂಗ್ಲೋ ಇಂಡಿಯನ್...!
ಅವರ ತಂದೆ,ಈಸ್ಟ್ ಇಂಡಿಯಾ ಕಂಪನಿಯ ಸಮಯದಲ್ಲಿ, ಮದ್ರಾಸ್ ನಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ..
ಕೆಲವು ವರ್ಷದ ನಂತರ ದೊಡ್ಡವರ ಹಾಗೆ ಜೊತೆಗೆ ಇದ್ದು ಸಂಸಾರ ಮಾಡೋಣ ಎಂದು ಹೇಳಿದ್ದರಂತೆ,ಕಾರಣ Anne Lister,Isabella,Mariana ಇನ್ನಿತರ ಮಹಿಳೆಯರನ್ನ ಸಂಗಾತಿಯಾಗಿ ಮಾಡಿ ಕೊಂಡಿದ್ದರು..
ಆದರೆ anne ಇದಕ್ಕೆ ಒಪ್ಪದೆ ಬೇರೆಯಾದರು..
ಅದರ ಪರಿಣಾಮ ಎಲಿಸಾ ಮಾನಸಿಕ ಆರೋಗ್ಯ ಕೇಂದ್ರ ಕ್ಕೆ ಸೇರಬೇಕಾಯ್ತು..
ನಂತರದ ದಿನಗಳಲ್ಲಿ Anne lister ಚಿಕ್ಕಪ್ಪನಿಗೆ ಸೇರಿದ್ದ Shibden ಎಸ್ಟೇಟ್ ಅವರ ಮರಣಾನಂತರ,ತಂದೆಗೆ ಬಂದು ನಂತರದ ದಿನ ಸಂಪೂರ್ಣ ಆಸ್ತಿ,ಹಣ ಇವರಿಗೆ ಸಿಗುತ್ತದೆ..
Anne ತನಗೆ ಬಂದ ಹಣದಲ್ಲಿ ಎಸ್ಟೇಟ್ ಅಭಿವೃದ್ದಿ ಮಾಡಿ,ಹಣವನ್ನ ರೈಲ್ವೆ ಹಾಗೂ ಕೆನಾಲ್ ಇನ್ನಿತರೆ ಕಡೆ ಇನ್ವೆಸ್ಟ್ ಕೂಡ ಮಾಡಿ,ತಮ್ಮ ಅಂತಸ್ತು ಹೆಚ್ಚಿಸಿ ಕೊಳ್ತಾರೆ...ದೊಡ್ಡ ಜಮೀನು ದಾರಳು ಆಗುತ್ತಾರೆ..
Anne ಯಾವಾಗಲೂ ಪುರುಷರ ರೀತಿಯೇ ಇರಲು ಇಷ್ಟ ಪಡುತ್ತಾ ಇದ್ದರಂತೆ,ಕಪ್ಪು ಗೌನು(ಆಗ ಪುರುಷರ ಪೋಷಾಕು)ತೊಟ್ಟು ಕೊಂಡು ಸಭೆ ಸಮಾರಂಭಕ್ಕೆ ಆಗಮಿಸೋದು ಅವರ ಅಭ್ಯಾಸವಂತೆ..
ಸುಮಾರು 2 ದಶಕಗಳ ಕಾಲ ಮರ್ರಿಯಾನ ಲಾಟನ್ ಎಂಬ ಪ್ರಿಯತಮೆ ಜೊತೆ ಜೀವನ ಮಾಡಿದ್ದರಂತೆ ಇವರು..
Shibden Estate ನ್ನ ಸಂಪೂರ್ಣ ಅವರದ್ದೇ ಶೈಲಿಯಲ್ಲಿ ಅಭಿವೃದ್ಧಿ ಮಾಡಿದ ಮಹಿಳೆ ಈಕೆ..
ಅಂದ ಹಾಗೆ ಮೊಟ್ಟಮೊದಲು ಮದುವೆಯಾದ ಲೆಸ್ಬಿಯನ್ ಬ್ರಿಟನ್ ಮಹಿಳೆ ಈಕೆ ಎಂಬ ಮಾಹಿತಿಯೂ ಇದೆ..!
ಇಂತಿಪ್ಪ Anne,49 ವರ್ಷವಿದ್ದಾಗ (22 ಸೆಪ್ಟಂಬರ್ 1840)ಜಾರ್ಜಿಯಾ ದಲ್ಲಿ ಮರಣ ಹೊಂದುತ್ತಾರೆ..
ಇವರ ಮರಣದ ನಂತರ
ಸ್ಥಳೀಯ ಆಡಳಿತ ಈ ಸುಂದರವಾದ ಜಾಗವನ್ನು ಅಚ್ಚುಕಟ್ಟಾಗಿ ಇದನ್ನ ನಿರ್ವಹಣೆ ಮಾಡುತ್ತಾ ಇದೆ..
ಈಗ ಅವರ ಜಮೀನು Shibden Park ಆಗಿ ಬದಲಾಗಿದೆ..
ಸಣ್ಣ ಕೆರೆ ಅದರಲ್ಲಿ ಬೋಟಿಂಗ್ ವ್ಯವಸ್ಥೆ,ಮಿನಿಯೇಚರ್ ರೈಲ್,ಹಾಗೂ ಮಕ್ಕಳ ಆಟದ ಸ್ಥಳ,ರನಿಂಗ್ ಟ್ರಾಕ್,ಕೆರೆಯಲ್ಲಿ ಒಂದಷ್ಟು ಹಂಸ,ಬಾತು ಕೋಳಿ,ಕೆನಾಡಿಯನ್ ಗೂಸ್,Shibden Hall(ಅವರ ವಾಸ ಸ್ಥಾನ ವಾಗಿತ್ತು)ಎಲ್ಲವೂ ಇರುವ ಈ ಜಾಗ ಬರೋಬ್ಬರಿ 10 ಎಕರೆ ಇದೆ..
ಶಿಬ್ಡನ್ ಹಾಲ್ ವಸ್ತು ಪ್ರದರ್ಶನ ಕೇಂದ್ರವಾಗಿ ಬದಲಾಗಿದೆ..ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶವೂ ಇದೆ..
ಹಾಗೂ
ಆಗಾಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾರ್ಕ್ ನಲ್ಲಿ ನಡೆಯುವುದು ಇದೆ..
ಪಾರ್ಕ್ ಮಧ್ಯ ಭಾಗದಲ್ಲಿ LGBT ಯ ದೊಡ್ಡ ದ್ವಜವನ್ನ ಕೂಡ ನಡೆಲಾಗಿದೆ..ಅದು ಯಾವಾಗಲೂ ಹಾರಾಡುತ್ತಾ ಇರುತ್ತದೆ..!
ವಾರದ ಕೊನೆಯಲ್ಲಿ ಮಕ್ಕಳು ಹಾಗೂ ಹಿರಿಯರ ನೆಚ್ಚಿನ ಪಿಕ್ನಿಕ್ ತಾಣ ಈ ಶಿಬ್ಡನ್ ಪಾರ್ಕ್..
ಕೊಸರು:- ಈಗಲೂ ಯುಕೆಯಲ್ಲಿ, ಇಬ್ಬರು ಹುಡುಗಿಯರು ಕೈ ಕೈ ಹಿಡಿದು ನಡೆದು ಹೋದರೆ..
ಇಬ್ಬರು ಹುಡ್ಗರು ಒಟ್ಟಿಗೆ ಬೀಡಿ, ಸಿಗರೇಟ್ ಸೇಯ್ತಾ ನಿಂತಿದ್ದರೆ ಅದಕ್ಕೆ ಅವರು "ಆ" ತರ ಅಂತ ಹೇಳಲ್ಲ ಜನ..
ಯಾರೋ ನಂಬರ್69 ಬೀಡಿ ಗೋಡೆಗೆ ಕಾಲು ಕೊಟ್ಟು ಎಳಿಯುತ್ತಾರೆ ಅಂತಾದ್ರೆ..
ಊರಲ್ಲಿ ಇದ್ದವರು ಎಲ್ಲಾ ಅದೇ ಮಾಡ್ತಾರೆ ಅಂತ ಆ ವ್ಯಕ್ತಿ ಹೇಳೋಕಾಗಲ್ಲ ಅಲ್ವಾ..!ಕೆಲವರು ಹೇಳಿದಂತೆ..
🙏
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)